LIVE NOW
Published : Aug 10, 2026, 07:48 AM ISTUpdated : Aug 10, 2026, 09:09 AM IST

India News Live: ಗಿಲ್-ಜೈಸ್ವಾಲ್ ಅಬ್ಬರ, ಸಿರಾಜ್ ಸಿಕ್ಸರ್; ಭಾರತಕ್ಕೆ ರೋಚಕ ಜಯ

ಸಾರಾಂಶ

ದೇಶಾದ್ಯಂತ ಜೆನರೇಷನ್ ಝೀಗಳ ಹೋರಾಟದ್ದೇ ಸದ್ದು ಆವರಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆಸಿದ ತೀವ್ರ ಹೋರಾಟದ ಫಲದಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಜಾರ್ಖಂಡ್‌ನಲ್ಲಿಯೂ ಜೆನ್ ಝೀ ಹೋರಾಟ ಕೂಡ ಯಶಸ್ವಿಯಾಗಿದೆ. ಬಂಗಾಳದ ಸಿಎಂ ಸುವೇಂದು ಅಧಿಕಾರಿ ಕೂಡ ಜೆನ್ ಝೀ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಹಾಲಿ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ ಅವರು ವಿಶ್ವಾಸಾರ್ಹವಾದ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಕ್ರಮವಹಿಸಿದ್ದಾರೆ.

Yashasvi Jaiswal

09:09 AM (IST) Aug 10

ಗಿಲ್-ಜೈಸ್ವಾಲ್ ಅಬ್ಬರ, ಸಿರಾಜ್ ಸಿಕ್ಸರ್; ಭಾರತಕ್ಕೆ ರೋಚಕ ಜಯ

ಶ್ರೀಲಂಕಾ ಕ್ರಿಕೆಟ್‌ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಹಾಗೂ ಶುಭ್‌ಮನ್‌ ಗಿಲ್‌ ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ಮೊಹಮದ್‌ ಸಿರಾಜ್‌ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 6 ವಿಕೆಟ್‌ಗಳ ಜಯ ಸಾಧಿಸಿ, ಟೆಸ್ಟ್‌ ಸರಣಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
Read Full Story

08:52 AM (IST) Aug 10

300 ಅಡಿ ಕುಸಿದ ಏರ್‌ ಇಂಡಿಯಾ, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಾಯ, ಪೈಲಟ್‌ ಡ್ರಗ್‌ ಸೇವಿಸಿದ್ದು ಪತ್ತೆ!

ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನವು ತೀವ್ರ ಹೊಯ್ದಾಟಕ್ಕೆ ಸಿಲುಕಿ 300 ಅಡಿ ಕೆಳಗೆ ಕುಸಿದಿದೆ. ಈ ಘಟನೆಯ ನಂತರ ನಡೆಸಿದ ಡೋಪ್ ಪರೀಕ್ಷೆಯಲ್ಲಿ, ವಿಮಾನದ ಪೈಲಟ್‌ ಒಬ್ಬರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಡಿಜಿಸಿಎ ಇಬ್ಬರೂ ಪೈಲಟ್‌ಗಳನ್ನು ಅಮಾನತುಗೊಳಿಸಿದೆ.
Read Full Story

08:39 AM (IST) Aug 10

ಆಟಗಾರರು ಮಷಿನ್‌ಗಳಲ್ಲ, ಹೀಗಂದಿದ್ದೇಕೆ VVS ಲಕ್ಷ್ಮಣ್‌?

ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ (ಸಿಒಇ) ಅನ್ನು ಆಟಗಾರರ ಗಾಯದ ವಿಚಾರದಲ್ಲಿ ದೂಷಿಸುವುದು ಸರಿಯಲ್ಲ ಎಂದು ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಸಮರ್ಥಿಸಿಕೊಂಡಿದ್ದಾರೆ. ಆಟಗಾರರು ಮಷಿನ್‌ಗಳಲ್ಲ, ಮನುಷ್ಯರು, ಹಾಗಾಗಿ ಗಾಯಗೊಳ್ಳುವುದು ಸಹಜ ಎಂದ ಅವರು, ಸಿಒಇ ಮತ್ತು ತಂಡದ ಆಡಳಿತದ ನಡುವೆ ಯಾವುದೇ ಸಂವಹನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Read Full Story

07:50 AM (IST) Aug 10

NALSAR students protest: ವಿವಿ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್‌ ಆಮಂತ್ರಣಕ್ಕೆ 450 ವಿದ್ಯಾರ್ಥಿಗಳ ವಿರೋಧ!

ಹೈದರಾಬಾದ್‌ (ಆ.10): ಇಲ್ಲಿನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ವಿವಿಯ ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಆಮಂತ್ರಿಸಿದ್ದಕ್ಕೆ ಕೆಲವು ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇತ್ತೀಚೆಗೆ ಕಾಕ್ರೋಚ್‌ ಪಾರ್ಟಿ (ಸಿಜೆಪಿ) ಪ್ರತಿಭಟನಾಕಾರರ ಮೇಲಿನ ಹಿಂಸೆಯ ಪ್ರಕರಣವನ್ನು ಸಿಜೆಐ ನಿರ್ವಹಿಸಿದ ರೀತಿ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಸಿಜೆಪಿ ಪ್ರಕರಣ ನಿಭಾಯಿಸಿದ ರೀತಿಗೆ ಅಸಮಾಧಾನ

ವಿವಿಯ 2026ನೇ ಸಾಲಿನ ಘಟಿಕೋತ್ಸವಕ್ಕೆ ಸಿಜೆಐ ಆಮಂತ್ರಣವನ್ನು ವಿರೋಧಿಸಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸಹಿ ಸಂಗ್ರಹ ಮಾಡಿದ್ದಾರೆ. ಇದನ್ನು ಉಪಕುಲಪತಿ, ರಿಜಿಸ್ಟ್ರಾರ್‌, ಪ್ರಾಧ್ಯಾಪಕರು ಮತ್ತು ವಿವಿಯ ಇತರ ಅಧಿಕಾರಿಗಳಿಗೆ ಸಲ್ಲಿಸಿದ್ದು, ‘ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯದ ವಿಡಿಯೋ ನೋಡುವಂತೆ ಮನವಿ ಮಾಡಿದಾಗ, ಅದಕ್ಕೆಲ್ಲ ಸಮಯವಿಲ್ಲ ಎಂದು ಸಿಜೆಐ ಹೇಳಿದ್ದರು. ಅಲ್ಲದೆ ಯುವಕರನ್ನು ಜಿರಳೆಗಳು ಎಂದು ಕರೆದಿದ್ದರು. ಹಾಗಾಗಿ ಅವರನ್ನು ಅತಿಥಿಯಾಗಿ ಕರೆಯಬಾರದು’ ಎಂದು ಒತ್ತಾಯಿಸಿದ್ದಾರೆ.

Read Full Story

More Trending News