Published : May 18, 2026, 05:04 AM ISTUpdated : May 18, 2026, 09:36 PM IST

Karnataka News Live: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಮೊತ್ತ ಏರಿಕೆಯಾಗತ್ತಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು

ಸಾರಾಂಶ

ವಿಜಯಪುರ: ಬಿಜೆಪಿ ಟಿಕೆಟ್‌ಗಾಗಿ ಬ್ಲ್ಯಾಕ್‌ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ. ಬ್ಲ್ಯಾಕ್‌ಮೇಲ್ ಮಾಡಿದ್ದರೆ ಸಚಿವನಾಗಿ ಇರುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ‘ಯತ್ನಾಳ್‌ ಬ್ಲ್ಯಾಕ್‌ಮೇಲ್ ಮಾಡಿ ಬಿಜೆಪಿಗೆ ಹೋಗಲು ಯತ್ನಿಸುತ್ತಿದ್ದಾರೆಂದು ಸಚಿವ ಎಂ.ಬಿ.ಪಾಟೀಲ್‌’ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳು ನನ್ನ ಬಳಿ ಇದ್ದವು. ಪಕ್ಷದ ಹಿತದೃಷ್ಟಿಯಿಂದ ನಾನು ಬಿಡುಗಡೆ ಮಾಡಲಿಲ್ಲ. ಅವುಗಳನ್ನು ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನಿಸಿದೆ. ಅವರು ಕೇಳಲಿಲ್ಲ. ಭ್ರಷ್ಟನನ್ನು ಇಟ್ಟುಕೊಂಡು ನನ್ನನ್ನು ಉಚ್ಛಾಟನೆ ಮಾಡಿದರು ಎಂದು ತಿಳಿಸಿದರು. ನಾನು ಹೊಸ ಪಕ್ಷ ಕಟ್ಟಿದರೆ ಹಿಂದೂಗಳ ವೋಟು ವಿಭಜನೆ ಆಗುತ್ತವೆ ಎಂಬುವುದು ಎಂ.ಬಿ.ಪಾಟೀಲ ಹಾಗೂ ಕಾಂಗ್ರೆಸ್‌ ಅವರ ಲೆಕ್ಕಾಚಾರವಿದೆ. ಹಿಂದೂಗಳ ವೋಟು ಒಡೆದರೆ ಮತ್ತೆ ಮುಸ್ಲಿಂ ಮತಗಳ ಮೇಲೆ ಸರ್ಕಾರ ಮಾಡುವ ಉದ್ದೇಶ ಕಾಂಗ್ರೆಸ್‌ನವರಿಗಿದೆ ಎಂದು ಲೇವಡಿ ಮಾಡಿದರು.

09:36 PM (IST) May 18

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಮೊತ್ತ ಏರಿಕೆಯಾಗತ್ತಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದೇನು?

 

Read Full Story

08:48 PM (IST) May 18

ಒಂದು ಆರ್ಡಿನರಿ ಮೊಬೈಲ್ ರೇಟಿಗೆ ಹೊಸ ಕಾರು ಖರೀದಿಸಿದ್ದ ಅಪ್ಪ; ವೈರಲ್ ಆಯ್ತು 1984ರ ಮಾರುತಿ 800 ಬಿಲ್!

40 ವರ್ಷಗಳ ಹಿಂದೆ, 1984ರಲ್ಲಿ, ಕೇವಲ 60,000 ರೂಪಾಯಿಗೆ ಖರೀದಿಸಿದ ಮಾರುತಿ 800 ಕಾರಿನ ಹಳೆಯ ಬಿಲ್ ಒಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ಬಿಲ್ ಅಂದಿನ ಮತ್ತು ಇಂದಿನ ಬೆಲೆಗಳ ನಡುವಿನ ವ್ಯತ್ಯಾಸ, ಹಣದ ಮೌಲ್ಯದ ಬದಲಾವಣೆ ಮತ್ತು ಜನರ ಜೀವನಶೈಲಿಯ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

07:55 PM (IST) May 18

ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ - ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ

ರೇಣುಕಾಸ್ವಾಮಿ  ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ, ಮೇ 19 ರಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಆಚರಿಸಲು ಅವಕಾಶ ನೀಡುವಂತೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಾಗೃಹ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.

Read Full Story

07:34 PM (IST) May 18

ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ - Bigg Boss ಧ್ರುವಂತ್‌ ಗರಂ

ಬಿಗ್‌ಬಾಸ್‌ ಖ್ಯಾತಿಯ ನಟ ಧ್ರುವಂತ್ ತಮ್ಮ ಬೈಕ್ ಕಳ್ಳತನವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಒಂದು ವರ್ಷವಾದರೂ ತಮಗೆ ನ್ಯಾಯ ಸಿಗದೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Read Full Story

07:31 PM (IST) May 18

ಉಡುಪಿ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೌಹಾರ್ದತೆ ಪಾಠಕ್ಕೆ ಮುಜುಗರ ತಂದ ಮುಸ್ಲಿಂ ಮಹಿಳೆಯ ಅಸಲಿಯತ್ತು ಬಯಲು!

ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘಿಸಿದ ಹಿಂದೂ-ಮುಸ್ಲಿಂ ಸೌಹಾರ್ದತೆಯ ಘಟನೆಯೊಂದು ಹೊಸ ತಿರುವು ಪಡೆದಿದೆ. ವೃದ್ಧೆಗೆ ಸಹಾಯ ಮಾಡಿದ ಮುಸ್ಲಿಂ ಮಹಿಳೆ ನೆರೆಮನೆಯವರಲ್ಲ, ಬದಲಿಗೆ ಆಕೆಯ ಮತಾಂತರಗೊಂಡ ಸ್ವಂತ ಮಗಳು ಎಂಬ ಸತ್ಯ ಬಹಿರಂಗವಾಗಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
Read Full Story

07:06 PM (IST) May 18

ರಾಜ್ಯದ ಆ ಒಂದು ಯೋಜನೆ ಅನುಷ್ಠಾನಕ್ಕೆ ಮುನ್ನವೇ ಕನಕಪುರ-ನೆಲಮಂಗಲ ಸುತ್ತಮುತ್ತ ಭೂಮಿ ಬೆಲೆ ಗಗನಕ್ಕೆ, ಹೂಡಿಕೆ ಹೆಚ್ಚಳ!

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಊಹಾಪೋಹಗಳಿಂದ ಕನಕಪುರ, ಹಾರೋಹಳ್ಳಿ, ನೆಲಮಂಗಲದಂತಹ ಹೊರವಲಯಗಳಲ್ಲಿ ಭೂ ಚಟುವಟಿಕೆ ಹೆಚ್ಚಾಗಿದೆ. ಕನಕಪುರ ರಸ್ತೆಯಲ್ಲಿ ಭೂಮಿ ಬೆಲೆ ದ್ವಿಗುಣಗೊಂಡಿದ್ದು, ತಜ್ಞರು ಇದು ದೀರ್ಘಾವಧಿಯ ಹೂಡಿಕೆಗೆ ಸೂಕ್ತವೆಂದು ಸಲಹೆ ನೀಡಿದ್ದಾರೆ.
Read Full Story

06:03 PM (IST) May 18

ಮಂಡ್ಯದಲ್ಲಿ ವಿಪ್ರೋತ್ಸವ-2026 - ಸಮಾಜದ ಏಕತೆ, ಸಂಸ್ಕೃತಿ ಮತ್ತು ಯುವ ಸಬಲೀಕರಣಕ್ಕೆ ಒತ್ತು!

ಮಂಡ್ಯದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ವತಿಯಿಂದ ಆಯೋಜಿಸಲಾದ ‘ವಿಪ್ರೋತ್ಸವ-2026’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಮಾಜದ ಏಕತೆ, ಸಂಸ್ಕೃತಿ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಲಾಯಿತು.

Read Full Story

05:42 PM (IST) May 18

ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ - ಪ್ರಧಾನಿ ಮೋದಿ ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಪ್ರಧಾನಿ ಮೋದಿ ಹೇಳಿಕೆ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story

05:32 PM (IST) May 18

ಕಾಂಗ್ರೆಸ್‌ಗೆ ದೇಶಕ್ಕಿಂತ ಗಾಂಧಿ ಕುಟುಂಬ ಮುಖ್ಯ - ಮಾಜಿ ಸಚಿವ ಬಿ.ಶ್ರೀರಾಮುಲು ಟೀಕೆ

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶಕ್ಕಿಂತ ಗಾಂಧಿ ಕುಟುಂಬಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮಿತವ್ಯಯದ ಕರೆ ಕುರಿತೂ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

05:27 PM (IST) May 18

GOA SECRET - ಸಿಟಿ ಜಂಜಾಟಕ್ಕೆ ಬೇಸತ್ತು ಗೋವಾ ಕಡೆ ಮುಖ ಮಾಡಿದ ಯುವಕರು! ಏನಿದು 'ಸುಸೆಗಾಡ್' ಲೈಫ್‌ಸ್ಟೈಲ್?

ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

Read Full Story

05:16 PM (IST) May 18

ಸನಾತನ ಹಿಂದೂ ಧರ್ಮಕ್ಕೆ ಉದಯನಿಧಿ ಅವಮಾನ - ಮಾಜಿ ಎಂಎಲ್ಸಿ ಶ್ರೀನಾಥ ಆಕ್ರೋಶ

ಸನಾತನ ಹಿಂದೂ ಧರ್ಮಕ್ಕೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವಮಾನ ಮಾಡಿರುವದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

04:41 PM (IST) May 18

ಕರ್ನಾಟಕಕ್ಕೆ ವಂದೇ ಭಾರತ್ ಸ್ಲೀಪರ್, ಬುಲೆಟ್ ಟ್ರೈನ್ - ಹೈದರಾಬಾದ್‌ಗೆ ಕೇವಲ 2 ಗಂಟೆ, ಚೆನ್ನೈಗೆ 75 ನಿಮಿಷ ಅಷ್ಟೇ!

ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗಲಿದೆ.  ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಬುಲೆಟ್ ಟ್ರೈನ್ ಕಾರಿಡಾರ್‌ಗಳನ್ನು ಘೋಷಿಸಲಾಗಿದ್ದು, ಇದು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಮಂಗಳೂರಿಗೂ ವಂದೇ ಭಾರತ್ ರೈಲು ಆರಂಭಿಸಲು ಯೋಜಿಸಲಾಗಿದೆ.

Read Full Story

04:37 PM (IST) May 18

Malashri Secret - 'ನಂಜುಂಡಿ ಕಲ್ಯಾಣ'ಕ್ಕಿಂತ ಮೊದಲು ಮಾಲಾಶ್ರೀ 35 ಸಿನಿಮಾಗಳಲ್ಲಿ ನಟಿಸಿದ್ರು; ಕನಸಿನ ರಾಣಿಯ ಹಲವು ಸೀಕ್ರೆಟ್ ಇಲ್ಲಿವೆ ನೋಡಿ!

ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ, ಒಬ್ಬ ನಟಿಯ ಹೆಸರು ಸುವರ್ಣಾಕ್ಷರಗಳಲ್ಲಿ ಮಿನುಗುತ್ತದೆ. ಅವರೇ ಅಭಿಮಾನಿಗಳ ಪಾಲಿನ ‘ಕನಸಿನ ರಾಣಿ’, ಚಿತ್ರರಂಗದ ‘ಆಕ್ಷನ್ ಕ್ವೀನ್’ ಮಾಲಾಶ್ರೀ. 90ರ ದಶಕದಲ್ಲಿ ಮಾಲಾಶ್ರೀ  ಎಂದರೆ ಕೇವಲ ಒಬ್ಬ ನಟಿಯಲ್ಲ, ಅದೊಂದು ಸಂಚಲನ!

Read Full Story

04:36 PM (IST) May 18

ಯಶ್‌ ಹಾಗೂ ಟಾಕ್ಸಿಕ್ ಚಿತ್ರದ ಬಗ್ಗೆ ಆ ಎಲ್ಲ ಸೀಕ್ರೆಟ್‌ಗಳನ್ನ ಹೇಳಿಬಿಟ್ರು ನಟಿ ತಾರಾ ಸುತಾರಿಯಾ!

ಟಾಕ್ಸಿಕ್‌ ಸಿನಿಮಾದ ಬಗ್ಗೆ ನಟಿ ತಾರಾ ಸುತಾರಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಯಶ್‌ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರನ್ನು ಹೊಗಳಿದ್ದಾರೆ. ಸಿನಿಮಾ ಕಾಯುವಿಕೆ ವ್ಯರ್ಥವಾಗದು ಎಂದಿದ್ದಾರೆ.

Read Full Story

04:14 PM (IST) May 18

ಕೊರಗಜ್ಜ ಸನ್ನಿಧಿಯಲ್ಲಿ ರಚಿತಾ ರಾಮ್‌ - ಕುಟುಂಬದೊಂದಿಗೆ ಕೋಲ ನೆರವೇರಿಸಿದ್ಯಾಕೆ ಡಿಂಪಲ್ ಕ್ವೀನ್!

ನಟಿ ರಚಿತಾ ರಾಮ್‌ ದಕ್ಷಿಣ ಕನ್ನಡದ ಬೆಂಜನಪದವು ಕೊರಗಜ್ಜ ದೈವ ಸನ್ನಿಧಿಯಲ್ಲಿ ಕುಟುಂಬದೊಂದಿಗೆ ಕೋಲ ಸೇವೆ ನೆರವೇರಿಸಿದ್ದಾರೆ. ‘ಸ್ವಾಮಿ ಕೊರಗಜ್ಜ ಕಾಪುಲೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Read Full Story

04:03 PM (IST) May 18

ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ - ದೀಪಿಕಾ ರೆಡ್ಡಿ ಗಂಭೀರ ಆರೋಪ!

ಯುವ ಕಾಂಗ್ರೆಸ್‌ನಲ್ಲಿ ತಮ್ಮ ಹುದ್ದೆಯನ್ನು ತಡೆಹಿಡಿದಿರುವುದನ್ನು ವೈಯಕ್ತಿಕ ಸೇಡಿನ ಕ್ರಮ ಎಂದು ದೀಪಿಕಾ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ  ಎಂದಿದ್ದಾರೆ.

Read Full Story

02:30 PM (IST) May 18

ಬೆಂಗಳೂರು ಸಬರ್ಬನ್ ರೈಲು 4 ಕಾರಿಡಾರ್ ಯೋಜನೆ, ನಗರದಲ್ಲಿ ಇನ್ನು ಲೆವೆಲ್ ಕ್ರಾಸಿಂಗ್ ಇರಲ್ಲ - ಅಶ್ವಿನಿ ವೈಷ್ಣವ್‌

ಬೆಂಗಳೂರಿನಾದ್ಯಂತ ರೈಲು ಸಂಪರ್ಕವನ್ನು ಸುಧಾರಿಸಲು 4 ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಭೂಸ್ವಾಧೀನ, ನಿಲ್ದಾಣ ನಿರ್ಮಾಣ, ವಿದ್ಯುದೀಕರಣ ಮತ್ತು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವಂತಹ ಪ್ರಮುಖ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.
Read Full Story

01:30 PM (IST) May 18

ಬೆಟ್ಟದ ನಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವು - ಹೃದಯವಿದ್ರಾವಕ ಘಟನೆ

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಆಟವಾಡುತ್ತಿದ್ದ ಎರಡು ವರ್ಷದ ಮಗು ಬೆಟ್ಟದ ನಲ್ಲಿಕಾಯಿಯನ್ನು ನುಂಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Read Full Story

01:26 PM (IST) May 18

Davanagere - RSI ಮೋಸ ಆರೋಪಕ್ಕೆ ಟ್ಚಿಸ್ಟ್, ಖಾಕಿ ಜೊತೆಯೇ ಯುವತಿಯ ರಂಗಿನಾಟ! ಪೊಲೀಸರೇ ಇವಳ ಟಾರ್ಗೆಟ್?

ಚಿತ್ರದುರ್ಗದ ಡಿಎಆರ್‌ RSI ವರುಣ್‌ಕುಮಾರ್ ವಿರುದ್ಧ ಯುವತಿಯೊಬ್ಬಳು ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರು ನೀಡಿದ್ದಳು. ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿಯೇ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆ ಎಂದು RSI ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
Read Full Story

01:26 PM (IST) May 18

Trisha Secret - ನಟಿ ತ್ರಿಶಾ 'ಗುಡ್ ಟೈಂ' ಸೀಕ್ರೆಟ್ ಹೊರಬಿತ್ತು; ವಿಜಯ್-ಸೂರ್ಯ ಲೈಫಲ್ಲಿ ಈ ನಟಿಯ 'ಕಾಲ್ಗುಣ' ಹಾಗೆಲ್ಲಾ ಇದ್ಯಾ?

ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಬೆಳವಣಿಗೆ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ..

Read Full Story

01:12 PM (IST) May 18

ಮನೆ ಮುಂದೆ ನಿಂತಿದ್ದ ದಾವಣಗೆರೆ ಶಿಕ್ಷನ ಬಲಿ ಪಡೆದ ಸಿಡಿಲು, ಹೃದಯಾಘಾತದಿಂದ ಕುಸಿದು ಬಿದ್ದು ಸಾವು

ದಾವಣೆಗೆರೆ ಶಿಕ್ಷಕ ಮನೆ ಮುಂದೆ ನಿಂತಿದ್ದಂತೆ ಬಡಿದ ಸಿಡಿಲಿನ ಅಬ್ಬರಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಾಲೆ ಮುಖ್ಯೋಪಾದ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನ ಸಾವು ಇಡೀ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

 

Read Full Story

01:00 PM (IST) May 18

ಸುಷ್ಮಾ ರಾವ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್, ಮುಕ್ತಾಯದ ಹಂತದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಪ್ರಸಿದ್ಧ ಸೀರಿಯಲ್ ಭಾಗ್ಯಲಕ್ಷ್ಮಿ ಮುಕ್ತಾಯ ಹಂತಕ್ಕೆ ಬಂದಿದ್ಯಾ? ಸೀರಿಯಲ್ ಮುಕ್ತಾಐ ಆಗೋದು ಯಾವಾಗ? ಈ ಟೈಂನಲ್ಲಿ ಇನ್ಮುಂದೆ ಯಾವ ಸೀರಿಯಲ್ ಪ್ರಸಾರ ಆಗುತ್ತೆ? ಗೊಒ

 

Read Full Story

12:39 PM (IST) May 18

ಬೆಂಗಳೂರು - ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿದ ಮಹಿಳೆಯಿಂದ ಸಂಘಟನೆ ಮುಖ್ಯಸ್ಥೆ ಎಂದು ಜೀವ ಬೆದರಿಕೆ!

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ, ತನ್ನನ್ನು ಸಂಘಟನೆಯ ಮುಖ್ಯಸ್ಥೆ ಎಂದು ಹೇಳಿಕೊಂಡ ಸಂಗೀತ ರಾಮ್ ಎಂಬ ಮಹಿಳೆ ಜೀವ ಬೆದರಿಕೆ ಹಾಕಿದ್ದಾರೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿ ಕಚೇರಿಗೆ ನುಗ್ಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
Read Full Story

11:36 AM (IST) May 18

ಬಿಡದಿ ಟೌನ್‌ಶಿಪ್ ವಿವಾದ - ಭೂ ಮಾಫಿಯಾ ಖಂಡಿಸಿ ಹೋರಾಟಕ್ಕಿಳಿದ ಹೆಚ್‌ಡಿಡಿ, ಸೋನಿಯಾ ಗಾಂಧಿ, ರಾಹುಲ್‌ಗೆ ದೇವೇಗೌಡ ಪತ್ರ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಪ್ರಸ್ತಾವಿತ ಬಿಡದಿ ಟೌನ್‌ಶಿಪ್‌ ಯೋಜನೆಯು ರೈತರ ಜಮೀನು ಕಬಳಿಸುವ ಭೂ ದಂಧೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ಘೋಷಿಸಿರುವ ಅವರು,  ಕಾಂಗ್ರೆಸ್ ವರಿಷ್ಠರಿಗೆ ಪತ್ರ ಬರೆದು  ಪ್ರಶ್ನಿಸಿದ್ದಾರೆ.

Read Full Story

10:50 AM (IST) May 18

ಕಲಾದಗಿಯ 2004-05ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಅಪೂರ್ವ ಗುರುವಂದನೆ & ಸ್ನೇಹ ಸಮ್ಮಿಲನ

ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ತಮಗೆ ಜ್ಞಾನ ನೀಡಿದ ಗುರುಗಳನ್ನು ಗೌರವಿಸಲು ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಿದರು.
Read Full Story

10:25 AM (IST) May 18

ದೆವ್ವ-ಗಾಳಿ ಅಂತ ದೇವಸ್ಥಾನ ಸುತ್ತಾಡ್ತಿದ್ದಾಗಲೇ ಅಪ್ರಾಪ್ತೆಗೆ ಹೆರಿಗೆ; ಟ್ರ್ಯಾಕ್ಟರ್ ಮಂಜಣ್ಣ ಅರೆಸ್ಟ್!

ಮದುವೆ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರವೆಸಗಿದ ಟ್ರ್ಯಾಕ್ಟರ್ ಚಾಲಕನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಪೋಷಕರು ಮೂಢನಂಬಿಕೆಯಿಂದ ದೆವ್ವದ ಕಾಟವೆಂದು ಭಾವಿಸಿದ್ದರೆ, ದೇವಸ್ಥಾನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಸತ್ಯ ಬಯಲಾಗಿದೆ.

Read Full Story

10:19 AM (IST) May 18

ನಟ ದರ್ಶನ್ ಜಾಮೀನು ನಿರಾಕರಣೆ ಬಳಿಕ ಪತ್ನಿ ವಿಜಯಲಕ್ಷ್ಮಿ ಕಣ್ಣೀರು, ಭಾವುಕ ಪೋಸ್ಟ್

ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದೆ. ಪರಿಣಾಮ ಇನ್ನೊಂದು ವರ್ಷ ಜೈಲಿನಿಂದ ಅಲುಗಾಡುವಂತಿಲ್ಲ. ಇದೀಗ ಪತ್ನಿ ವಿಜಯಲಕ್ಷ್ಮಿ ತೀವ್ರವಾಗಿ ನೊಂದಿದ್ದಾರೆ. ಭಾವುಕ ಪೋಸ್ಟ್ ಮಾಡಿದ್ದಾರೆ.

Read Full Story

10:05 AM (IST) May 18

Bengaluru - ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ

ಹೊಸಕೋಟೆ ಬಿರಿಯಾನಿ ತಿನ್ನಲು ಬೆಳಗಿನ ಜಾವ ಹೊರಟಿದ್ದ ವಿದ್ಯಾರ್ಥಿ ಧೀರಜ್ ಮೇಲೆ ರಾಮಮೂರ್ತಿ ನಗರದಲ್ಲಿ ಚಾಕು ಇರಿತ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಪೊಲೀಸರು ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
Read Full Story

09:17 AM (IST) May 18

ಮತ್ತೆ ಶೆಲ್ ಪೆಟ್ರೋಲ್ ದರ ಏರಿಕೆ, ಲೀಟರ್‌ಗೆ 122.8 ರೂಗೆ ಹೆಚ್ಚಳದಿಂದ ಕಂಗಾಲಾದ ಜನ

ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಶೆಲ್ ಪೆಟ್ರೋಲ್ ಇದೀಗ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬಲು ದುಬಾರಿಯಾಗಿದೆ.

 

Read Full Story

09:02 AM (IST) May 18

Pre Monsson - 40-60 ಕಿಮೀ ವೇಗದಲ್ಲಿ ಬಿರುಗಾಳಿ; ಕರಾವಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 18ರವರೆಗೆ ಭಾರಿ ಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸಂಖ್ಯೆಗಳನ್ನು ಒದಗಿಸಲಾಗಿದೆ.
Read Full Story

08:43 AM (IST) May 18

ಮಹಿಳಾ ಕಸ್ಟಮ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಂಚನೆ, ಆರೋಪಿ ಕೃಪಲಾನಿ ವಿರುದ್ಧ FIR

ಹಲಸೂರು ಠಾಣೆಯಲ್ಲಿ ಆರೋಪಿ ಕೃಪಲಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಲಂಗ್ಲಿಂಗ್ ಆರೋಪಿಯಾಗಿದ್ದ ಕೃಪಲಾನಿ ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದೆ ಆರೋಪ ಕೇಳಿಬಂದಿದೆ

Read Full Story

07:56 AM (IST) May 18

ಕುಶಾಲನಗರದ ಹೊಸಕೋಟೆ ಬಳಿ ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ, ದೃಶ್ಯ ಸೆರೆ

ಹೊಸಕೋಟೆ ಬಳಿ ಆನೆ ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿದೆ. ಬೈಕ್ ತಿರುಗಿಸುವಷ್ಟರಲ್ಲೇ ದಾಳಿಗೆ ಮುಂದಾಗಿದೆ. ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read Full Story

07:17 AM (IST) May 18

ಛಲ, ಪರಿಶ್ರಮಕ್ಕೆ ಮತ್ತೊಂದು ಹೆಸರೇ ದೇವೇಗೌಡ್ರು; ಕೆಂಪುಕೋಟೆಯ ಮೇಲೂ ಹಳೇಕೋಟೆ ಮರೆಯದ ಮಾಜಿ ಪ್ರಧಾನಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹರದನಹಳ್ಳಿಯ ಸ್ಥಳೀಯ ರಾಜಕಾರಣದಿಂದ ರಾಷ್ಟ್ರದ ಪ್ರಧಾನಿ ಹುದ್ದೆಗೇರಿದ ಅವರ ಆರು ದಶಕಗಳ ರಾಜಕೀಯ ಪಯಣವನ್ನು ಈ ಲೇಖನ ವಿವರಿಸುತ್ತದೆ. ರೈತಪರ ಕಾಳಜಿ, ಬೆಂಗಳೂರಿನ ಐಟಿ ಬೆಳವಣಿಗೆ, ದೆಹಲಿ ಮೆಟ್ರೋದಂತಹ ಅವರ ಪ್ರಮುಖ ಕೊಡುಗೆಗಳು ಮತ್ತು ಅವರ ರಾಜಕೀಯ ತತ್ವಗಳನ್ನು ಇದು ಪರಿಚಯಿಸುತ್ತದೆ.
Read Full Story

07:11 AM (IST) May 18

ಅಧಿಕಾರಿಗೆ ‘ಸಿದ್ದು ಮೇಷ್ಟ್ರು’ ಎಕರೆ, ಗುಂಟೆ ಪಾಠ; ಪತ್ರಕರ್ತರ ಮೇಲೆ ರಾಯರಡ್ಡಿ ಆಣೆ ಇಟ್ಟಿದ್ದೇಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗೆ ಎಕರೆ-ಗುಂಟೆ ಪಾಠ ಹೇಳಿದ ಪ್ರಸಂಗ, ಸಚಿವ ಸ್ಥಾನದ ಬಗ್ಗೆ ರಾಯರಡ್ಡಿ ಪತ್ರಕರ್ತರ ಮೇಲೆ ಆಣೆ ಇಟ್ಟಿದ್ದು, ಹೈಕೋರ್ಟ್‌ನಲ್ಲಿ ನಡೆದ 'ಸಾಲ್ಟ್-ಅಸಾಲ್ಟ್' ಹಾಸ್ಯಮಯ ಸಂಭಾಷಣೆ ಹಾಗೂ ಕಾರ್ಯಕ್ರಮದ ಮಧ್ಯೆ ಊಟಕ್ಕೆ ನಿಂತ ಸಭಿಕರ ತಮಾಷೆಯ ಘಟನೆಗಳ ಸ್ವಾರಸ್ಯಕರ ಸಂಗ್ರಹವಿದು.
Read Full Story

06:46 AM (IST) May 18

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ - ತಂದೆ ಜಿಟಿಡಿ ಕೋಟೆಗೆ ಮಗ GD ಹರೀಶ್‌ಗೌಡ ಸವಾಲು?

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಅವರ ಪುತ್ರ ಜಿ.ಡಿ.ಹರೀಶ್‌ಗೌಡರು ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗಳು, ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಸ್ಪಷ್ಟ ಸೂಚನೆ ನೀಡಿದ್ದು, ಇದು ತಂದೆ-ಮಗನ ನಡುವಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.
Read Full Story

06:37 AM (IST) May 18

JDS - 2006ರ ಸೋಲಿನ ಗುಟ್ಟು - ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಿಚ್ಚಿಟ್ಟ ಸತ್ಯ

2006ರ ಉಪ ಚುನಾವಣೆಯಲ್ಲಿ ಸಣ್ಣ ತಪ್ಪುಗಳಿಂದ ಸೋಲಾಯಿತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಮರಿಸಿಕೊಂಡರು. ಜೆಡಿಎಸ್ ಪಕ್ಷವು ಇಡೀ ರಾಜ್ಯದಲ್ಲಿ ಸುಭದ್ರವಾಗಿದ್ದು, ಪಕ್ಷವನ್ನು ರಾಜ್ಯವ್ಯಾಪಿ ಕಟ್ಟಲು ಶ್ರಮಿಸುತ್ತಿರುವುದಾಗಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
Read Full Story

06:04 AM (IST) May 18

ಸಿಲಿಂಡರ್‌ಗೆ ಮಧ್ಯರಾತ್ರಿಯಿಂದ್ಲೇ ಕ್ಯೂ, ಪೆಟ್ರೋಲ್‌ ‘ನೋ ಸ್ಟಾಕ್‌’! ಭಾಲ್ಕಿ, ಬಳ್ಳಾರಿಯಲ್ಲಿ ಜನರ ಪರದಾಟ

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೀದರ್‌ನ ಭಾಲ್ಕಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಳಿಗಾಗಿ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್‌ಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.

Read Full Story

05:59 AM (IST) May 18

ಸಿಡಿಲ ಮಳೆಗೆ ರಾಜ್ಯದಲ್ಲಿ 3 ಬಲಿ; 10 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮುಂಗಾರು ಪೂರ್ವ ಮಳೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಯಾದಗಿರಿಯಲ್ಲಿ ಮದುವೆ ಮಂಟಪದ ಛಾವಣಿ ಕುಸಿದುಬಿದ್ದಿದೆ.
Read Full Story

05:51 AM (IST) May 18

Belagavi - ಶಿವಾನಂದ ನೀಲಣ್ಣವರ ₹4500 ಕೋಟಿ ಹಗರಣ ಕೇಸ್; ತನಿಖೆ ಕೈಗೆತ್ತಿಕೊಂಡ ಸಿಐಡಿ

ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ತೆರೆದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಗೆ ಅಂದಾಜು ₹4500 ಕೋಟಿ ವಂಚಿಸಿದ ಆರೋಪದ ಮೇಲೆ ಶಿವಾನಂದ ನೀಲಣ್ಣನವರನನ್ನು ಬಂಧಿಸಲಾಗಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ, ಇದೀಗ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ.
Read Full Story

05:45 AM (IST) May 18

Chikkamagaluru - ದಕ್ಷಿಣ ಭಾರತದಲ್ಲೇ ಪ್ರಥಮ - ಆಪರೇಷನ್ ಒಂಟಿ ಕಾಡುಕೋಣ ಸೆರೆ ಸಕ್ಸಸ್

ಚಿಕ್ಕಮಗಳೂರು ತಾಲೂಕಿನ ಅರೆನೂರು ಹಕ್ಕಿಮಕ್ಕಿಯಲ್ಲಿ ರೈತರ ಜಮೀನುಗಳಿಗೆ ಹಾನಿ ಮಾಡುತ್ತಿದ್ದ ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.  ಕಾರ್ಯಾಚರಣೆಯ ಬಳಿಕ, ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ.

Read Full Story

More Trending News