Photos: ದಲಿತ ಸ್ವಾಮೀಜಿಗಳ ಪಾದಪೂಜೆ ಮಾಡಿದ ಸಿಟಿ ರವಿ
ಕ್ಷೇತ್ರದಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಯಲ್ಲಿ ನಡೆದ ಅಪೂರ್ವ 'ಭೀಮೋತ್ಸವ' ಅಭಿಯಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ನಿವಾಸದಲ್ಲಿ ಭಕ್ತಿಪೂರ್ವಕ ತೆರೆ ಬಿದ್ದಿದೆ. ಈ ಐತಿಹಾಸಿಕ ಸಮಾರೋಪ ಸಮಾರಂಭದ ವಿಶೇಷ ಕ್ಷಣಗಳ ಫೋಟೋ ಝಲಕ್ ಇಲ್ಲಿದೆ:

ಸಿಟಿ ರವಿ ನಿವಾಸದಲ್ಲಿ ಭೀಮೋತ್ಸವ
ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸಿ.ಟಿ.ರವಿ ನಿವಾಸದಲ್ಲಿ ಭೀಮೋತ್ಸವ ಸಮಾರೋಪ ಸಮಾರಂಭ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಜನರು ಭಾಗಿಯಾಗಿ ಗಮನ ಸೆಳೆದರು.

ಸಿಟಿ ರವಿ ಅವರಿಂದ ದಲಿತ ಸ್ವಾಮೀಜಿಗಳಿಗೆ ಪಾದಪೂಜೆ
ತಮ್ಮ ನಿವಾಸದಲ್ಲೇ ದಲಿತ ಸ್ವಾಮೀಜಿಗಳಾದ ಶಿವಶಂಕರ ಶಿವಯೋಗಿ, ಬಸವ ನಾಗಿದೇವ ಹಾಗೂ ಕುಂಬಾರ ಗುಂಡಯ್ಯ ಶ್ರೀಗಳಿಗೆ ಸಿ.ಟಿ.ರವಿ ಪಾದಪೂಜೆ ನೆರವೇರಿಸಿದರು. ಈ ದೃಶ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯ್ತು.
ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಸಮಾರೋಪವೇ ಈ ವಿಶೇಷ ಕಾರ್ಯಕ್ರಮ.
ಚಲವಾದಿ ನಾರಾಯಣ ಸ್ವಾಮಿ ಭಾಗಿ
ಭೀಮೋತ್ಸವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡ ಚಲವಾದಿ ನಾರಾಯಣ ಸ್ವಾಮಿ ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು.
400ಕ್ಕೂ ಅಧಿಕ ಭಕ್ತರು, ಕಾರ್ಯಕರು ಭಾಗಿ
ಇಂದು ಬಸವನಹಳ್ಳಿ ನಿವಾಸದಲ್ಲಿ ಕಾರ್ಯಕ್ರಮದ ವಿಚಾರ ತಿಳಿದು ಕಾರ್ಯಕರ್ತರು, ಭಕ್ತರು ಸೇರಿ ಸುಮಾರು 400ಕ್ಕೂ ಹೆಚ್ಚು ಜನರು ಭಾಗಿಯಾದರು. ಸಿ.ಟಿ.ರವಿ ನಿವಾಸದ ಅಂಗಳದಲ್ಲಿ ನಡೆದ ಭೀಮೋತ್ಸವದ ಅದ್ದೂರಿಯಾಗಿ ನಡೆಯಿತು.
ಅಂಬೇಡ್ಕರ್ ಜಯಂತಿಯಿಂದ ಪಾದಪೂಜೆವರೆಗೆ...
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಕಳೆದ ಒಂದೂವರೆ ತಿಂಗಳಿನಿಂದ ಚಿಕ್ಕಮಗಳೂರು ನಗರ ಸೇರಿದಂತೆ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರ ಮನೆ ಮನೆಯಲ್ಲಿ ಭೀಮೋತ್ಸವ ಹಮ್ಮಿಕೊಳ್ಳುವ ಮೂಲಕ ಸಿಟಿ ರವಿ ದಲಿತರು ನಮ್ಮವರೇ ಎಂಬ ಮಹತ್ವದ ಸಂದೇಶ ಸಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

