ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ದಿನ ಬೆಳಗಾದರೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಸನದ ಅರಿಸಿಕೇರಿ ಮಠದ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ಯುಗಾದಿವರೆಗೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಲುಮತದ ಜನರ ಕೈಗೆ ಅಧಿಕಾರ ಸಿಕ್ಕರೆ ಅವರಿಂದ ಅಧಿಕಾರ ಪಡೆಯುವುದು ಕಷ್ಟ. ಸದ್ಯ ರಾಜರ ಭಂಡಾರ (ಬಜೆಟ್) ಆಗಬೇಕು. ಹಾಲುಮತದ ಹಕ್ಕ-ಬುಕ್ಕರು ಹಾಲುಮತ ಸಮಾಜದ ಪ್ರಮುಖರಿದ್ದರು, ವಿಜಯನಗರ ಸಾಮ್ರಾಜ್ಯ ಕಟ್ಟಿದ್ದರು. ಛತ್ರಪತಿ ಶಿವಾಜಿ ಕೂಡ ಹಾಲಮತದವರು, ಕಾಶಿ ವಿಶ್ವನಾಥದ ರಾಣಿ ಅಹಿಲ್ಯಾ ಬಾಯಿ ಅದೇ ಸಮಾಜದವರಾಗಿದ್ದರು. ಹೀಗಾಗಿ ಈ ಸಮಾಜ ಪ್ರಾಚೀನ ಮತ್ತು ದೈವೀಕ ಶಕ್ತಿಯುಳ್ಳ ಸಮಾಜವಾಗಿದೆ. ಸಿದ್ದರಾಮಯ್ಯ ಕೂಡ ಹಾಲುಮತ ಸಮಾಜದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಸಾಧ್ಯವಿದೆ ಎಂದು ಭವಿಷ್ಯ ನುಡಿದಿದ್ದಾರೆ.

11:07 PM (IST) Jan 12
ತುಮಕೂರಿನ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
10:29 PM (IST) Jan 12
09:22 PM (IST) Jan 12
09:01 PM (IST) Jan 12
ತಿಂಥಿಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀಗಳು, ಸಿಎಂ ಸಿದ್ದರಾಮಯ್ಯರ ಯಶಸ್ಸಿಗೆ ದೈವಕೃಪೆಯೇ ಕಾರಣ ಎಂದಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ವನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಬಜೆಟ್ ಮುಗಿಯುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭವಿಷ್ಯ
08:15 PM (IST) Jan 12
ಧಾರವಾಡದ ಕಮಲಾಪುರ ಶಾಲೆಯಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಪತ್ತೆಯಾಗಿದ್ದಾರೆ. ಅಪಹರಣಕಾರನು ಬೈಕ್ ಅಪಘಾತಕ್ಕೀಡಾದ ನಂತರ, ಸ್ಥಳಕ್ಕೆ ಬಂದ ಪೊಲೀಸರು ಮಕ್ಕಳನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
08:02 PM (IST) Jan 12
ಕನ್ನಡ ನಾಡಿನ ಸುಗ್ಗಿಯ ಸಂಭ್ರಮ ಕೊಡುವ ಮಕರ ಸಂಕ್ರಾಂತಿ ಹಬ್ಬ ಜ.14ಕ್ಕೋ ಅಥವಾ 15ಕ್ಕೋ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ. ಹಬ್ಬದ ನಿಖರ ದಿನಾಂಕ, ಸರ್ಕಾರಿ ರಜೆ, ಮತ್ತು ಆಚರಣೆಯ ಸಂಪೂರ್ಣ ಮಾಹಿತಿ ತಿಳಿಯಿರಿ.
07:44 PM (IST) Jan 12
07:12 PM (IST) Jan 12
ಬಿಗ್ಬಾಸ್ ಸೀಸನ್ 12ರ ಮೂಲಕ ಖ್ಯಾತಿ ಪಡೆದ ನಟಿ ಸ್ಪಂದನಾ ಸೋಮಣ್ಣ, ತಮ್ಮ ನಟನಾ ವೃತ್ತಿಜೀವನದ ಜೊತೆಗೆ ಇತ್ತೀಚೆಗೆ ಮಾಡಿಸಿದ ಹಾಟ್ ಫೋಟೋಶೂಟ್ನಿಂದ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಫೋಟೋಗಳು.
07:09 PM (IST) Jan 12
07:02 PM (IST) Jan 12
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ವಿದೇಶದಲ್ಲಿ ಚಿತ್ರೀಕರಿಸಿದ್ದಲ್ಲ, ಬದಲಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಯೂಟ್ಯೂಬರ್ ಅಲೆಮಾರಿ ಅಮಿತ್ ಈ ಶೂಟಿಂಗ್ ಸ್ಪಾಟ್ನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಟೀಸರ್ 84 ಮಿಲಿಯನ್ ವೀಕ್ಷಣೆ ಪಡೆದಿದೆ.
06:54 PM (IST) Jan 12
ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿ 10ನೇ ಶತಮಾನಕ್ಕೆ ಸೇರಿದ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆಯಾಗಿವೆ. ರಾಷ್ಟ್ರಕೂಟರ ಕಾಲದ ಈ ಶಾಸನಗಳು, ಕುಪ್ಪಗಡ್ಡೆಯ ಮಹಾಜನಗಳಿಗೆ ಗೋದಾನ ನೀಡಿದ ವಿವರಗಳನ್ನು ಮತ್ತು ಕೃಷಿ ಮಹತ್ವ ಸಾರುವ ಚಿನ್ಹೆಗಳನ್ನು ಒಳಗೊಂಡಿವೆ.
06:33 PM (IST) Jan 12
ಬಿಗ್ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಯಿಂದ ಹೊರಹೋಗುವ ಬಗ್ಗೆ ಸುದೀಪ್ ಪ್ರಶ್ನೆಗೆ ಗಿಲ್ಲಿ ನಟ ಭಾವುಕ ಉತ್ತರ ನೀಡಿದ್ದಾರೆ. ತಾನು ಎವಿಕ್ಟ್ ಆಗಬಹುದು ಆದರೆ ಜನರ ಮನಸ್ಸಿನಿಂದ ಡಿಲೀಟ್ ಆಗುವುದಿಲ್ಲ ಎಂದ ಅವರ ಮಾತು ವೈರಲ್ ಆಗಿದೆ.
06:32 PM (IST) Jan 12
06:30 PM (IST) Jan 12
06:10 PM (IST) Jan 12
ಚಾಮರಾಜನಗರ ರೈಲ್ವೇ ಯೋಜನೆಗೆ ಶತಮಾನ ತುಂಬಿದರೂ, ನಂಜನಗೂಡು-ಚಾಮರಾಜನಗರ ನಡುವೆ ಕೌಲಂದೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಇದರ ಜೊತೆಗೆ, ಮೆಟ್ಟುಪಾಳ್ಯಂ ಮತ್ತು ಹೆಜ್ಜಾಲ-ಚಾಮರಾಜನಗರದಂತಹ ದಶಕಗಳ ಬೇಡಿಕೆಯ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ.
05:55 PM (IST) Jan 12
05:41 PM (IST) Jan 12
ಬಿಗ್ ಬಾಸ್ ಸೀಸನ್ 12ರ ಫೈನಲಿಸ್ಟ್ ಸ್ಪರ್ಧಿಗಳಲ್ಲಿ ಒಬ್ಬರಾದ ಧ್ರುವಂತ್, ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಅನೇಕರು ಪರಿಗಣಿಸುತ್ತಿದ್ದಾರೆ. ಅವರ ಉತ್ತಮ ಗುಣಗಳು, ಸೀಕ್ರೆಟ್ ರೂಮ್ ನಂತರ ಬದಲಾದ ಆಟ ಮತ್ತು ಕಿಚ್ಚ ಸುದೀಪ್ ಅವರಿಂದ 'ಕಿಚ್ಚನ ಚಪ್ಪಾಳೆ' ಪಡೆದಿದ್ದು ಅವರ ಗೆಲುವಿನ ಸಾಧ್ಯತೆ ಹೆಚ್ಚಿಸಿದೆ.
05:40 PM (IST) Jan 12
ದಕ್ಷಿಣ ಭಾರತದ ಈ ನಟಿ ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಈ ಲೇಖನವು ಅವರ ₹200 ಕೋಟಿ ನಿವ್ವಳ ಮೌಲ್ಯ, ರಿಯಲ್ ಎಸ್ಟೇಟ್ ಹೂಡಿಕೆಗಳು, ಖಾಸಗಿ ಜೆಟ್, ಮತ್ತು ಅವರ ಮನೆಗಳ ವಿಶಿಷ್ಟ ಒಳಾಂಗಣ ವಿನ್ಯಾಸದ ಬಗ್ಗೆ ವಿವರಿಸುತ್ತದೆ.
05:30 PM (IST) Jan 12
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾ ಶೈವ ಮೇಲೆ ಮನಸೋತಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ಕೂಡ ಗಿಲ್ಲಿ ಬಗ್ಗೆ ಆಸಕ್ತಿ ತೋರಿದ್ದು, ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಸೃಷ್ಟಿಯಾಗಿದೆ. ಈ ನಡುವೆ, ಗಿಲ್ಲಿಯ ಆಪ್ತ ಸ್ನೇಹಿತ ದೀಪಕ್ ಗೌಡ, ಗಿಲ್ಲಿ ನಟನ ಮದುವೆ ಬಗ್ಗೆ ಹೇಳಿದ್ದೇನು?
05:17 PM (IST) Jan 12
ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ಬ್ಯಾಂಕ್ನ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿದ ದುಷ್ಕರ್ಮಿಗಳು, ಹಣ ಹಾಗೂ ಚಿನ್ನಾಭರಣವಿದ್ದ ಸ್ಟ್ರಾಂಗ್ ರೂಮ್ ಒಡೆಯಲು ಸಾಧ್ಯವಾಗದೆ ಬರಿಗೈಯಲ್ಲಿ ಪರಾರಿಯಾಗಿದ್ದಾರೆ.
04:47 PM (IST) Jan 12
04:32 PM (IST) Jan 12
ಕಲಬುರಗಿಯ ಯಡ್ರಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮದೇ ಸರ್ಕಾರದ ಸಚಿವರಾದ ಮಧು ಬಂಗಾರಪ್ಪ ಮತ್ತು ಡಿಕೆ ಶಿವಕುಮಾರ್ ಅವರಿಗೆ ಶಿಕ್ಷಣ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತು ತರಾಟೆಗೆ ತೆಗೆದುಕೊಂಡರು.
04:21 PM (IST) Jan 12
ಬಿಗ್ಬಾಸ್ ಸೀಸನ್ 12 ರಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತ್ರಿಕೋನ ಪ್ರೇಮಕಥೆ ಶುರುವಾಗಿದೆ ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟನ ಹಾಸ್ಯ ಪ್ರವೃತ್ತಿಗೆ ರಕ್ಷಿತಾ ಮನಸೋತಿದ್ದು, ಇದರ ಬಗ್ಗೆ ನಟ ಗೌರವ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
03:52 PM (IST) Jan 12
ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದೆ. ನಿಧಿ ಸಿಕ್ಕ ಜಾಗವನ್ನು 'ಅಪಶಕುನ' ಎಂದು ಪರಿಗಣಿಸಿರುವ ರಿತ್ತಿ ಕುಟುಂಬ, ಆ ಜಾಗ ತಮಗೆ ಬೇಡವೆಂದು ಹೇಳಿದೆ. ಬದಲಾಗಿ, ಅಲ್ಲಿ ದೇವಸ್ಥಾನ ನಿರ್ಮಿಸಿ, ತಮಗೆ ಬೇರೆಡೆ ವಾಸಿಸಲು ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
03:47 PM (IST) Jan 12
ದರ ನಿಗದಿ ಸಮಿತಿಯ ಶಿಫಾರಸಿನಂತೆ, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಫೆಬ್ರವರಿ 2026 ರಿಂದ ಟಿಕೆಟ್ ದರ ಶೇ. 5 ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ವಾರ್ಷಿಕ ದರ ಏರಿಕೆಯು ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಎನಿಸಿಕೊಂಡಿರುವ 'ನಮ್ಮ ಮೆಟ್ರೋ' ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಹೇರಲಿದೆ.
03:22 PM (IST) Jan 12
03:07 PM (IST) Jan 12
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಕಾನೂನಿನ ಪ್ರಕಾರ, ನಿಧಿ ಎಂದುಯ ಪರಿಗಣಿಸಬೇಕಾದರೆ ಎಷ್ಟು ಮೌಲ್ಯದ್ದಾಗಿರಬೇಕು, ಎಷ್ಟು ವರ್ಷ ಹಳೆಯದಾಗಿರಬೇಕು ಹಾಗೂ ಎಷ್ಟು ಪಾಲು ನಿಧಿ ಸಿಕ್ಕಿದವರಿಗೆ ಹಣ ಸಿಗುತ್ತದೆ ಎಂಬ ಪುರಾತತ್ವ ಇಲಾಖೆ ಮಾಹಿತಿ ಇಲ್ಲಿದೆ ನೋಡಿ.
03:01 PM (IST) Jan 12
Actor Naga Chaitanya News: ಅನ್ನಪೂರ್ಣ ಸ್ಟುಡಿಯೋ ಉದ್ಯೋಗಿಗಳಿಗೆ ನಟ ನಾಗ ಚೈತನ್ಯ ಮತ್ತು ಶೋಭಿತಾ ಸ್ವತಃ ಊಟ ಬಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲ ಸಮಯ ಅವರೊಂದಿಗೆ ಖುಷಿಯಿಂದ ಕಾಲ ಕಳೆದರು. ಅವರ ಕುಟುಂಬಗಳೊಂದಿಗೆ ಸಂಭ್ರಮಿಸಿದರು. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
02:51 PM (IST) Jan 12
02:50 PM (IST) Jan 12
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಿಡ್ ವೀಕ್ ಎಲಿಮಿನೇಶನ್ ಸದ್ದು ಜೋರಾಗಿದೆ. ಈಗಾಗಲೇ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಹಾಗಾದರೆ ಮಿಡ್ ವೀಕ್ ಎಲಿಮಿನೇಶನ್ ಆಗೋರು ಯಾರು?
02:21 PM (IST) Jan 12
Bigg Boss Kiccha Sudeep News: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಕಿಚ್ಚ ಸುದೀಪ್ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ದಾಖಲು ಮಾಡಿದೆ. ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ರಣಹದ್ದು ಪದಬಳಕೆ ಮಾಡಿದ್ದು, ಆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಇದೆ.
02:04 PM (IST) Jan 12
ಹಾವೇರಿ ಜಿಲ್ಲೆಯ ಮಲ್ಲೂರು ಗ್ರಾಮದಲ್ಲಿ, ಜಾಗದ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ಬೀಗ ಹಾಕಲಾಯಿತು. ದಾನ ನೀಡಿದ ಜಾಗಕ್ಕಿಂತ ಹೆಚ್ಚು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಈ ಕೃತ್ಯ ಎಸಗಿದ್ದು, ಇದರಿಂದ ಮಕ್ಕಳು ಶಾಲೆಯ ಹೊರಗೆ ಉಳಿಯುವಂತಾಯಿತು.
01:46 PM (IST) Jan 12
01:44 PM (IST) Jan 12
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ ಮತ್ತು ಕೆಮ್ಮಿಗೆ ಮನೆಯಲ್ಲೇ ಸುಲಭವಾಗಿ ಮೆಣಸಿನ ಸಾರು ತಯಾರಿಸಬಹುದು. ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುವ ಈ ಸಾರು, ಆರೋಗ್ಯಕ್ಕೂ ಉತ್ತಮ. ಶೀತದಿಂದ ತ್ವರಿತ ಉಪಶಮನ. ಈ ಲೇಖನದಲ್ಲಿ ಮೆಣಸಿನ ಸಾರು ಮಾಡುವ ಸರಳ ವಿಧಾನವನ್ನು ವಿವರಿಸಲಾಗಿದೆ.
01:40 PM (IST) Jan 12
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ, ಗಿಲ್ಲಿ ನಟ ಅವರು ಟ್ರೋಫಿ ಪಡೆಯಲಿ ಎಂದು ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
01:36 PM (IST) Jan 12
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ, ಶಾಲೆಗೆ ಸರಿಯಾಗಿ ಹೋಗುವಂತೆ ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಗೆಳೆಯನನ್ನು ಮುಂದೆ ಕಳುಹಿಸಿ ಈ ಕೃತ್ಯ ಎಸಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
01:28 PM (IST) Jan 12
Gilli Nata Tattoo: ಗಿಲ್ಲಿ ಟ್ಯಾಟೂ ಈಗ ಫೇಮಸ್ ಆಗ್ತಿದೆ. ಅನೇಕ ಗಿಲ್ಲಿ ಅಭಿಮಾನಿಗಳ ಕೈನಲ್ಲಿ ಗಿಲ್ಲಿ ಟ್ಯಾಟೂ ರಾರಾಜಿಸ್ತಿದೆ. ಮಗನ ಪ್ರಸಿದ್ಧಿ ನೋಡಿ ಅಪ್ಪ – ಅಮ್ಮನ ಕಣ್ಣಲ್ಲಿ ನೀರು ತುಂಬಿದೆ.
01:18 PM (IST) Jan 12
Gandhari Menasu or Birds Eye Chilli: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಅಡುಗೆಗೆ ಹಸಿಮೆಣಸು ಬಳಸುತ್ತಾರೆ. ಆದರೆ ಗಾಂಧಾರಿ ಮೆಣಸು ಸೂಜಿ ಮೆಣಸು ತುಂಬ ರುಚಿಕರವಾಗಿರುತ್ತದೆ ಅಷ್ಟೇ ಅಲ್ಲದೆ ಸುಲಭವಾಗಿ ನಮ್ಮ ಮನೆಯಲ್ಲಿ ಬೆಳೆದುಕೊಳ್ಳಬಹುದು.
01:07 PM (IST) Jan 12
ಸುಪ್ರೀಂ ಕೋರ್ಟ್, 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗೆ ಕೋರ್ಟ್ ಆದೇಶ ಚಾಲನೆ ನೀಡಿದೆ.
01:03 PM (IST) Jan 12
ಫುಡ್ ಡೆಸ್ಕ್: ಇಂದು ನಾವು ಅಕ್ಕಿ ಇಲ್ಲದೆ ಮಾಡುವ 5 ದೋಸೆ ರೆಸಿಪಿಗಳ (no rice dosa) ಬಗ್ಗೆ ಹೇಳ್ತೀವಿ. ಇವು ಆರೋಗ್ಯಕರ ಹಾಗೂ ರುಚಿಕರ. ಅಷ್ಟೇ ಅಲ್ಲ, ಇದನ್ನು ಮಾಡಲು ನೆನೆಸುವ, ರುಬ್ಬುವ ಮತ್ತು ಹುದುಗಿಸುವ ಚಿಂತೆಯೂ ಇರೋದಿಲ್ಲ.