Published : May 16, 2026, 06:58 AM ISTUpdated : May 16, 2026, 09:04 PM IST

Karnataka News Live: ಅಂಬಾನಿ ಅದಾನಿಯಂತ ಉದ್ಯಮಿಗಳ ಸಂಪತ್ತು ಪಡೆದು ಜನರ ನೆರವಿಗೆ ಬರಲಿ - ಶಾಸಕ ಪೊನ್ನಣ್ಣ ಹೇಳಿದ್ದೇನು?

ಸಾರಾಂಶ

ವಿಜಯಪುರ: ಯತ್ನಾಳ್‌ ಅವರು ಹೊಸ ಪಕ್ಷ ಮಾಡಲಿ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ಮಾಡಿದರೆ ನಾನು ಬೆಂಬಲ ಕೊಡುತ್ತೇನೆ. ತಮಿಳುನಾಡಿನ ವಿಜಯ್‌ ರೀತಿ ಅವರು ಸಿಎಂ ಆಗುತ್ತಾರೆ. ಆದರೆ ಅವರು ಹೊಸ ಪಕ್ಷ ಮಾಡುವುದಿಲ್ಲ. ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಜೆಪಿಗೆ ವಾಪಸ್‌ ತೆಗೆದುಕೊಳ್ಳಿ, ನನಗೆ ವಿಜಯಪುರ ಟಿಕೆಟ್‌ ಕೊಡಿ ಅಂತಾರಷ್ಟೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಅವರು ಬಿಜೆಪಿಯಿಂದ ಉಚ್ಛಾಟಿತರಿದ್ದಾರೆ. ಆದರೂ ಬಿಜೆಪಿ ವ್ಯಾಮೋಹ ಇವರಿಗೆ ಹೋಗಿಲ್ಲ. ತಾಕತ್ತಿದ್ದರೆ ಇವರು ಜೆಸಿಬಿ ಪಾರ್ಟಿ ಮಾಡಲಿ. ವಿಜಯಪುರದವರು ಮುಖ್ಯಮಂತ್ರಿಯಾಗಲಿ. ವಿಜಯಪುರದವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷವಿದೆ. ಆದರೆ ಇವರು ಹಾಗೆ ಮಾಡುವುದಿಲ್ಲ. ಇವರು ಸುಮ್ಮನೆ ಜೆಸಿಬಿ ತೋರಿಸಿ ಹೆದರಿಸಿ ವಿಜಯಪುರ ನಗರ ಟಿಕೆಟ್ ಪಡೆಯುವುದಷ್ಟೆ ಅವರ ಬೇಡಿಕೆ ಎಂದರು.

09:04 PM (IST) May 16

ಅಂಬಾನಿ ಅದಾನಿಯಂತ ಉದ್ಯಮಿಗಳ ಸಂಪತ್ತು ಪಡೆದು ಜನರ ನೆರವಿಗೆ ಬರಲಿ - ಶಾಸಕ ಪೊನ್ನಣ್ಣ ಹೇಳಿದ್ದೇನು?

ಈ ಪರಿಸ್ಥಿತಿ ದೇಶಕ್ಕೆ ಬರುತ್ತದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವರ್ಷದ ಹಿಂದೆಯೇ ಹೇಳಿದ್ದರು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

08:20 PM (IST) May 16

Darshan Case Shocking - ಜೈಲಿನಲ್ಲೇ ನಟ ದರ್ಶನ್ ಲಾಕ್; ಕೇಸ್ ವಿಚಾರಣೆ ಇನ್ನೂ ವಿಳಂಬವಾದ್ರೆ ಮುಂದೇನ್ ಆಗುತ್ತೆ ಸ್ವಾಮಿ?

ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್​ಗೆ ಹೈಕೋರ್ಟ್ ನೀಡಿದ್ದ ಬೇಲ್​ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸದ್ಯಕ್ಕೆ ನಟ ದರ್ಶನ್ ಮುಂದೆ ಬೇರೆ ಯಾವ ದಾರಿ ಇದೆ? ಈ ಸ್ಟೋರಿ ನೋಡಿ.. 

Read Full Story

07:55 PM (IST) May 16

ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ KPYCC ಪದಾಧಿಕಾರಿಗಳ ವಜಾ ಮಾಡಿದ ಭಾರತೀಯ ಯುವ ಕಾಂಗ್ರೆಸ್‌

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ (KPYCC) ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ ಹೈಕಮಾಂಡ್ ಅಮಾನತುಗೊಳಿಸಿದೆ. ಕರ್ತವ್ಯ ಲೋಪ ಮತ್ತು ನಿಷ್ಕ್ರಿಯತೆಯ ಕಾರಣ ನೀಡಿ ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ ರಾಜ್ಯ ಸಮಿತಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. 

Read Full Story

07:08 PM (IST) May 16

ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರನ ಬ್ಯಾನರ್​ನಲ್ಲಿ 'ಮುಂದಿನ ಸಿಎಂ ಡಿಕೆಶಿ'​ - ರಾಜಕೀಯದಲ್ಲಿ ಸಂಚಲನ- ಸಚಿವೆ ಹೇಳಿದ್ದೇನು

ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದಂದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅಭಿಮಾನಿಗಳು 'ಮುಂದಿನ ಸಿಎಂ' ಎಂದು ಬ್ಯಾನರ್ ಹಾಕಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದು ಕಾರ್ಯಕರ್ತರ ಅಭಿಮಾನ, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಜಾಣ್ಮೆಯಿಂದ ಉತ್ತರಿಸಿದ್ದಾರೆ.
Read Full Story

06:45 PM (IST) May 16

Towels - ಟವೆಲ್ ತೊಳೆಯೋದು ಹೇಗೆ? ಹೊಸದರಂತೆ ಮೃದುವಾಗಿಡಲು ಇಲ್ಲಿವೆ ಸಿಂಪಲ್ ಟಿಪ್ಸ್

ಸಾಮಾನ್ಯವಾಗಿ ಮನೆಗಳಲ್ಲಿ ಟವೆಲ್‌ಗಳು ಬೇಗನೆ ಹಾಳಾಗುತ್ತವೆ. ಒಂದೆರಡು ಬಾರಿ ತೊಳೆದ ತಕ್ಷಣ ಗಟ್ಟಿಯಾಗಿ, ಹಳೆಯದರಂತೆ ಕಾಣಿಸುತ್ತವೆ. ಅವುಗಳನ್ನು ಹೊಸದರಂತೆ ಮೃದುವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು ಗೊತ್ತಾ?

Read Full Story

06:30 PM (IST) May 16

ದೇಶದ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ವಿಫಲ - ಬೆಂಗಾವಲು ವಾಹನ ಸೇವೆ ಕೈಬಿಟ್ಟ ಎ.ಎಸ್.ಪೊನ್ನಣ್ಣ

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.

Read Full Story

06:15 PM (IST) May 16

ಬೆಂಗಳೂರಲ್ಲೊಂದು ವಿಚಿತ್ರ - ತಾಯಂದಿರ ದಿನಕ್ಕೆ ಅಮ್ಮನ ಫೋಟೋ ಶೇರ್​ ಮಾಡಿದ ಪತ್ನಿ ಮೇಲೆ ಹಲ್ಲೆ - ಸ್ಥಿತಿ ಗಂಭೀರ

ಅಮ್ಮಂದಿರ ದಿನದಂದು ತನ್ನ ತಾಯಿಯ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. ಈ ಘಟನೆಯು ಬೆಂಗಳೂರಿನಲ್ಲಿ ನಡೆದಿದ್ದು, ಪತ್ನಿ ಯಮುನಾ ತನ್ನ ಪತಿ ಪ್ರದೀಪ್ ಕುಮಾರ್ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.
Read Full Story

06:08 PM (IST) May 16

CM Vijay Gift to Trisha - ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!

ತಮಿಳುನಾಡಿನಲ್ಲಿ ಚುನಾವಣೆ ಗೆದ್ದು ವಿಜಯ್ ಸಿಎಂ ಆದ ಮೇಲೆ ತ್ರಿಷಾ ಕೃಷ್ಣನ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇಬ್ಬರ ನಂಟಿನ ಬಗ್ಗೆ ಫುಲ್ ಗುಲ್ಲೋ ಗುಲ್ಲು. ಈ ನಡುವೆ ದಳಪತಿ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊರೆೆಯನ್ನೇ ಕೊಟ್ಟುಬಿದ್ದಾರೆ

Read Full Story

05:55 PM (IST) May 16

ಸಿನಿಮಾಗೆ ಕಥೆ ಮುಖ್ಯವೇ, ಸೀಕ್ವೆಲ್ ಮುಖ್ಯವೇ? ಇಲ್ಲಿದೆ ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ವಿಶ್ಲೇಷಣೆ!

ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಆದರೆ ಈ ಸಿನಿಮಾಗಳ ಸಕ್ಸಸ್‌, ಎರಡು ಭಾಗಗಳಲ್ಲಿ ಅವು ಮಾಡಿದ ಹಣವನ್ನು ನೋಡಿ ಕಥೆ ಇರಲಿ ಇಲ್ಲದಿರಲಿ ಹೆಚ್ಚಿನ ಚಿತ್ರತಂಡಗಳು ಸಿನಿಮಾವನ್ನು ಎರಡು ಭಾಗಗಳಲ್ಲಿ ತರಲು ಶುರು ಮಾಡಿದರು.

Read Full Story

05:54 PM (IST) May 16

ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ

ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಜೂನ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸಲಿದ್ದು, ಈ ನಿರ್ಧಾರದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.
Read Full Story

05:27 PM (IST) May 16

ಆ ಪವರ್‌ಫುಲ್‌ ಪಾತ್ರದಲ್ಲಿ ಶಿವಣ್ಣ - ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರುವಾದ ಹ್ಯಾಟ್ರಿಕ್ ಹೀರೋ!

ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಗೌರ ನಾಯ್ಡು ಪಾತ್ರದ ಶಿವರಾಜ್‌ಕುಮಾರ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಿಭಿನ್ನ ಗೆಟಪ್‌ಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

05:01 PM (IST) May 16

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನ್ಯಾಯಾಲಯದ ನಿರ್ದೇಶನದಲ್ಲಿ ತನಿಖೆ ನಡೆಯಲಿ - ಸಚಿವ ಶರಣಪ್ರಕಾಶ ಪಾಟೀಲ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರ ವಿರುದ್ಧ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದ್ದು, CET ಮಾದರಿ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

Read Full Story

04:58 PM (IST) May 16

Salman Khan Shoking - 'ಇಲ್ಲಿಯವರೆಗೂ ಯಾವತ್ತೂ ನಾನು ನನ್ನ ಸಿನಿಮಾದ ಸ್ಕ್ರಿಪ್ಟ್ ಓದಿಲ್ಲ'.. ಇನ್ಮುಂದೆ ಏನಂತೆ?

ಇತ್ತೀಚೆಗೆ ಸಲ್ಮಾನ್ ಅವರು ನೀಡಿರುವ ಒಂದು ಹೇಳಿಕೆ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿದೆ. ಸುಮಾರು ಮೂರು ದಶಕಗಳಿಂದ ಬಾಲಿವುಡ್ ಆಳುತ್ತಿರುವ ಈ ನಟ, ತಮ್ಮ ಸಿನಿಮಾಗಳ ಸ್ಕ್ರಿಪ್ಟ್ (Script) ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನು ನೋಡಿ..

Read Full Story

04:47 PM (IST) May 16

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಆಮೆಗಳ ಕಳ್ಳಸಾಗಾಟ, ವಿದೇಶದಿಂದ ಬೆಂಗಳೂರಿಗೆ ಬಂದ ಅಳಿವಿನಂಚಿನಲ್ಲಿರುವ ಆಮೆಗಳು!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನಿಂದ 47 ಜೀವಂತ ಆಮೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರಾಣಿಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು ಸೇರಿದ್ದು, ವನ್ಯಜೀವಿ ಕಳ್ಳಸಾಗಾಣಿಕೆ ಜಾಲದ ಭಾಗವಾಗಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
Read Full Story

04:30 PM (IST) May 16

Lo Naveena ಚಿತ್ರ ವಿಮರ್ಶೆ - ನವೀನ್ ಸಜ್ಜು ಅಭಿನಯದ ಭಾವನಾತ್ಮಕ ಕಥೆ ಹೇಗಿದೆ?

ಹಳ್ಳಿಯಿಂದ ನಗರಕ್ಕೆ ಹೋಗುವ ತರುಣನೊಬ್ಬನ ಆತ್ಮಕತೆ ಈ ಸಿನಿಮಾ. ಮುಗ್ಧತೆ ನಿಧಾನಕ್ಕೆ ಮಾಯವಾಗಿ ಪ್ರಬುದ್ಧತೆ ಆವರಿಸಿಕೊಳ್ಳುವ ಕಥನ. ಮಂಡ್ಯ ಭಾಗದ ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಅಲ್ಲೊಬ್ಬ ತರುಣ.

Read Full Story

04:15 PM (IST) May 16

Share Movie Review - 'ಕರ್ಣ' ಖ್ಯಾತಿಯ ಕಿರಣ್ ರಾಜ್‌ ನಟನೆಯ 'ಶೇರ್‌' ಸಿನಿಮಾ ಹೇಗಿದೆ?

ಮಾರ್ಕೆಟ್‌ನಲ್ಲಿ ಮೂಟೆ ಹೊರುವ ನಾಯಕನ ತಂಡ, ಅನಾಥರಿಗೆ ನೆರಳಾಗುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುತ್ತ ಒಂದು ನಾರ್ಮಲ್‌ ಕತೆಯಾಗಿ ಸಾಗುವ ಚಿತ್ರದಲ್ಲಿ ಅಚ್ಚರಿಯ ತಿರುವೊಂದು ಬರುತ್ತದೆ.

Read Full Story

03:43 PM (IST) May 16

ನೇರಳೆ ಮಾರ್ಗದ ಮೆಟ್ರೊ ನಾಳೆ 2 ಗಂಟೆ ಸಂಚರಿಸಲ್ಲ - ಯಾವೆಲ್ಲಾ ಮಾರ್ಗ? ಫುಲ್​ ಡಿಟೇಲ್ಸ್​ ಇಲ್ಲಿದೆ

ಮೇ 17ರ ಭಾನುವಾರದಂದು, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಮೆಟ್ರೋ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ.

Read Full Story

03:18 PM (IST) May 16

ತನ್ನ ರಕ್ತವನ್ನೇ ಭಕ್ಷಿಸಿದ ತಂದೆ, ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾ*ಚಾರ, ಸ್ನೇಹಿತನನ್ನೂ ಮಲಗಿಸಿದ ಪಾಪಿ ಅಪ್ಪ!

ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ, ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತನೊಂದಿಗೂ ಮಗಳನ್ನು ಮಲಗಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
Read Full Story

03:04 PM (IST) May 16

Bengaluru - ಈ ಬೆಂಗಳೂರಿಗರಿಗೆ ಬುದ್ಧಿಯೇ ಇಲ್ವಾ? ಇಲ್ಲೂ ಕಸ ಹಾಕೋದು ಬಿಟ್ಟಿಲ್ಲ ನೋಡಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಗಂಭೀರವಾಗಿದ್ದು, ಕೆಲವರು ಜೆಪಿ ಪಾರ್ಕ್ ಬಳಿಯ ಫ್ಲೈಓವರ್‌ಗಳ ಕೆಳಗೆ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿದ್ದಾರೆ. ಸ್ವಚ್ಛ ನಗರಕ್ಕಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯವಾಗಿದೆ.

Read Full Story

02:16 PM (IST) May 16

ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?

ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

Read Full Story

01:37 PM (IST) May 16

ಪ್ರಧಾನಿ ಕರೆಗೆ ಓಗೊಟ್ಟ ಸಿದ್ದರಾಮಯ್ಯ ಸಲಹೆಗಾರ ಪೊನ್ನಣ್ಣ - ಬಹು ದೊಡ್ಡ ನಿರ್ಧಾರ- ಪತ್ರ ವೈರಲ್​

ಪ್ರಧಾನಿ ಮೋದಿಯವರ ಇಂಧನ ಉಳಿತಾಯದ ಕರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ  ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸ್ಪಂದಿಸಿದ್ದಾರೆ. ದೇಶ ಮೊದಲು, ಪಕ್ಷ ನಂತರ ಎಂಬಂತೆ ಅವರು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸುವಂತೆ ಪತ್ರ ಬರೆದಿದ್ದು, ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Read Full Story

01:17 PM (IST) May 16

ಆಹಾರದಲ್ಲಿ ಅಶ್ವಗಂಧ ಬಳಕೆ ನಿಷೇಧಕ್ಕೆ ಹೈಕೋರ್ಟ್ ಬ್ರೇಕ್! ಕಾರಣ ಏನು ಗೊತ್ತಾ?

ಆಹಾರ ಪದಾರ್ಥಗಳಲ್ಲಿ ಅಶ್ವಗಂಧದ ಅಥವಾ ಬೇರುಗಳ ಸಾರ ಬಳಕೆಗೆ  ನಿಷೇಧಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಫಾಸಿ) ನೀಡಿದ್ದ ಸಲಹೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅಶ್ವಗಂಧದಲ್ಲಿನ 'ವಿಥಾಫೆರಿನ್-ಎ' ಅಂಶವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣ ನೀಡಿತ್ತು.

Read Full Story

01:02 PM (IST) May 16

ಮುಂಚಿತವಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದೇಕೆ GT ದೇವೇಗೌಡ - ಸಾ.ರಾ.ಮಹೇಶ್ ಕಿಡಿ

ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮೈಸೂರಿನಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ತಂತ್ರಗಳು ನಮಗೆ ಅರ್ಥವಾಗುತ್ತವೆ ಎಂದಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳುವ ಮೂಲಕ, ಜಿ.ಟಿ.ಡಿ ಅವರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
Read Full Story

12:36 PM (IST) May 16

ಗಂಗಾ-ಪಂಚಮಿ ಮಾತಿಗೆ ಮರುಳಾದ್ರೆ ಸರ್ವಸ್ವವೂ ಉಡೀಸ್; ನಿರ್ಜನ ಪ್ರದೇಶಕ್ಕೆ ಎಂಟ್ರಿಯಾದ್ರೆ ಕ್ಲೋಸ್!

ಯುವಕರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಐವರ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳಿಂದ ಪೊಲೀಸರು 10.20 ಲಕ್ಷ ಮೌಲ್ಯದ ಚಿನ್ನ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಿಂದ ಇನ್ನಷ್ಟು ಮಂದಿ ಮೋಸ ಹೋಗಿರುವ ಶಂಕೆ ವ್ಯಕ್ತವಾಗಿದೆ.

Read Full Story

12:21 PM (IST) May 16

ಮಮತಾ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್! ಬಿಹಾರ ಸಚಿವನ ಹೇಳಿಕೆ ವೈರಲ್!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಾದ ಮರುದಿನವೇ, ಅವರು ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹೋಗಲಿದ್ದಾರೆ ಎಂದು ಬಿಹಾರ ಸಚಿವ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.
Read Full Story

12:02 PM (IST) May 16

Photos - ದಲಿತ ಸ್ವಾಮೀಜಿಗಳ ಪಾದಪೂಜೆ ಮಾಡಿದ ಸಿಟಿ ರವಿ

ಕ್ಷೇತ್ರದಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಯಲ್ಲಿ ನಡೆದ ಅಪೂರ್ವ 'ಭೀಮೋತ್ಸವ' ಅಭಿಯಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ನಿವಾಸದಲ್ಲಿ ಭಕ್ತಿಪೂರ್ವಕ ತೆರೆ ಬಿದ್ದಿದೆ. ಈ ಐತಿಹಾಸಿಕ ಸಮಾರೋಪ ಸಮಾರಂಭದ ವಿಶೇಷ ಕ್ಷಣಗಳ ಫೋಟೋ ಝಲಕ್ ಇಲ್ಲಿದೆ:

 

Read Full Story

11:26 AM (IST) May 16

ಬೆಳಗಾವಿಯ 4500 ಕೋಟಿ ವಂಚನೆ ಪ್ರಕರಣ, ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್

ಬೆಳಗಾವಿಯಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಹೂಡಿಕೆ ಮಾಡಿ ಬರೋಬ್ಬರಿ 4500 ಕೋಟಿ ರೂ ವಂಚನೆ ಪ್ರಕರಣದಲ್ಲಿ ನೀಲಣ್ಣವರ್ ಸಿಲುಕಿದ್ದಾರೆ. ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ.

 

Read Full Story

11:09 AM (IST) May 16

ಬೆಂಗಳೂರಿನಿಂದ ಊಟಿಗೆ ಹೋಗ್ತಿದ್ದೀರಾ? ಇಲ್ಲಿದೆ ನೋಡಿ ನಮ್ಮ ಸಾರಿಗೆ ಬಸ್‌ಗಳ ಮಾಹಿತಿ

ಬೆಂಗಳೂರಿನಿಂದ ಊಟಿಗೆ ಪ್ರವಾಸ ಯೋಜಿಸುತ್ತಿದ್ದರೆ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಪ್ರತಿನಿತ್ಯ ಸಂಚರಿಸುವ 9 ಸರ್ಕಾರಿ ಬಸ್‌ಗಳ ಸಮಯ, ಟಿಕೆಟ್ ದರ, ಮತ್ತು ಬೋರ್ಡಿಂಗ್ ಪಾಯಿಂಟ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Read Full Story

10:47 AM (IST) May 16

Be Aware of SIR - ಎಸ್‌ಐಆರ್ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು - ಪ್ರಧಾನಿ ಮೋದಿ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ!

 ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲ, ದೇಶದಲ್ಲಿ ಬೆಲೆ ಏರಿಕೆ ಮೋದಿ ಕೊಡುಗೆ, ಎಸ್‌ಐಆರ್‌ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು.

Read Full Story

10:24 AM (IST) May 16

ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಕ್ಕ ಹೊಸ ಯೆಜ್ಡಿ ಬೈಕ್ ಏರಿ ಸಂಭ್ರಮಿಸಿದ ಡಿಸಿಎಂ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಹೊಚ್ಚ ಹೊಸ ಯೆಜ್ಡಿ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಡಿಕೆಶಿ ಹೊಸ ಬೈಕ್ ಏರಿ ಸಂಭ್ರಮಿಸಿದ್ದಾರೆ. ಡಿಕೆಶಿ ಮೊದಲ ಬೈಕ್ ಕೂಡ ಯೆಜ್ಡಿ ಆಗಿದ್ದು, ಇದೀಗ 2ನೇ ಅವರನ್ನು ಬಾಲ್ಯದ ದಿನಗಳಿಗೆ ಕೊಂಡೊಯ್ದಿದೆ.

Read Full Story

10:16 AM (IST) May 16

ಆ ಒಂದು ಕಾರಣಕ್ಕೆ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಏಕಾಏಕಿ 20ರಿಂದ 19ಕ್ಕೆ ಶಿಫ್ಟ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ತುಮಕೂರಿನಲ್ಲಿ ಆಯೋಜನೆ. ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಮೇ 20ರಂದು ನಡೆಯಬೇಕಿದ್ದ 'ಸಾರ್ಥಕ ಸೇವೆಗಳ ಸಮರ್ಪಣೆ' ಕಾರ್ಯಕ್ರಮ ಮೇ 19ಕ್ಕೆ ಬದಲಾಯಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

Read Full Story

09:49 AM (IST) May 16

ಮೋದಿ ಇಂಧನ ಮಿತವ್ಯಯ ಕರೆಗೆ ವಿಜಯೇಂದ್ರ ಸ್ಪಂದನೆ; ಮೆಜೆಸ್ಟಿಕ್‌ನಿಂದ ಕೆಂಗೇರಿವರೆಗೆ ಪ್ರಯಾಣಿಕರೊಂದಿಗೆ ಮೆಟ್ರೋದಲ್ಲೇ ಪ್ರಯಾಣ!

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಮೆಜೆಸ್ಟಿಕ್‌ನಿಂದ ಕೆಂಗೇರಿ ತನಕ ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನ ಸೆಳೆದರು. ಸಾಮಾನ್ಯ ಪ್ರಯಾಣಿಕರ ಜೊತೆಯಲ್ಲೇ ಮೆಟ್ರೋದಲ್ಲಿ ತೆರಳಿದ ವಿಜಯೇಂದ್ರ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

Read Full Story

09:20 AM (IST) May 16

ಉಪಚುನಾವಣೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹಾವು ಕಡಿದು ಸಾವು, ಉತ್ತರ ಕನ್ನಡದಲ್ಲಿ ದುರಂತ ಘಟನೆ

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಾಗರ ಹಾವು ಕಡಿದು ಮೃತಪಟ್ಟ ದುರಂತ ಘಟನೆ ನಡೆದಿದೆ.ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

Read Full Story

09:04 AM (IST) May 16

ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ; ಮಾಯವಾಗುತ್ತೆ ನಿಮ್ಮಲ್ಲಿರ ಚಿನ್ನ-ಹಣ!

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಸಾಧು ವೇಷಧಾರಿಸಾಧು ವೇಷಧಾರಿಯೊಬ್ಬ ಮೆಡಿಕಲ್ ಶಾಪ್ ಮಾಲೀಕನಿಗೆ ಹೂವು ನೀಡಿ ಮಂಪರು ಬರಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ದೋಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

08:48 AM (IST) May 16

ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕನಕಪುರ ರಸ್ತೆ ಬಳಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯದ್ದಾಗಿದ್ದು, ಅವುಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ ಎಂಬ ಮಹತ್ವದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ

 

 

Read Full Story

08:47 AM (IST) May 16

ಮಚ್ಚಿನಿಂದ ಕೊಚ್ಚಿ ದಾವಣಗೆರೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ಯುವತಿ ವಿಚಾರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಕರಣದಲ್ಲಿ ಯುವತಿ ವಿಚಾರ ಮುನ್ನಲೆಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭಗೊಂಡಿದೆ.

Read Full Story

08:32 AM (IST) May 16

'ಸ್ವಚ್ಛ ಪುತ್ತೂರು' ಪರಿಕಲ್ಪನೆಯಲ್ಲಿ ಮೂಡಿ ಬಂತು ಬಯೋ ಸಿಎನ್‌ಜಿ ಘಟಕ 'ಕಸದಿಂದ ರಸ'

ಪುತ್ತೂರಿನ ಬನ್ನೂರು ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ಹಸಿ ತ್ಯಾಜ್ಯದಿಂದ ಬಯೋ-ಸಿಎನ್‌ಜಿ ಇಂಧನ ಉತ್ಪಾದಿಸುವ ನೂತನ ಘಟಕ ಆರಂಭವಾಗಿದೆ. ಉದ್ಯಮಿ ಕೃಷ್ಣನಾರಾಯಣ ಮುಳಿಯ ಅವರ ನೇತೃತ್ವದ ಈ ಯೋಜನೆ, ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಿದೆ.

Read Full Story

08:23 AM (IST) May 16

ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್‌ ಬಾಕಿಗೆ ಕೃಷ್ಣ ಬೈರೇಗೌಡ ಗರಂ, ಸಚಿವರಿಗೆ ತಲೆನೋವಾದ ಆ ಅಧಿಕಾರಿ!

ರಾಜ್ಯದ ಎಸಿ ನ್ಯಾಯಾಲಯಗಳಲ್ಲಿ ಶೇ.90ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಇತ್ಯರ್ಥವಾಗಿದ್ದರೂ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಅಧಿಕಾರಿಯ ಕಾರ್ಯವೈಖರಿಯಿಂದ ತಮಗೆ ಮುಜುಗರವಾಗುತ್ತಿದೆ..

Read Full Story

08:17 AM (IST) May 16

ಮೇ 18ರಿಂದ 3 ಮಾರ್ಗದಲ್ಲಿ ಮೆಜೆಸ್ಟಿಕ್ ನಿಲ್ದಾಣದಿಂದ ಬಿಎಂಟಿಸಿಯಿಂದ ಬಸ್‌ ಸೇವೆ ಆರಂಭ

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ ಹೆಬ್ಬಾಳ, ಯಲಹಂಕ, ಎನ್‌ಇಎಸ್‌, ದೊಡ್ಡಬಳ್ಳಾಪುರ ಮೂಲಕ ಹಾಗೂ ದೇವಹಳ್ಳಿಯಿಂದ ನಂದಿ ಕ್ರಾಸ್‌ ಮಾರ್ಗದ ಬಸ್‌ ಆವತಿ, ವೆಂಕಟಗಿರಿ ಕೋಟೆ ಮೂಲಕ ಸೇವೆ ನೀಡಲಿವೆ.

Read Full Story

08:10 AM (IST) May 16

ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?

ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್‌’ನಿಂದ ಇ.ಡಿ ಬಯಲು ಮಾಡಿದೆ.

 

Read Full Story

More Trending News