LIVE NOW
Published : May 16, 2026, 06:58 AM ISTUpdated : May 16, 2026, 08:48 AM IST

Karnataka News Live: ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

ಸಾರಾಂಶ

ವಿಜಯಪುರ: ಯತ್ನಾಳ್‌ ಅವರು ಹೊಸ ಪಕ್ಷ ಮಾಡಲಿ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ಮಾಡಿದರೆ ನಾನು ಬೆಂಬಲ ಕೊಡುತ್ತೇನೆ. ತಮಿಳುನಾಡಿನ ವಿಜಯ್‌ ರೀತಿ ಅವರು ಸಿಎಂ ಆಗುತ್ತಾರೆ. ಆದರೆ ಅವರು ಹೊಸ ಪಕ್ಷ ಮಾಡುವುದಿಲ್ಲ. ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಜೆಪಿಗೆ ವಾಪಸ್‌ ತೆಗೆದುಕೊಳ್ಳಿ, ನನಗೆ ವಿಜಯಪುರ ಟಿಕೆಟ್‌ ಕೊಡಿ ಅಂತಾರಷ್ಟೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಅವರು ಬಿಜೆಪಿಯಿಂದ ಉಚ್ಛಾಟಿತರಿದ್ದಾರೆ. ಆದರೂ ಬಿಜೆಪಿ ವ್ಯಾಮೋಹ ಇವರಿಗೆ ಹೋಗಿಲ್ಲ. ತಾಕತ್ತಿದ್ದರೆ ಇವರು ಜೆಸಿಬಿ ಪಾರ್ಟಿ ಮಾಡಲಿ. ವಿಜಯಪುರದವರು ಮುಖ್ಯಮಂತ್ರಿಯಾಗಲಿ. ವಿಜಯಪುರದವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷವಿದೆ. ಆದರೆ ಇವರು ಹಾಗೆ ಮಾಡುವುದಿಲ್ಲ. ಇವರು ಸುಮ್ಮನೆ ಜೆಸಿಬಿ ತೋರಿಸಿ ಹೆದರಿಸಿ ವಿಜಯಪುರ ನಗರ ಟಿಕೆಟ್ ಪಡೆಯುವುದಷ್ಟೆ ಅವರ ಬೇಡಿಕೆ ಎಂದರು.

08:48 AM (IST) May 16

ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕನಕಪುರ ರಸ್ತೆ ಬಳಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯದ್ದಾಗಿದ್ದು, ಅವುಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ ಎಂಬ ಮಹತ್ವದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ

 

 

Read Full Story

08:47 AM (IST) May 16

ಮಚ್ಚಿನಿಂದ ಕೊಚ್ಚಿ ದಾವಣಗೆರೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ಯುವತಿ ವಿಚಾರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಕರಣದಲ್ಲಿ ಯುವತಿ ವಿಚಾರ ಮುನ್ನಲೆಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭಗೊಂಡಿದೆ.

Read Full Story

08:32 AM (IST) May 16

'ಸ್ವಚ್ಛ ಪುತ್ತೂರು' ಪರಿಕಲ್ಪನೆಯಲ್ಲಿ ಮೂಡಿ ಬಂತು ಬಯೋ ಸಿಎನ್‌ಜಿ ಘಟಕ 'ಕಸದಿಂದ ರಸ'

ಪುತ್ತೂರಿನ ಬನ್ನೂರು ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ಹಸಿ ತ್ಯಾಜ್ಯದಿಂದ ಬಯೋ-ಸಿಎನ್‌ಜಿ ಇಂಧನ ಉತ್ಪಾದಿಸುವ ನೂತನ ಘಟಕ ಆರಂಭವಾಗಿದೆ. ಉದ್ಯಮಿ ಕೃಷ್ಣನಾರಾಯಣ ಮುಳಿಯ ಅವರ ನೇತೃತ್ವದ ಈ ಯೋಜನೆ, ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಿದೆ.

Read Full Story

08:23 AM (IST) May 16

ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್‌ ಬಾಕಿಗೆ ಕೃಷ್ಣ ಬೈರೇಗೌಡ ಗರಂ, ಸಚಿವರಿಗೆ ತಲೆನೋವಾದ ಆ ಅಧಿಕಾರಿ!

ರಾಜ್ಯದ ಎಸಿ ನ್ಯಾಯಾಲಯಗಳಲ್ಲಿ ಶೇ.90ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಇತ್ಯರ್ಥವಾಗಿದ್ದರೂ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಅಧಿಕಾರಿಯ ಕಾರ್ಯವೈಖರಿಯಿಂದ ತಮಗೆ ಮುಜುಗರವಾಗುತ್ತಿದೆ..

Read Full Story

08:17 AM (IST) May 16

ಮೇ 18ರಿಂದ 3 ಮಾರ್ಗದಲ್ಲಿ ಮೆಜೆಸ್ಟಿಕ್ ನಿಲ್ದಾಣದಿಂದ ಬಿಎಂಟಿಸಿಯಿಂದ ಬಸ್‌ ಸೇವೆ ಆರಂಭ

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ ಹೆಬ್ಬಾಳ, ಯಲಹಂಕ, ಎನ್‌ಇಎಸ್‌, ದೊಡ್ಡಬಳ್ಳಾಪುರ ಮೂಲಕ ಹಾಗೂ ದೇವಹಳ್ಳಿಯಿಂದ ನಂದಿ ಕ್ರಾಸ್‌ ಮಾರ್ಗದ ಬಸ್‌ ಆವತಿ, ವೆಂಕಟಗಿರಿ ಕೋಟೆ ಮೂಲಕ ಸೇವೆ ನೀಡಲಿವೆ.

Read Full Story

08:10 AM (IST) May 16

ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?

ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್‌’ನಿಂದ ಇ.ಡಿ ಬಯಲು ಮಾಡಿದೆ.

 

Read Full Story

08:06 AM (IST) May 16

ದೊಡ್ಡಾಲಹಳ್ಳಿ ಕೆಪಿಎಸ್ ಶಾಲೆಗೆ ಡಿಕೆ ಶಿವಕುಮಾರ್ ಅವರ ಅಜ್ಜ, ತಂದೆಯ ಹೆಸರು ನಾಮಕರಣ

DCM DK Shivakumar: ಕನಕಪುರದ ದೊಡ್ಡಾಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಗೆ, ಭೂಮಿ ದಾನ ಮಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪೂರ್ವಜರಾದ 'ಶ್ರೀ ಡಿ.ಕೆ.ಕೆಂಪೇಗೌಡ' ಅವರ ಹೆಸರನ್ನು ಮರುನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. 

Read Full Story

07:51 AM (IST) May 16

ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಗೆ ಕೃತಕ ನೆರೆ ಭೀತಿ

ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸೇತುವೆ ನಿರ್ಮಾಣಕ್ಕಾಗಿ ನದಿಗೆ ಹಾಕಲಾದ ಒಡ್ಡಿನಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ. ಈ ಕಾಮಗಾರಿಯಿಂದಾಗಿ ದಂಬೆಲ್‌, ಮಾಲೇಮಾರ್, ಕಾವೂರು ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆಯಿದ್ದು, ಸುಮಾರು 2.5 ಲಕ್ಷ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.
Read Full Story

07:40 AM (IST) May 16

ಅದಾನಿ ಏರ್‌ಪೋರ್ಟ್‌ಗಳಲ್ಲಿ ಐಷಾರಾಮಿ ಕ್ರಾಂತಿ - ನಮ್ಮ ಮಂಗಳೂರಿಗೂ ಬರಲಿದೆ ಕಿಂಪ್ಟನ್‌

ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಮತ್ತು ಐಎಚ್‌ಜಿ ಹೊಟೇಲ್ಸ್ ಭಾರತದಲ್ಲಿ ಐದು ಹೊಸ ಹೋಟೆಲ್‌ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ, ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಕಿಂಪ್ಟನ್‌, ಹಾಲಿಡೇ ಇನ್‌ ಬ್ರ್ಯಾಂಡ್‌ಗಳ ಹೋಟೆಲ್‌ಗಳು ತಲೆ ಎತ್ತಲಿವೆ. ಇದು ವಿಮಾನ ನಿಲ್ದಾಣ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
Read Full Story

07:29 AM (IST) May 16

ಮಳೆಗಾಗಿ ಗೊಂಬೆಗಳ ಅದ್ಧೂರಿ ಮದುವೆ; ಅರಿಶಿಣ ಕಾರ್ಯ, ಸುರಗಿ ಸುತ್ತು ಸೇರಿದಂತೆ ಎಲ್ಲವೂ ಇತ್ತು

ಬಾಗಲಕೋಟೆ ಜಿಲ್ಲೆಯ ವರ್ಚಗಲ್ ಗ್ರಾಮದಲ್ಲಿ ಮಳೆ ಕೊರತೆ ನೀಗಿಸಲು, ವರುಣ ದೇವನ ಕೃಪೆ ಕೋರಿ ಗೊಂಬೆಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯದಂತೆ, ಗ್ರಾಮಸ್ಥರೆಲ್ಲರೂ ಸೇರಿ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಪಾಲಿಸಿ, ಈ ವಿಶಿಷ್ಟ ವಿವಾಹವನ್ನು ನಡೆಸಿದರು.
Read Full Story

More Trending News