LIVE NOW
Published : Jan 12, 2026, 05:57 AM ISTUpdated : Jan 12, 2026, 09:12 AM IST

Karnataka News Live: ಓರ್ವ ಸ್ಪರ್ಧಿ BBK 12 ಟ್ರೋಫಿ ಹೇಗೆ ಪಡೆಯುತ್ತಾರೆ? ಮಿಡ್ ವೀಕ್‌ ಎಲಿಮಿನೇಶನ್‌ ಬಗ್ಗೆ Kiccha Sudeep ರಿವೀಲ್

ಸಾರಾಂಶ

ಬೀದರ್‌: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ದಿನ ಬೆಳಗಾದರೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಸನದ ಅರಿಸಿಕೇರಿ ಮಠದ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ಯುಗಾದಿವರೆಗೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಲುಮತದ ಜನರ ಕೈಗೆ ಅಧಿಕಾರ ಸಿಕ್ಕರೆ ಅವರಿಂದ ಅಧಿಕಾರ ಪಡೆಯುವುದು ಕಷ್ಟ. ಸದ್ಯ ರಾಜರ ಭಂಡಾರ (ಬಜೆಟ್) ಆಗಬೇಕು. ಹಾಲುಮತದ ಹಕ್ಕ-ಬುಕ್ಕರು ಹಾಲುಮತ ಸಮಾಜದ ಪ್ರಮುಖರಿದ್ದರು, ವಿಜಯನಗರ ಸಾಮ್ರಾಜ್ಯ ಕಟ್ಟಿದ್ದರು. ಛತ್ರಪತಿ ಶಿವಾಜಿ ಕೂಡ ಹಾಲಮತದವರು, ಕಾಶಿ ವಿಶ್ವನಾಥದ ರಾಣಿ ಅಹಿಲ್ಯಾ ಬಾಯಿ ಅದೇ ಸಮಾಜದವರಾಗಿದ್ದರು. ಹೀಗಾಗಿ ಈ ಸಮಾಜ ಪ್ರಾಚೀನ ಮತ್ತು ದೈವೀಕ ಶಕ್ತಿಯುಳ್ಳ ಸಮಾಜವಾಗಿದೆ. ಸಿದ್ದರಾಮಯ್ಯ ಕೂಡ ಹಾಲುಮತ ಸಮಾಜದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಸಾಧ್ಯವಿದೆ ಎಂದು ಭವಿಷ್ಯ ನುಡಿದಿದ್ದಾರೆ.

BBK 12

09:12 AM (IST) Jan 12

ಓರ್ವ ಸ್ಪರ್ಧಿ BBK 12 ಟ್ರೋಫಿ ಹೇಗೆ ಪಡೆಯುತ್ತಾರೆ? ಮಿಡ್ ವೀಕ್‌ ಎಲಿಮಿನೇಶನ್‌ ಬಗ್ಗೆ Kiccha Sudeep ರಿವೀಲ್

Bigg Boss Kannada Season 12 Episode: ರಾಶಿಕಾ ಶೆಟ್ಟಿ ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವಾರ ಪೂರ್ತಿ ಆಟದ ಬದಲು ಸೆಲೆಬ್ರೇಶನ್‌ ಇರುತ್ತದೆ. ಇಷ್ಟುದಿನ ಫಿಸಿಕಲ್‌ ಟಾಸ್ಕ್‌, ಲಕ್ಷುರಿ ಟಾಸ್ಕ್‌, ಮನೆ ಕೆಲಸ, ಅಟೆನ್ಶನ್‌, ಕಳಪೆ, ಉತ್ತಮ ಎಂದು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು.

 

Read Full Story

09:10 AM (IST) Jan 12

ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ

ಚಾಮರಾಜನಗರದ ಹನೂರು ತಾಲೂಕಿನಲ್ಲಿ 40 ವರ್ಷಗಳಿಂದ ಬತ್ತಿ ಹೋಗಿದ್ದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯು 900 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದ್ದು, ರೈತರ ಬಾಳಿಗೆ ಹೊಸ ಬೆಳಕಾಗಲಿದೆ.
Read Full Story

08:54 AM (IST) Jan 12

BBK 12 - ಯಾರು ರಾತ್ರೋರಾತ್ರಿ ಮಿಡ್‌ ವೀಕ್‌ ಎಲಿಮಿನೇಶನ್‌ ಆಗ್ತಾರೆ? ಧನುಷ್‌ ಗೌಡ ಹೇಳೇಬಿಟ್ರು!

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಿಡ್‌ ವೀಕ್‌ ರಾತ್ರೋ ರಾತ್ರಿ ಎಲಿಮಿನೇಶನ್‌ ಆಗುವುದು. ಯಾರು ಔಟ್‌ ಆಗ್ತಾರೆ ಎಂದು ಧನುಷ್‌ ಗೌಡ ಅವರು ದೊಡ್ಮನೆಯಲ್ಲಿ ಹೇಳಿದ್ದಾರೆ. ಹಾಗಾದರೆ ಅವರಾರು?

 

Read Full Story

08:42 AM (IST) Jan 12

ಸೋಮೇಶ್ವರ ಬೀಚ್‌ ಈಗ ಇನ್ನಷ್ಟು ಸ್ವಚ್ಛ- ಸುಂದರ!

ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದಡಿ ಸೋಮೇಶ್ವರ ಬೀಚ್‌ನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಸೈಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಕಡಲತೀರದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ, ಸಮುದ್ರ ತೀರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
Read Full Story

08:31 AM (IST) Jan 12

ವರದಾ-ಬೇಡ್ತಿ ನದಿ ಜೋಡಣೆ - ಭುಗಿಲೆದ್ದ ಜಲ ಸಂಘರ್ಷ, ಪರವಾಗಿ ನಿಂತ ಬಸವರಾಜ್ ಬೊಮ್ಮಾಯಿ

ವರದಾ-ಬೇಡ್ತಿ ನದಿ ಜೋಡಣೆ ಯೋಜನೆಗೆ ಹಾವೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದು, ಜನಜಾಗೃತಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಉತ್ತರ ಕನ್ನಡದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶ ನಡೆದಿದೆ.

Read Full Story

08:19 AM (IST) Jan 12

ಸೋಮನಾಥದಲ್ಲಿ ಮೋದಿ ಅದ್ಧೂರಿ ಶೌರ್ಯ ಯಾತ್ರೆ; ಡಮರು ನುಡಿಸಿ ಗಮನ ಸೆಳೆದ ಪ್ರಧಾನಿ

ಸೋಮನಾಥ ದೇವಾಲಯದ ಮೇಲಿನ ಘಜ್ನಿ ದಾಳಿಗೆ 1,000 ವರ್ಷವಾದ ಹಿನ್ನೆಲೆಯಲ್ಲಿ ನಡೆದ 'ಶೌರ್ಯ ಯಾತ್ರೆ'ಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈ ವೇಳೆ ವಿಶೇಷ ವಾಹನದಲ್ಲಿ ಸಾಗಿದ ಅವರು, ಡಮರು ನುಡಿಸಿ ಗಮನ ಸೆಳೆದರು ಮತ್ತು ವೀರ ಹಮೀರಜಿ ಹಾಗೂ ಸರ್ದಾರ್ ಪಟೇಲ್ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು.
Read Full Story

08:10 AM (IST) Jan 12

ಇಂದು ಇಸ್ರೋ ವರ್ಷದ ಮೊದಲ ಉಡಾವಣೆ - 15 ಉಪಗ್ರಹ ನಭಕ್ಕೆ

ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಮತ್ತೊಂದೆಡೆ, ಎಐ ಬಳಸಿ ಅಶ್ಲೀಲತೆ ಪ್ರಸಾರ ಮಾಡಿದ ಆರೋಪದ ಮೇಲೆ ಎಕ್ಸ್ (ಟ್ವಿಟರ್) ತಪ್ಪೊಪ್ಪಿಕೊಂಡಿದೆ.

Read Full Story

07:43 AM (IST) Jan 12

Bengaluru - ಪ್ರೀತಿ ನಿರಾಕರಿಸಿದ್ದಕ್ಕೆ ಗನ್ ಹಿಡಿದು ಬಂದ; ಕರೆ ಮಾಡಿ ಪ್ರಾಣ ಉಳಿಸಿಕೊಂಡ ಯುವತಿ

ಇನ್ಸ್ಟಾಗ್ರಾಂ ಪ್ರೀತಿಗೆ ಮನನೊಂದು, ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲಲು ಬಿಹಾರ ಮೂಲದ ಯುವಕ ಗನ್‍ನೊಂದಿಗೆ ನೆಲಮಂಗಲಕ್ಕೆ ಬಂದಿದ್ದ. ಯುವತಿಯ ಸಮಯಪ್ರಜ್ಞೆಯಿಂದ ಪೊಲೀಸರಿಗೆ ಮಾಹಿತಿ ತಲುಪಿ, ಆರೋಪಿಯನ್ನು ಬಂಧಿಸುವ ಮೂಲಕ ದೊಡ್ಡ ಅನಾಹುತ ತಪ್ಪಿದೆ.
Read Full Story

07:27 AM (IST) Jan 12

BBK 12 ಮನೆಯಿಂದ ಹೊರಬರುತ್ತಿದ್ದಂತೆ ಸುಂದರಿ Rashika Shetty ಫಸ್ಟ್‌ ರಿಯಾಕ್ಷನ್‌ ಏನು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಿಂದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್‌ ಆಗಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು. ದೊಡ್ಮನೆಗೆ ಬಂದಿದ್ದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್‌ ಆಗಿದ್ದು, ಅವರ ಪ್ರತಿಕ್ರಿಯೆ ಏನು?

 

Read Full Story

07:10 AM (IST) Jan 12

Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!

Bigg Boss Kannada Season 12 Mallamma: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಈ ಸೀಸನ್‌ನಲ್ಲಿ ಎಲಿಮಿನೇಟ್‌ ಆದ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಿದ್ದಾರೆ. ಮಲ್ಲಮ್ಮ ಕೂಡ ಬಂದಿದ್ದಾರೆ. ಪ್ರೋಮೋ ರಿಲೀಸ್‌ ಆಗಿದೆ.

 

Read Full Story

07:07 AM (IST) Jan 12

ವೆನಿಜುವೆಲಾ ಆಯ್ತ ಈಗ ಪರ್ಷಿಯಾ ಮೇಲೆ ಕಣ್ಣು - ಡೊನಾಲ್ಡ್ ಟ್ರಂಪ್ ರಹಸ್ಯ ಯೋಜನೆ

ಇರಾನ್‌ನಲ್ಲಿನ ಆಂತರಿಕ ದಂಗೆಯನ್ನು ಮುಂದಿಟ್ಟುಕೊಂಡು ಅಮೆರಿಕವು ದಾಳಿಯ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದ್ದು, ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

Read Full Story

06:58 AM (IST) Jan 12

ಬ್ಯಾನರ್ ಗಲಾಟೆ - ಶ್ರೀರಾಮುಲು ಹತ್ಯೆ ಸಂಚು? ಶಾಸಕ ಜನಾರ್ಧನ ರೆಡ್ಡಿ ಬಿಚ್ಚಿಟ್ಟ ಆಡಿಯೋ ರಹಸ್ಯ!

ಬ್ಯಾನರ್ ಗಲಾಟೆ ವೇಳೆ ಮಾಜಿ ಸಚಿವ ಶ್ರೀರಾಮುಲು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅವರು, ಸ

Read Full Story

06:22 AM (IST) Jan 12

Bengaluru - ಲೈಂ*ಗಿಕತೆಗೆ ಸಹಕರಿಸದ 34 ವರ್ಷದ ಮಹಿಳಾ ಟೆಕ್ಕಿಯನ್ನು ಕೊಂದ ನೆರೆಮನೆಯ 18ರ ಯುವಕ

ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣವು ಕೊಲೆಯೆಂದು ತನಿಖೆಯಿಂದ ದೃಢಪಟ್ಟಿದೆ. ಲೈಂ*ಗಿಕ ದೌರ್ಜನ್ಯಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ ಪಿಯುಸಿ ವಿದ್ಯಾರ್ಥಿ, ಆಕೆಯನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ.

Read Full Story

06:14 AM (IST) Jan 12

ದಿನಕ್ಕೆರಡು ಬಾರಿ ಚಿಕನ್‌ ರೈಸ್‌ - ಬೆಂಗಳೂರು ಬೀದಿನಾಯಿಗಳ ಶೆಲ್ಟರ್‌ಗಾಗಿ ವಾರ್ಷಿಕ ₹18 ಕೋಟಿ ವೆಚ್ಚ!

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿನ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಈ ನಾಯಿಗಳಿಗೆ ದಿನಕ್ಕೆರಡು ಬಾರಿ ಚಿಕನ್‌ ರೈಸ್‌ ಸೇರಿದಂತೆ ಅವುಗಳ ನಿರ್ವಹಣೆಗೆ ವಾರ್ಷಿಕ 16-18 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
Read Full Story

More Trending News