Published : May 01, 2026, 07:35 AM ISTUpdated : May 01, 2026, 10:55 PM IST

National News Live: 19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ

ಸಾರಾಂಶ

ನವದೆಹಲಿ (ಮೇ.1): ನವದೆಹಲಿ: ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಪ್ರಕಟವಾದ ಎರಡು ಹೇಳಿವೆ. ಟುಡೇಸ್‌ ಚಾಣಕ್ಯ ಹಾಗೂ ನ್ಯೂಸ್‌ 18 ಸಮೀಕ್ಷೆಯಲ್ಲೂ ಕೂಡ ಬಂಗಾಳದಲ್ಲಿ ಬಿಜೆಪಿ ತನ್ನ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:55 PM (IST) May 01

19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ

19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ, ಪತ್ನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಏನಿದು ಪ್ರಕರಣ

 

Read Full Story

10:29 PM (IST) May 01

ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವಿನ ಮರಣೋತ್ತರ ಪರೀಕ್ಷಾ ವರದಿ ಹಾಗೂ ತನಿಖೆ ಬೇರೆ ಕತೆ ಹೇಳುತ್ತಿದೆ.

 

Read Full Story

08:39 PM (IST) May 01

ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ

ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ, ಆಪರೇಷನ್ ಥಿಯೇಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಫೋಟೋ ಕ್ಲಿಕ್ ಮಾಡಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯ ಯುವತಿ ಫೋಟೋ ಹರಿದಾಡಿದೆ.

Read Full Story

07:11 PM (IST) May 01

ವಿಶ್ವಪಟಲ ಸೇರಿದ ಕರ್ನಾಟಕದ ನೀರ್​ ದೋಸೆ - 100ರ ಟಾಪ್​ ಲಿಸ್ಟ್​ನಲ್ಲಿ ಭಾರತದ 11 ತಿಂಡಿಗಳು- List ಇಲ್ಲಿದೆ

ಟೇಸ್ಟ್‌ಅಟ್ಲಾಸ್ ಬಿಡುಗಡೆ ಮಾಡಿದ ವಿಶ್ವದ 100 ಅತ್ಯುತ್ತಮ ಆಹಾರಗಳ ಪಟ್ಟಿಯಲ್ಲಿ ಕರ್ನಾಟಕದ ಮಸಾಲೆ ದೋಸೆ 6ನೇ ಸ್ಥಾನ ಮತ್ತು ನೀರ್ ದೋಸೆ 84ನೇ ಸ್ಥಾನ ಪಡೆದು ಜಾಗತಿಕ ಮನ್ನಣೆ ಗಳಿಸಿವೆ. ಈ ಪಟ್ಟಿಯಲ್ಲಿ ಭಾರತದ ಒಟ್ಟು 11 ತಿನಿಸುಗಳು ಸ್ಥಾನ ಪಡೆದಿರುವುದು ವಿಶೇಷ.
Read Full Story

07:05 PM (IST) May 01

'ಸೆಕ್ರೆಡ್ ಗೇಮ್ಸ್' ನಟಿ ರಿಯಲ್ ಲೈಫ್ನಲ್ಲಿ ಭಾರೀ ಯುದ್ಧ - ಆದ್ರೂ 'ಗೋ ಗರ್ಲ್‌' ಎನ್ನಿಸಿಕೊಂಡ ರಾಜಶ್ರೀ ದೇಶಪಾಂಡೆ!

ಸಾಮಾನ್ಯವಾಗಿ ನಟಿಯರು ತಮ್ಮ ದೇಹದ ಮೇಲಿನ ಸಣ್ಣ ಕಲೆಗಳನ್ನೂ ಮುಚ್ಚಿಡಲು ಮೇಕಪ್ ಮೊರೆ ಹೋಗುತ್ತಾರೆ. ಆದರೆ ರಾಜಶ್ರೀ ಅವರ ಧೈರ್ಯವೇ ಬೇರೆ! ಶಸ್ತ್ರಚಿಕಿತ್ಸೆಯ ನಂತರ ತಮ್ಮ ದೇಹದ ಮೇಲಾದ ಗಾಯದ ಗುರುತುಗಳನ್ನು ಯಾವುದೇ ಸಂಕೋಚವಿಲ್ಲದೆ ಜಗತ್ತಿಗೆ ತೋರಿಸಿದ್ದಾರೆ.

Read Full Story

06:42 PM (IST) May 01

ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ

ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ, ಮತ ಎಣಿಕಿಗೆ ಕೇವಲ ಮೂರು ದಿನ ಮಾತ್ರ ಬಾಕಿ. ಕೆಲ ಸಮೀಕ್ಷೆಗಳು ವಿಜಯ್ ಪಕ್ಷ ಅಧಿಕಾರಕ್ಕೆ ಬರವು ಸೂಚನೆ ನೀಡಿದ ಬೆನ್ನಲ್ಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

Read Full Story

06:25 PM (IST) May 01

IPL - ಓವರ್​ ಮೇಕಪ್​ ಎಂದು ಚಿಯರ್​ಲೇಡಿಗೆ CSK ಫ್ಯಾನ್ ವ್ಯಂಗ​ - ಅವಳ ಉತ್ತರಕ್ಕೆ ಇವ ಸುಸ್ತೋ ಸುಸ್ತು!

ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಪ್ರಮುಖ ಆಕರ್ಷಣೆಯಾಗಿದ್ದರೂ, ಟ್ರೋಲ್‌ಗೆ ಒಳಗಾಗುತ್ತಾರೆ. ವೈರಲ್ ಆದ ವಿಡಿಯೋವೊಂದರಲ್ಲಿ, ಸಿಎಸ್‌ಕೆ ಅಭಿಮಾನಿಯೊಬ್ಬ ಗುಜರಾತ್ ಟೈಟಾನ್ಸ್ ಚಿಯರ್‌ಲೀಡರ್‌ನ ಮೇಕಪ್ ಬಗ್ಗೆ ಕಾಮೆಂಟ್ ಮಾಡಿದಾಗ, ಆಕೆ  ಹೇಗೆತಿರುಗೇಟು  ನೀಡಿದಳು ನೋಡಿ.

Read Full Story

06:25 PM (IST) May 01

ಸಮಿಕ್ಷೆ ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ವಿಜಯ್? ತಮಿಳುನಾಡಿಗೆ 'ದಳಪತಿ'ಯೇ ಮುಂದಿನ ಮುಖ್ಯಮಂತ್ರಿಯಾ?

ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸ ಇದೆ. ಈ ಹಿಂದೆ ನಟ, ನಿರ್ದೇಶಕ ಎಂ.ಜಿ. ರಾಮಚಂದ್ರನ್, ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯ ಆಳಿದ್ರು. ನಂತರ ಜಯಲಲಿತಾ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿದ್ರು.

Read Full Story

05:57 PM (IST) May 01

ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ

ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ, ಮೇ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಪ್ರತಿ ತಿಂಗಳು ನಿಮಗೆ ಬರುತ್ತಿದ್ದ ಸ್ಯಾಲರಿ ಕಡಿಮೆಯಾಗಲಿದೆ.

 

Read Full Story

05:56 PM (IST) May 01

ಲವರ್​ ಜೊತೆ ಓಡಿ ಹೋದೋಳು ವೋಟ್​ ಹಾಕಲು ಬಂದು ಸಿಕ್ಕಿಬಿದ್ಲು - 5 ಗಂಟೆ ಕಾದಿದ್ದ ಗಂಡ ಏನ್ಮಾಡಿದ ನೋಡಿ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ, ಎರಡು ವರ್ಷಗಳ ಹಿಂದೆ ತೊರೆದುಹೋದ ಪತ್ನಿಗಾಗಿ ಪತಿಯೊಬ್ಬ ಮತಗಟ್ಟೆಯಲ್ಲಿ ಐದು ಗಂಟೆಗಳ ಕಾಲ ಕಾದಿದ್ದ. ಆಕೆ ಮತ ಚಲಾಯಿಸಲು ಬಂದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಭದ್ರತಾ ಪಡೆಗಳು ಆತನನ್ನು ಬಂಧಿಸಿವೆ. ನಂತರ, ಆಕೆಯ ವೋಟರ್ ಐಡಿಯಿಂದ ತನ್ನ ಹೆಸರನ್ನು ತೆಗೆಯುವಂತೆ ಆತ ವಿಚಿತ್ರ ಬೇಡಿಕೆಯಿಟ್ಟನು.
Read Full Story

04:57 PM (IST) May 01

ಹೈಕೋರ್ಟ್ ತೀರ್ಪಿನಿಂದ 'ಧುರಂಧರ್' ಚಿತ್ರತಂಡಕ್ಕೆ ಆನೆಬಲ.. 'ಸ್ಕ್ರಿಪ್ಟ್ ಕಳ್ಳತನ' ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್!

ಈ ಕಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಮಾಯಾನಗರಿ ಮುಂಬೈವರೆಗೂ ಹಬ್ಬಿದೆ. ಆದಿತ್ಯ ಧರ್ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ವಿರುದ್ಧ ಕೇಸ್ ಹಾಕಿದ್ದಾರೆ. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು "ಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಅವಹೇಳನಕಾರಿ ಮಾತು ಆಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.

Read Full Story

04:50 PM (IST) May 01

ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು

ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು , ಎಲ್ಲೆಂದರಲ್ಲಿ ಹಾವು ಕಾಣಿಸಿಕೊಳ್ಳುತ್ತಿದೆ. ದಿಢೀರ್ ಹಾವಿನ ಸಂಕಷ್ಟ ಕಾಣಿಸಿಕೊಳ್ಳಲು ಕಾರಣವೇನು?

 

Read Full Story

04:14 PM (IST) May 01

ಪ್ರಿಯಾಂಕಾ ಉಪೇಂದ್ರ 'ಸೆಪ್ಟೆಂಬರ್ 21' ಪ್ರೀಮಿಯರ್; ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ 'ಕೇನ್ಸ್' ಭಾಷಣಕ್ಕೆ ಆಹ್ವಾನ

'ಕೇನ್ಸ್‌ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ.

Read Full Story

04:10 PM (IST) May 01

ಸ್ಲೋ ಮಾಡಬೇಕಿಲ್ಲ, ಟೋಲ್ ಗೇಟ್ ಇಲ್ಲ, ಭಾರತದ ಮೊದಲ ANPR ಟೋಲ್ ಪ್ಲಾಜಾ ಆರಂಭ

ಸ್ಲೋ ಮಾಡಬೇಕಿಲ್ಲ, ಟೋಲ್ ಗೇಟ್ ಇಲ್ಲ, ಭಾರತದ ಮೊದಲ ANPR ಟೋಲ್ ಪ್ಲಾಜಾ ಆರಂಭ, ಎಷ್ಟೇ ವೇಗವಾಗಿ ಸಾಗಿದರೂ ಇಲ್ಲಿ ಆಟೋಮ್ಯಾಟಿಕ್ ಆಗಿ ಟೋಲ್ ಹಣ ಕಡಿತಗೊಳ್ಳಲಿದೆ. ಏನಿದು ಹೊಸ ವ್ಯವಸ್ಥೆ?

 

Read Full Story

03:34 PM (IST) May 01

ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ

ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ, ಗಿಲ್ ವಿಕೆಟ್ ಪತನವನ್ನು ಕೊಹ್ಲಿ ಸಂಭ್ರಮಿಸಿದ ಪರಿಯಲ್ಲೇ ರಹಸ್ಯ ಒಂದು ಅಡಗಿತ್ತು. ಇದೀಗ ಗಿಲ್ ಪೋಸ್ಟ್‌ನಿಂದ ಸಾಬೀತಾಗಿದೆ.

Read Full Story

02:53 PM (IST) May 01

ಜಬಲ್ಪುರ್ ದೋಣಿ ದುರಂತ - ಕನಿಷ್ಠ 9 ಮಂದಿ ಸಾವು, ಕಾರ್ಯಾಚರಣೆ ವೇಳೆ ಆ ದೃಶ್ಯ ಕಂಡು ಕಣ್ಣೀರಿಟ್ಟ ರಕ್ಷಣಾ ಸಿಬ್ಬಂದಿ!

ಮಧ್ಯಪ್ರದೇಶದ ಜಬಲ್ಪುರ್ ಬಳಿಯ ಬರ್ಗಿ ಅಣೆಕಟ್ಟಿನಲ್ಲಿ ಪ್ರವಾಸಿ ದೋಣಿ ಮಗುಚಿ, ಹಲವರು ಮೃತಪಟ್ಟಿದ್ದಾರೆ. ಭಾರೀ ಗಾಳಿ-ಮಳೆಗೆ ಸಂಭವಿಸಿದ ಈ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸುರಕ್ಷತಾ ಲೋಪಗಳ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಪರಿಹಾರ ಘೋಷಿಸಿ, ತನಿಖೆಗೆ ಆದೇಶಿಸಿದ್ದಾರೆ.
Read Full Story

02:33 PM (IST) May 01

TMC - ಮತ ಎಣಿಕೆಗೂ ಮುನ್ನ ಸ್ಟ್ರಾಂಗ್‌ ರೂಂ ಭದ್ರತೆ ಬಗ್ಗೆ ಟಿಎಂಸಿ ಆತಂಕ, ಇವಿಎಂ ತಿರುಚಲು ಬಿಜೆಪಿ ಯತ್ನ ಆರೋಪ!

ಮತ ಎಣಿಕೆಗೂ ಮುನ್ನ ಸ್ಟ್ರಾಂಗ್‌ ರೂಂ ಭದ್ರತೆಯಲ್ಲಿ ಲೋಪವಾಗಿದೆ ಮತ್ತು ಬಿಜೆಪಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಟಿಎಂಸಿಯ ಸೌಗತ ರಾಯ್ ಆರೋಪಿಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಕೂಡ ಸ್ಟ್ರಾಂಗ್‌ ರೂಂಗೆ ಭೇಟಿ ನೀಡಿ, ಇವಿಎಂ ತಿರುಚುವ ಯಾವುದೇ ಯತ್ನ ನಡೆದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
Read Full Story

02:10 PM (IST) May 01

'ಧುರಂಧರ್ 2ʼ ಭರ್ಜರಿ ಸಕ್ಸಸ್‌ ಬಳಿಕ ಬದಲಾಗಿಬಿಟ್ರಾ ನಿರ್ದೇಶಕ ಆದಿತ್ಯ ಧರ್;‌ ಸ್ವತಃ ಪತ್ನಿ ಯಾಮಿ ಗೌತಮ್‌ ಹೇಳಿದ್ದೇನು?

'ಧುರಂಧರ್ 2' ಬಿಡುಗಡೆಯಾಗಿ 6 ವಾರಗಳಾದರೂ ಚಿತ್ರಮಂದಿರಗಳು ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಇಷ್ಟು ದೊಡ್ಡ ಸಕ್ಸಸ್ ಬಳಿಕ ಆ ಚಿತ್ರದ ನಿರ್ದೇಶಕರಾದ ಆದಿತ್ಯ ಧರ್ ಅವರು ಸಂಪೂರ್ಣವಾಗಿ ಬದಲಾಗಿಹೋಗಿದ್ದಾರಾ? ಈ ಬಗ್ಗೆ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ಹೇಳಿರೋದೇನು?

Read Full Story

12:54 PM (IST) May 01

Strong Room - ಸ್ಟ್ರಾಂಗ್ ರೂಂ ವಿವಾದ - ಚುನಾವಣಾ ಆಯೋಗದ ವಿರುದ್ಧTMC ಗಂಭೀರ ಆರೋಪ, ಕಾನೂನು ಸಮರಕ್ಕೆ ಸಿದ್ಧತೆ?

ಸ್ಟ್ರಾಂಗ್ ರೂಂಗಳನ್ನು ತೆರೆಯುವಲ್ಲಿ ಅಕ್ರಮ ನಡೆದಿದೆ ಎಂದು ಟಿಎಂಸಿ ಸಂಸದೆ ಡೋಲಾ ಸೇನ್ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ನಡೆದುಕೊಂಡಿದೆ ಎಂದು ಅವರು ದೂರಿದ್ದಾರೆ. 

Read Full Story

12:51 PM (IST) May 01

ಎರಡೆರಡು ಗ್ಯಾಸ್ ಇದ್ದರೆ ಈ ಸುದ್ದಿನಾ ನೀವು ನೋಡ್ಲೇಬೇಕು, ಇವತ್ತಿನಿಂದಲೇ ಬಂದಿದೆ ಹೊಸ ನಿಯಮ!

ಮೇ 1 ರಿಂದ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕ ನಿಷೇಧ, ಸಿಲಿಂಡರ್ ಬುಕ್ಕಿಂಗ್‌ಗೆ ಕಠಿಣ ನಿಯಮಗಳು, ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಂತಹ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 

Read Full Story

12:08 PM (IST) May 01

Exit Polls - ಎಕ್ಸಿಟ್ ಪೋಲ್ ಭವಿಷ್ಯದಿಂದ ಮಮತಾಗೆ ನಡುಕ, ಸೋಲಿನ ಭಯದಲ್ಲಿ ಹೊಸ ನಾಟಕ - ಬಿಜೆಪಿ ಟೀಕೆ

ಎಕ್ಸಿಟ್ ಪೋಲ್‌ಗಳಲ್ಲಿ ಸೋಲಿನ ಭೀತಿ ಎದುರಾಗಿರುವುದರಿಂದ ಮಮತಾ ಬ್ಯಾನರ್ಜಿ 'ಪ್ಯಾನಿಕ್' ಆಗಿ 'ನಾಟಕ' ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಾದ ಶೆಹಜಾದ್ ಪೂನಾವಾಲಾ ಮತ್ತು ಸೈಯದ್ ಶಹನವಾಜ್ ಹುಸೇನ್ ಟೀಕಿಸಿದ್ದಾರೆ. ಇವಿಎಂ ತಿರುಚುವ ಬಗ್ಗೆ ಮಮತಾ ಮಾಡಿರುವ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
Read Full Story

09:45 AM (IST) May 01

EVM Tampering - ಮಧ್ಯರಾತ್ರಿ ಸ್ಟ್ರಾಂಗ್‌ ರೂಂಗೆ ಮಮತಾ ಬ್ಯಾನರ್ಜಿ ಭೇಟಿ, EVM ತಿರುಚುವ ಆರೋಪ, ಬಂಗಾಳದಲ್ಲಿ ಬಿರುಗಾಳಿ!

ಮತ ಎಣಿಕೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಇವಿಎಂಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷವಾದ ಟಿಎಂಸಿ ಅನುಮಾನಾಸ್ಪದ

Read Full Story

09:22 AM (IST) May 01

ಮೆಟಾದಿಂದ ಬೃಹತ್ ಉದ್ಯೋಗ ಕಡಿತ - AI ಹೂಡಿಕೆ, ಭವಿಷ್ಯದ ಯೋಜನೆಯ ವೆಚ್ಚ ನಿರ್ವಹಣೆಗಾಗಿ ಈ ಕ್ರಮವೆಂದ ಜುಕರ್‌ಬರ್ಗ್!

ಮೆಟಾ ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 10% ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ಮೇಲಿನ ಹೆಚ್ಚುತ್ತಿರುವ ಹೂಡಿಕೆಯನ್ನು ಸಮತೋಲನಗೊಳಿಸಲು ಮತ್ತು ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
Read Full Story

09:08 AM (IST) May 01

ಇರಾನ್‌ ಮೇಲೆ ಭರ್ಜರಿ 'ಚುಟುಕು ದಾಳಿ'ಗೆ ಅಮೆರಿಕ ಸಿದ್ಧತೆ? ಟ್ರಂಪ್‌ಗೆ ಸಲ್ಲಿಕೆಯಾಯ್ತು ಸೈನ್ಯದ ಮಾಸ್ಟರ್ ಪ್ಲಾನ್!

ಅಣ್ವಸ್ತ್ರ ಮಾತುಕತೆಗೆ ಒಪ್ಪದ ಇರಾನ್ ಮೇಲೆ ಚುಟುಕು ಆದರೆ ಭರ್ಜರಿ ದಾಳಿ ನಡೆಸಲು ಅಮೆರಿಕ ಯೋಜಿಸುತ್ತಿದೆ. ಅಧ್ಯಕ್ಷ ಟ್ರಂಪ್ ಈ ದಾಳಿಗೆ ಸಜ್ಜಾಗಿದ್ದು, ಇರಾನ್ ಅನ್ನು ಮಾತುಕತೆಗೆ ಸೆಳೆಯುವ ಉದ್ದೇಶ ಹೊಂದಿದ್ದಾರೆ.

Read Full Story

08:54 AM (IST) May 01

Jp Morgan - ಬದಲಾದ ಕಾಲ; ವಿವಾಹಿತ ಪುರುಷನ ಬೆನ್ನುಬಿದ್ದರಾ ಲೇಡಿ ಬಾಸ್? ಗಂಡಸರಿಗೂ ಸೇಫ್‌ ಇಲ್ಲದ ಟೈಮ್‌ ಬಂತಾ?

Jp Morgan Chase: ಪ್ರತಿಷ್ಠಿತ ಜೆಪಿ ಮೋರ್ಗನ್‌ ಕಂಪೆನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಲೋರ್ನಾ ಹಜ್ದಿನಿ (Lorna Hajdini) ಅವರ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಲೋರ್ನಾ ಜೊತೆಗೆ ನಡೆಸಿದ ಮೆಸೇಜ್‌ ಸ್ಕ್ರೀನ್‌ಶಾಟ್‌ ಕೂಡ ವೈರಲ್‌ ಆಗ್ತಿದೆ.

 

Read Full Story

08:30 AM (IST) May 01

RCB ಸೋಲಿನ ಬೆನ್ನಲ್ಲೇ ಕ್ಯಾಚ್ ವಿವಾದ - ಅಂಪೈರ್ ಜೊತೆ ವಿರಾಟ್ ಕೊಹ್ಲಿ ಗರಂ!

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದು, ನಾಯಕ ರಜತ್ ಪಟೀದಾರ್ ಅವರ ವಿವಾದಾತ್ಮಕ ಕ್ಯಾಚ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಥರ್ಡ್ ಅಂಪೈರ್ ತೀರ್ಪಿನ ಬಗ್ಗೆ ತಂಡದ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಘಟನೆಯು ಪಂದ್ಯದ ಫಲಿತಾಂಶದಷ್ಟೇ ಸದ್ದು ಮಾಡುತ್ತಿದೆ.
Read Full Story

08:02 AM (IST) May 01

ಹೋಟೆಲ್ ಆಹಾರ ಇನ್ನು ದುಬಾರಿ - ವಾಣಿಜ್ಯ ಸಿಲಿಂಡರ್ ಬೆಲೆ ಬರೊಬ್ಬರಿ 993 ರೂ. ಏರಿಕೆ; ಗೃಹಬಳಕೆ ದರ ಸ್ಥಿರ!

ಮೇ ತಿಂಗಳ ಆರಂಭದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹993 ರಷ್ಟು ಹೆಚ್ಚಿಸಲಾಗಿದೆ, ಇದರಿಂದ ದೆಹಲಿಯಲ್ಲಿ ಅದರ ಬೆಲೆ ₹3,071.50 ಕ್ಕೆ ತಲುಪಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Read Full Story

07:46 AM (IST) May 01

ಬಿಜೆಪಿಗೆ ಬಂಗಾಳ - ಮತ್ತೆರಡು ಸಮೀಕ್ಷೆಗಳಿಂದ ಭವಿಷ್ಯ; 'ಚಾಣಕ್ಯ'ನ ಲೆಕ್ಕಾಚಾರದಲ್ಲಿ ಕಮಲಕ್ಕೆ ಭರ್ಜರಿ ಜಯ!

ಪಶ್ಚಿಮ ಬಂಗಾಳ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಗೆಲುವಿನ ಮುನ್ಸೂಚನೆ ನೀಡಿವೆ. ಟುಡೇಸ್ ಚಾಣಕ್ಯ ಮತ್ತು ನ್ಯೂಸ್ 18 ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

Read Full Story

07:36 AM (IST) May 01

ಡಾರ್ಕ್ ಈಗಲ್‌ ದಾಳಿಗೆ ಅಮೆರಿಕ ಸಜ್ಜು, ಇದುವರೆಗೂ ಬಳಸದ ಕ್ಷಿಪಣಿ ಇರಾನ್‌ ಮೇಲೆ ಬಳಕೆ!

ಇರಾನ್‌ನ ಸಂಭಾವ್ಯ ದಾಳಿಗೆ ಪ್ರತಿಯಾಗಿ, ಅಮೆರಿಕವು ತನ್ನ ಅತ್ಯಾಧುನಿಕ ಮತ್ತು ಹಿಂದೆಂದೂ ಬಳಸದ 'ಡಾರ್ಕ್ ಈಗಲ್‌' ದೂರಸಾಮರ್ಥ್ಯದ ಕ್ಷಿಪಣಿಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ.

 

Read Full Story

07:36 AM (IST) May 01

ಧುರಂದರ್ ಆ್ಯಕ್ಸಿಡೆಂಟ್‌ಗೆ ಪಾಕಲ್ಲಿ ಜೈಷ್‌ ಉಗ್ರ ಬಲಿ

ಭಾರತಕ್ಕೆ ಬೇಕಾಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್, ಪಾಕಿಸ್ತಾನದ ಬಹಾವಲ್‌ಪುರದಲ್ಲಿ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿರುವ ಸರಣಿಯಲ್ಲಿ ಇದು ಮೂರನೇ ಪ್ರಕರಣವಾಗಿದೆ.

 

Read Full Story

07:35 AM (IST) May 01

ಅಮೆರಿಕ, ಇಸ್ರೇಲ್‌ಗೆ ಇರಾನ್‌ನಿಂದ ಹಾರ್ಟ್ಅಟ್ಯಾಕ್‌ ಅಸ್ತ್ರ ದಾಳಿಯ ಬೆದರಿಕೆ!

ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ, ಇರಾನ್ ತನ್ನ ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್‌ಗೆ ಹೊಸ ಎಚ್ಚರಿಕೆ ನೀಡಿದೆ. ಶತ್ರುಗಳಿಗೆ 'ಹಾರ್ಟ್ ಅಟ್ಯಾಕ್' ಉಂಟುಮಾಡುವಂತಹ ನಿಗೂಢ ಅಸ್ತ್ರವನ್ನು ಶೀಘ್ರದಲ್ಲೇ ಬಳಸುವುದಾಗಿ ಇರಾನ್‌ನ ನೌಕಾಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

 

Read Full Story

More Trending News