ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಯಭೇರಿ ಬಾರಿಸಿದೆ. 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ, 2ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು, ಒಟ್ಟು 10 ಮಂದಿ ಕಣದಲ್ಲಿದ್ದರು. ಆ ಪೈಕಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ, ಜೆಡಿಎಸ್ ಎಂಎಲ್ಸಿ ಎಸ್.ಎಲ್.ಭೋಜೇಗೌಡ ಜಯಗಳಿಸಿದರು. ಚಿಕ್ಕಮಗಳೂರು ಕೃಷಿ ಪತ್ತಿನ ಸಂಘದ 2 ಸ್ಥಾನ ಬಗ್ಗೆ ಕುತೂಹಲವಿತ್ತು. ಇಲ್ಲಿ ರವಿ, ಭೋಜೇಗೌಡ ಸ್ಪರ್ಧಿಸಿದ್ದರು. 28 ಮತದಾರರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ರವಿ, ಭೋಜೇಗೌಡ ಅವರುಗಳನ್ನು ಶನಿವಾರ ಬೆಳಗ್ಗೆ ನೇರವಾಗಿ ಮತದಾನ ಕೇಂದ್ರಕ್ಕೆ ಕರೆ ತಂದರು. ಅಂತಿಮವಾಗಿ ರವಿ 27, ಭೋಜೇಗೌಡ 30 ಮತ ಪಡೆದು ಜಯಗಳಿಸಿದರು.

11:48 PM (IST) Jan 18
Bigg Boss Kannada Season 12 Winner Gilli Nata: ಈ ಹಿಂದೆ ಆರು ಶೋಗಳಲ್ಲಿ ಭಾಗವಹಿಸಿದ್ದ ಗಿಲ್ಲಿ ನಟ ಅವರು ಗೆಲುವಿನ ರುಚಿ ಕಂಡಿರಲಿಲ್ಲ. ಪ್ರತಿ ಸಲವು ಅವರು ರನ್ನರ್ ಅಪ್ ಆಗುತ್ತಿದ್ದರು, ಅಥವಾ ಇನ್ಯಾವುದಾದರೂ ಸ್ಥಾನ ಪಡೆಯುತ್ತಿದ್ದರು. ಈಗ ಅವರು ವಿನ್ ಆಗಿದ್ದಾರೆ.
11:44 PM (IST) Jan 18
ಬೆಂಗಳೂರು: 12ನೇ ಸೀಸನ್ ಬಿಗ್ ಬಾಸ್ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಗಿಲ್ಲಿ ನಟ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಗಿಲ್ಲಿ ತಮ್ಮ ಮೊದಲ ಪೇಮೆಂಟ್ ಬಗ್ಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
11:34 PM (IST) Jan 18
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಆರಂಭದ ನಾಲ್ಕು ವಾರಕ್ಕೆ ಗಿಲ್ಲಿ ನಟ ಅವರೇ ವಿನ್ನರ್ ಎಂದು ಬಹುತೇಕರು ಹೇಳಿದ್ದರು, ಅದರಂತೆ ಆಗಿದೆ.
11:31 PM (IST) Jan 18
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಎಕರೆ ಅರಣ್ಯ ಹಾಗೂ ಅಸಂಖ್ಯಾತ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
11:07 PM (IST) Jan 18
ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 301 ವೀಣಾ ಕಲಾವಿದರು ಏಕಕಾಲದಲ್ಲಿ ನಾದಸುಧೆ ಹರಿಸಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸ್ವತಃ ವೀಣೆ ನುಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
11:05 PM (IST) Jan 18
ಬಿಗ್ಬಾಸ್ 12ನೇ ಸೀಸನ್ ಮುಕ್ತಾಯದ ಬೆನ್ನಲ್ಲೇ, ನಿರೂಪಕ ಕಿಚ್ಚ ಸುದೀಪ್ ಹೊಸ ದಾಖಲೆ ಬರೆದಿದ್ದಾರೆ. ಏಕೈಕ ಭಾರತೀಯ ಬಿಗ್ ಬಾಸ್ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏನಿದು ದಾಖಲೆ?
10:42 PM (IST) Jan 18
ಬಿಗ್ಬಾಸ್ ಸೀಸನ್ 12ರ ವಿನ್ನರ್ ಯಾರೇ ಆದರೂ ಮನೆಯಿಂದ ಹೊರಬಂದು ಸಂಭ್ರಮಿಸುವಂತಿಲ್ಲ. ಅಷ್ಟಕ್ಕೂ ಆಗಿದ್ದೇನು? ಪೊಲೀಸರು ಈ ಸೂಚನೆ ನೀಡಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ.
10:38 PM (IST) Jan 18
ಬಿಗ್ ಬಾಸ್ 12ರ ಫಿನಾಲೆ ಕುತೂಹಲ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ 12ರ ವಿನ್ನರ್ಗೆ ಸಿಗುವ ನಗದು ಹಾಗೂ ಇತರ ಬಹುಮಾನಗಳೇನು? ಸ್ಪರ್ಧಿಗಳಿಗೆ ಬಿಗ್ ಬಾಸ್ ಗೆಲುವು ಯಾಕೆ ಮುಖ್ಯ? ಬಹುಮಾನ ಮೊತ್ತಕ್ಕೆ ತೆರಿಗೆ ಕಟ್ಟಬೇಕಾ?
10:22 PM (IST) Jan 18
09:55 PM (IST) Jan 18
ಬಿಗ್ ಬಾಸ್ ಫಿನಾಲೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟು, 15 ಲಕ್ಷ ರೂಪಾಯಿಗಳ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ಸ್ಪರ್ಧಿಗಳು ತಿರಸ್ಕರಿಸಿದ್ದು, ರವಿಚಂದ್ರನ್ ಅವರು ಕಾವ್ಯಾ ಶೈವ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.
09:33 PM (IST) Jan 18
Bigg Boss Kannada Season 12 Winner: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕಪ್ ಗೆದ್ದಿದ್ದಾರೆ. ಆದರೆ ಕಾರ್ತಿಕ್ ಅಂದು ಇದೇ ಆಗತ್ತೆ, ಬರೆದಿಟ್ಟುಕೊಳ್ಳಿ ಎಂದಿದ್ದ ಕಾವ್ಯ ಶೈವ ಅವರ ಸಹೋದರನ ಮಾತು ತಪ್ಪಾಗಿದೆ. ಹಾಗಾದರೆ ಏನಾಯ್ತು?
09:30 PM (IST) Jan 18
ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಶಿವಮೊಗ್ಗದ ಅರೆಬಳಿಚಿ ಭದ್ರಾ ನಾಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಇಡೀ ಕುಟುಂಬವೇ ನೀರುಪಾಲಾಗಿದೆ. ನಾಲ್ವರಿಗೂ ಈಜು ಬರದ ಕಾರಣ ದುರ್ಘಟನೆ ನಡೆದಿದೆ.
09:26 PM (IST) Jan 18
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು, ಅತಿರೇಕದ ಮಾತುಗಳನ್ನು ಆಡಿದ್ದ ಓರ್ವ ಸ್ಪರ್ಧಿಯ ಮಂಗಳಾರತಿ ತೆಗೆದಿದ್ದಾರೆ.
09:19 PM (IST) Jan 18
09:05 PM (IST) Jan 18
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗೊಂಡ ಸಮುದಾಯದ ಆರಾಧ್ಯ ದೈವ ಶ್ರೀ ಜಟಗಾ ಮಹಾಸತಿ ದೇವಿಯ ಜಾತ್ರೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಜಾತ್ರೆಯಲ್ಲಿ ಕಬ್ಬಿನ ಕುಡಿ ಖರೀದಿಸುವುದು ಒಂದು ಪ್ರಮುಖ ಪದ್ಧತಿಯಾಗಿದ್ದು, ಇದು ಸಂಪತ್ತು ವೃದ್ಧಿ ಮತ್ತು ನವದಂಪತಿಗಳ ಸಂತಾನ ಭಾಗ್ಯದ ನಂಬಿಕೆ
09:04 PM (IST) Jan 18
ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ದಾಖಲೆ ಬರೆದಿದೆ. ಮೊದಲ ಬಾರಿಗೆ ಟಾಪ್-4ರಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆದಿದ್ದು, ಇದು ಹಾಟ್ ಫೇವರಿಟ್ ಗಿಲ್ಲಿ ನಟನ ಟ್ರೋಫಿ ಗೆಲ್ಲುವ ಸಾಧ್ಯತೆ ಬಗ್ಗೆ ಅನುಮಾನ ಮೂಡಿಸಿದೆ. ನಟಿ ಶೃತಿ ಆಗಮನದಿಂದ ಮಹಿಳಾ ಸ್ಪರ್ಧಿಯೇ ವಿಜೇತರಾಗುವ ಸಾಧ್ಯತೆ ಹೆಚ್ಚಾಗಿದೆ.
09:02 PM (IST) Jan 18
ಬಿಗ್ ಬಾಸ್ ಅಧಿಕೃತ ಘೋಷಣೆಗೂ ಮುನ್ನ ಗಿಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಶುರುವಾಗಿದೆ. ಡೋಲು, ತಮಟೆ ಸೇರಿದಂತೆ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಬಿಗ್ ಬಾಸ್ ಘೋಷಣೆಗೂ ಮೊದಲೇ ವಿನ್ನರ್ ಗೊತ್ತಾಗಿ ಬಿಟ್ಟಿತಾ?
08:32 PM (IST) Jan 18
08:05 PM (IST) Jan 18
Bigg Boss Kannada Season 12 Grand Finale: ಗಿಲ್ಲಿ ನಟ ಅವರು ಬಿಗ್ ಬಾಸ್ ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇತ್ತು. ಈಗ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಮತ್ತೆ ಗಿಲ್ಲಿ ಬಿಗ್ ಬಾಸ್ ಗೆಲ್ಲೋದಿಲ್ಲ ಎಂದು ಹೇಳಿದ್ದಾರೆ.
08:04 PM (IST) Jan 18
ಕರಾವಳಿ ಜಿಲ್ಲೆಗಳ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ ಕೇಂದ್ರ ರೈಲ್ವೆ ಸಚಿವರು 100 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಉಡುಪಿ ರೈಲು ನಿಲ್ದಾಣದಲ್ಲಿ ನೂತನ ಸೌಲಭ್ಯಗಳನ್ನು ಉದ್ಘಾಟಿಸಲಾಗಿದ್ದು, ನಿಲ್ದಾಣಕ್ಕೆ 'ಶ್ರೀಕೃಷ್ಣ ರೈಲು ನಿಲ್ದಾಣ' ಎಂದು ಹೆಸರಿಸುವ ಪ್ರಸ್ತಾಪಗಳಿವೆ.
07:57 PM (IST) Jan 18
ಸ್ಟಾರ್ ನಟಿ ಮೀನಾಕ್ಷಿ ಚೌಧರಿ ಸದ್ಯ ಸಖತ್ ಹಾಟ್ ಟಾಪಿಕ್ ಆಗಿದ್ದಾರೆ. ಒಂದೆಡೆ ಸತತ ಯಶಸ್ಸು, ಇನ್ನೊಂದೆಡೆ ಮದುವೆ ಸುದ್ದಿಯಿಂದ ಚರ್ಚೆಯಲ್ಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ.
07:40 PM (IST) Jan 18
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬಡವರ ಪಾಲಿನ 'ಅನ್ನಭಾಗ್ಯ' ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, 1,150 ಕೆ.ಜಿ. ಪಡಿತರ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ .
07:37 PM (IST) Jan 18
Bigg Boss Kannada Season 12: ಬಿಗ್ ಬಾಸ್ ಶೋನಲ್ಲಿ ಧನುಷ್ ಗೌಡ ಅವರು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಹೊರಬಂದಿದ್ದಾರೆ. ಇದನ್ನು ನೋಡಿ ಅವರ ತಾಯಿ ಅಸಮಾಧಾನ ಹೊರಹಾಕಿದ್ದಾರೆ.
07:26 PM (IST) Jan 18
ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರ ಹರಿದು ಬಂದಿದೆ. ಅಭಿಮಾನಿಗಳ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಜಾಲಿವುಡ್ ಸ್ಟುಡಿಯೋ ಒಳಗೆ ನುಗ್ಗುವ ಪ್ರಯತ್ನಗಳು ನಡೆದಿದೆ. ಇದರ ನಡುವೆ ಲಾಠಿ ಚಾರ್ಜ್ ಮಾಡಲಾಗಿದೆ.
07:25 PM (IST) Jan 18
ಕಂಪ್ಲಿಯ ಬಳ್ಳಾಪುರ ಗ್ರಾಮದಲ್ಲಿ 12-13ನೇ ಶತಮಾನದ ಕುಮ್ಮಟದುರ್ಗ-ಹೊಯ್ಸಳರ ಕಾಲದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಈ ಶಾಸನವು ಚಿಂತಮಕಲ್ಲು ಯುದ್ಧದಲ್ಲಿ ವೀರಮರಣ ಹೊಂದಿದ ನಾಗಯ ಎಂಬ ವೀರನ ಕಥೆಯನ್ನು ವಿವರಿಸುತ್ತದೆ. ಈ ಆವಿಷ್ಕಾರವು ಮಧ್ಯಯುಗೀನ ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.
07:20 PM (IST) Jan 18
Bigg Boss Kannada Season 12 Episode ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆ ಇದೆ. ಹೀಗಿರುವಾಗ ಮಾಜಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
07:05 PM (IST) Jan 18
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವರುಣ ಕ್ಷೇತ್ರದ ಕುಪ್ಯಾ ಗ್ರಾಮದಲ್ಲಿ 323 ಕೋಟಿ ರೂಪಾಯಿ ವೆಚ್ಚದ ಬೃಹತ್ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಟೀಕಾಕಾರರಿಗೆ ತಕ್ಕ ಉತ್ತರ ಎಂದರು.
05:56 PM (IST) Jan 18
ಹಾಸನದ 7ನೇ ತರಗತಿ ವಿದ್ಯಾರ್ಥಿ ಸಿ.ಎ. ಪರಿಣಿತ್ ಗೌಡ, ಕ್ಯೂಬ್ ಆಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಏಷ್ಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾರೆ. ಕಣ್ಣು ಮುಚ್ಚಿಕೊಂಡು ಒಂದು ನಿಮಿಷದಲ್ಲಿ ಎಂಟು ವಿಧದ ಕ್ಯೂಬ್ಗಳನ್ನು ಪೂರೈಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾನೆ.
05:54 PM (IST) Jan 18
05:49 PM (IST) Jan 18
ವರುಣಾ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ದಾವೋಸ್ ಸಭೆಗೆ ಸಿಎಂ ಗೈರಾಗಿದ್ದನ್ನು ಪ್ರಶ್ನಿಸಿರುವ ಅವರು, ಅಬಕಾರಿ ಇಲಾಖೆಯ ಲಂಚಾವತಾರ ಪ್ರಕರಣದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು..
05:38 PM (IST) Jan 18
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೂ ಮುನ್ನವೇ, ಗಿಲ್ಲಿ ನಟ ಅವರೇ ವಿಜೇತರು ಎಂದು ಅಭಿಮಾನಿಗಳು ಬಿಡದಿಯ ಜಾಲಿವುಡ್ ಸ್ಟುಡಿಯೋ ಬಳಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಗಿಲ್ಲಿ ನಟರ ಬ್ಯಾನರ್ಗಳಿಗೆ ಹಾಲಿನ ಅಭಿಷೇಕ ಮಾಡಿ, ವಿಜಯೋತ್ಸವ ಆಚರಿಸಲಾಗುತ್ತಿದ್ದುದ್ದಾರೆ.
05:29 PM (IST) Jan 18
Karna Serial Episode: ಕರ್ಣ ಧಾರಾವಾಹಿಯಲ್ಲಿ ನಿಧಿ, ಕರ್ಣ ಲವ್ ಮಾಡುತ್ತಿರುವುದು, ತೇಜಸ್ ಹಾಗೂ ನಿತ್ಯಾ ಲವ್ ಮಾಡಿದ್ದು, ನಿತ್ಯಾ ಹೊಟ್ಟೆಯಲ್ಲಿ ತೇಜಸ್ ಮಗು ಇರುವ ಎಲ್ಲ ವಿಷಯವೂ ರಮೇಶ್ಗೆ ಗೊತ್ತಿತ್ತು. ಈ ನಾಲ್ವರ ಜೀವನ ಹಾಳಾಗಲು ರಮೇಶ್ ಕಾರಣ ಆಗಿದ್ದನು. ಈಗ ಇವನ ಮುಖವಾಡ ಕಳಚಿ ಬಿದ್ದಿದೆ.
05:14 PM (IST) Jan 18
05:13 PM (IST) Jan 18
ಬಿಗ್ ಬಾಸ್ 12 ಗೆಲ್ತಾನೆ ಗಿಲ್ಲಿ ನಟ,, ಈ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ರೈತನೊಬ್ಬ ಯಾವನಾದ್ರೂ ಇದ್ರೆ ಚಾಲೆಂಜ್ಗೆ ಬನ್ನಿ 1 ಏಕರೆ ಜಮೀನು ಬರೆದುಕೊಡುತ್ತೇನೆ. ಈ ಬಾರಿ ಗಿಲ್ಲಿ ಗೆದ್ದೆ ಗೆಲ್ಲುತ್ತಾನೆ ಎಂದಿದ್ದಾನೆ. ಚಾಲೆಂಜ್ ಮಾಡಿ 1 ಏಕರೆ ಗೆಲ್ಲೋ ಪ್ಲಾನ್ ಇದೆಯಾ?
05:01 PM (IST) Jan 18
BBK 12 Episode Gilli Nata And Kavya: ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಇಂದು ತೆರೆ ಬೀಳಲಿದೆ. ಯಾರು ವಿನ್ನರ್? ಯಾರು ರನ್ನರ್ ಎನ್ನುವ ಕುತೂಹಲ ಇದ್ದೇ ಇದೆ. ಹೀಗಿರುವಾಗ ಪ್ರಿ ಫಿನಾಲೆಯಲ್ಲಿ ಗಿಲ್ಲಿ ನಟ ಮಾತನಾಡಿದ್ದು, ಕೊನೆಗೂ ಅವರು ಕಾವ್ಯರನ್ನು ಬಿಟ್ಟು ಕೊಡಲೇ ಇಲ್ಲ.
04:51 PM (IST) Jan 18
ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ್ದೆಂದು ನಂಬಲಾದ ಅಪರೂಪದ ಕಲಾಕೃತಿಗಳು ಪತ್ತೆಯಾಗಿವೆ. ಮೂರನೇ ದಿನ ಪುಟ್ಟ ಶಿವಲಿಂಗ ಹಾಗೂ ನಾಗಮಣಿಯೊಂದಿಗೆ ಕೆತ್ತಿದ ನಾಗರ ಹಾವಿನ ಹೆಡೆಯ ಶಿಲಾಕೃತಿ ದೊರೆತಿದ್ದು, ಇದು ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿದೆ.
04:47 PM (IST) Jan 18
ಬಾಗಲಕೋಟೆ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್. ಬಿ. ತಿಮ್ಮಾಪುರ ಪ್ರತಿಕ್ರಿಯಿಸಿದ್ದು, 'ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂದು ಎಚ್ಚರಿಸಿದ್ದಾರೆ. ಹಣಕ್ಕಾಗಿ ಕೆಳಹಂತದ ಅಧಿಕಾರಿಗಳು ಮಂತ್ರಿಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದರು.
04:29 PM (IST) Jan 18
04:26 PM (IST) Jan 18
Bigg Boss Kannada Season 12: ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರಿಗೆ ವಿನ್ನರ್? ರನ್ನರ್ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ನಡೆದಿದ್ದು, ಹಾಗಾದರೆ ಯಾರಿಗೆ ವಿಜೇತರ ಪಟ್ಟ ಸಿಕ್ಕಿದೆ.
04:24 PM (IST) Jan 18
12ನೇ ಸೀಸನ್ ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆರು ಸ್ಪರ್ಧಿಗಳ ಪೈಕಿ ಚಾಂಪಿಯನ್ ಪಟ್ಟ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಚಾಂಪಿಯನ್ ಪಟ್ಟದ ರೇಸ್ನಲ್ಲಿರುವ ಗಿಲ್ಲಿ ತಾವು ಬಿಗ್ ಬಾಸ್ಗೆ ಬರಲು ಕಾರಣ ಯಾರು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.