Published : Aug 09, 2026, 06:45 AM ISTUpdated : Aug 09, 2026, 11:03 PM IST

Karnataka Latest News Live: ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 421 ಕಿ.ಮೀ. ಮೈಲೇಜ್! - ಭಾರತದ ಅತ್ಯಂತ ಅಗ್ಗದ ಇವಿ ಕಾರುಗಳಿವು! ಇಲ್ಲಿದೆ ಅವುಗಳ ಕಂಪ್ಲೀಟ್ ಡೀಟೇಲ್ಸ್!

ಸಾರಾಂಶ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತೇವೆಯೇ ವಿನಃ ಮೈತ್ರಿ ಮುರಿದುಬಿದ್ದಿಲ್ಲ ಎಂದು ಸಂಸದ ಡಾ। ಮಂಜುನಾಥ್ ಹೇಳಿದರು. ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಪ್ರಾಯಶ್ಚಿತ್ತ ಪಾದಯಾತ್ರೆ ಎಂದು ಶಾಸಕ ಬಾಲಕೃಷ್ಣ ಅವರು ಕರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಒತ್ತಾಯ ಮಾಡಿ ನಾವು ಸ್ವಾಧೀನಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆಗೆ ಸಿದ್ಧರಾಗಿದ್ದಾರೆ. ಫಲವತ್ತಾದ ರೈತರ ಭೂಮಿಯನ್ನು ಪಡೆಯಬಾರದು. ಹಿಂದೆ ಹಾರೋಹಳ್ಳಿ ಪ್ರಕರಣದಲ್ಲೂ ರೈತರು ಪ್ರತಿಭಟಿಸಿದ್ದರು. ಶೇ.80ರಷ್ಟು ರೈತರ ವಿರೋಧವಿದೆ. ಪ್ರಜಾಪ್ರಭುತ್ವದಲ್ಲಿ ರೈತರ ಒಟ್ಟಾರೆ ಅಭಿಪ್ರಾಯ ಪಡೆದು, ನಿರ್ಧಾರ ಕೈಗೊಳ್ಳಬೇಕು ಎಂದರು.

11:03 PM (IST) Aug 09

ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 421 ಕಿ.ಮೀ. ಮೈಲೇಜ್! - ಭಾರತದ ಅತ್ಯಂತ ಅಗ್ಗದ ಇವಿ ಕಾರುಗಳಿವು! ಇಲ್ಲಿದೆ ಅವುಗಳ ಕಂಪ್ಲೀಟ್ ಡೀಟೇಲ್ಸ್!

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬಜೆಟ್ ಸ್ನೇಹಿ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ನಾಲ್ಕು ಜನಪ್ರಿಯ ಹಾಗೂ ಅಗ್ಗದ ಇವಿ ಕಾರುಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳನ್ನು ಈ ಸ್ಟೋರಿಯಲ್ಲಿ ನೀಡಲಾಗಿದೆ.

Read Full Story

09:14 PM (IST) Aug 09

Toxic - ಯಶ್‌ಗೂ ಮೊದಲು ರಾಧಿಕಾ ಪಂಡಿತ್‌ಗೆ ನಿರ್ಮಾಪಕ ಕೆವಿಎನ್ ವೆಂಕಟ್ 'ಧನ್ಯವಾದ' ಹೇಳಿದ್ದೇಕೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!

ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ, ಟೀಮ್‌ನ ಸಾಕಷ್ಟು ಜನರು ವೇದಿಕೆಯ ಮೇಲೆ ಮಾತನ್ನಾಡಿದ್ದಾರೆ. ಅವರಲ್ಲಿ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ವಾರು ಆಡಿರುವ ಮಾತು ಸಾಕಷ್ಟು ಜನರಿಗೆ ಅಚ್ಚರಿ ತಂದಿತು. ಅದರೆ, ಬಳಿಕ ಅವರು ಕೊಟ್ಟ ಕ್ಲಾರಿಟಿ ಏನು? ಈ ಸ್ಟೋರಿ ನೋಡಿ..

Read Full Story

09:00 PM (IST) Aug 09

‘ರಾಯನ ಜಗತ್ತಿಗೆ ಪರ್ಫೆಕ್ಟ್ ಆಹ್ವಾನ’ - ಯಶ್ ‘ಟಾಕ್ಸಿಕ್’ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

Toxic Trailer Reaction: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಬಿಡುಗಡೆಯಾದ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟ್ರೇಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

08:06 PM (IST) Aug 09

Bengaluru - ಕನ್ನಡದಲ್ಲೇ ಹೇಳಿ ಅಂದಿದ್ದೇ ತಪ್ಪಾ? ಬೆಂಗಳೂರಿನಲ್ಲಿ ಕನ್ನಡಿಗನ ಅಟ್ಟಾಡಿಸಿ ಹೊಡೆದ ಹಿಂದಿವಾಲಾ ಗ್ಯಾಂಗ್!

ಬೆಂಗಳೂರಿನ ಯಲಹಂಕದಲ್ಲಿ ಡೆಲಿವರಿ ಬಾಯ್ ಬಸವರಾಜ್ ಮೇಲೆ ಹಿಂದಿ ಮಾತನಾಡುವ ಗುಂಪೊಂದು ಹಲ್ಲೆ ನಡೆಸಿದೆ. ತನಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ವಾಗ್ವಾದ ಬೆಳೆದು, ಯುವಕ-ಯುವತಿಯರ ತಂಡವು ಆತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದೆ.

Read Full Story

07:51 PM (IST) Aug 09

ಟಾಕ್ಸಿಕ್ ಕಾರ್ಯಕ್ರಮದಲ್ಲಿ ರುಕ್ಮಿಣಿ ಧರಿಸಿದ್ದು ಸಿಂಪಲ್ ಡ್ರೆಸ್ ಅಂದುಕೊಂಡ್ರಾ? ಬೆಲೆ ಕೇಳಿದ್ರೆ ನಂಬಲ್ಲ!

Rukmini Vasanth: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್‌, ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

Read Full Story

07:27 PM (IST) Aug 09

ಗಂಗಾವತಿ ಮತದಾರರಿಗೆ ಮಹತ್ವದ ಸುದ್ದಿ - 24988 ಹೆಸರು ಡಿಲೀಟ್, ಮುಂದೆ ಏನು ಮಾಡಬೇಕು?

Gangavathi Voter List 2026: ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಒಟ್ಟು 24,988 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು..

Read Full Story

07:13 PM (IST) Aug 09

ಹಾವು ಪೊರೆ ಬಿಚ್ಚುವುದನ್ನು ನೋಡಿದರೆ ಹಗೆ ತೀರಿಸಿಕೊಳ್ಳುತ್ತಾ? ಗೊತ್ತಿಲ್ಲದ ಸತ್ಯ ಇಲ್ಲಿದೆ!

Snake Myths and Facts: ಹಾವುಗಳು ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಪಡೆಯುವ ನೈಸರ್ಗಿಕ ಪ್ರಕ್ರಿಯೆಯನ್ನು ಪೊರೆ ಬಿಚ್ಚುವುದು ಅಥವಾ ಎಕ್ಡಿಸಿಸ್ (Ecdysis) ಎಂದು ಕರೆಯಲಾಗುತ್ತದೆ.

Read Full Story

07:03 PM (IST) Aug 09

'ಆತ ಸಿಂಹವಾದರೆ, ಅವನ ತಂದೆ ನಾನೂ ಸಿಂಹವೇ'.. ಮಗ ಅಭಿಷೇಕ್ ಬಚ್ಚನ್ ಬಗ್ಗೆ ಹೀಗ್ ಹೇಳಿದ್ಯಾಕೆ ಬಿಗ್ ಬಿ?!

ಕೇವಲ ಅಮಿತಾಭ್ ಮಾತ್ರವಲ್ಲ, ಅಂದಿನ ಕಾಲದ ಮತ್ತೊಬ್ಬ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಇಷ್ಟೇ ಸಾಹಸಿಯಾಗಿದ್ದರು. 'ಕರ್ತವ್ಯ' ಚಿತ್ರದ ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರು ನಿಜವಾದ ಚಿರತೆಯ ಜೊತೆ ಯಾವುದೇ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದರು ಎಂದು ಮೋಹನ್ ನೆನಪಿಸಿಕೊಂಡಿದ್ದಾರೆ.

Read Full Story

06:34 PM (IST) Aug 09

ಯಾರಿಗೂ ಗೊತ್ತಿರದ ಯಶ್ ‘ಟಾಕ್ಸಿಕ್’ ಡೀಲ್ - ಸಂಭಾವನೆ ಬಗ್ಗೆ ಬಯಲಾಯ್ತು ಶಾಕಿಂಗ್ ಮಾಹಿತಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾಗಾಗಿ ಯಶ್ ಪಡೆದಿದ್ದಾರೆ ಎನ್ನಲಾಗುತ್ತಿರುವ ಸಂಭಾವನೆಯ ಬಗ್ಗೆಯೂ ಚರ್ಚೆ ಜೋರಾಗಿದೆ.

Read Full Story

06:12 PM (IST) Aug 09

‘ಟಾಕ್ಸಿಕ್’ಗಾಗಿ ರಾಧಿಕಾ ಪಂಡಿತ್ ಏನು ಮಾಡಿದ್ದಾರೆ? ಯಶ್ ಮಾತಿನಲ್ಲಿ ಬಯಲಾಯ್ತು ಅಸಲಿ ವಿಷಯ

‘ಟಾಕ್ಸಿಕ್’ ಸಿನಿಮಾಕ್ಕಾಗಿ ರಾಧಿಕಾ ಪಂಡಿತ್ ನೀಡಿದ ಕೊಡುಗೆಯೇನು? ಚಿತ್ರತಂಡದ ಹಲವು ಸದಸ್ಯರು ವೇದಿಕೆಯಲ್ಲಿ ಅವರ ತ್ಯಾಗವನ್ನು ನೆನಪಿಸಿಕೊಂಡಿದ್ದು, ಸ್ವತಃ ಯಶ್ ಕೂಡ ಪತ್ನಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.

Read Full Story

05:57 PM (IST) Aug 09

ಪೇಸರ್ ವಿರುದ್ಧ ಮೈದಾನದಲ್ಲೇ ಸಿಡಿದೆದ್ದ ಗೌತಿ! ಗಂಭೀರ್ ಕೆಂಗಣ್ಣಿಗೆ ಗುರಿಯಾದ ಸ್ಟಾರ್‌ ಪ್ಲೇಯರ್!

ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ, ಹೆಡ್ ಕೋಚ್ ಗೌತಮ್ ಗಂಭೀರ್ ಸ್ಟಾರ್‌ ಬೌಲರ್‌ ಬೌಲಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಲೆಂಗ್ತ್ ಎಸೆಯುತ್ತಿದ್ದುದನ್ನು ಕಂಡು, ಗಂಭೀರ್ ಬೌಂಡರಿ ಲೈನ್‌ಗೆ ಬಂದು ಪಿಚ್‌ಗೆ ತಕ್ಕಂತೆ 'ಫುಲರ್ ಲೆಂಗ್ತ್' ಎಸೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Read Full Story

05:51 PM (IST) Aug 09

ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ - ಭಾವುಕ ಪೋಸ್ಟ್ ಮೂಲಕ ನೆನಪಿಸಿಕೊಂಡ ಸಂಗೀತ ನಿರ್ದೇಶಕ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರುಕಿರಣ್..

Read Full Story

05:30 PM (IST) Aug 09

ಜನಿಸಿದ 5ನೇ ದಿನವೇ ಆಧಾರ್ ನೋಂದಣಿ - ಗಂಗಾವತಿಯ ಕಂದಮ್ಮಗೆ ವಿಶ್ವ ದಾಖಲೆ ಗೌರವ!

Gangavathi Baby: ಜನಿಸಿದ ಕೇವಲ ಐದು ದಿನಗಳಲ್ಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡ ಕಿರಿಯ ಮಗುವೆಂಬ ಹೆಗ್ಗಳಿಕೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಅಂಚುರಿ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ.

Read Full Story

05:28 PM (IST) Aug 09

ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?

'ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದ ನಟ ಯಶ್, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಮೂಲಕ ಜಾಗತಿಕ ನಟರಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಬಗ್ಗೆ ಯಶ್ ಹೇಳಿದ್ದೇನು? ನೋಡಿ..

Read Full Story

05:15 PM (IST) Aug 09

ಬಾದಾಮಿ, ಗೋಡಂಬಿ ಮಾತ್ರವಲ್ಲ! ಈ ಬೀಜದಲ್ಲೂ ಅಡಗಿದೆ ಆರೋಗ್ಯದ ರಹಸ್ಯ

Sunflower Seeds Benefits: ಬಾದಾಮಿ, ಗೋಡಂಬಿಯಂತೆ ಸೂರ್ಯಕಾಂತಿ ಬೀಜಗಳೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮಿತ ಪ್ರಮಾಣದಲ್ಲಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ..

Read Full Story

04:54 PM (IST) Aug 09

ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿ - ಮನೆ ಸ್ವಚ್ಛವಾಗುವುದರ ಜೊತೆಗೆ ತಾಜಾ ವಾಸನೆಯೂ ಇರುತ್ತೆ!

ಪ್ರತಿದಿನ ನೆಲ ಒರೆಸುವುದು ಮನೆಯ ಸ್ವಚ್ಛತೆಯ ಪ್ರಮುಖ ಭಾಗ. ಆದರೆ ಕೆಲವೊಮ್ಮೆ ಚೆನ್ನಾಗಿ ಒರೆಸಿದ ಕೆಲವೇ ಗಂಟೆಗಳಲ್ಲಿ ನೆಲ ಮತ್ತೆ ಕೊಳೆಯಾಗಿ ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅಹಿತಕರ ವಾಸನೆಯೂ ಕಾಣಿಸಿಕೊಳ್ಳಬಹುದು.

Read Full Story

04:33 PM (IST) Aug 09

ಪುರುಷರಿಗೆ ಬಲ, ಮಹಿಳೆಯರಿಗೆ ಎಡ.. ಪ್ರತಿದಿನ ನೋಡಿದರೂ ಗಮನಿಸದ ಶರ್ಟ್ ಬಟನ್‌ಗಳ ಈ ವಿಚಿತ್ರ ವ್ಯತ್ಯಾಸ ಗೊತ್ತಾ?

ಪುರುಷರ ಶರ್ಟ್‌ಗಳಲ್ಲಿ ಸಾಮಾನ್ಯವಾಗಿ ಬಟನ್‌ಗಳು ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್‌ಗಳಲ್ಲಿ ಅವು ಎಡಭಾಗದಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಫ್ಯಾಷನ್ ಅಥವಾ ವಿನ್ಯಾಸದ ವಿಚಾರವಲ್ಲ.

Read Full Story

04:25 PM (IST) Aug 09

Student Protest - ಜಾರ್ಖಂಡ್‌ನಲ್ಲಿಯೂ ಗೆದ್ದ ಸ್ಟೂಡೆಂಟ್‌ ಪ್ರೊಟೆಸ್ಟ್‌; ಸರ್ಕಾರದ ತಲೆಬಾಗಿಸಿದ ಬೇಡಿಕೆಗಳು ಯಾವುವು? ಇದೆಯಾ ಕರ್ನಾಟಕಕ್ಕೂ ಈ ಮಾದರಿ ಅಗತ್ಯತೆ?

ಕಳೆದ 16 ದಿನಗಳಿಂದ ನಡೆಯುತ್ತಿರುವ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆ ಮಹತ್ವದ ಘಟ್ಟ ತಲುಪಿದೆ. ಮೂಲಗಳ ಪ್ರಕಾರ, ಪರೀಕ್ಷೆ ರದ್ದು, ಸಿಐಡಿ ತನಿಖೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

04:17 PM (IST) Aug 09

‘S’ ಆಕಾರದಲ್ಲಿ ಓಡಿದರೆ ಹಾವಿನಿಂದ ತಪ್ಪಿಸಿಕೊಳ್ಳಬಹುದಾ? ಅಸಲಿ ಸತ್ಯ ಇಲ್ಲಿದೆ

ಹಾವು ಬೆನ್ನಟ್ಟಿದಾಗ ‘S’ ಆಕಾರದಲ್ಲಿ ಓಡಿದರೆ ಅದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತದೆ. ಆದರೆ ಇದಕ್ಕೆ ಯಾವುದೇ ಖಚಿತ ವೈಜ್ಞಾನಿಕ ಆಧಾರವಿಲ್ಲ.

Read Full Story

04:06 PM (IST) Aug 09

BJP MLA - '25 ಮದುವೆಯಾದ ವ್ಯಕ್ತಿಯೊಂದಿಗೆ ಮಗಳ ಮದುವೆ', ನಮಗೆ ಮೋಸ ಮಾಡಿದರು ಅಂತ ಕಣ್ಣೀರಿಟ್ಟ ಬಿಜೆಪಿ ಶಾಸಕ!

ನಕಲಿ ಗುರುತಿನ ಚೀಟಿಯೊಂದಿಗೆ ಈಗಾಗಲೇ 25 ಮದುವೆಯಾಗಿ ಹಲವರಿಗೆ ಮೋಸ ಮಾಡಿದ ವ್ಯಕ್ತಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. ಸದ್ಯ ಶಾಸಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಮಡು ತನಿಖೆ ನಡೆಸಿದ್ದಾರೆ.

Read Full Story

03:10 PM (IST) Aug 09

ಲಂಕಾ ಟೆಸ್ಟ್‌ಗೂ ಮುನ್ನ 13 ಆಟಗಾರರು ಔಟ್! ಗಿಲ್‌, ಬುಮ್ರಾ, ಸಾಯಿ ಯಾರಿಗೆ ಏನಾಗಿದೆ?

ಶ್ರೀಲಂಕಾ ಎದುರಿನ ಟೆಸ್ಟ್ ಸಿರೀಸ್‌ ನೋಡ್ತಿರುವ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಆಗಿದೆ. ನಾಯಕ ಶುಬ್ಮನ್ ಗಿಲ್ಲ ಸೇರಿ ಒಟ್ಟ 13 ಮಂದಿ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.

Read Full Story

02:37 PM (IST) Aug 09

ವೈಭವ್ ಸೂರ್ಯವಂಶಿ ಬಗ್ಗೆ ಬ್ರೇಟ್‌ ಲೀ ಸ್ಫೋಟಕ ಹೇಳಿಕೆ! ಇನ್ಮೇಲೆ ಆ ವಿಷಯ ಟೀಕೆ ಮಾಡಂಗಿಲ್ಲ

ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ, ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಆಟವನ್ನು ಶ್ಲಾಘಿಸಿದ್ದಾರೆ. ವೈಭವ್ ವಯಸ್ಸಿನ ಚರ್ಚೆಯನ್ನು ಅನಗತ್ಯವೆಂದು ತಳ್ಳಿಹಾಕಿರುವ ಲೀ, ಅವರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಒತ್ತಡ ನಿಭಾಯಿಸುವ ಬಗ್ಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
Read Full Story

02:07 PM (IST) Aug 09

ಆಗಸ್ಟ್ 13 ರಂದು ಕರ್ನಾಟಕ ಬಂದ್ ಫಿಕ್ಸ್.. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಬಂದ್!

ಆಗಸ್ಟ್ 13 ರಂದು ಕರ್ನಾಟಕ ಬಂದ್ ಆಗೋದು ಪಕ್ಕಾ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇವತ್ತು ನಡೆದ ಜಾಗಟೆ ಪ್ರತಿಭಟನೆ ವೇಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.

Read Full Story

01:32 PM (IST) Aug 09

'ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ.. 'ಟಾಕ್ಸಿಕ್' ವೇದಿಕೆಯಲ್ಲಿ ಯಶ್ ಹೇಳಿರೋ ಈ ಮಾತು ಅರ್ಥವಾದ್ರೆ ಉದ್ದಾರ ಆಗ್ತೀರಾ!

ಯಶ್ ಕರ್ನಾಟಕದ ಹೆಮ್ಮೆ, ಕನ್ನಡ ಸಿನಿಮಾ, ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ನಮ್ಮ ಕನ್ನಡದ ರಾಕಿಂಗ್‌ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತು ಈಗ ಟಾಕ್ಸಿಕ್ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದೆ. 'ಯಶ್ ಆಡಿರುವ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಮಾತಿನ ಅರ್ಥವೇನು? ನೋಡಿ..

Read Full Story

12:40 PM (IST) Aug 09

ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಹೊಸ ರೂಪ; ರೈಲು ಸಂಚಾರ ಇನ್ಮುಂದೆ ಮತ್ತಷ್ಟು ಸುಗಮ

ನೈಋತ್ಯ ರೈಲ್ವೆಯು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದ ಯಾರ್ಡ್ ನವೀಕರಣದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಯೋಜನೆಯಡಿ ಪ್ಲಾಟ್‌ಫಾರ್ಮ್ ವಿಸ್ತರಣೆ, ಸಿಗ್ನಲಿಂಗ್ ಉನ್ನತೀಕರಣ, ಮತ್ತು ಗೂಡ್ಸ್ ರೈಲುಗಳಿಗೆ ಪ್ರತ್ಯೇಕ ಲೈನ್ ನಿರ್ಮಿಸಲಾಗಿದ್ದು, ಇದು ರೈಲು ಸಂಚಾರದ ದಕ್ಷತೆಯನ್ನು ಹೆಚ್ಚಿಸಲಿದೆ. ಮುಂದಿನ ಹಂತದಲ್ಲಿ ಇನ್ನೂ ಎರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
Read Full Story

12:21 PM (IST) Aug 09

Shocking incident in Bhatkal - ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ! ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಚಾಕು ಇರಿತ!

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್‌ಗಳ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಆರೋಪಿಗಳಾದ ರೌಡಿಶೀಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
Read Full Story

11:41 AM (IST) Aug 09

ಇದು ಕನ್ನಡದ ಆಕ್ಷನ್ & ಸಸ್ಪೆನ್ಸ್ ಸಿನ್ಮಾ; ವಿಚಿತ್ರ ಸುಳಿವು, ಸರಣಿ ಕೊ*ಲೆಯ ಚಲನಚಿತ್ರ

ಇದೊಂದು ರೋಚಕ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಕಥಾನಾಯಕ ಇನ್‌ಸ್ಪೆಕ್ಟರ್ ಸರಣಿ ಕೊ*ಲೆಗಳ ರಹಸ್ಯವನ್ನು ವಿಚಿತ್ರ ಸುಳಿವುಗಳ ಮೂಲಕ ಹೇಗೆ ಭೇದಿಸುತ್ತಾನೆ ಎಂಬುದೇ ಕಥಾವಸ್ತು. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

Read Full Story

11:32 AM (IST) Aug 09

ಪೋಷಕರೇ ಈ ಶಾಕಿಂಗ್ ವರದಿ ಕಡೆಗಣಿಸಬೇಡಿ - ಮಕ್ಕಳ ಹೃದಯಾಘಾತಕ್ಕೆ ಇದೇ ಕಾರಣ! 13 ರಾಜ್ಯಗಳ ಅಧ್ಯಯನದಲ್ಲಿ ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ!

ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಕೆಎಂಸಿಆರ್‌ಐ, ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿವೆ. ದೇಶದ 13 ರಾಜ್ಯಗಳು, ಕರ್ನಾಟಕದ 25 ಜಿಲ್ಲೆಗಳ ಮಕ್ಕಳ ಒಳಗೊಂಡ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂಬುದು ವಿಶೇಷ.

Read Full Story

11:16 AM (IST) Aug 09

BPL Card Holders - ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್, 14 ಸಾವಿರ ಕಾರ್ಡ್‌ಗಳಿಗೆ ಕೋಕ್!

ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯೊಂದರಲ್ಲೇ 14,000 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಿದೆ. ಆದರೆ ಅರ್ಹರು ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗದಂತೆ ತಡೆಯಲು ಮತ್ತೊಂದು ಅವಕಾಶವನ್ನು ನೀಡಿದ್ದು, ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ.

Read Full Story

10:45 AM (IST) Aug 09

ಆರೆಸ್ಸೆಸ್‌ ಅನ್ನು ಕಾನೂನು ಚೌಕಟ್ಟಿನೊಳಗೆ ತರ್ತೀವಿ - ಪ್ರಿಯಾಂಕ್ ಖರ್ಗೆ | ನೂರು ವರ್ಷಗಳ ಇತಿಹಾಸ ಅಧ್ಯಯನಕ್ಕೆ ಮುಂದಾದ ಗೃಹಸಚಿವ!

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್‌ಎಸ್‌ಎಸ್‌ ಅನ್ನು ಕಾನೂನಿನ ವ್ಯಾಪ್ತಿಗೆ ತರುವುದಾಗಿ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯು ದೇಶಭಕ್ತಿಯ ಪ್ರಮಾಣಪತ್ರ ನೀಡುವುದನ್ನು ಪ್ರಶ್ನಿಸಿ, ಆರ್‌ಎಸ್‌ಎಸ್‌ಗೆ ಅಚ್ಚರಿಯಾಗುವಂತಹ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

Read Full Story

10:42 AM (IST) Aug 09

ಪ್ರಧಾನಿ ಮೋದಿ ಮಾದರಿಯಲ್ಲೇ ವಿಡಿಯೋ ಹರಿಬಿಟ್ಟ ಸಿಎಂ ಡಿಕೆ ಶಿವಕುಮಾರ್.. ಏನು ವಿಚಾರ..?

ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಇವತ್ತು ಪಾದಯಾತ್ರೆ ಮಾಡ್ತಿವೆ. ಅದರ ರೂವಾರಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರ ಆರ್ಶೀವಾದವನ್ನೂ ಪಡೆದಿದ್ದಾರೆ. ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ತಂತ್ರದ ಪ್ರತಿಯಾಗಿ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.

Read Full Story

09:59 AM (IST) Aug 09

Nagarbhavi schoking - ಬಿರಿಯಾನಿಗೆ ಚಟ್ನಿ ಕೊಡದಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು!

ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ಮಷ್ರೂಮ್ ಬಿರಿಯಾನಿಗೆ ಚಟ್ನಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳ ಗುಂಪೊಂದು ಹೋಟೆಲ್ ಧ್ವಂಸ ಮಾಡಿದೆ. ಈ ವೇಳೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕ್ಯಾಶ್ ಕೌಂಟರ್ ಜಖಂಗೊಳಿಸಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Read Full Story

09:22 AM (IST) Aug 09

ತುಮಕೂರಲ್ಲಿ ಹೃದಯ ವಿದ್ರಾವಕ ಘಟನೆ.. 8ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ..

ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್‌ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.

Read Full Story

09:13 AM (IST) Aug 09

ಬೆಂಗಳೂರು ವಿಮಾನ ನಿಲ್ದಾಣದಿಂದ ದ. ಕೊಡಗಿಗೆ ಫ್ಲೈಬಸ್ ಸೇವೆ; ವೇಳಾಪಟ್ಟಿ ಇಲ್ಲಿದೆ ನೋಡಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.
Read Full Story

09:05 AM (IST) Aug 09

ಬೆಂಗಳೂರಲ್ಲಿ ಪಾಪಿ ಪತಿಯಿಂದ ಪೈಶಾಚಿಕ ಕೃತ್ಯ.. ಪತ್ನಿಯ ಜೀವ ತೆಗೆದು ಮೋರಿಗೆ ಎಸೆದ! ಕಾರಣ?

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪಾಪಿ ಪತಿ ಪತ್ನಿಯನ್ನ ಬರ್ಬರವಾಗಿ ಸಾಯಿಸಿ ಮೋರಿಗೆ ಎಸೆದಿದ್ದಾನೆ. ಅಷ್ಟಕ್ಕೂ ಇಬ್ಬರ ಮಧ್ಯೆ ಆಗಿದ್ದೇನು? ಈ ಸ್ಟೋರಿ ಓದಿ..

Read Full Story

09:00 AM (IST) Aug 09

ಕೆಐಒಸಿಎಲ್‌-ಎನ್‌ಎಂಡಿಸಿ ವಿಲೀನಕ್ಕೆ ಕಾರ್ಮಿಕ ನಿಯೋಗ ಕೇಂದ್ರಕ್ಕೆ ಮನವಿ

ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಕಾರ್ಮಿಕರ ನಿಯೋಗವು ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಕೆಐಒಸಿಎಲ್ ಅನ್ನು ಎನ್‌ಎಂಡಿಸಿ ಜೊತೆ ವಿಲೀನಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿತು. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಸಚಿವರು, ಕಂಪನಿಯ ಉಳಿವಿಗಾಗಿ ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
Read Full Story

08:51 AM (IST) Aug 09

ದಶಕದಿಂದ ಉದ್ಘಾಟೆನೆಗೆ ಕಾಯುತ್ತಿರುವ ರೈಲ್ವೆ ನಿಲ್ದಾಣ; ಬೆಂಗಳೂರಿಗೆ ಪ್ರಯಾಣಿಸುವ ಅನಾನೂಕೂಲ

ಬಂಗಾರಪೇಟೆ ಬಳಿಯ ಹುದುಕುಳ ರೈಲ್ವೆ ನಿಲ್ದಾಣವು ದಶಕ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ಜನರಿಗೆ ಅನುಕೂಲವಾಗಬೇಕಿದ್ದ ಈ ನಿಲ್ದಾಣ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ಪಾಳುಬಿದ್ದು ಅನಾಥವಾಗಿದೆ.
Read Full Story

08:06 AM (IST) Aug 09

ರಾಜ್ಯ ರಾಜಕೀಯಕ್ಕೆ ಅಹಿಂಸಾ ಚೇತನ್ ಎಂಟ್ರಿ; ಸಮ-ಸಮಾಜ ನಿರ್ಮಾಣಕ್ಕೆ ಹೊಸ ರಾಜಕೀಯ ಪಕ್ಷದ ಘೋಷಣೆ!

ಹೋರಾಟಗಾರ ಅಹಿಂಸಾ ಚೇತನ್‌ ಅವರು ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಬಿಡದಿ ಟೌನ್‌ಶಿಪ್‌ ಮತ್ತು ನೀಟ್‌ ವ್ಯವಸ್ಥೆ ಬಗ್ಗೆ ಹೇಳಿದ್ದೇನು?

Read Full Story

07:35 AM (IST) Aug 09

B Nagendra - ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ - ಇಡಿ ತನಿಖೆ, ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?

ವಾಲ್ಮೀಕಿ ನಿಗಮ ಹಗರಣದಲ್ಲಿ ಜಾಮೀನು ಪಡೆದಿರುವ ಸಚಿವ ನಾಗೇಂದ್ರ, ಕೋರ್ಟ್ ಅನುಮತಿ ಇಲ್ಲದೆ ದೆಹಲಿಗೆ ಪ್ರವಾಸ ಕೈಗೊಂಡ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದ್ದು, ಷರತ್ತು ಉಲ್ಲಂಘನೆ ಸಾಬೀತಾದರೆ ಅವರ ಜಾಮೀನು ರದ್ದಾಗುವ, ಸಚಿವ ಸ್ಥಾನಕ್ಕೆ ಕುತ್ತು?

Read Full Story

07:33 AM (IST) Aug 09

ಒತ್ತುವರಿದಾರರಿಗೆ ಬಿಗ್ ಶಾಕ್ - 165 ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಂಡ ಬಿಎಂಟಿಸಿ

ಕಳೆದ ಎರಡು ವರ್ಷಗಳಲ್ಲಿ, ಬಿಎಂಟಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ 165 ಎಕರೆ ಭೂಮಿಯನ್ನು ಮರುವಶಕ್ಕೆ ಪಡೆದಿದೆ. ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದೆಯೂ ಈ ಕ್ರಮ ಮುಂದುವರಿಯಲಿದೆ.
Read Full Story

More Trending News