Mar 21, 2025, 10:48 PM IST
Karnataka News Live 21st March: ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ


ಬೆಂಗಳೂರು (ಮಾ.11): ದೇಶದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ಏಪ್ರಿಲ್ 14ರವರೆಗೆ ಪರೀಕ್ಷೆ ನಡೆಯಲಿದೆ.ಒಟ್ಟು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆಗೆ ಎದೆಗುಂದಬೇಡಿ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಶುರು. 9ರ ಒಳಗಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ. ಅದರೊಂದಿಗೆ ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಜೋರಾಗಿದೆ. ಗುರುವಾರ ವಿಧಾನಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ 48 ರಾಜಕಾರಣಿಗಳ ಹನಿಟ್ರ್ಯಾಪ್ ನಡೆದಿದೆ ಎಂದು ಸ್ವತಃ ಸಹಕಾರ ಸಚಿವ ಕೆಎನ್ ರಾಜಣ್ಣ ತಿಳಿಸಿದ್ದು, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.
10:48 PM
ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ
ಇದು ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಅತೀ ದೊಡ್ಡ ಜಪ್ತಿ. ಮನೆಯೊಂದರ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಬರೋಬ್ಬರಿ 88ಕೆಜಿ ಚಿನ್ನ, 19.6 ಕೆಜಿ ಆಭರಣ, 1.3 ಕೋಟಿ ರೂ ನಗದು ಸೇರಿದಂತೆ 100 ಕೋಟಿ ಮೌಲ್ಯದ ವಸ್ತುಗಳು ಸೀಝ್ ಮಾಡಿದ್ದಾರೆ. ಇದರ ಮಾಲೀಕ ಯಾರು?
ಪೂರ್ತಿ ಓದಿ10:32 PM
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರ ಬಂದ ನಟಿ; ಪ್ರಮುಖ ಪಾತ್ರದ ಬದಲಾವಣೆಗೆ ವೀಕ್ಷಕರು ಶಾಕ್!
Shravani Subramanya Serial: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ನಟಿ ಹೊರಬಂದಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪ್ರಮುಖ ಪಾತ್ರದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಕಾರಣಾಂತರಗಳಿಂದ ನಟಿ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪೂರ್ತಿ ಓದಿ10:27 PM
ಗೂಗಲ್ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್, ಪಿ. ಜಿ. ಚೆನ್ನಾಗಿಲ್ಲ ಎಂದ ವಿದ್ಯಾರ್ಥಿಗೆ ಮಾಲೀಕನ ಹಲ್ಲೆ
ಪೇಯಿಂಗ್ ಗೆಸ್ಟ್ (ಪಿ.ಜಿ.) ಬಗ್ಗೆ ಗೂಗಲ್ನಲ್ಲಿ ಸಿಂಗಲ್ ಸ್ಟಾರ್ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಕ್ಕೆ ಪಿ. ಜಿ. ಮಾಲೀಕ ಮತ್ತು ಆತನ ಸಹಚರರು ಸೇರಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ಸಂಭವಿಸಿದೆ.
ಪೂರ್ತಿ ಓದಿ10:04 PM
₹30,000 ಹೈಕ್ಗಾಗಿ ನೋಯ್ಡಾದಿಂದ ಬೆಂಗಳೂರು ಬಂದು ಕೆಟ್ಟೆ, ಚರ್ಚೆಯಾಗುತ್ತಿದೆ ಉದ್ಯೋಗಿಯ ಕಾರಣ
ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ತಿಂಗಳಿಗೆ 30,000 ರೂಪಾಯಿ ಹೈಕ್ ಕೊಟ್ಟ ಕಾರಣ ಬೆಂಗಳೂರಿಗೆ ಶಿಫ್ಟ್ ಆಗಿದ್ದಾನೆ. ಆದರೆ ಸಂಬಂಳ ಹೆಚ್ಚಾದರೂ ಬೆಂಗಳೂರು ಎಲ್ಲಾ ಖುಷಿಯನ್ನೇ ನುಂಗಿ ಹಾಕಿದೆ ಎಂದು ಉದ್ಯೋಗಿ ನೋವು ತೋಡಿಕೊಂಡಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ.
ಪೂರ್ತಿ ಓದಿ9:26 PM
ಸ್ಮಾರ್ಟ್ ಮೀಟರ್ ಹಗರಣ: 7,408 ಕೋಟಿ ರೂ. ಗೋಲ್ ಮಾಲ್? ಜನರ ಹಣ ಯಾರ ಜೇಬಿಗೆ?
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದರದಲ್ಲಿ ಸ್ಮಾರ್ಟ್ ಮೀಟರ್ ಖರೀದಿಸಿ 7,408 ಕೋಟಿ ರೂ. ಗೋಲ್ ಮಾಲ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಪೂರ್ತಿ ಓದಿ9:20 PM
70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ
ವಾರದಲ್ಲಿ 70 ಗಂಟೆ ಕೆಲಸ ಮಾಡಿ, 90 ಗಂಟೆ ಕೆಲಸ ಮಾಡಿ ಎಂದು ಹಲವು ಕಂಪನಿಗಳು ಸಿಇಒ, ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಈ ಚರ್ಚೆ ತಣ್ಣಾಗಾದ ಬೆನ್ನಲ್ಲೇ ಬೆಂಗಳೂರಿಗ ಇದೀಗ ವರ್ಕ್ ಲೈಫ್ ಬ್ಯಾಲೆನ್ಸ್ಗೆ ಭರ್ಜರಿ ಪರಿಹಾರ ಸೂಚಿಸಿದ್ದಾನೆ. ಈತ ಕೊಟ್ಟ ಐಡಿಯಾಗೆ ಹಲವು ಕಂಪನಿಗಳ ಬಾಸ್ ಕಕ್ಕಾಬಿಕ್ಕಿಯಾಗಿದ್ದಾರೆ.
ಪೂರ್ತಿ ಓದಿ9:14 PM
ಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿ ಅವಧಿಯಲ್ಲಿನ ಕೊರೋನಾ ಸಾವುಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ‘ನ್ಯಾ. ಕುನ್ಹಾ ವರದಿಯಲ್ಲಿ ಬಿಜೆಪಿಯವರು ಹೆಣದಿಂದ ಹಣ ಮಾಡಿರುವುದು ಬಯಲಾಗಿದೆ. ಕಂಬಿ ಎಣಿಸಲು ಸಜ್ಜಾಗಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿ8:57 PM
ಬೇಸಿಗೆಯ ಊಟಕ್ಕೆ ರುಚಿಕರ ಹುಳಿ-ಮಜ್ಜಿಗೆ ಸೂಪರ್! ಇದನ್ನು ಮಾಡೋದು ತುಂಬಾ ಸುಲಭ!
ಬೇಸಿಗೆಗೆ ತಂಪಾದ ಹಸಿ ಮಜ್ಜಿಗೆ ಹುಳಿ ಮಾಡುವ ಸರಳ ವಿಧಾನ ಇಲ್ಲಿದೆ. ಮೊಸರು, ತೆಂಗಿನ ತುರಿ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮಜ್ಜಿಗೆ ಹುಳಿಯನ್ನು ತಯಾರಿಸಿ.
ಪೂರ್ತಿ ಓದಿ8:37 PM
ನರೇಂದ್ರ ಮೋದಿಯೇ ದೇಶದ ಹನಿಟ್ರ್ಯಾಪ್ ಪಿತಾಮಹ; ಬಿ.ಕೆ.ಹರಿಪ್ರಸಾದ್ ಆರೋಪ
ವಿಧಾನ ಪರಿಷತ್ನಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಅವರೇ ಹನಿಟ್ರ್ಯಾಪ್ನ ಪಿತಾಮಹ ಎಂದು ಆರೋಪಿಸಿದ್ದಾರೆ. ಸಂಜಯ್ ಜೋಶಿ ಅವರ ಹನಿಟ್ರ್ಯಾಪ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಪೂರ್ತಿ ಓದಿ7:49 PM
ತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ
ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದರ್ಶನಕ್ಕಾಗಿ ಶಾಸಕರ ಶಿಫಾರಸು ಪತ್ರಗಳನ್ನು ಸ್ವೀಕರಿಸಿ ಅವಕಾಶ ನೀಡುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪೂರ್ತಿ ಓದಿ7:44 PM
58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್ ಆರ್) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪೂರ್ತಿ ಓದಿ7:06 PM
ನಂದಿನಿ ಇಡ್ಲಿ-ದೋಸೆ ಹಿಟ್ಟು ಹಾಲಿನ ಬೂತ್ ಜೊತೆಗೆ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್ಗಳಲ್ಲೂ ಲಭ್ಯ!
ನಂದಿನಿ ಪ್ರೊಟೀನ್ ಭರಿತ ಇಡ್ಲಿ-ದೋಸೆ ಹಿಟ್ಟು ಏಪ್ರಿಲ್ 1 ರಿಂದ ಚಿಲ್ಲರೆ ಮಳಿಗೆಗಳು, ಆಪ್ಗಳು, ಇ-ಕಾಮರ್ಸ್ ತಾಣಗಳು ಮತ್ತು ಮಾಲ್ಗಳಲ್ಲಿ ಲಭ್ಯವಿರಲಿದೆ. ಮಾರಾಟವನ್ನು ಹೆಚ್ಚಿಸಲು ಕೆಎಂಎಫ್ ಖಾಸಗಿ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಪೂರ್ತಿ ಓದಿ7:05 PM
ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಬಂಡೀಪುರದ ಕಾಡಿನ ಕೆರೆ: ದಾಹ ತಣಿಸಿಕೊಂಡು ವಿಹರಿಸುತ್ತಿರುವ ಮೂಕ ಪ್ರಾಣಿಗಳು!
ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗ ವನ್ಯಪ್ರಾಣಿಗಳ ನೀರಿನ ದಾಹ ನೀಗಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಿನೊಳಗೆ ಕೆರೆ ಅಭಿವೃದ್ಧಿಪಡಿಸಿದೆ.
ಪೂರ್ತಿ ಓದಿ6:42 PM
IPL 2025 ಪಾಯಿಂಟ್ಸ್ ಪಟ್ಟಿಯಲ್ಲಿ ಆರ್ಸಿಬಿ ಸ್ಥಾನದ ಭವಿಷ್ಯ ನುಡಿದ ಗಿಲ್ಕ್ರಿಸ್ಟ್, ಫ್ಯಾನ್ಸ್ ಶಾಕ್
ಐಪಿಎಲ್ 2025 ಟೂರ್ನಿ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಆ್ಯಡಮ್ ಗಿಲ್ಕ್ರಿಸ್ಟ್ ಈ ಬಾರಿಯ ಐಪಿಎಲ್ ಅಂತ್ಯದ ವೇಳೆ ಆರ್ಸಿಬಿ ಯಾವ ಸ್ಥಾನದಲ್ಲಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣನ್ನೂ ಕೊಟ್ಟಿದ್ದಾರೆ.
ಪೂರ್ತಿ ಓದಿ6:03 PM
ಪ್ರಧಾನಿ ನರೇಂದ್ರ ಮೋದಿಯವರೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ; ಪತ್ರ ಬರೆದ 80 ವರ್ಷದ ಅಜ್ಜಿ!
ಉತ್ತರ ಕನ್ನಡ ಜಿಲ್ಲೆಯ 80 ವರ್ಷದ ವೃದ್ಧೆಯೊಬ್ಬರು ಆಧಾರ್ ಕಾರ್ಡ್ಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ಗಾಗಿ ಅಲೆದಾಡಿದ್ದರೂ, ಈವರೆಗೆ ಯಾರೂ ಮಾಡಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪೂರ್ತಿ ಓದಿ5:56 PM
ಡೇಟಿಂಗ್ ರಟ್ಟಾಗುತ್ತಿದ್ದಂತೆ ಓಡಿ ಬಂದು ಕಾರ್ತಿಕ್ ಆರ್ಯನ್ಗೆ ಪ್ರಪೋಸ್ ಮಾಡಿ, ರಿಂಗ್ ತೊಡಿಸಿದ ಯುವತಿ
ಕನ್ನಡ ನಟಿ ಶ್ರೀಲೀಲಾ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್ ಕುರಿತು ಇತ್ತೀಚೆಗೆ ನಟನ ತಾಯಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ. ಇದರ ಬೆನ್ನಲ್ಲೇ ಯುವತಿಯೊಬ್ಬಳು ಓಡೋಡಿ ಬಂದು ಕಾರ್ತಿಕ್ ಆರ್ಯನ್ಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದಾಳೆ. ಇಷ್ಟೇ ಅಲ್ಲ ಎಂಗೇಜ್ಮೆಂಟ್ ರಿಂಗ್ ಕೂಡ ತೊಡಿಸಿದ್ದಾಳೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
ಪೂರ್ತಿ ಓದಿ5:41 PM
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬೇಕೆಂಬುದು ವಿದ್ಯಾರ್ಥಿಗಳ ಹಂಬಲ: ಡಿ.ಕೆ.ಶಿವಕುಮಾರ್
ನಾಳೆ ವಿಶ್ವ ಜಲ ದಿನವಾಗಿದ್ದು, ಅದರ ಅಂಗವಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ. ತಲಕಾವೇರಿಯಿಂದ ಕಾವೇರಿ ತೀರ್ಥ ಕೊಂಡೊಯ್ದು ಆರತಿ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪೂರ್ತಿ ಓದಿ5:29 PM
ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!
ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಿರುವುದು ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸಿದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಸಚಿವ ಕೆ.ಎಚ್ ಮುನಿಯಪ್ಪ ಸ್ವಾಗತಿಸಿದ್ದಾರೆ.
ಪೂರ್ತಿ ಓದಿ5:29 PM
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಹನಿಟ್ರ್ಯಾಪ್ ಅಂದರೆ ಸುಮ್ಮನೆ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರ ಬರುತ್ತಾರಾ.? ನೀವು ಹಲೋ ಎಂದರೆ ಅವರು ಹಲೋ ಹಲೋ ಎನ್ನುತ್ತಾರೆ, ನೀವು ಮಾತನಾಡುತ್ತಿರುವುದಕ್ಕೆ ನಾನು ಮಾತನಾಡಿದ್ದೇನೆ.
ಪೂರ್ತಿ ಓದಿ5:17 PM
Karimani Serial: ಕರ್ಣನ ಶತ್ರು ʼಬ್ಲ್ಯಾಕ್ ರೋಸ್ʼ ನಳಿನಿಯೋ? ವನಜಾಳೋ? ಇದೇ ದಿನದಂದು ಉತ್ತರ ಸಿಗೋದು ಪಕ್ಕಾ!
ಖಾಸಗಿ ವಾಹಿನಿಯಲ್ಲಿ ʼಕರಿಮಣಿʼ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಬ್ಲ್ಯಾಕ್ರೋಸ್ ಯಾರು?
ಪೂರ್ತಿ ಓದಿ4:52 PM
ವಿಧಾನಸಭೆ: ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು ಅಮಾನತು! ಇಲ್ಲಿದೆ ಪಟ್ಟಿ..
ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ ಶಾಸಕರು, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.
ಪೂರ್ತಿ ಓದಿ4:31 PM
ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?
ಇಂದು ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಚಾಲ್ತಿಯಲ್ಲಿದೆ. ಲವ್ ಮ್ಯಾರೇಜ್ ಆದವರು ಡಿವೋರ್ಸ್ ತಗೊಳ್ರಾರೆ. ಅರೇಂಜ್ ಮ್ಯಾರೇಜ್ ಆದವರು ಕೂಡ ಡಿವೋರ್ಸ್ ತಗೊಳ್ತಾರೆ. ಆದರೆ ಬೆಸ್ಟ್ಫ್ರೆಂಡ್ನ್ನೇ ಯಾಕೆ ಮದುವೆ ಆಗಬೇಕು ಅಂತ ಕಾರಣ ಇಲ್ಲಿದೆ!
ಪೂರ್ತಿ ಓದಿ4:23 PM
ಸ್ಯಾಂಡಲ್ವುಡ್ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ: ಪರಭಾಷಾ ಚಿತ್ರಗಳಲ್ಲಿ ಸಾಲು ಸಾಲು ಕನ್ನಡತಿಯರು!
ಆಶಿಕಾ ರಂಗನಾಥ್, ರೆಚೆಲ್ ಡೇವಿಡ್, ಸಪ್ತಮಿ ಗೌಡ, ನಭಾ ನಟೇಶ್ ಹೀಗೆ ಕನ್ನಡದ ಸಾಲು ಸಾಲು ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ಸದ್ಯ ಎದ್ದಿರುವ ಪ್ರಶ್ನೆ, ‘ಹಾಗಿದ್ದರೆ ಸ್ಯಾಂಡಲ್ವುಡ್ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ?’ ಎಂಬುದು.
4:11 PM
ಪ್ರೀವೆಡ್ಡಿಂಗ್ ಶೂಟ್ ವೇಳೆ ವಧುವಿನ ಬೆನ್ನಿಗೆ ಹತ್ತಿಕೊಂಡ ಬೆಂಕಿ: ವೀಡಿಯೋ ವೈರಲ್
ಬೆಂಗಳೂರಿನಲ್ಲಿ ಪ್ರೀವೆಡ್ಡಿಂಗ್ ಶೂಟ್ ವೇಳೆ ಬಣ್ಣದ ಬಾಂಬ್ ಸ್ಫೋಟಗೊಂಡು ವಧು ಗಾಯಗೊಂಡಿದ್ದಾರೆ. ವೀಡಿಯೋದಲ್ಲಿ ವಧುವಿನ ಬೆನ್ನಿಗೆ ಬೆಂಕಿ ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ3:45 PM
ಚಿಕ್ಕಬಳ್ಳಾಪುರದ ಜಂಗಮಕೋಟೆಯ 1033 ಎಕರೆಯಲ್ಲಿ ನಿರ್ಮಾಣವಾಗಲಿದೆ ಡೀಪ್ ಟೆಕ್ ಪಾರ್ಕ್!
ಕರ್ನಾಟಕ ಸರ್ಕಾರವು ಬೆಂಗಳೂರಿನ ಸಮೀಪ ಡೀಪ್-ಟೆಕ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಿದೆ. ಚಿಕ್ಕಬಳ್ಳಾಪುರದ ಜಂಗಮಕೋಟೆಯಲ್ಲಿ ಸ್ಥಾಪನೆಯಾಗಲಿರುವ ಈ ಪಾರ್ಕ್, ಹೈಟೆಕ್ ಉತ್ಪಾದನೆಗೆ ಉತ್ತೇಜನ ನೀಡಲಿದೆ.
ಪೂರ್ತಿ ಓದಿ3:33 PM
IPL 2025: ಈ ಬಾರಿ ಪ್ಲೇ ಆಫ್ಗೇರೋ 4 ತಂಡಗಳು ಯಾವುವು? ಅಚ್ಚರಿ ಭವಿಷ್ಯ ನುಡಿದ ಆರ್ಸಿಬಿ ಮಾಜಿ ಕೋಚ್!
ಐಪಿಎಲ್ 2024ರಲ್ಲಿ ಆರ್ಸಿಬಿ ತಂಡದ ಭವಿಷ್ಯದ ಬಗ್ಗೆ ಮೈಕ್ ಹೆಸನ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಆರ್ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದಾರೆ.
ಪೂರ್ತಿ ಓದಿ3:22 PM
ದೇವನಹಳ್ಳಿ ಬಳಿ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆಗೆ ಸ್ಥಳ ಮಂಜೂರು: ಕೈಗಾರಿಕಾ ಸಚಿವ ಎಂ.ಬಿ ಪಾಟೀಲ!
ರಾಜ್ಯದಿಂದ ಆಭರಣ ರಫ್ತಿಗೆ ಉತ್ತೇಜನ ನೀಡಲು ದೇವನಹಳ್ಳಿಯಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಆರಂಭಗೊಂಡ ಆಭರಣ ಪ್ರದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.
ಪೂರ್ತಿ ಓದಿ3:21 PM
ಭದ್ರತಾ ವಿದ್ರೋಹ: ಭಾರತದ ರಕ್ಷಣಾ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಬಿಇಎಲ್ ಇಂಜಿನಿಯರ್!
ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನ ಉದ್ಯೋಗಿಯ ಬಂಧನವು ರಕ್ಷಣಾ ಮಾಹಿತಿಯ ಸೋರಿಕೆಯ ಬಗ್ಗೆ ಕಳವಳ ಮೂಡಿಸಿದೆ. ಪಾಕಿಸ್ತಾನದ ಐಎಸ್ಐಗೆ ರಹಸ್ಯ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ದೀಪ್ ರಾಜ್ ಚಂದ್ರ ಎಂಬ ಇಂಜಿನಿಯರ್ ಬಂಧನವಾಗಿದೆ.
ಪೂರ್ತಿ ಓದಿ3:02 PM
ಮನೆಯಲ್ಲೇ 15 ಕೋಟಿ ಪತ್ತೆ, ಜಸ್ಟೀಸ್ ಯಶವಂತ್ ವರ್ಮಾ ವಿರುದ್ಧ ಆಂತರಿಕ ತನಿಕೆ ಆರಂಭಿಸಿದ ಸುಪ್ರೀಂ ಕೋರ್ಟ್!
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ರಾಶಿ ಪತ್ತೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಂತರಿಕ ತನಿಖೆ ಆರಂಭಿಸಿದೆ. ಅವರ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.
ಪೂರ್ತಿ ಓದಿ3:01 PM
ಪಾಕಿಸ್ತಾನದ ಆರು ವರ್ಷದ ಬಾಲಕಿಯ ಫುಲ್ ಶಾಟ್ಗೆ ಕ್ರಿಕೆಟ್ ಪ್ರೇಮಿಗಳು ಫಿದಾ: ರೋಹಿತ್ ಶರ್ಮಾಗೆ ಹೋಲಿಕೆ
ಪಾಕಿಸ್ತಾನದ ಆರು ವರ್ಷದ ಬಾಲಕಿ ಸೋನಿಯಾ ಖಾನ್ ಅವರ ಬ್ಯಾಟಿಂಗ್ ವೈರಲ್ ಆಗಿದ್ದು, ಆಕೆಯನ್ನು ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾಗೆ ಹೋಲಿಕೆ ಮಾಡಲಾಗುತ್ತಿದೆ. ಆಕೆ ಪುಲ್ ಶಾಟ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ2:51 PM
ರಣಬೀರ್ ಕಪೂರ್ ಮೊದಲ ಪತ್ನಿ ಆಲಿಯಾ ಭಟ್ ಅಲ್ಲ, ರಹಸ್ಯ ಬಹಿರಂಗಡಿಸಿದ ನಟ
ರಣಬೀರ್ ಕಪೂರ್ 2022ರಲ್ಲಿ ಆಲಿಯಾ ಭಟ್ ಮದುವೆಯಾಗಿದ್ದಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತೀಚೆಗೆ ರಣಬೀರ್ ಕಪೂರ್ ಸ್ಫೋಟಕ ಮಾಹಿತಿ ಬಹಿಂಗಪಡಿಸಿದ್ದಾರೆ. ರಣಬೀರ್ ಕಪೂರ್ ಮೊದಲ ಪತ್ನಿ ಆಲಿಯಾ ಭಟ್ ಅಲ್ಲ, ಈ ಕುರಿತು ರಣಬೀರ್ ಕಪೂರ್ ರಹಸ್ಯ ಬಹಿರಂಗ ಪಡಿಸಿದ್ದಾರೆ.
2:27 PM
ಎರಡು ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ಖರ್ಚು, ಸಿದ್ಧರಾಮಯ್ಯ ಹೆಲಿಕಾಪ್ಟರ್ಗೆ 31 ಕೋಟಿ ವೆಚ್ಚ!
ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚು ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಪ್ರಯಾಣಕ್ಕೆ 31 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ2:25 PM
ಗಂಡು ಮಗುವಿನ ಆಸೆಯಲ್ಲಿ 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ! ವಿಚಿತ್ರವಾಗಿದೆ ಎಲ್ಲರ ಹೆಸರು
ಬಯಸಿದ ಮಕ್ಕಳು ಸಿಗೋದು ಅಪರೂಪ. ಹೆಣ್ಣು ಬಯಸಿದವರಿಗೆ ಗಂಡು, ಗಂಡು ಬಯಸಿದವರಿಗೆ ಹೆಣ್ಣು ಮಕ್ಕಳಾಗೋದಿದೆ. ಹುಟ್ಟಿದ ಮಗುವನ್ನೇ ತಾವಂದುಕೊಂಡಂತೆ ಬೆಳೆಸಿ ಪೋಷಕರು ಖುಷಿಯಾಗ್ತಾರೆ. ಆದ್ರೆ ಈ ಚೀನಾ ದಂಪತಿ ಗಂಡು ಮಗುವಿಗಾಗಿ 9 ಮಗು ಹೆತ್ತಿದ್ದಲ್ಲದೆ, ವಿಚಿತ್ರ ಹೆಸರಿಟ್ಟು ತಮಗೆ ಗಂಡು ಮಗುವಿನ ಮೇಲಿರುವ ಪ್ರೀತಿ ತೋರಿಸಿದ್ದಾರೆ.
2:06 PM
ಜೀವದ ಗೆಳೆಯ ಅಂತಾ ಒಟ್ಟಿಗೆ ಕುಡಿದ್ರೆ ಜೀವಕ್ಕೆ ಕುತ್ತು ಎಚ್ಚರ, ಈ ಸ್ಟೋರಿ ಒಮ್ಮೆ ಓದಿ!
ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಲಾಗಿದೆ. ಮದ್ಯ ಸೇವನೆಯ ವೇಳೆ ನಡೆದ ಮಾತಿನ ಚಕಮಕಿಯಿಂದ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ1:45 PM
ಭೂಮಿಯತ್ತ ನುಗ್ಗಿ ಬರ್ತಿದೆ ಅತಿದೊಡ್ಡ ಕ್ಷುದ್ರಗ್ರಹ! ಮನುಕುಲ ನಾಶವಾಗಲಿದೆಯಾ? ನಾಸಾ ನೀಡಿದ ಎಚ್ಚರಿಕೆ ಏನು?
ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ನುಗ್ಗಿ ಬರುತ್ತಿರುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದೆ. ಈ ಬಾಹ್ಯಾಕಾಶ ಶಿಲೆಯು ಸಂಭಾವ್ಯ ಅಪಾಯಕಾರಿಯಾಗಿದ್ದು.. ವಿಜ್ಞಾನಿಗಳು ಇದರ ಮೇಲೆ ಕಣ್ಣಿಟ್ಟಿದ್ದಾರೆ,
ಪೂರ್ತಿ ಓದಿ1:41 PM
ಉದ್ಯೋಗಿಗಳೇ! PIP ಹೆಸರಿನಲ್ಲಿ ಕೆಲಸದಿಂದ ವಜಾ ಮಾಡಲಾಗತ್ತೆ ಹುಷಾರ್! ಆಗ ಏನ್ ಮಾಡಬೇಕು?
ಆಫೀಸ್ಗಳಲ್ಲಿ ಪಿಐಪಿ ಎನ್ನೋದು ಈಗ ಭಾರೀ ಬಳಕೆಯಾಗುತ್ತಿದೆ. ಹಾಗಾದರೆ ಪಿಐಪಿ ಎಂದರೇನು? ಫಿಐಪಿಗೆ ಹಾಕಿದಾಗ ಏನು ಮಾಡಬೇಕು?
ಪೂರ್ತಿ ಓದಿ1:28 PM
ಬೆಂಕಿಯಲ್ಲಿ ಅರಳಿದ ಹೂವಲ್ಲ, ಬಾಹ್ಯಾಕಾಶದಲ್ಲಿ ಅರಳಿದ ಹೂ; ಇದರ ಬಗ್ಗೆ ನಿಮಗೆಷ್ಟು ಗೊತ್ತು?
ನಾಸಾ 2016ರಲ್ಲಿ ಬಾಹ್ಯಾಕಾಶದಲ್ಲಿ ಹೂ ಅರಳಿದ ಚಿತ್ರವನ್ನು ಪ್ರಕಟಿಸಿತ್ತು, ಇದು ಮಾನವ ಇತಿಹಾಸದಲ್ಲಿ ಮೊದಲನೆಯದು. ಈ ಸಾಧನೆಯು VEG-01 ಪ್ರಯೋಗದ ಭಾಗವಾಗಿತ್ತು, ಇದು ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿತ್ತು.
ಪೂರ್ತಿ ಓದಿ1:20 PM
ಬೇಸಿಗೆಯಲ್ಲಿ ಕಡಿಮೆ ಖರ್ಚು, ಹೆಚ್ಚು ಆದಾಯ ತರುವ ವ್ಯವಹಾರಗಳಿವು!
ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬ್ಯುಸಿನೆಸ್ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. ತಂಪು ಪಾನೀಯಗಳು, ಮೊಬೈಲ್ ಫುಡ್ ಸ್ಟಾಲ್, ಬೇಸಿಗೆ ಬಟ್ಟೆ ಮಾರಾಟ, ಸೊಪ್ಪು ತರಕಾರಿ ಮಾರಾಟ ಮತ್ತು ಕೌಶಲ್ಯ ತರಗತಿಗಳು ಉತ್ತಮ ಆಯ್ಕೆಗಳು.
ಪೂರ್ತಿ ಓದಿ12:51 PM
ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣದಿಂದ ರಾಜ್ಯದ ಮರ್ಯಾದೆ ಹಾಳು; ಸಿಎಂ ರಾಜೀನಾಮೆ ಕೊಡಲಿ: ಬೊಮ್ಮಾಯಿ
ಹನಿಟ್ರ್ಯಾಪ್ ಪ್ರಕರಣವು ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪೂರ್ತಿ ಓದಿ12:51 PM
IPL 2025 ಆರ್ಸಿಬಿ-ಕೆಕೆಆರ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯೋದೇ ಡೌಟ್!
ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಮಳೆಯಿಂದಾಗಿ ಪಂದ್ಯ ನಡೆಯುವುದು ಅನುಮಾನವಾಗಿದೆ. ಹವಾಮಾನ ಇಲಾಖೆ ಕೋಲ್ಕತಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಪೂರ್ತಿ ಓದಿ12:41 PM
ಬೆಂಗಳೂರು ಪಾರ್ಕ್ನಲ್ಲಿ ಪ್ರೇಮಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಆಸಿಫ್ ಬಂಧನ!
ಬೆಂಗಳೂರಿನ ಪಾರ್ಕ್ಗಳಲ್ಲಿ ಪ್ರೇಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಸೀಫ್ ಪ್ರೇಮಿಗಳನ್ನು ಬೆದರಿಸಿ ಚಿನ್ನಾಭರಣ ಮತ್ತು ಹಣವನ್ನು ಸುಲಿಗೆ ಮಾಡುತ್ತಿದ್ದನು.
ಪೂರ್ತಿ ಓದಿ12:35 PM
ನೀವು ಹಳ್ಳಿಯಲ್ಲಿದ್ದರೆ ಈ ವ್ಯವಹಾರ ಆರಂಭಿಸಿ, ತಿಂಗಳಿಗೆ 30 ಸಾವಿರದಂತೆ ವರ್ಷಕ್ಕೆ ₹4 ಲಕ್ಷ ಆದಾಯ!
ಹಾಲು ವ್ಯಾಪಾರದಿಂದ ಆದಾಯ: ಹಳ್ಳಿಯಲ್ಲಿ ಇದ್ದುಕೊಂಡು ಲಕ್ಷಾಂತರ ರೂಪಾಯಿ ಗಳಿಸಬೇಕೆ? ಒಂದು ಸ್ಪೆಷಲ್ ಎಮ್ಮೆಯನ್ನು ಸಾಕುವ ಮೂಲಕ ಉತ್ತಮ ಆದಾಯ ಗಳಿಸಬಹುದು. ಈ ಎಮ್ಮೆಯ ಹಾಲು ಉತ್ತಮ ಗುಣಮಟ್ಟದ್ದಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಇದು ದುಬಾರಿಯಾಗಿ ಮಾರಾಟವಾಗುತ್ತದೆ.
ಪೂರ್ತಿ ಓದಿ12:16 PM
ಹೇಮಾ ಮಾಲಿನಿ ಸೌಂದರ್ಯ ರಹಸ್ಯ ಈಶಾ ಡಿಯೋಲ್ಳಿಂದ ರಿವೀಲ್, ನೀವು ಕೂಡ ಹೊಳೆಯುವ ತ್ವಚೆಗೆ ಹೀಗೆ ಮಾಡಿ
ಹೇಮಾ ಮಾಲಿನಿ ಸೌಂದರ್ಯ ರಹಸ್ಯ: ಗ್ಲಿಸರಿನ್ ಮತ್ತು ನಿಂಬೆ! ಟ್ಯಾನ್ ತೆಗೆದು ಹೊಳಪು ಪಡೆಯಲು ಈಶಾ ಡಿಯೋಲ್ ಸುಲಭ ವಿಧಾನ ತಿಳಿಸಿದ್ದಾರೆ. ಇಂದೇ ಪ್ರಯತ್ನಿಸಿ!
ಪೂರ್ತಿ ಓದಿ12:08 PM
ಬೆಂಗಳೂರಿನಲ್ಲಿ ಹಿಂದಿ ಅಧಿಕೃತ ಭಾಷೆ ಎಂದು ಫಲಕ ಪ್ರದರ್ಶಿಸಿದ ಹೋಟೆಲ್!
ಬೆಂಗಳೂರಿನ ಹೋಟೆಲ್ನಲ್ಲಿ ಹಿಂದಿ ಅಧಿಕೃತ ಭಾಷೆ ಎಂದು ಬೋರ್ಡ್ ಹಾಕಿದ್ದಕ್ಕೆ ವಿವಾದ ಭುಗಿಲೆದ್ದಿದೆ. ಕನ್ನಡಿಗರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮ್ಯಾನೇಜರ್ ಕೆಲಸ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೂರ್ತಿ ಓದಿ12:00 PM
ಮದರಸಾ ಶಿಕ್ಷಣ ವಿವಾದ, ಸದನದಲ್ಲಿ ಕೋಲಾಹಲ, ಆಕ್ರೋಶ.. ಯತ್ನಾಳ್ ಹೇಳಿದ್ದೇನು?
ವಿಧಾನಸಭೆಯಲ್ಲಿ ಮದರಸಾಗಳ ಕುರಿತು ಯತ್ನಾಳ್ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯತ್ನಾಳ್ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದರು.
ಪೂರ್ತಿ ಓದಿ11:59 AM
ಡಿವೋರ್ಸ್ ಜೀವನಾಂಶ ಹೇಗೆ ನಿರ್ಧಾರವಾಗುತ್ತೆ? ಪುರುಷರಿಗೂ ಸಿಗುತ್ತಾ ಹಣ?
ದಂಪತಿಗೆ ಡಿವೋರ್ಸ್ ನೀಡುವ ಸಮಯದಲ್ಲಿ ಕೋರ್ಟ್ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ. ಯಾರು, ಎಷ್ಟು ಹಣವನ್ನು ಯಾರಿಗೆ ನೀಡಬೇಕು ಎಂಬುದನ್ನು ಹೇಳುತ್ತದೆ. ಜೀವನಾಂಶ ನಿರ್ಧರಿಸುವ ಮಾನದಂಡ ಯಾವುದು?
11:59 AM
ಕೇವಲ ₹15000 ಬಂಡವಾಳ ಹಾಕಿ ಈ ಬಿಸಿನೆಸ್, ಆರಂಭಿಸಿ ಲಕ್ಷಗಳಲ್ಲಿ ಲಾಭ ಗಳಿಸಿ!
Best Business Idea : ಜಾಬ್ನಿಂದ ಬೇಸರಾಗಿದ್ದರೆ ಕಡಿಮೆ ಬಜೆಟ್ನಲ್ಲಿ ಬಿಸಿನೆಸ್ ಶುರು ಮಾಡಬಹುದು. ಕೇವಲ 15,000 ರೂಪಾಯಿಯಿಂದ ಸಣ್ಣ ಮಟ್ಟದಲ್ಲಿ ಬಿಸಿನೆಸ್ ಮಾಡಬಹುದು, ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು. ದೊಡ್ಡ ಮಟ್ಟದಲ್ಲಿ ಈ ಬಿಸಿನೆಸ್ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು.
ಪೂರ್ತಿ ಓದಿ11:43 AM
ಅಮೆರಿಕದ ಶಿಕ್ಷಣ ಇಲಾಖೆಯನ್ನೇ ಮುಚ್ಚಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಶಿಕ್ಷಣ ಇಲಾಖೆಯನ್ನು ರದ್ದುಪಡಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಹಿಂದೆ ಟ್ರಂಪ್ ಅವರು ಶಿಕ್ಷಣ ಇಲಾಖೆಯನ್ನು ದೊಡ್ಡ ವಂಚನೆ ಎಂದು ಕರೆದಿದ್ದರು ಮತ್ತು ಇಲಾಖೆಯನ್ನು ಮುಚ್ಚುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಪೂರ್ತಿ ಓದಿ11:40 AM
ಮಂಗಳನಿಂದ ಈ ಮೂರು ರಾಶಿಗೆ ರಾಜಯೋಗದ ಭಾಗ್ಯ, ಅದೃಷ್ಟ, ಹಣ
ರಾಶಿಚಕ್ರ ಚಿಹ್ನೆಯಲ್ಲಿ ಮಂಗಳನ ಸಂಚಾರವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ಅತ್ಯಂತ ಶುಭವಾಗಿರುತ್ತದೆ.
11:37 AM
Karnataka honeytrap row: ಬಾಯಲ್ಲಿ ಆರೋಪ ಬೇಡ, ರಾಜಣ್ಣವ್ರು ದೂರು ಕೊಡಲಿ, ಸಿಬಿಐ ತನಿಖೆಗೆ ಒತ್ತಾಯಿಸಲಿ: ಸಿಟಿ ರವಿ
ವಿಧಾನ ಪರಿಷತ್ನಲ್ಲಿ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಸಿಟಿ ರವಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಪೂರ್ತಿ ಓದಿ11:36 AM
ಏಪ್ರಿಲ್ 6ರ ಕೋಲ್ಕತಾ-ಲಖನೌ ಪಂದ್ಯ ಗುವಾಹಟಿಗೆ ಶಿಫ್ಟ್! ಕಾರಣ ಏನು?
ಭದ್ರತಾ ಕಾರಣಗಳಿಂದಾಗಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಕೆಕೆಆರ್ ಮತ್ತು ಲಖನೌ ನಡುವಿನ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ ಉಂಟಾಗುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಪೂರ್ತಿ ಓದಿ11:35 AM
ಮನೆಯಲ್ಲೇ ಮಾಡಿ ಕರಾವಳಿ ಶೈಲಿಯ ರುಚಿರುಚಿಯಾದ ಮಾಲ್ಪುರಿ: ರೆಸಿಪಿ ಇಲ್ಲಿದೆ
ಮಾಲ್ಪುವಾ (Malpua) ಅಥವಾ ಮಾಲ್ಪುರಿ ಕರ್ನಾಟಕದ ಕರಾವಳಿಯ ಒಂದು ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು. ಈ ಯುಗಾದಿಗೆ ನೀವು ಇದನ್ನು ಸುಲಭವಾಗಿ ಬ್ರೆಡ್ ಹಾಗೂ ಹಾಲಿನಿಂದ ಮನೆಯಲ್ಲೇ ತಯಾರಿಸಿ.
ಪೂರ್ತಿ ಓದಿ11:33 AM
40 ರಾಜ್ಯ ಸರ್ಕಾರಿ ಸಂಸ್ಥೆ ದಿವಾಳಿ- ಭಾರಿ ಅವ್ಯವಹಾರ! ಸಿಎಜಿಯ ಶಾಕಿಂಗ್ ವರದಿ ಫುಲ್ ಡಿಟೇಲ್ಸ್ ಇಲ್ಲಿದೆ...
ರಾಜ್ಯದ 40 ಕಂಪೆನಿಗಳು ದಿವಾಳಿಯಾಗಿರುವ ಜೊತೆಗೆ ವಿವಿಧ ಕಂಪೆನಿಗಳ ಶೋಚನಿಯ ಸ್ಥಿತಿ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಶಾಕಿಂಗ್ ವರದಿ ನೀಡಿದೆ. ಫುಲ್ ಡಿಟೇಲ್ಸ್ ಇಲ್ಲಿದೆ...
11:21 AM
ವಿಧಾನಸಭೆಯಲ್ಲಿ ಬಿಜೆಪಿ ಹೈಡ್ರಾಮಾ, ಸ್ಪೀಕರ್ ಮೇಲೆ ಬಜೆಟ್ ಪ್ರತಿ ಎಸೆದು ಧಿಕ್ಕಾರ ಕೂಗಿದ ಶಾಸಕರು!
ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮಂಡನೆ ವೇಳೆ ಮುಸ್ಲಿಂ ಮೀಸಲಾತಿ ವಿಚಾರಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಸ್ಪೀಕರ್ ಪೀಠಕ್ಕೆ ಮುತ್ತಿಗೆ ಹಾಕಿ ಪ್ರತಿ ಹರಿದು ಹಾಕಿದ್ದಾರೆ. ಗದ್ದಲದ ನಡುವೆಯೂ ಬಜೆಟ್ ಅಂಗೀಕಾರ ಮಾಡಲಾಗಿದೆ.
ಪೂರ್ತಿ ಓದಿ11:21 AM
ಐಪಿಎಲ್ ರೂಲ್ಸ್ನಲ್ಲಿ ಮಹತ್ವದ ಬದಲಾವಣೆ ಮಾಡಿದ ಬಿಸಿಸಿಐ! ಈ ರೂಲ್ಸ್ ನಿಮಗೆ ಗೊತ್ತಿರಲಿ
18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಚೆಂಡಿಗೆ ಎಂಜಲು ಬಳಸಲು ಅನುಮತಿ, 2ನೇ ಇನ್ನಿಂಗ್ಸ್ನ 11ನೇ ಓವರ್ನಲ್ಲಿ ಚೆಂಡು ಬದಲು ಮತ್ತು ನಿಧಾನಗತಿ ಬೌಲಿಂಗ್ಗೆ ನಾಯಕರಿಗೆ ದಂಡ ವಿಧಿಸುವ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಪೂರ್ತಿ ಓದಿ10:55 AM
ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹೀಮೋಗ್ಲೋಬಿನ್ ಹೆಚ್ಚಿಸುವ 8 ಆಹಾರಗಳು ಇಲ್ಲಿವೆ
ಇತ್ತೀಚೆಗೆ ಅನೇಕರು ಹೀಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾದಾಗ ರಕ್ತಹೀನತೆ ಅಥವಾ ಅನೀಮಿಯಾ ರೋಗಗಳು ಬರುತ್ತವೆ. ಇಲ್ಲಿ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಂತಹ ಕೆಲ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.
ಪೂರ್ತಿ ಓದಿ10:54 AM
ನಾಳೆ ಕರ್ನಾಟಕ ಬಂದ್, ಚಿತ್ರೋದ್ಯಮದಿಂದ ಬೆಂಬಲ, ಥಿಯೇಟರ್ ಕ್ಲೋಸ್? ಸಿನಿಮಾ ಟಿಕೆಟ್ ಬುಕ್ ಮಾಡಬೇಕಾ? ಬೇಡ್ವಾ?
ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿದೆ. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ. ಚಿತ್ರೀಕರಣಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ವಾಣಿಜ್ಯ ಮಂಡಳಿ ತಿಳಿಸಿದೆ.
ಪೂರ್ತಿ ಓದಿ10:52 AM
18ಕ್ಕೆ ಕಾಲಿಟ್ಟ ಐಪಿಎಲ್ ಈಗ ಮೇಜರ್! ಟೂರ್ನಿ ಮಾದರಿ ಹೇಗೆ?
17 ಯಶಸ್ವಿ ವರ್ಷಗಳ ಬಳಿಕ ಐಪಿಎಲ್ 18ನೇ ಆವೃತ್ತಿಗೆ ಸಜ್ಜಾಗಿದೆ. ಈ ಬಾರಿ ಟೂರ್ನಿಯು ಮಾರ್ಚ್ 22 ರಿಂದ ಮೇ 25 ರವರೆಗೆ ನಡೆಯಲಿದ್ದು, ಭಾರತದ 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಸೆಣಸಾಡಲಿವೆ.
ಪೂರ್ತಿ ಓದಿ10:42 AM
TTD News: ಜೂನ್ ತಿಂಗಳ ಶ್ರೀವಾರಿ ಆರ್ಜಿತ ಇಂದು ರಿಲೀಸ್, 300 ರೂ. ವಿಶೇಷ ದರ್ಶನ ಟಿಕೆಟ್ ರಿಲೀಸ್ ಯಾವಾಗ ಗೊತ್ತಾ?
ಟಿಟಿಡಿ ಶ್ರೀವಾರಿ ಅರ್ಜಿತ ಸೇವೆಗಳ ಆನ್ಲೈನ್ ಕೋಟಾವನ್ನು ಬಿಡುಗಡೆ ಮಾಡಿದೆ. ಅಂಗ ಪ್ರದಕ್ಷಿಣೆ ಟೋಕನ್ಗಳು, ಶ್ರೀವಾಣಿ ಟ್ರಸ್ಟ್ ದರ್ಶನ, ಮತ್ತು ವಿಶೇಷ ಪ್ರವೇಶ ದರ್ಶನ ಟೋಕನ್ಗಳು ಆನ್ಲೈನ್ನಲ್ಲಿ ಲಭ್ಯವಿರುತ್ತವೆ.
ಪೂರ್ತಿ ಓದಿ10:41 AM
ಚಂದ್ರ ಗುರುನಿಂದ ದೊಡ್ಡ ರಾಜಯೋಗ, ಈ 3 ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಲಾಟರಿ
ಚಂದ್ರನು ಮಕರ ರಾಶಿಗೆ ಚಲಿಸಿದಾಗ, ಅದು ಗುರುವಿನ ಜೊತೆ ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದರಿಂದಾಗಿ 3 ರಾಶಿಚಕ್ರದವರಿಗೆ ಹೆಚ್ಚಿನ ಲಾಭವಾಗಬಹುದು.
10:34 AM
ಹಣೆಗೆ ಶ್ರೀಗಂಧದ ಲೇಪ ಹಚ್ಚುವುದರಿಂದ ಸಿಗುವ 5 ಅದ್ಭುತ ಪ್ರಯೋಜನಗಳು
ಸೌಂದರ್ಯ ಸಲಹೆಗಳು: ಶ್ರೀಗಂಧದ ಲೇಪವನ್ನು ಹಣೆಗೆ ಹಚ್ಚುವುದರಿಂದ ತಲೆನೋವು, ಒತ್ತಡ ಮತ್ತು ನಿದ್ರಾಹೀನತೆಯಿಂದ ಪರಿಹಾರ ಸಿಗುತ್ತದೆ. ಇದು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಪೂರ್ತಿ ಓದಿ10:28 AM
Nagpur violence: ಇಂದು ಶುಕ್ರವಾರದ ಪ್ರಾರ್ಥನೆ, ಗಲಭೆ ಸಾಧ್ಯತೆ ಹಿನ್ನೆಲೆ ನಾಗ್ಪುರದ ಮಸೀದಿಯ ಹೊರಗೆ ಪೊಲೀಸ್ ಬಿಗಿ ಭದ್ರತೆ!
Nagpur violence: ನಂತರ ಪರಿಸ್ಥಿತಿ ತಿಳಿಯಾಗಿದ್ದು, ಕರ್ಫ್ಯೂ ಸಡಿಲಿಸಲಾಗಿದೆ. ರಂಜಾನ್ ಪ್ರಾರ್ಥನೆ ಹಿನ್ನೆಲೆ ಭದ್ರತೆ ಬಿಗಿಗೊಳಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಪೂರ್ತಿ ಓದಿ10:25 AM
ಜಿಂಬಾಬ್ವೆಯ ಕೊವೆಂಟ್ರಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಹೊಸ ಅಧ್ಯಕ್ಷೆ
ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಐಒಸಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಕ್ರೀಡೆಯನ್ನು ಸೇರ್ಪಡೆಗೊಳಿಸಲು ಐಒಸಿ ಒಪ್ಪಿಗೆ ಸೂಚಿಸಿದೆ. ಡೋಪ್ ಟೆಸ್ಟ್ನಲ್ಲಿ ವಿಫಲರಾದ ಅರ್ಚನಾ ಜಾಧವ್ಗೆ 4 ವರ್ಷ ನಿಷೇಧ ಹೇರಲಾಗಿದೆ.
ಪೂರ್ತಿ ಓದಿ10:07 AM
ಮಗಳ ಹೋಳಿ ಆಚರಣೆ ಟೀಕೆ ಮಾಡಿದ್ದ ಮೌಲಾನಾ ವಿರುದ್ಧ ಸಿಡಿದೆದ್ದ ಮೊಹಮದ್ ಶಮಿ ಮಾಜಿ ಪತ್ನಿ!
ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಹೋಳಿ ಆಡಿದ ವಿಡಿಯೋ ಹಂಚಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಈ ಕುರಿತು ಮೌನ ಮುರಿದು ಟೀಕಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ, ಶಮಿ ರೋಜಾ ಆಚರಿಸದ ಬಗ್ಗೆಯೂ ಮಾತನಾಡಿದ್ದಾರೆ.
ಪೂರ್ತಿ ಓದಿ9:35 AM
16 ವರ್ಷದ ಸಂಸಾರದ ಬಳಿಕ ಗಂಡನ ಹೆಸರನ್ನೂ ಹೇಳದೆ ವಿಚ್ಛೇದನ ನೀಡಿದ ಪ್ರಖ್ಯಾತ ಟಿವಿ ನಿರೂಪಕಿ!
ಟಿವಿ ನಿರೂಪಕಿ ಚಿತ್ರಾ ತ್ರಿಪಾಠಿ ಪತಿ ಅತುಲ್ ಅಗರ್ವಾಲ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿಲ್ಲ. ಅತುಲ್ ಅಗರ್ವಾಲ್ ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಹಿಂದಿ ಖಬರ್ ಚಾನೆಲ್ನ ನಿರ್ದೇಶಕರಾಗಿದ್ದಾರೆ.
ಪೂರ್ತಿ ಓದಿ9:35 AM
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ತಂಡಗಳಿಗೆ ಬೋನಸ್ ಅಂಕ?
2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಬೋನಸ್ ಅಂಕ ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸುತ್ತಿದೆ. ಇನ್ನಿಂಗ್ಸ್ ಗೆಲುವು, ದೊಡ್ಡ ಅಂತರದ ಗೆಲುವು, ಬಲಿಷ್ಠ ತಂಡಗಳ ವಿರುದ್ಧದ ಗೆಲುವಿಗೆ ಬೋನಸ್ ಅಂಕ ನೀಡುವ ಸಾಧ್ಯತೆ ಇದೆ.
ಪೂರ್ತಿ ಓದಿ9:08 AM
ಛತ್ತೀಸ್ ಗಢದಲ್ಲಿ ಕಾರ್ಯಾಚರಣೆ ತೀವ್ರ : 30 ನಕ್ಸಲರ ಹತ್ಯೆ, ಓರ್ವ ಯೋಧ ಹುತಾತ್ಮ
ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು ಗುರುವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 30 ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಓರ್ವ ಭದ್ರತಾ ಸಿಬ್ಬಂದಿ ಕೂಡಾ ಹುತಾತ್ಮರಾಗಿದ್ದಾರೆ.
ಪೂರ್ತಿ ಓದಿ9:05 AM
ರಾಯಚೂರು: ₹500 ಖೋಟಾ ನೋಟು ಕೊಟ್ಟು ಬಿರಿಯಾನಿ ತಿಂದ ಖದೀಮರಿಬ್ಬರು ಅರೆಸ್ಟ್
ರಾಯಚೂರಿನ ಹೋಟೆಲ್ನಲ್ಲಿ ಚಿಕನ್ ಬಿರಿಯಾನಿ ತಿಂದ ಇಬ್ಬರು, ಮಾಲೀಕನಿಗೆ ಮಕ್ಕಳಾಡುವ ನಕಲಿ 500 ರೂಪಾಯಿ ನೋಟು ನೀಡಿ ವಂಚಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೂರ್ತಿ ಓದಿ8:45 AM
ಗೋಕರ್ಣದಲ್ಲಿಕಾಣೆಯಾಗುತ್ತಿವೆ ಗೋವುಗಳು! ದನಗಳ್ಳರ ಹಾವಳಿ, ಬಿಡಾಡಿ ದನಗಳೇ ಟಾರ್ಗೆಟ್!
ಗೋಕರ್ಣದಲ್ಲಿ ಕಳೆದ ಕೆಲವು ದಿನಗಳಿಂದ ಬಿಡಾಡಿ ದನಗಳು ನಾಪತ್ತೆಯಾಗುತ್ತಿದ್ದು, ಸಾರ್ವಜನಿಕರು ದನ ಕಳ್ಳತನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಮತ್ತು ಚೆಕ್ ಪೋಸ್ಟ್ನಲ್ಲಿ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಪೂರ್ತಿ ಓದಿ8:23 AM
ಹಠ ಮಾಡ್ತಿದೆ ಅಂತಾ ಮಗು ಕೈಮೇಲೆ ಬರೆ, ಡೈಪರ್ ಗೆ ಖಾರದ ಪುಡಿ ಹಾಕಿ ಅಂಗನವಾಡಿ ಸಹಾಯಕಿ ವಿಕೃತಿ!
ಕನಕಪುರದ ಅಂಗನವಾಡಿಯಲ್ಲಿ ಮಗು ಹಠ ಮಾಡಿದ್ದಕ್ಕೆ ಸಹಾಯಕಿಯೊಬ್ಬರು ಕೈ ಮೇಲೆ ಬರೆ ಹಾಕಿ, ಡೈಪರ್ಗೆ ಕಾರದಪುಡಿ ಹಾಕಿದ್ದಾರೆ. ಪೋಷಕರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಪೂರ್ತಿ ಓದಿ8:12 AM
AT Raghu ಮಂಡ್ಯದ ಗಂಡು ಸಿನಿಮಾದ ನಿರ್ದೇಶಕ ಎಟಿ ರಘು ನಿಧನ
ಕನ್ನಡದ ಹಿರಿಯ ನಿರ್ದೇಶಕ ಎಟಿ ರಘು, 76 ವರ್ಷ ವಯಸ್ಸಿನಲ್ಲಿ ನಿಧನರಾದರು. ಅವರು ಅಂಬರೀಷ್ ಅವರ 27 ಸಿನಿಮಾಗಳನ್ನು ನಿರ್ದೇಶಿಸಿದ್ದರು ಮತ್ತು 'ಮಂಡ್ಯದ ಗಂಡು' ಬಿರುದನ್ನು ನೀಡಿದ್ದರು. ಅವರ ಅಂತ್ಯಕ್ರಿಯೆ ಇಂದು ಹೆಬ್ಬಾಳದಲ್ಲಿ ನಡೆಯಲಿದೆ.
ಪೂರ್ತಿ ಓದಿ8:00 AM
ಇಂದಿನಿಂದ SSLC ಪರೀಕ್ಷೆಗಳು ಆರಂಭ: ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ!
ಎಸ್ಎಸ್ಎಲ್ಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭವಾಗಲಿದ್ದು, ಸಿಸಿ ಕ್ಯಾಮೆರಾ ಮತ್ತು ವೆಬ್ಕಾಸ್ಟಿಂಗ್ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ 8.96 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪೂರ್ತಿ ಓದಿ7:53 AM
ಯುಗಾದಿಯಿಂದ ಯುಗಾದಿಗೆ ಗ್ರಹಗಳ ಗಾದಿ ಬದಲು; ಮಳೆ ಬೆಳೆ ಶಾಂತಿ ಕ್ಷೋಭೆಗಳಿಗೆ ಇದು ಕಾರಣ ಎಂದರೆ ನಂಬುತ್ತೀರಾ? ಇಲ್ಲಿ ನೋಡಿ!
ಯುಗಾದಿ ಹಬ್ಬ ಮತ್ತು ಪಂಚಾಂಗ ಶ್ರವಣದ ಅವಿನಾಭಾವ ಸಂಬಂಧವನ್ನು ಈ ಲೇಖನ ವಿವರಿಸುತ್ತದೆ. ಪಂಚಾಂಗ ಶ್ರವಣವು ಭವಿಷ್ಯದ ನಿರೀಕ್ಷೆಗಳನ್ನು ತಿಳಿಯಲು ಮತ್ತು ಮಳೆ, ಬೆಳೆಗಳ ಬಗ್ಗೆ ಮಾಹಿತಿ ಪಡೆಯಲು ಒಂದು ಮಾರ್ಗವಾಗಿದೆ.
ಪೂರ್ತಿ ಓದಿ7:40 AM
ಮೀನು ಕದ್ದ ಆರೋಪ: ಕೂಲಿ ಮಾಡುವ ಮಹಿಳೆಯನ್ನ ಮರಕ್ಕೆ ಕಟ್ಟಿಹಾಕಿ ಹಲ್ಲೆ! ನಿಜಕ್ಕೂ ನಡೆದಿದ್ದೇನು?
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.
7:39 AM
ರಾಜ್ಯ ಆರ್ಥಿಕ ಸಂಕಷ್ಟ ನಡುವೆಯೂ ಇಂದೇ ಮಸೂದೆ : ಮಂತ್ರಿ, ಶಾಸಕರಿಗೆ ಭರ್ಜರಿ ವೇತನ ಏರಿಕೆ ಭಾಗ್ಯ! ಯಾರಿಗೆ ಎಷ್ಟು?
ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದರೂ ಶಾಸಕರು, ಸಚಿವರು, ಸಿಎಂ ವೇತನ ದುಪ್ಪಟ್ಟು! ರಾಜ್ಯಪಾಲರ ಒಪ್ಪಿಗೆ ಮೇರೆಗೆ ‘ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025’ ವಿಧಾನಮಂಡಲದಲ್ಲಿ ಮಂಡನೆಯಾಗಲಿದೆ. ವೇತನ 40 ಸಾವಿರದಿಂದ 80 ಸಾವಿರಕ್ಕೆ ಏರಿಕೆ.
7:39 AM
'ನನ್ನಪ್ಪ ಡ್ರಂನಲ್ಲಿದ್ದಾರೆ'..; ನೆರೆಮನೆಯವರಿಗೆ ಕೊಲೆಯ ಮಾಹಿತಿ ನೀಡಿದ್ದ ನೌಕಾಧಿಕಾರಿ ಸೌರಭ್ ರಜಪೂತ್ರ 6 ವರ್ಷದ ಮಗಳು!
ಲಂಡನ್ನಿಂದ ಪತ್ನಿಗೆ ಸರ್ಪ್ರೈಸ್ ನೀಡಲು ಬಂದ ನೌಕಾಧಿಕಾರಿ ಸೌರಭ್ ರಜಪೂತ್ ಕೊಲೆಯಾಗಿದ್ದು, ಆತನ 6 ವರ್ಷದ ಮಗಳಿಗೂ ಈ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ತಿಳಿದುಬಂದಿದೆ. ಮುಸ್ಕಾನ್ ಮತ್ತು ಆಕೆಯ ಪ್ರಿಯಕರನಿಂದ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.
7:39 AM
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
21ನೇ ಮಾರ್ಚ್ 2025 ಶುಕ್ರವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
7:38 AM
ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮಾ ದಾರ ಎಳೆಯುವುದು ಅತ್ಯಾಚಾರ ಯತ್ನವಲ್ಲ: ಅಲಹಾಬಾದ್ ಹೈಕೋರ್ಟ್!
ಉತ್ತರ ಪ್ರದೇಶದಲ್ಲಿ ಬಾಲಕಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸ್ತನಗಳನ್ನು ಸ್ಪರ್ಶಿಸುವುದು ಅತ್ಯಾಚಾರವಲ್ಲ ಎಂದು ಕೋರ್ಟ್ ಹೇಳಿದೆ.
7:38 AM
ನೌಕರರ ಪಿಂಚಣಿ ಚುಕ್ತಾಕ್ಕಾಗಿ ಗ್ರಾಹಕರಿಗೆ ವಿದ್ಯುತ್ ಶಾಕ್, ಸದ್ಯದಲ್ಲೇ ದರ ಏರಿಕೆ ಬರೆ!
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಲಿದ್ದು, ಕೆಪಿಟಿಸಿಎಲ್ ನೌಕರರ ಪಿಂಚಣಿ ಹೊರೆಯನ್ನು ಗ್ರಾಹಕರ ಮೇಲೆ ಹಾಕಲಾಗಿದೆ. ಇದರಿಂದ ಯುನಿಟ್ಗೆ ಕನಿಷ್ಠ 35 ಪೈಸೆಯಿಂದ ಗರಿಷ್ಠ 39 ಪೈಸೆವರೆಗೆ ದರ ಹೆಚ್ಚಳವಾಗಲಿದೆ.
7:38 AM
ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಹನಿ ಬಾಂಬ್ , 48 ನಾಯಕರಿಗೆ ಹನಿಟ್ರ್ಯಾಪ್ ಭೀತಿ!
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರತಿಧ್ವನಿಸಿದ್ದು, 48 ನಾಯಕರ ಪೆನ್ಡ್ರೈವ್ಗಳಿವೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
7:37 AM
ಈ ದಿನಾಂಕಗಳಲ್ಲಿ ಹುಟ್ಟಿದವರು ಬೇಗ ಯಶಸ್ಸು ಸಾಧಿಸುತ್ತಾರೆ!
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೆಸರು, ಖ್ಯಾತಿ ಗಳಿಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಕಷ್ಟಪಡುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಬಹಳ ವಿಶೇಷ. ಇವರು ಬೇಗನೆ ದೊಡ್ಡವರಾಗುತ್ತಾರೆ. ಹಾಗಾದರೆ ಆ ದಿನಾಂಕಗಳು ಯಾವುವು ಎಂದು ನೋಡೋಣ..
7:37 AM
ರಾಜ್ಯದ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್: ಭಾರೀ ಪ್ರಮಾಣದಲ್ಲಿ ಏರಿಕೆ, ಎಷ್ಟು ಗೊತ್ತಾ?
ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.