LIVE NOW
Published : Jan 12, 2026, 05:57 AM ISTUpdated : Jan 12, 2026, 11:07 PM IST

Karnataka News Live: ಗಾಂಧಿ ಹೆಸರು ತೆಗೆದು ಪರಮೇಶ್ವರ್ ಹೆಸರು - ನರೇಗಾಕ್ಕೆ ಒಂದು ನ್ಯಾಯ, ಸ್ಟೇಡಿಯಂಗೆ ಒಂದು ನ್ಯಾಯವೇ?

ಸಾರಾಂಶ

ಬೀದರ್‌: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ದಿನ ಬೆಳಗಾದರೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಸನದ ಅರಿಸಿಕೇರಿ ಮಠದ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ಯುಗಾದಿವರೆಗೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಲುಮತದ ಜನರ ಕೈಗೆ ಅಧಿಕಾರ ಸಿಕ್ಕರೆ ಅವರಿಂದ ಅಧಿಕಾರ ಪಡೆಯುವುದು ಕಷ್ಟ. ಸದ್ಯ ರಾಜರ ಭಂಡಾರ (ಬಜೆಟ್) ಆಗಬೇಕು. ಹಾಲುಮತದ ಹಕ್ಕ-ಬುಕ್ಕರು ಹಾಲುಮತ ಸಮಾಜದ ಪ್ರಮುಖರಿದ್ದರು, ವಿಜಯನಗರ ಸಾಮ್ರಾಜ್ಯ ಕಟ್ಟಿದ್ದರು. ಛತ್ರಪತಿ ಶಿವಾಜಿ ಕೂಡ ಹಾಲಮತದವರು, ಕಾಶಿ ವಿಶ್ವನಾಥದ ರಾಣಿ ಅಹಿಲ್ಯಾ ಬಾಯಿ ಅದೇ ಸಮಾಜದವರಾಗಿದ್ದರು. ಹೀಗಾಗಿ ಈ ಸಮಾಜ ಪ್ರಾಚೀನ ಮತ್ತು ದೈವೀಕ ಶಕ್ತಿಯುಳ್ಳ ಸಮಾಜವಾಗಿದೆ. ಸಿದ್ದರಾಮಯ್ಯ ಕೂಡ ಹಾಲುಮತ ಸಮಾಜದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಸಾಧ್ಯವಿದೆ ಎಂದು ಭವಿಷ್ಯ ನುಡಿದಿದ್ದಾರೆ.

Tumakuru Stadium Renaming BJP Protests Over Replacing Gandhi with G Parameshwara

11:07 PM (IST) Jan 12

ಗಾಂಧಿ ಹೆಸರು ತೆಗೆದು ಪರಮೇಶ್ವರ್ ಹೆಸರು - ನರೇಗಾಕ್ಕೆ ಒಂದು ನ್ಯಾಯ, ಸ್ಟೇಡಿಯಂಗೆ ಒಂದು ನ್ಯಾಯವೇ?

ತುಮಕೂರಿನ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

Read Full Story

10:29 PM (IST) Jan 12

ಧಾರವಾಡ ಕಿಡ್ನ್ಯಾಪ್ ಕೇಸ್ - ಜೋಯಿಡಾದಲ್ಲಿ ಮಕ್ಕಳ ರಕ್ಷಣೆ, ಅಪಹರಣಕಾರ ಮಹ್ಮದ್ ಕರೀಂ ಬಂಧನ!

ಧಾರವಾಡದ ಕಮಲಾಪುರ ಶಾಲೆಯ ಇಬ್ಬರು ಮಕ್ಕಳನ್ನು ಅಪಹರಿಸಿದ್ದ ಪ್ರಕರಣವು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಸುಖಾಂತ್ಯ ಕಂಡಿದೆ. ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿ ಅಪಘಾತಕ್ಕೀಡಾದಾಗ, ಜೋಯಿಡಾ ಪೊಲೀಸರ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.
Read Full Story

09:22 PM (IST) Jan 12

ಪುನೀತ್ ಕೆರೆಹಳ್ಳಿ ತಂಡದಿಂದ ಅಕ್ರಮ ವಲಸಿಗರ ಬೇಟೆ - ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘಟನೆಗಳು ಮಾಡಬೇಕೇ?

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿದ್ದಾರೆ. ಕಳೆದ ಐದು ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಈ ವಲಸಿಗರನ್ನು ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ.
Read Full Story

09:01 PM (IST) Jan 12

ಸಿದ್ದರಾಮಯ್ಯ ಮೇಲೆ ದೈವಕೃಪೆ - ಹಾಲುಮತದ ಬಗ್ಗೆ ಮಾತನಾಡಿದರೆ ಸರ್ವನಾಶ; ರಾಜಕಾರಣಿಗೆ ಕೋಡಿಶ್ರೀ ವಾರ್ನ್!

ತಿಂಥಿಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀಗಳು, ಸಿಎಂ ಸಿದ್ದರಾಮಯ್ಯರ ಯಶಸ್ಸಿಗೆ ದೈವಕೃಪೆಯೇ ಕಾರಣ ಎಂದಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ವನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಬಜೆಟ್ ಮುಗಿಯುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭವಿಷ್ಯ 

Read Full Story

08:15 PM (IST) Jan 12

ಧಾರವಾಡ ಕಿಡ್ನ್ಯಾಪ್ ಕೇಸ್ ಸುಖಾಂತ್ಯ - ಜೋಯಿಡಾದಲ್ಲಿ ಪತ್ತೆಯಾದ್ರು ಶಾಲಾ ಮಕ್ಕಳು! ಅಪಹರಣಕಾರ ಸಿಕ್ಕಿಬಿದ್ದಿದ್ದೇ ರೋಚಕ!

ಧಾರವಾಡದ ಕಮಲಾಪುರ ಶಾಲೆಯಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಪತ್ತೆಯಾಗಿದ್ದಾರೆ. ಅಪಹರಣಕಾರನು ಬೈಕ್ ಅಪಘಾತಕ್ಕೀಡಾದ ನಂತರ, ಸ್ಥಳಕ್ಕೆ ಬಂದ ಪೊಲೀಸರು ಮಕ್ಕಳನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

Read Full Story

08:02 PM (IST) Jan 12

ಸುಗ್ಗಿಯ ಹಬ್ಬ ಸಂಕ್ರಾಂತಿ ಜ.14ಕ್ಕೋ ಅಥವಾ 15ಕ್ಕೋ? ಸರ್ಕಾರಿ ರಜೆ ಇರೋದು ಯಾವಾಗ? ಒಮ್ಮೆ ನೋಡಿ!

ಕನ್ನಡ ನಾಡಿನ ಸುಗ್ಗಿಯ ಸಂಭ್ರಮ ಕೊಡುವ ಮಕರ ಸಂಕ್ರಾಂತಿ ಹಬ್ಬ ಜ.14ಕ್ಕೋ ಅಥವಾ 15ಕ್ಕೋ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ. ಹಬ್ಬದ ನಿಖರ ದಿನಾಂಕ, ಸರ್ಕಾರಿ ರಜೆ, ಮತ್ತು ಆಚರಣೆಯ ಸಂಪೂರ್ಣ ಮಾಹಿತಿ ತಿಳಿಯಿರಿ.

Read Full Story

07:44 PM (IST) Jan 12

ಲಕ್ಕುಂಡಿ ನಿಧಿ ಪ್ರಕರಣ - ‘ಅದು ಚಿನ್ನ ಅಲ್ಲ’ ಎಂದಿದ್ದ ಅಧಿಕಾರಿ ಈಗ ಯು-ಟರ್ನ್!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾದ ಪುರಾತನ ನಿಧಿಯ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಗೊಂದಲದ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ನಿಧಿಯಲ್ಲ ಎಂದಿದ್ದ ಅವರು, ನಂತರ ಒತ್ತಡದಿಂದಾಗಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದು, ಈ ನಿಧಿ ಸರ್ಕಾರಕ್ಕೆ ಸೇರಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

07:12 PM (IST) Jan 12

ಹಾಟ್​ ಅವತಾರದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದ Bigg Boss ಸ್ಪಂದನಾ ಸೋಮಣ್ಣ - ವಿಡಿಯೋ ವೈರಲ್​

ಬಿಗ್​ಬಾಸ್​ ಸೀಸನ್​ 12ರ ಮೂಲಕ ಖ್ಯಾತಿ ಪಡೆದ ನಟಿ ಸ್ಪಂದನಾ ಸೋಮಣ್ಣ, ತಮ್ಮ ನಟನಾ ವೃತ್ತಿಜೀವನದ ಜೊತೆಗೆ ಇತ್ತೀಚೆಗೆ ಮಾಡಿಸಿದ ಹಾಟ್ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ  ಫೋಟೋಗಳು.

Read Full Story

07:09 PM (IST) Jan 12

ಧಾರವಾಡದಲ್ಲಿ ಆತಂಕ - ಶಾಲೆಯಿಂದ ಇಬ್ಬರು 3ನೇ ತರಗತಿ ಮಕ್ಕಳ ಕಿಡ್ನ್ಯಾಪ್, ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ಧಾರವಾಡದ ಕಮಲಾಪುರ ಸರ್ಕಾರಿ ಶಾಲೆಯಿಂದ ಇಬ್ಬರು 8 ವರ್ಷದ ಮಕ್ಕಳನ್ನು ಅಪಹರಿಸಲಾಗಿದೆ. ಮಧ್ಯಾಹ್ನದ ಊಟದ ನಂತರ ಅನಾಮಿಕ ವ್ಯಕ್ತಿಯೊಬ್ಬ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
Read Full Story

07:02 PM (IST) Jan 12

ಬೆಂಗಳೂರಲ್ಲೇ ಇದೆ ಟಾಕ್ಸಿಕ್ ಟೀಸರ್‌ನ ವಿದೇಶಿ ಜಗತ್ತು; ಕಾರು ಗುದ್ದಿದ ಶೂಟಿಂಗ್ ಸ್ಪಾಟ್ ರಿವೀಲ್ ಮಾಡಿದ ಅಲೆಮಾರಿ!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ವಿದೇಶದಲ್ಲಿ ಚಿತ್ರೀಕರಿಸಿದ್ದಲ್ಲ, ಬದಲಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಯೂಟ್ಯೂಬರ್ ಅಲೆಮಾರಿ ಅಮಿತ್ ಈ ಶೂಟಿಂಗ್ ಸ್ಪಾಟ್‌ನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಟೀಸರ್ 84 ಮಿಲಿಯನ್‌ ವೀಕ್ಷಣೆ ಪಡೆದಿದೆ.

Read Full Story

06:54 PM (IST) Jan 12

Shivamogga ಸೊರಬದ ಹಾಯ ಗ್ರಾಮ 10ನೇ ಶತಮಾನದ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆ!

ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿ 10ನೇ ಶತಮಾನಕ್ಕೆ ಸೇರಿದ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆಯಾಗಿವೆ. ರಾಷ್ಟ್ರಕೂಟರ ಕಾಲದ ಈ ಶಾಸನಗಳು, ಕುಪ್ಪಗಡ್ಡೆಯ ಮಹಾಜನಗಳಿಗೆ ಗೋದಾನ ನೀಡಿದ ವಿವರಗಳನ್ನು ಮತ್ತು ಕೃಷಿ ಮಹತ್ವ ಸಾರುವ ಚಿನ್ಹೆಗಳನ್ನು ಒಳಗೊಂಡಿವೆ.  

Read Full Story

06:33 PM (IST) Jan 12

BBK ಗಿಲ್ಲಿ ನಟ ಭಾವುಕ - ಸೋತಿರ್ಬೋದು ಆದ್ರೆ ಸತ್ತಿಲ್ಲ, ಎವಿಕ್ಟ್​ ಆದೆ ಆದ್ರೆ ಜನರ ಮನಸ್ಸಿಂದ ಡಿಲೀಟ್​ ಆಗ್ಲಿಲ್ಲ!

ಬಿಗ್​ಬಾಸ್​ ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಯಿಂದ ಹೊರಹೋಗುವ ಬಗ್ಗೆ ಸುದೀಪ್​ ಪ್ರಶ್ನೆಗೆ  ಗಿಲ್ಲಿ ನಟ ಭಾವುಕ ಉತ್ತರ ನೀಡಿದ್ದಾರೆ. ತಾನು ಎವಿಕ್ಟ್ ಆಗಬಹುದು ಆದರೆ ಜನರ ಮನಸ್ಸಿನಿಂದ ಡಿಲೀಟ್ ಆಗುವುದಿಲ್ಲ ಎಂದ ಅವರ ಮಾತು ವೈರಲ್ ಆಗಿದೆ. 

Read Full Story

06:32 PM (IST) Jan 12

ಟಾಕ್ಸಿಕ್ ಚಿತ್ರದ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು - ಯಶ್‌ಗೆ ಕಾನೂನು ಸಂಕಷ್ಟ, ಫ್ಯಾನ್ಸ್‌ಗೆ ಆತಂಕ ಮೂಡಿಸಿದ ಆಯೋಗದ ಪತ್ರ!

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್, ಮಹಿಳೆಯರ ಘನತೆಗೆ ಕುಂದು ತರುತ್ತಿದೆ ಎಂಬ ಆರೋಪದ ಮೇಲೆ ವಿವಾದಕ್ಕೆ ಸಿಲುಕಿದೆ. ಆಮ್ ಆದ್ಮಿ ಪಕ್ಷದ ದೂರಿನ ಅನ್ವಯ, ರಾಜ್ಯ ಮಹಿಳಾ ಆಯೋಗವು ಸೆನ್ಸಾರ್ ಮಂಡಳಿಯಿಂದ ವರದಿ ಕೇಳಿದ್ದು, ಚಿತ್ರತಂಡಕ್ಕೆ ಆರಂಭಿಕ ಹಂತದಲ್ಲೇ ಕಾನೂನು ಸಂಕಷ್ಟ ಎದುರಾಗಿದೆ.
Read Full Story

06:30 PM (IST) Jan 12

ತುಂಗಭದ್ರಾ ಡ್ಯಾಂನ ಎಲ್ಲ ಗೇಟ್ ಬದಲಾವಣೆ ಮೇನಲ್ಲಿ ಅಂತ್ಯ, 3 ರಾಜ್ಯಗಳಿಂದ 54 ಕೋಟಿ ವೆಚ್ಚ, ಕರ್ನಾಟಕದ ಪಾಲೆಷ್ಟು?

ಕೊಪ್ಪಳದ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಸಚಿವ ಶಿವರಾಜ ತಂಗಡಗಿ ಕಾಮಗಾರಿ ಪರಿಶೀಲಿಸಿದರು. ₹54 ಕೋಟಿ ವೆಚ್ಚದ ಈ ಯೋಜನೆಯಡಿ, ಎಲ್ಲಾ 33 ಗೇಟ್‌ಗಳನ್ನು ಮೇ ಅಂತ್ಯದೊಳಗೆ ಬದಲಾಯಿಸುವ ಗುರಿ ಹೊಂದಿದ್ದು, ಇದು ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
Read Full Story

06:10 PM (IST) Jan 12

ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡದ ರಾಜ್ಯಸರ್ಕಾರ, ಕೌಲಂದೆ ನಿಲ್ದಾಣದಲ್ಲಿ ಕ್ರಾಸಿಂಗ್‌ಗೆ ಒತ್ತಾಯ

ಚಾಮರಾಜನಗರ ರೈಲ್ವೇ ಯೋಜನೆಗೆ ಶತಮಾನ ತುಂಬಿದರೂ, ನಂಜನಗೂಡು-ಚಾಮರಾಜನಗರ ನಡುವೆ ಕೌಲಂದೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.  ಇದರ ಜೊತೆಗೆ, ಮೆಟ್ಟುಪಾಳ್ಯಂ ಮತ್ತು ಹೆಜ್ಜಾಲ-ಚಾಮರಾಜನಗರದಂತಹ ದಶಕಗಳ ಬೇಡಿಕೆಯ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ.

Read Full Story

05:55 PM (IST) Jan 12

ಚಿಕ್ಕೋಡಿ - 90 ವರ್ಷದ ವೃದ್ಧೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ರಸ್ತೆಗಿಳಿದ ಅನ್ನದಾತರು!

ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 90 ವರ್ಷದ ವೃದ್ಧೆ ಸೇರಿದಂತೆ ರೈತರ ಮೇಲೆ ದೌರ್ಜನ್ಯ ಎಸಗಿ, ಅವರ ಪೈಪ್‌ಲೈನ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ನೂರಾರು ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story

05:41 PM (IST) Jan 12

'ಬಿಗ್ ಬಾಸ್ ನನ್ನ ಮನೆಗೆ ಕಳಿಸಿ' ಎನ್ನುತ್ತಲೇ ಫೈನಲ್‌ಗೇರಿದ 'ಧ್ರುವಂತನ 10 ಸದ್ಗುಣ' ಬಿಚ್ಚಿಟ್ಟ ಮಹಿಳೆ!

ಬಿಗ್ ಬಾಸ್ ಸೀಸನ್ 12ರ ಫೈನಲಿಸ್ಟ್ ಸ್ಪರ್ಧಿಗಳಲ್ಲಿ ಒಬ್ಬರಾದ ಧ್ರುವಂತ್, ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಅನೇಕರು ಪರಿಗಣಿಸುತ್ತಿದ್ದಾರೆ. ಅವರ ಉತ್ತಮ ಗುಣಗಳು, ಸೀಕ್ರೆಟ್ ರೂಮ್ ನಂತರ ಬದಲಾದ ಆಟ ಮತ್ತು ಕಿಚ್ಚ ಸುದೀಪ್ ಅವರಿಂದ 'ಕಿಚ್ಚನ ಚಪ್ಪಾಳೆ' ಪಡೆದಿದ್ದು ಅವರ ಗೆಲುವಿನ ಸಾಧ್ಯತೆ ಹೆಚ್ಚಿಸಿದೆ.

Read Full Story

05:40 PM (IST) Jan 12

ಇದು ದಕ್ಷಿಣ ಭಾರತದ ನಟಿಯ ದುಬಾರಿ ನಿವಾಸ, ಇಂಟಿರಿಯರ್ ನೋಡಿದ್ರೆನೇ ಕಳೆದೋಗ್ತಿರಿ, ಗಂಡನಿಗಿಂತ ಈಕೆಯ ಆಗರ್ಭ ಶ್ರೀಮಂತೆ!

ದಕ್ಷಿಣ ಭಾರತದ ಈ ನಟಿ ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಈ ಲೇಖನವು ಅವರ ₹200 ಕೋಟಿ ನಿವ್ವಳ ಮೌಲ್ಯ, ರಿಯಲ್ ಎಸ್ಟೇಟ್ ಹೂಡಿಕೆಗಳು, ಖಾಸಗಿ ಜೆಟ್, ಮತ್ತು ಅವರ ಮನೆಗಳ ವಿಶಿಷ್ಟ ಒಳಾಂಗಣ ವಿನ್ಯಾಸದ ಬಗ್ಗೆ ವಿವರಿಸುತ್ತದೆ.  

Read Full Story

05:30 PM (IST) Jan 12

ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಇವಳೇ - ಆಪ್ತ ಸ್ನೇಹಿತ ರಿವೀಲ್​! Bigg Bossನಿಂದ ಬಂದ ಮೇಲೆ ಗುಡ್​ನ್ಯೂಸ್​

ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾ ಶೈವ ಮೇಲೆ ಮನಸೋತಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ಕೂಡ ಗಿಲ್ಲಿ ಬಗ್ಗೆ ಆಸಕ್ತಿ ತೋರಿದ್ದು, ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಸೃಷ್ಟಿಯಾಗಿದೆ. ಈ ನಡುವೆ, ಗಿಲ್ಲಿಯ ಆಪ್ತ ಸ್ನೇಹಿತ ದೀಪಕ್ ಗೌಡ, ಗಿಲ್ಲಿ ನಟನ ಮದುವೆ ಬಗ್ಗೆ ಹೇಳಿದ್ದೇನು?

Read Full Story

05:17 PM (IST) Jan 12

ಅಂಕೋಲಾದ ಸುಂಕಸಾಳದಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ದರೋಡೆಗೆ ವಿಫಲ ಯತ್ನ - ಸ್ಟ್ರಾಂಗ್ ರೂಮ್ ಒಡೆಯಲಾಗದೆ ಕಳ್ಳರು ಪರಾರಿ

ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ಬ್ಯಾಂಕ್‌ನ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿದ ದುಷ್ಕರ್ಮಿಗಳು, ಹಣ ಹಾಗೂ ಚಿನ್ನಾಭರಣವಿದ್ದ ಸ್ಟ್ರಾಂಗ್ ರೂಮ್ ಒಡೆಯಲು ಸಾಧ್ಯವಾಗದೆ ಬರಿಗೈಯಲ್ಲಿ ಪರಾರಿಯಾಗಿದ್ದಾರೆ. 

Read Full Story

04:47 PM (IST) Jan 12

Karna Serial - ಈ ಜೋಡಿಯ ಮದುವೆ ​, ಆ ಜೋಡಿಯ ಎಂಗೇಜ್​ಮೆಂಟ್​ - ನಡುವೆ ವಿಧಿಯಾಟವೇನು?

ಕರ್ಣ ಧಾರಾವಾಹಿಯಲ್ಲಿ ಕಥೆ ರೋಚಕ ಘಟ್ಟ ತಲುಪಿದೆ. ಒಂದೆಡೆ ನಿತ್ಯಾ-ತೇಜಸ್ ಮದುವೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಪಘಾತದಿಂದ ಪಾರಾದ ನಿಧಿಗೆ ಕರ್ಣ ಪ್ರಪೋಸ್ ಮಾಡುತ್ತಿದ್ದಾನೆ. ನಿತ್ಯಾಳ ಮದುವೆ ಸಂಪೂರ್ಣವಾಗುವುದೇ ಅಥವಾ ಕರ್ಣನ ಪ್ರೀತಿ ಗೆಲ್ಲುವುದೇ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

04:32 PM (IST) Jan 12

ಗಿಡದ ಕೆಳಗಾದರೂ ಓದಿಸಿ, ಮೊದಲು ಶಿಕ್ಷಕರನ್ನು ಕೊಡಿ - ಮಧು ಬಂಗಾರಪ್ಪಗೆ ಖರ್ಗೆ ನೇರ ವಾಗ್ದಾಳಿ! 'ನೀವು ಇಲ್ಲಿ ಹುಟ್ಟೋದು ಬೇಡ..' ಡಿಕೆಶಿಗೂ ಟಾಂಗ್!

ಕಲಬುರಗಿಯ ಯಡ್ರಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮದೇ ಸರ್ಕಾರದ ಸಚಿವರಾದ ಮಧು ಬಂಗಾರಪ್ಪ ಮತ್ತು ಡಿಕೆ ಶಿವಕುಮಾರ್ ಅವರಿಗೆ ಶಿಕ್ಷಣ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತು ತರಾಟೆಗೆ ತೆಗೆದುಕೊಂಡರು.

Read Full Story

04:21 PM (IST) Jan 12

Bigg Boss ಮನೆಯಲ್ಲಿ ತ್ರಿಕೋನ ಲವ್​ಸ್ಟೋರಿ! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್​ ಶೆಟ್ಟಿ ಕೊಟ್ರು ರಿಯಾಕ್ಷನ್​!

ಬಿಗ್​ಬಾಸ್​ ಸೀಸನ್ 12 ರಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತ್ರಿಕೋನ ಪ್ರೇಮಕಥೆ ಶುರುವಾಗಿದೆ ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟನ ಹಾಸ್ಯ ಪ್ರವೃತ್ತಿಗೆ ರಕ್ಷಿತಾ ಮನಸೋತಿದ್ದು, ಇದರ ಬಗ್ಗೆ ನಟ ಗೌರವ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story

03:52 PM (IST) Jan 12

ಲಕ್ಕುಂಡಿ - ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದ್ದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದೆ. ನಿಧಿ ಸಿಕ್ಕ ಜಾಗವನ್ನು 'ಅಪಶಕುನ' ಎಂದು ಪರಿಗಣಿಸಿರುವ ರಿತ್ತಿ ಕುಟುಂಬ, ಆ ಜಾಗ ತಮಗೆ ಬೇಡವೆಂದು ಹೇಳಿದೆ. ಬದಲಾಗಿ, ಅಲ್ಲಿ ದೇವಸ್ಥಾನ ನಿರ್ಮಿಸಿ, ತಮಗೆ ಬೇರೆಡೆ ವಾಸಿಸಲು ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

Read Full Story

03:47 PM (IST) Jan 12

ನಮ್ಮ ಮೆಟ್ರೋ ಇನ್ನು ನಮ್ಮದಲ್ಲ? ವಾರ್ಷಿಕ ಏರಿಕೆಯ ಹೆಸರಲ್ಲಿ ಸದ್ದಿಲ್ಲದೆ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಸ್ಕೆಚ್!

ದರ ನಿಗದಿ ಸಮಿತಿಯ ಶಿಫಾರಸಿನಂತೆ, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಫೆಬ್ರವರಿ 2026 ರಿಂದ ಟಿಕೆಟ್ ದರ ಶೇ. 5 ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ವಾರ್ಷಿಕ ದರ ಏರಿಕೆಯು ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಎನಿಸಿಕೊಂಡಿರುವ 'ನಮ್ಮ ಮೆಟ್ರೋ' ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಹೇರಲಿದೆ.

Read Full Story

03:22 PM (IST) Jan 12

ನಟಿ ಪವಿತ್ರಾ ಗೌಡ ಆಸೆ ಕೊನೆಗೂ ಈಡೇರಿಸಿದ ಕೋರ್ಟ್; ಕುಂಟು ನೆಪಗಳನ್ನೇಳಿದ್ದ ಜೈಲಾಧಿಕಾರಿಗಳಿಗೆ ಆದೇಶ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪವಿತ್ರಾಗೌಡ, ಜೈಲಿನ ಊಟದಿಂದ ಅಲರ್ಜಿಯಾಗಿದೆ ಎಂದು ಮನೆಯೂಟಕ್ಕೆ ಮನವಿ ಮಾಡಿದ್ದರು. ವಕೀಲರು ಮತ್ತು ಜೈಲು ಅಧಿಕಾರಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪವಿತ್ರಾಗೌಡ ಸೇರಿದಂತೆ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟ ನೀಡಲು ಅನುಮತಿ ನೀಡಿದೆ.
Read Full Story

03:07 PM (IST) Jan 12

ಭೂಮಿಯಲ್ಲಿ ಸಿಗುವ ಬಂಗಾರವೆಲ್ಲಾ 'ನಿಧಿ' ಅಲ್ಲ, ಇದನ್ನು ಸರ್ಕಾರಕ್ಕೆ ಕೊಡದೇ ನೀವೇ ಇಟ್ಕೋಬಹುದು!

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಕಾನೂನಿನ ಪ್ರಕಾರ, ನಿಧಿ ಎಂದುಯ ಪರಿಗಣಿಸಬೇಕಾದರೆ ಎಷ್ಟು ಮೌಲ್ಯದ್ದಾಗಿರಬೇಕು, ಎಷ್ಟು ವರ್ಷ ಹಳೆಯದಾಗಿರಬೇಕು ಹಾಗೂ ಎಷ್ಟು ಪಾಲು ನಿಧಿ ಸಿಕ್ಕಿದವರಿಗೆ ಹಣ ಸಿಗುತ್ತದೆ ಎಂಬ ಪುರಾತತ್ವ ಇಲಾಖೆ ಮಾಹಿತಿ ಇಲ್ಲಿದೆ ನೋಡಿ.

Read Full Story

03:01 PM (IST) Jan 12

ತಮ್ಮ ಉದ್ಯೋಗಿಗಳಿಗೆ ಸ್ವತಃ ಊಟ ಬಡಿಸಿದ ಸ್ಟಾರ್‌ ದಂಪತಿ Naga Chaitanya, Sobhita Dhulipala

Actor Naga Chaitanya News: ಅನ್ನಪೂರ್ಣ ಸ್ಟುಡಿಯೋ ಉದ್ಯೋಗಿಗಳಿಗೆ ನಟ ನಾಗ ಚೈತನ್ಯ ಮತ್ತು ಶೋಭಿತಾ ಸ್ವತಃ ಊಟ ಬಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲ ಸಮಯ ಅವರೊಂದಿಗೆ ಖುಷಿಯಿಂದ ಕಾಲ ಕಳೆದರು. ಅವರ ಕುಟುಂಬಗಳೊಂದಿಗೆ ಸಂಭ್ರಮಿಸಿದರು. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

 

Read Full Story

02:51 PM (IST) Jan 12

ಯಶ್ ‘ಟಾಕ್ಸಿಕ್’ ಚಿತ್ರದ ಟೀಸರ್ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು

ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಆರೋಪಿಸಿದೆ. ಈ ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿ, ಟೀಸರ್ ರದ್ದುಗೊಳಿಸಲು ಆಗ್ರಹಿಸಿದೆ.
Read Full Story

02:50 PM (IST) Jan 12

BBK 12 - ಕಾವ್ಯ ಶೈವ, ಧನುಷ್‌ ಗೌಡ ಬಿಟ್ಟು, ಮಿಡ್‌ ವೀಕ್‌ ಎಲಿಮಿನೇಶನ್‌ ಆಗೋರು ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಿಡ್‌ ವೀಕ್‌ ಎಲಿಮಿನೇಶನ್‌ ಸದ್ದು ಜೋರಾಗಿದೆ. ಈಗಾಗಲೇ ರಾಶಿಕಾ ಶೆಟ್ಟಿ ಎಲಿಮಿನೇಟ್‌ ಆಗಿದ್ದಾರೆ. ಹಾಗಾದರೆ ಮಿಡ್‌ ವೀಕ್‌ ಎಲಿಮಿನೇಶನ್‌ ಆಗೋರು ಯಾರು?

 

Read Full Story

02:21 PM (IST) Jan 12

Bigg Boss ಫಿನಾಲೆ ವೇಳೆ, ನಟ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'; ದೂರು ದಾಖಲು

Bigg Boss Kiccha Sudeep News: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಕಿಚ್ಚ ಸುದೀಪ್‌ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರು ದಾಖಲು ಮಾಡಿದೆ. ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ರಣಹದ್ದು ಪದಬಳಕೆ ಮಾಡಿದ್ದು, ಆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಇದೆ.

Read Full Story

02:04 PM (IST) Jan 12

ಹಾವೇರಿ - ಮುಸ್ಲಿಂ ಸಮಾಜದಿಂದ ಅನ್ಯಾಯವೆಂದು ಸರ್ಕಾರಿ ಶಾಲೆಗೆ ಬೀಗ ಜಡಿದ ರೈತ, ಬಿಸಿಲಲ್ಲಿ ನಿಂತ ಮಕ್ಕಳು

ಹಾವೇರಿ ಜಿಲ್ಲೆಯ ಮಲ್ಲೂರು ಗ್ರಾಮದಲ್ಲಿ, ಜಾಗದ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ಬೀಗ ಹಾಕಲಾಯಿತು. ದಾನ ನೀಡಿದ ಜಾಗಕ್ಕಿಂತ ಹೆಚ್ಚು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಈ ಕೃತ್ಯ ಎಸಗಿದ್ದು, ಇದರಿಂದ ಮಕ್ಕಳು ಶಾಲೆಯ ಹೊರಗೆ ಉಳಿಯುವಂತಾಯಿತು. 

Read Full Story

01:46 PM (IST) Jan 12

Bigg Boss ಮನೆಯಲ್ಲಿ 15 ವಾರವಿದ್ದ ರಾಶಿಕಾ ಶೆಟ್ಟಿಗೆ ಸಿಕ್ಕ ಬಹುಮಾನವೆಷ್ಟು? ಬಿಗ್​ಬಾಸ್​ ಕೊಟ್ಟಿದ್ದೆಷ್ಟು?

ಬಿಗ್​ಬಾಸ್​ ಸೀಸನ್​ 12ರ ಫೈನಲಿಸ್ಟ್​ ಎಂದುಕೊಂಡಿದ್ದ ರಾಶಿಕಾ ಶೆಟ್ಟಿ ಅನಿರೀಕ್ಷಿತವಾಗಿ ಮನೆಯಿಂದ ಹೊರಬಂದಿದ್ದಾರೆ. 15 ವಾರಗಳ ಕಾಲ ಮನೆಯಲ್ಲಿದ್ದ ಅವರು, ಪ್ರಾಯೋಜಕರಿಂದ ಹಾಗೂ ಬಿಗ್​ಬಾಸ್​ ಕಡೆಯಿಂದ ಪಡೆದ ಸಂಭಾವನೆ ಮತ್ತು ಬಹುಮಾನಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

01:44 PM (IST) Jan 12

ಮೆಣಸಿನ ಸಾರು ಹೀಗೆ ಮಾಡಿ ಬಿಸಿ ಅನ್ನದ ಜೊತೆ ತಿಂದರೆ ಶೀತ, ಕೆಮ್ಮು ಮಾಯವಾಗುತ್ತೆ!

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ ಮತ್ತು ಕೆಮ್ಮಿಗೆ ಮನೆಯಲ್ಲೇ ಸುಲಭವಾಗಿ ಮೆಣಸಿನ ಸಾರು ತಯಾರಿಸಬಹುದು. ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುವ ಈ ಸಾರು, ಆರೋಗ್ಯಕ್ಕೂ ಉತ್ತಮ. ಶೀತದಿಂದ ತ್ವರಿತ ಉಪಶಮನ. ಈ ಲೇಖನದಲ್ಲಿ ಮೆಣಸಿನ ಸಾರು ಮಾಡುವ ಸರಳ ವಿಧಾನವನ್ನು ವಿವರಿಸಲಾಗಿದೆ.

Read Full Story

01:40 PM (IST) Jan 12

BBK 12 ಟ್ರೋಫಿಯನ್ನು ಗಿಲ್ಲಿ ನಟನೇ ಗೆಲ್ಲಬೇಕು, ಇದಕ್ಕೂ ಕಾರಣ ಇದೆ - ಕಿರಿಕ್‌ ಕೀರ್ತಿ Open Post

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆ, ಗಿಲ್ಲಿ ನಟ ಅವರು ಟ್ರೋಫಿ ಪಡೆಯಲಿ ಎಂದು ಕಿರಿಕ್‌ ಕೀರ್ತಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story

01:36 PM (IST) Jan 12

ಶಾಲೆಗೆ ಹೋಗೋ ಬಾಲಕ ಅಂದ್ರೆ, ಗೆಳೆಯನೆದುರೇ ಬಾವಿಗೆ ಹಾರಿ ಜೀವಬಿಟ್ಟ 14ರ ಪೋರ ಜಗದೀಶ!

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ, ಶಾಲೆಗೆ ಸರಿಯಾಗಿ ಹೋಗುವಂತೆ ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಗೆಳೆಯನನ್ನು ಮುಂದೆ ಕಳುಹಿಸಿ ಈ ಕೃತ್ಯ ಎಸಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read Full Story

01:28 PM (IST) Jan 12

ಗಿಲ್ಲಿ ಟ್ಯಾಟೂ ಹಾಕೋಕಿರೋ ಪ್ರಾಬ್ಲಂ ಏನು? ಫ್ಯಾನ್ಸ್ ಕೈನಲ್ಲಿ ಮಗನ ಮುಖ ನೋಡಿ ಕಣ್ಣೀರಿಟ್ಟ ಅಪ್ಪ ಅಮ್ಮ

Gilli Nata Tattoo: ಗಿಲ್ಲಿ ಟ್ಯಾಟೂ ಈಗ ಫೇಮಸ್ ಆಗ್ತಿದೆ. ಅನೇಕ ಗಿಲ್ಲಿ ಅಭಿಮಾನಿಗಳ ಕೈನಲ್ಲಿ ಗಿಲ್ಲಿ ಟ್ಯಾಟೂ ರಾರಾಜಿಸ್ತಿದೆ. ಮಗನ ಪ್ರಸಿದ್ಧಿ ನೋಡಿ ಅಪ್ಪ – ಅಮ್ಮನ ಕಣ್ಣಲ್ಲಿ ನೀರು ತುಂಬಿದೆ.

Read Full Story

01:18 PM (IST) Jan 12

Birds Eye Chilli Farming - 1500 ರೂ.Kg ಬೆಲೆಯ ಗಾಂಧಾರಿ ಮೆಣಸನ್ನು ಖರ್ಚಿಲ್ಲದೆ ಮನೇಲಿ ಬೆಳೆಯುವ ವಿಧಾನ!

Gandhari Menasu or Birds Eye Chilli: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಅಡುಗೆಗೆ ಹಸಿಮೆಣಸು ಬಳಸುತ್ತಾರೆ. ಆದರೆ ಗಾಂಧಾರಿ ಮೆಣಸು ಸೂಜಿ ಮೆಣಸು ತುಂಬ ರುಚಿಕರವಾಗಿರುತ್ತದೆ ಅಷ್ಟೇ ಅಲ್ಲದೆ ಸುಲಭವಾಗಿ ನಮ್ಮ ಮನೆಯಲ್ಲಿ ಬೆಳೆದುಕೊಳ್ಳಬಹುದು.

 

Read Full Story

01:07 PM (IST) Jan 12

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಜೂನ್ 30ರೊಳಗೆ ಮುಗಿಸಿ - ಸುಪ್ರೀಂ ಕೋರ್ಟ್ ಖಡಕ್ ಆದೇಶ!

ಸುಪ್ರೀಂ ಕೋರ್ಟ್, 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗೆ ಕೋರ್ಟ್ ಆದೇಶ ಚಾಲನೆ ನೀಡಿದೆ.

Read Full Story

01:03 PM (IST) Jan 12

ಅಕ್ಕಿ ಇಲ್ಲದೆ 5 ಸೂಪರ್ ಹೆಲ್ದಿ ಮತ್ತು ಟೇಸ್ಟಿ ದೋಸೆ ಮಾಡಿ; ನೆನೆಸೋ-ರುಬ್ಬೋ ಚಿಂತೆಯೂ ಇಲ್ಲ

ಫುಡ್ ಡೆಸ್ಕ್:  ಇಂದು ನಾವು ಅಕ್ಕಿ ಇಲ್ಲದೆ ಮಾಡುವ 5 ದೋಸೆ ರೆಸಿಪಿಗಳ (no rice dosa) ಬಗ್ಗೆ ಹೇಳ್ತೀವಿ. ಇವು ಆರೋಗ್ಯಕರ ಹಾಗೂ ರುಚಿಕರ. ಅಷ್ಟೇ ಅಲ್ಲ, ಇದನ್ನು ಮಾಡಲು ನೆನೆಸುವ, ರುಬ್ಬುವ ಮತ್ತು ಹುದುಗಿಸುವ ಚಿಂತೆಯೂ ಇರೋದಿಲ್ಲ.

Read Full Story

More Trending News