Published : Aug 10, 2026, 07:48 AM ISTUpdated : Aug 10, 2026, 11:35 PM IST

India News Live: ಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ

ಸಾರಾಂಶ

ದೇಶಾದ್ಯಂತ ಜೆನರೇಷನ್ ಝೀಗಳ ಹೋರಾಟದ್ದೇ ಸದ್ದು ಆವರಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆಸಿದ ತೀವ್ರ ಹೋರಾಟದ ಫಲದಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಜಾರ್ಖಂಡ್‌ನಲ್ಲಿಯೂ ಜೆನ್ ಝೀ ಹೋರಾಟ ಕೂಡ ಯಶಸ್ವಿಯಾಗಿದೆ. ಬಂಗಾಳದ ಸಿಎಂ ಸುವೇಂದು ಅಧಿಕಾರಿ ಕೂಡ ಜೆನ್ ಝೀ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಹಾಲಿ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ ಅವರು ವಿಶ್ವಾಸಾರ್ಹವಾದ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಕ್ರಮವಹಿಸಿದ್ದಾರೆ.

Madhuri Dixit

11:35 PM (IST) Aug 10

ಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು ಮರಾಠಿ ಕಿರುತೆರೆಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಸೋನಿ ಮರಾಠಿ ಮತ್ತು ಸೋನಿ ಲಿವ್ ವಾಹಿನಿಗಳು, ಜನಪ್ರಿಯ ಕ್ವಿಜ್ ಶೋ..

Read Full Story

10:49 PM (IST) Aug 10

ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ, ಆಗಿದ್ದೇನು?

ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿಗೆ ಅಂಚೆ ಮೂಲಕ ಜೀವ ಬೆದರಿಕೆ ಪತ್ರಗಳು ಬಂದಿವೆ. ಆರಂಭದಲ್ಲಿ ನಿರ್ಲಕ್ಷಿಸಿದ್ದರೂ, ಬೆದರಿಕೆಗಳು ನಿರಂತರವಾದಾಗ ಕುಟುಂಬವು ಪೊಲೀಸ್ ದೂರು ದಾಖಲಿಸಿದೆ.

Read Full Story

10:44 PM (IST) Aug 10

ಖುಷ್ಬೂಗೆ ಏನಾಯ್ತು? 32 ಕೆಜಿ ತೂಕ ಇಳಿಸಿ ಸಂಪೂರ್ಣ ಬದಲಾಗಿದ್ದಾರೆ ರಣಧೀರ ಚೆಲುವೆ!

ನಟಿ ಖುಷ್ಬೂ ಸುಂದರ್‌ ಎಂದರೆ ಕನ್ನಡ, ತಮಿಳು ಹಾಗೂ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಇದೀಗ ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ನಲ್ಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story

10:40 PM (IST) Aug 10

ಬೆಂಗಳೂರಿನಲ್ಲಿ ಇತ್ತು 40 ಎಕರೆ ಬಂಜರು ಭೂಮಿ.. ಜೈ ಶಾ, VVS ಜೋಡೆತ್ತುಗಳಾಗಿ 'ಕ್ರಿಕೆಟ್ ಅರಮನೆ' ಕಟ್ಟಿದ ರೋಚಕ ಸ್ಟೋರಿ

ಬೆಂಗಳೂರಿನ 40 ಎಕರೆ ಬಂಜರು ಭೂಮಿಯನ್ನು ವಿಶ್ವದರ್ಜೆಯ 'ಸೆಂಟರ್ ಆಫ್ ಎಕ್ಸಲೆನ್ಸ್' ಆಗಿ ಪರಿವರ್ತಿಸಿದ ಜೈ ಶಾ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದೃಢ ಸಂಕಲ್ಪಕ್ಕೆ ಈಗ ಜಯ ಸಿಕ್ಕಿದೆ. ಈ ಬೃಹತ್ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೊಸ ಕ್ರಾಂತಿ ಮಾಡಲಾಗಿದೆ.

Read Full Story

10:05 PM (IST) Aug 10

‘ಬ್ರೋ ರಿಲ್ಯಾಕ್ಸ್..’ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ನಟಿ ಮೃಣಾಲ್ ಖಡಕ್ ಉತ್ತರ

ನಟಿ ಮೃಣಾಲ್ ಠಾಕೂರ್ ಅವರು, ಟೀಂ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ..

Read Full Story

09:48 PM (IST) Aug 10

ಹಾರ್ದಿಕ್ ಪಾಂಡ್ಯ ಮುಂದಿನ ತಂಡ ಯಾವುದು? ಮುಂಬೈಗೆ ಆಫರ್ ಮೇಲೆ ಆಫರ್ ಕೊಟ್ಟ IPL ಫ್ರಾಂಚೈಸಿಗಳು!

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ ಎಂಬ ವದಂತಿಗಳು ಹಬ್ಬಿವೆ. ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳು ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ.

Read Full Story

09:37 PM (IST) Aug 10

Earthquake - 7.4 ತೀವ್ರತೆಗೆ ನಲುಗಿದ ಕೊಲಂಬಿಯಾ.. 20 ಮಂದಿ ಸಾವು, ದೊಡ್ಡ ದುರಂತದ ಆತಂಕ

ದಕ್ಷಿಣ ಅಮೆರಿಕಾದ ದೇಶವಾದ ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಬಲಿಯಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾದ ಈ ಕಂಪನದಿಂದಾಗಿ ಹತ್ತಾರು ಕಟ್ಟಡಗಳು ನೆಲಸಮವಾಗಿದ್ದು ಅವಶೇಷಗಳ ಅಡಿಯಲ್ಲಿ ನೂರಾರು ಜನರು ಸಿಲುಕಿರುವ ಭೀತಿ ಎದುರಾಗಿದೆ.

Read Full Story

08:38 PM (IST) Aug 10

ಮೇಘಸ್ಫೋಟಕ್ಕೆ ಕೊಚ್ಚಿ ಹೋದ ಭಾರತ-ಚೀನಾ ಗಡಿ ಸಮೀಪದ ಸೇನಾ ಬ್ರಿಜ್‌, ಎದೆನಡುಗುವ ದೃಶ್ಯ ಸೆರೆ!

ಉತ್ತರಾಖಂಡದ ಚಮೋಲಿ ಜಿಲ್ಲೆಯ ಲತಾ ಗ್ರಾಮದ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ, ಭಾರತ-ಚೀನಾ ಗಡಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಿಆರ್‌ಒ ನಿರ್ಮಿತ ಪ್ರಮುಖ ಸೇತುವೆಯೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ.

Read Full Story

08:10 PM (IST) Aug 10

wow! 5 ವರ್ಷದಲ್ಲಿ 1 ಲಕ್ಷಕ್ಕೆ 11.5 ಲಕ್ಷ ರೂಪಾಯಿ ಸಿಕ್ತು.. ಹಣ ಮಾಡೋದನ್ನ ಹೀಗೆ ಕಲೀಬೇಕು!

ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.

Read Full Story

08:05 PM (IST) Aug 10

UPI ಶುಲ್ಕದ ಕುರಿತ ಗೊಂದಲಕ್ಕೆ ಕ್ಲಿಯರ್‌ ಕಟ್‌ ಉತ್ತರ ನೀಡಿದ ಪೇಮೆಂಟ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ

ಯುಪಿಐ ಪಾವತಿಗಳು ಗ್ರಾಹಕರಿಗೆ ಮತ್ತು ಸಣ್ಣ ವರ್ತಕರಿಗೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಪೇಮೆಂಟ್ಸ್ ಕೌನ್ಸಿಲ್‌ ಆಫ್‌ ಇಂಡಿಯಾ ಸ್ಪಷ್ಟಪಡಿಸಿದೆ. ಪ್ರಸ್ತುತ ಚರ್ಚೆಯು ವ್ಯವಸ್ಥೆಯ ಸುಸ್ಥಿರತೆಯ ಕುರಿತಾಗಿದೆ ಎಂದಿದೆ.

Read Full Story

07:39 PM (IST) Aug 10

ಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್‌ ಯುದ್ಧ ಆಧಾರಿತ ವೆಬ್ ಸೀರೀಸ್! - 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್‌ ಮಹೀಂದ್ರಾ ಫಿದಾ

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿರುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್, 1999ರ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಅಜ್ಞಾತ ಸಾಹಸಗಾಥೆಯನ್ನು ಕಟ್ಟಿಕೊಡುತ್ತದೆ.

Read Full Story

07:15 PM (IST) Aug 10

6, 6, 6, 6, 6, 6! ಸತತ 6 ಎಸೆತಗಳಲ್ಲಿ 6 ಸಿಕ್ಸರ್ - ಏಕದಿನ ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆ..!

ಹ್ಯಾಂಪ್‌ಶೈರ್ ತಂಡದ ಯುವ ಆಟಗಾರ ಟೋಬಿ ಆಲ್ಬರ್ಟ್, ಎರಡು ಓವರ್‌ಗಳಲ್ಲಿ ತಾವು ಎದುರಿಸಿದ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಅವರು 37 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು, ಮತ್ತು ಅವರ ತಂಡ ಸಸೆಕ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
Read Full Story

07:01 PM (IST) Aug 10

ಮಗಳ PPF ಅಕೌಂಟ್‌ನಿಂದ 8 ಲಕ್ಷ ಹಣ ತೆಗೆದ ಅಪ್ಪ, ಕೋರ್ಟ್‌ ಮೆಟ್ಟಿಲೇರಿ ಬಡ್ಡಿ ಸಮೇತ ವಾಪಾಸ್‌ ಪಡೆದ ಪುತ್ರಿ!

ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು, ಅದನ್ನು ಜೀವನಾಂಶಕ್ಕೆ ಸರಿದೂಗಿಸಲು ಯತ್ನಿಸಿದ ತಂದೆಗೆ ದೆಹಲಿ ಹೈಕೋರ್ಟ್ ತಪರಾಕಿ ನೀಡಿದೆ. ಮಗಳ ಹೂಡಿಕೆಯ ಹಣಕ್ಕೆ ಆಕೆಯೇ ಸಂಪೂರ್ಣ ಹಕ್ಕುದಾರಳು ಮತ್ತು ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿ ಎಂದಿದೆ.

Read Full Story

06:29 PM (IST) Aug 10

ತಪ್ಪಾಗಿದೆ ಕ್ಷಮೆ ಇರಲಿ ಎಂದ ಬಿಗ್‌ಬಿ.. ಅಮಿತಾಭ್ 'ನಂಬರ್ ಲೀಕ್' ವಿರುದ್ಧ ಜಂತರ್ ಮಂತರ್ ಪ್ರತಿಭಟನೆ ಎಚ್ಚರಿಕೆ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂಖ್ಯೆ ನೀಡುವಾಗ ಮಾಡಿದ ಸಣ್ಣ ತಪ್ಪನ್ನು 'ದೊಡ್ಡ ತಪ್ಪು' ಎಂದು ಕರೆದು ಕ್ಷಮೆಯಾಚಿಸಿದ್ದಾರೆ. ಅಭಿಮಾನಿಯೊಬ್ಬರು ಈ ತಪ್ಪನ್ನು ಗಮನಕ್ಕೆ ತಂದ ನಂತರ, ಬಿಗ್ ಬಿ ಕ್ಷಮೆ ಕೇಳಿದ್ದು, ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Read Full Story

05:46 PM (IST) Aug 10

ಪತಿಯ ಚಿತಾಭಸ್ಮ ಹೊತ್ತು ಜಪಾನ್‌ನಿಂದ ಭಾರತಕ್ಕೆ - ಮಿಯಾಕೋ ಪ್ರೀತಿಯ ಕಥೆ ಕಣ್ಣೀರಾಗಿಸುವಂತಿದೆ!

ಜಪಾನ್‌ ಮೂಲದ ಮಿಯಾಕೋ ಕೆಟ್ಲೆಟ್‌ ತಮ್ಮ ನಿಧನರಾದ ಪತಿ ರಾಬರ್ಟ್‌ ಕೆಟ್ಲೆಟ್‌ ಅವರ ಚಿತಾಭಸ್ಮವನ್ನು ಹೊತ್ತು ಉತ್ತರಾಖಂಡದ ಬಾಗೇಶ್ವರ್‌ಗೆ ಆಗಮಿಸಿದ್ದಾರೆ. ಅಲ್ಲಿಗೆ ತೆರಳಿ ಪತಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

Read Full Story

05:36 PM (IST) Aug 10

ಕಣ್ಣೆದುರೇ 100 'ಮಕ್ಕಳ' ಮಾರಣಹೋಮ - ನಾವೇ ಬೆಳೆಸಿದ ಮಗುವದು, ಪ್ಲೀಸ್​ ಕೊಲ್ಲಬೇಡಿ ಎಂದ್ರೂ ಕೇಳದ ಅಧಿಕಾರಿಗಳು

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ, ಹೈ-ವೋಲ್ಟೇಜ್ ವಿದ್ಯುತ್ ಯೋಜನೆಗಾಗಿ ದಶಕದಿಂದ ಪೋಷಿಸಿದ್ದ 100ಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಮಹಿಳೆಯೊಬ್ಬರು ಮರಗಳನ್ನು ಅಪ್ಪಿ ಅತ್ತಿದ್ದಾರೆ. ಮಕ್ಕಳಂತೆ ಸಾಕಿದ್ದ ಮರಗಳನ್ನು ಕಡಿಯದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ, ಪೊಲೀಸರ ಸಹಾಯದಿಂದ ಮರಗಳನ್ನು ಕಡಿಯಲಾಗಿದ್ದು, ಈ ಘಟನೆಯು ಅಭಿವೃದ್ಧಿ ಮತ್ತು ರೈತರ ಸಂಕಟದ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ.
Read Full Story

05:35 PM (IST) Aug 10

17 ಕೆಜಿ ತೂಕ ಇಳಿಸಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್; ಸರ್ಫರಾಜ್ ಖಾನ್ ಹೋರಾಟದ ಕಥೆ

ಸತತ ಕಡೆಗಣನೆ ಮತ್ತು ಫಿಟ್ನೆಸ್ ಟೀಕೆಗಳ ನಡುವೆಯೂ ಛಲ ಬಿಡದೆ 17 ಕೆಜಿ ತೂಕ ಇಳಿಸಿಕೊಂಡು ಹೋರಾಡಿದ ಸರ್ಫರಾಜ್ ಖಾನ್, ಅಂತಿಮವಾಗಿ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಗಾಯಗೊಂಡ ಸಾಯಿ ಸುದರ್ಶನ್ ಬದಲಿಗೆ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದು, ಸ್ಪಿನ್ ಪಿಚ್‌ಗಳಲ್ಲಿ ಅವರ ಆಟವು ತಂಡಕ್ಕೆ ನಿರ್ಣಾಯಕವಾಗಲಿದೆ.
Read Full Story

05:28 PM (IST) Aug 10

ಪ್ರಧಾನಿ ಮೋದಿಯನ್ನ ಕಾಂಗ್ರೆಸ್ ಹೆಂಗೆಲ್ಲ ಕಿಂಡಾಲ್ ಮಾಡ್ತಿದೆ ನೋಡಿ.. ಏನಿದು Modiya-Bind?

ಸಂಸತ್ತಿನಲ್ಲಿ ಮೋದಿಯಾ-ಬಿಂದ್ ಎಂಬ ಬರವಣಿಗೆಯಿರುವ ಕನ್ನಡಕ ಧರಿಸಿದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರನ್ನು ವ್ಯಂಗ್ಯವಾಗಿ ಕುಟುಕಿದರು. ಕಣ್ಣಿನ ಪೊರೆ (ಮೋಟಿಯಾಬಿಂದ್) ಎಂಬ ಪದದ ಮೇಲೆ ಶಬ್ದ ಚಮತ್ಕಾರ ಮಾಡಿದ ಅವರು, ಭ್ರಷ್ಟಾಚಾರ ಮತ್ತು ದೇಶದ ಸಮಸ್ಯೆಗಳು ಕಾಣಿಸದ 'ಅಂಧಭಕ್ತರಿಗಾಗಿ' ಈ ಕನ್ನಡಕ ಎಂದು ಲೇವಡಿ ಮಾಡಿದರು.

Read Full Story

05:23 PM (IST) Aug 10

ಲೀಟರ್‌ಗೆ 10 ರೂಪಾಯಿಯಂತೆ ಗೋಮೂತ್ರ ಖರೀದಿಸಲು ಮುಂದಾದ ಸರ್ಕಾರ, ರೈತ ಫುಲ್‌ಖುಷ್‌!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿ ದರದಲ್ಲಿ ಗೋಮೂತ್ರ ಖರೀದಿಸುವ ಪ್ರಾಯೋಗಿಕ ಯೋಜನೆ ಆರಂಭವಾಗಿದೆ. ಈ ಯೋಜನೆಯಡಿ ಸಂಗ್ರಹಿಸಿದ ಗೋಮೂತ್ರದಿಂದ ಜೈವಿಕ ಔಷಧ ತಯಾರಿಸಲಾಗುತ್ತದೆ.

Read Full Story

05:20 PM (IST) Aug 10

ಹತ್ತಿಯಷ್ಟು ಹಗುರವಾದ, ದೈತ್ಯ ಗುರುಗ್ರಹದಷ್ಟೇ ದೊಡ್ಡದಾಗಿ ಬ್ರಹ್ಮಾಂಡದ ವಿಚಿತ್ರ 'ಸೂಪರ್ ಪಫ್' ಗ್ರಹಗಳ ಆವಿಷ್ಕಾರ!

ಖಗೋಳಶಾಸ್ತ್ರಜ್ಞರು ಭೂಮಿಯಿಂದ 1,113 ಜ್ಯೋತಿರ್ವರ್ಷಗಳ ದೂರದಲ್ಲಿ ಎರಡು ವಿಶಿಷ್ಟ 'ಸೂಪರ್ ಪಫ್' ಗ್ರಹಗಳನ್ನು ಪತ್ತೆಹಚ್ಚಿದ್ದಾರೆ. ಗುರುಗ್ರಹದಷ್ಟು ದೊಡ್ಡದಾಗಿದ್ದರೂ, ಈ ಗ್ರಹಗಳು ಹತ್ತಿ ಕ್ಯಾಂಡಿಗಿಂತಲೂ ಹಗುರವಾದ ದ್ರವ್ಯರಾಶಿ ಮತ್ತು ಸಾಂದ್ರತೆಯನ್ನು ಹೊಂದಿದ್ದು, ಗ್ರಹಗಳ ರಚನೆಯ ಬಗ್ಗೆ ಹೊಸ ಕುತೂಹಲ ಮೂಡಿಸಿವೆ.
Read Full Story

05:20 PM (IST) Aug 10

ಮಳೆ ಬಂದರೆ ಇನ್ಮುಂದೆ ಭಯವಾಗುತ್ತೆ - ನೆಟ್‌ಫ್ಲಿಕ್ಸ್‌ನ ಈ ಸಿನಿಮಾ ನೋಡಿದ್ರೆ ಹನಿಹನಿಯೂ ಚುಚ್ಚಿದಂತಾಗುತ್ತೆ!

ಮಳೆಗಾಲ ಅಂದ್ರೆ ಹಲವರಿಗೆ ಖುಷಿ. ತಂಪಾದ ವಾತಾವರಣ, ಕಿಟಕಿಯಿಂದ ಕಾಣಿಸುವ ಮಳೆಯ ದೃಶ್ಯ, ಬಿಸಿ ಬಿಸಿ ಕಾಫಿ.. ಹೀಗೆ ಮಳೆಗಾಲದ ಅನುಭವವೇ ವಿಭಿನ್ನ. ಆದರೆ, ನೆಟ್‌ಫ್ಲಿಕ್ಸ್‌ನಲ್ಲಿರುವ ಈ ಸಿನಿಮಾ ನೋಡಿದ ಬಳಿಕ..

Read Full Story

05:07 PM (IST) Aug 10

ಕಿಯಾರಾ ಬಗ್ಗೆ ಯಶ್ ಹೇಳಿರೋ 'ಈ ಮಾತನ್ನು' ಇಡೀ ಜಗತ್ತು ಗಮನಿಸಿದೆ.. ನಿಮಗೇನಾದ್ರೂ ಉತ್ತರ ಸಿಕ್ಕಿತಾ?

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ಕೇವಲ ಆಕ್ಷನ್ ಅಲ್ಲ, ಇದೊಂದು ವಿಭಿನ್ನ ಲೋಕದ ಕಥೆ ಎಂಬುದು ಟ್ರೇಲರ್‌ನಿಂದಲೇ ಸಾಬೀತಾಗಿದೆ. ಒಟ್ಟಿನಲ್ಲಿ, 26 ಆಗಸ್ಟ್ 2026ರಂದು ‘ಟಾಕ್ಸಿಕ್’ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

Read Full Story

05:05 PM (IST) Aug 10

ಹುಣಸೆ ಬೀಜದಿಂದ ನೀರು ಶುದ್ಧಿ - ವಿಶ್ವಖ್ಯಾತಿ ಗಳಿಸಿದ ಭಾರತದ 16 ವರ್ಷದ ವಿದ್ಯಾರ್ಥಿಗಳು-ಏನಿದು ಟೆಕ್ನಿಕ್​

ಭಾರತದ 16 ವರ್ಷದ ಮೂವರು ವಿದ್ಯಾರ್ಥಿಗಳು ಅಡುಗೆ ತ್ಯಾಜ್ಯವಾದ ಹುಣಸೆ ಬೀಜಗಳನ್ನು ಬಳಸಿ ನೀರಿನಿಂದ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೆಗೆದುಹಾಕುವ ಸರಳ ಪುಡಿಯನ್ನು ಕಂಡುಹಿಡಿದಿದ್ದಾರೆ. 'ಪ್ಲಸ್-ಸ್ಟಿಕ್' ಎಂಬ ಈ ಕ್ರಾಂತಿಕಾರಿ ಯೋಜನೆಗಾಗಿ, ಅವರು ಪ್ರತಿಷ್ಠಿತ 'ದಿ ಅರ್ಥ್ ಪ್ರೈಜ್ 2026' ಅಂತರರಾಷ್ಟ್ರೀಯ ಪರಿಸರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ತಂತ್ರವು ನೀರಿನಲ್ಲಿರುವ ಪ್ಲಾಸ್ಟಿಕ್ ಕಣಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ

Read Full Story

04:20 PM (IST) Aug 10

ಅಯೋಧ್ಯೆ ದೇಗುಲದ CEO ಆಗಲು 5000 ಅರ್ಜಿ.. ಅರ್ಹತೆಗಳು ಏನೇನು ಗೊತ್ತಾ..?

ಹಿಂದೂ ಆಗಿರಬೇಕು. ಶ್ರೀರಾಮನ ಭಕ್ತನಾಗಿರಬೇಕು ಸೇರಿದಂತೆ ಅನೇಕ ಅರ್ಹತೆಗಳೊಂದಿಗೆ ಅಯೋಧ್ಯೆ ಶ್ರೀರಾಮನ ಮಂದಿರಕ್ಕೆ ಸಿಇಓ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ 18 ಅಭ್ಯರ್ಥಿಗಳ ಲಿಸ್ಟ್‌ ಅಂತಿಮಗೊಳಿಸಲಾಗಿದೆ.

Read Full Story

04:19 PM (IST) Aug 10

ಲಂಕಾ ಎದುರಿನ ಗಾಲೆ ಟೆಸ್ಟ್‌ನಲ್ಲಿ ಅಪರೂಪದ ದಾಖಲೆ ಬರೆಯಲು ರೆಡಿಯಾದ ಶುಭ್‌ಮನ್ ಗಿಲ್! ಕೊಹ್ಲಿ, ರೋಹಿತ್‌ಗೂ ಸಾಧ್ಯವಾಗದ ದಾಖಲೆ ಗಿಲ್ ಪಾಲು?

ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 3000 ರನ್ ಪೂರೈಸಲು ಸಜ್ಜಾಗಿದ್ದಾರೆ. ಈ ಮೈಲಿಗಲ್ಲು ತಲುಪಲು ಅವರಿಗೆ ಕೇವಲ 157 ರನ್‌ಗಳ ಅಗತ್ಯವಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
Read Full Story

02:42 PM (IST) Aug 10

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂ ಎಸ್ ಧೋನಿಗೆ ಬಿಸಿಸಿಐನಿಂದ ತಿಂಗಳಿಗೆ ಸಿಗುವ ಪೆನ್ಷನ್ ಇಷ್ಟೊಂದಾ?

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ, ಬಿಸಿಸಿಐನಿಂದ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. 90 ಟೆಸ್ಟ್ ಪಂದ್ಯಗಳನ್ನಾಡಿರುವ ಅವರಿಗೆ ತಿಂಗಳಿಗೆ ₹70,000 ಪಿಂಚಣಿ ಸಿಗುತ್ತಿದ್ದು, ಈ ಲೇಖನವು ಬಿಸಿಸಿಐನ ಪರಿಷ್ಕೃತ ಪಿಂಚಣಿ ಯೋಜನೆ ಮತ್ತು ಧೋನಿಯ ವೃತ್ತಿಬದುಕಿನ ಬಗ್ಗೆ ವಿವರಿಸುತ್ತದೆ.
Read Full Story

01:36 PM (IST) Aug 10

ಕೆಮಿಕಲ್ಸ್​ ಹಾಕದೇ ವರ್ಷಪೂರ್ತಿ ತಾಜಾ ತಾಜಾ ಬಾಳೆ ಎಲೆ - ವಿದ್ಯಾರ್ಥಿಯ ಸಂಶೋಧನೆಗೆ ಸಿಕ್ಕಾಪಟ್ಟೆ ಡಿಮಾಂಡ್​

ಏಕಬಳಕೆಯ ಪ್ಲಾಸ್ಟಿಕ್‌ಗೆ ಪರಿಹಾರವಾಗಿ, ವಿದ್ಯಾರ್ಥಿ ಟೆನಿತ್ ಆದಿತ್ಯ ಹೊಸ ಸಂಶೋಧನೆ ಮಾಡಿದ್ದಾರೆ. ಯಾವುದೇ ರಾಸಾಯನಿಕಗಳಿಲ್ಲದೆ ಬಾಳೆ ಎಲೆಗಳನ್ನು ಒಂದು ವರ್ಷದವರೆಗೆ ತಾಜಾವಾಗಿರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದು ಪ್ಲಾಸ್ಟಿಕ್ ಕಪ್, ಪ್ಲೇಟ್‌ಗಳಿಗೆ ಪರಿಸರ ಸ್ನೇಹಿ ಪರ್ಯಾಯವಾಗಿದೆ.
Read Full Story

01:18 PM (IST) Aug 10

NEET-UG 2026 - ಪಾಲಿಗ್ರಾಫ್ ಟೆಸ್ಟ್‌ಗೆ ಸಲ್ಲಿಸಿದ್ದ ಆರೋಪಿಗಳ ಮನವಿ ತಿರಸ್ಕರಿಸಿದ ಕೋರ್ಟ್; ಸಿಬಿಐ ಚಾರ್ಜ್‌ಶೀಟ್‌ ಮೇಲಿನ ಆದೇಶ ಮುಂದೂಡಿಕೆ

ನೀಟ್-ಯುಜಿ 2026 ಪೇಪರ್ ಲೀಕ್ ಪ್ರಕರಣದ ಮೂವರು ಆರೋಪಿಗಳು ತಮಗೆ ಪಾಲಿಗ್ರಾಫ್ ಮತ್ತು ಲೈ ಡಿಟೆಕ್ಟರ್ ಟೆಸ್ಟ್ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, 13 ಆರೋಪಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್ ಮೇಲಿನ ಆದೇಶವನ್ನು ನ್ಯಾಯಾಲಯ ಮುಂದೂಡಿದೆ.

Read Full Story

01:05 PM (IST) Aug 10

ಅಕ್ಕಿನೇನಿ ಸೊಸೆ, ಆದ್ರೂ ಟಾಲಿವುಡ್‌ನಲ್ಲಿ ಅವಕಾಶಗಳಿಲ್ಲ! ಅಷ್ಟಕ್ಕೂ ಶೋಭಿತಾಗೆ ಹೀಗ್ಯಾಕೆ ಆಯ್ತು?

ನಟ ನಾಗ ಚೈತನ್ಯ ಅವರನ್ನು ಮದುವೆಯಾದ ನಂತರವೂ ಶೋಭಿತಾ ಧೂಳಿಪಾಳ ಅವರಿಗೆ ತೆಲುಗು ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಸಿಗುತ್ತಿಲ್ಲ. ಸದ್ಯ ಅವರು ಹಿಂದಿ ಮತ್ತು ತಮಿಳು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
Read Full Story

12:51 PM (IST) Aug 10

Narender Berwal - 'ನರೇಂದ್ರ' ಅನ್ನೋ ಹೆಸರನ್ನೇ ದ್ವೇಷಿಸ್ತೀನಿ ಅಂದಿದ್ದ ಪಾಕ್ ಬಾಕ್ಸರ್ - ಪ್ರಧಾನಿ ಮುಂದೆ ಹಳೆ ಕಥೆ ಬಿಚ್ಚಿಟ್ಟ ಬೆರ್ವಾಲ್

ಕಾಮನ್‌ವೆಲ್ತ್ ಗೇಮ್ಸ್ 2026ರ ಬೆಳ್ಳಿ ಪದಕ ವಿಜೇತ ನರೇಂದರ್ ಬೆರ್ವಾಲ್, ಪ್ರಧಾನಿ ಮೋದಿ ಜೊತೆ ಒಂದು ಹಳೆ ಘಟನೆ ಹಂಚಿಕೊಂಡಿದ್ದಾರೆ. 2015ರಲ್ಲಿ ತನ್ನಿಂದ ಸೋತ ಪಾಕಿಸ್ತಾನಿ ಬಾಕ್ಸರ್ ಒಬ್ಬ, 'ನಿನ್ನ ಹೆಸರು ನರೇಂದ್ರ, ಕೋಚ್ ಹೆಸರು ಅದೇ, ಭಾರತದ ಪ್ರಧಾನಿ ಹೆಸರು ಅದೇ. ನರೇಂದ್ರ ಹೆಸರು ಕೇಳಿದ್ರೆ ದ್ವೇಷ..

Read Full Story

12:42 PM (IST) Aug 10

Air Hostess Salary - ನಮ್ಮ ದೇಶದಲ್ಲಿ ಗಗನ ಸಖಿಯರ ಸಂಬಳ ಎಷ್ಟು? ಈ ಕೆಲಸಕ್ಕೆ ಇರಬೇಕಾದ ಅರ್ಹತೆಗಳೇನು?

ಏರ್ ಹೋಸ್ಟೆಸ್ ಆಗಬೇಕೆಂಬುದು ಅನೇಕ ಯುವತಿಯರ ಕನಸು. ಆದರೆ ಅವರ ಜೀವನಶೈಲಿ, ಸಂಬಳದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಈ ಉದ್ಯೋಗದಲ್ಲಿ ಸಂಬಳದ ಜೊತೆಗೆ ಹಲವು ಹೆಚ್ಚುವರಿ ಪ್ರಯೋಜನಗಳೂ ಸಿಗುತ್ತವೆ.

Read Full Story

12:29 PM (IST) Aug 10

ಮಾನವರ ಬುದ್ಧಿಶಕ್ತಿ ಮಟ್ಟ ಗಣನೀಯ ಕುಸಿತ, ಮನುಷ್ಯ ದಡ್ಡನಾಗುತ್ತಿರುವುದಕ್ಕೆ ಶಾಕಿಂಗ್ ಕಾರಣ ಹೇಳಿದ ವಿಜ್ಞಾನಿಗಳು!

ಒಂದು ಕಾಲದಲ್ಲಿ ಸ್ಥಿರವಾಗಿ ಏರುತ್ತಿದ್ದ ಮನುಷ್ಯನ ಬುದ್ಧಿಮತ್ತೆಯ (IQ) ಮಟ್ಟವು ಈಗ ಹಲವು ದೇಶಗಳಲ್ಲಿ ಕುಸಿಯುತ್ತಿದೆ. 'ರಿವರ್ಸ್ ಫ್ಲಿನ್ ಎಫೆಕ್ಟ್' ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ವಂಶವಾಹಿಗಳ ಬದಲು, ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆ ಮತ್ತು ಬದಲಾದ ಜೀವನಶೈಲಿಯೇ ಪ್ರಮುಖ ಕಾರಣವೆಂದು ಸಂಶೋಧನೆಗಳು ಹೇಳುತ್ತಿವೆ. ಈ ಹಿನ್ನಡೆಯನ್ನು ತಡೆಯಲು ಶೈಕ್ಷಣಿಕ ಸುಧಾರಣೆ ಮತ್ತು ಸಮತೋಲಿತ ಜೀವನಶೈಲಿಯ ಅಗತ್ಯವಿದೆ.
Read Full Story

11:47 AM (IST) Aug 10

ಸರ್ಫರಾಜ್ ಖಾನ್ ಎಂಟ್ರಿಯಿಂದ ಈ ಆಟಗಾರನಿಗೆ ಗೇಟ್‌ಪಾಸ್ ಫಿಕ್ಸ್; ಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಭಾರತ ತಂಡ ಹೀಗಿದೆ ನೋಡಿ!

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಗಾಯದ ಸಮಸ್ಯೆಯಿಂದಾಗಿ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್‌ಗೆ ಅವಕಾಶ ಸಿಕ್ಕಿದೆ. ಸ್ಪಿನ್‌ಗೆ ಉತ್ತಮವಾಗಿ ಆಡುವ ಸರ್ಫರಾಜ್ ಖಾನ್ ಮೊದಲ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಇದರಿಂದಾಗಿ ಧ್ರುವ್ ಜುರೆಲ್ ಬೆಂಚ್ ಕಾಯಬೇಕಾಗಬಹುದು.
Read Full Story

11:21 AM (IST) Aug 10

ಟೀ,ಬಿಸ್ಕೆಟ್ ಸೇರಿ ದಿನಸಿ ಬೆಲೆ ಏರಿಕೆ ಬಿಸಿ, FMCG ಕಂಪನಿಗಳಿಂದ ದಿನಬಳಕೆ ವಸ್ತು ದರ ಹೆಚ್ಚಿಸಲು ಪ್ಲಾನ್

ಸೋಪು, ಎಣ್ಣೆ,ಆಹಾರ ಪದಾರ್ಥಗಳು ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ FMCG ಕಂಪನಿಗಳು ಮುಂದಾಗಿದೆ. ಸೆಪ್ಟೆಂಬರ್‌ನಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಎಲ್ಲವೂ ದುಬಾರಿಯಾಗಲಿದೆ.

Read Full Story

11:15 AM (IST) Aug 10

ಭಾರತದ ಫ್ಯಾಷನ್ ಮಾರ್ಕೆಟ್‌ನಲ್ಲಿ ವಿದೇಶಿ ಬ್ರ್ಯಾಂಡ್‌ಗಳದ್ದೇ ಅಬ್ಬರ, ಜಗತ್ತಿನ ಶೇ.90ರಷ್ಟು ಉತ್ಪನ್ನಗಳು ಎಂಟ್ರಿ!

ಭಾರತವು ಜಾಗತಿಕ ಫ್ಯಾಷನ್ ಉದ್ಯಮದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದ್ದು, ವಿಶ್ವದ ಅಗ್ರ ಬ್ರ್ಯಾಂಡ್‌ಗಳು ಇಲ್ಲಿಗೆ ಲಗ್ಗೆ ಇಡುತ್ತಿವೆ. ಮೆಟ್ರೋ ನಗರಗಳಷ್ಟೇ ಅಲ್ಲದೆ, ಸಣ್ಣ ನಗರಗಳಿಂದಲೂ ಪ್ರೀಮಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ರಿಲಯನ್ಸ್‌ನಂತಹ ಭಾರತೀಯ ಕಂಪನಿಗಳು ಈ ವಿಸ್ತರಣೆಗೆ ಸಹಕರಿಸುತ್ತಿವೆ.
Read Full Story

10:52 AM (IST) Aug 10

ಕರ್ನಾಟಕದ ಎಸ್‌ಸಿ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹1,178.20 ಕೋಟಿ ಬಿಡುಗಡೆ

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕಾಗಿ ಕೇಂದ್ರ ಸರ್ಕಾರವು ₹1,178.20 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದು, ವಿವಿಧ ವರ್ಷಗಳಲ್ಲಿ ರಾಜ್ಯಕ್ಕೆ ಹಂಚಿಕೆಯಾದ ಅನುದಾನದ ವಿವರಗಳನ್ನು ಒದಗಿಸಿದ್ದಾರೆ.
Read Full Story

10:37 AM (IST) Aug 10

Vande mataram - ಗುಂಡಿಟ್ಟು ಕೊಂದ್ರೂ ಸರಿ, ವಂದೇ ಮಾತರಂ ಪೂರ್ಣ ಹಾಡಲ್ಲ - ಕೇರಳ ಸಚಿವ, ಸಂಸದ ಶಾಕಿಂಗ್ ಹೇಳಿಕೆ!

ಕೇರಳದಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವುದಿಲ್ಲ, ಹಿಂದಿನಂತೆಯೇ ಮೊದಲ ಎರಡು ದ್ವಿಪದಿ ಮಾತ್ರ ಹಾಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್‌ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

Read Full Story

10:20 AM (IST) Aug 10

ಕೋಲ್ಕತಾ - ನಿಷೇಧವಿದ್ದರೂ ಪೈಲಟ್ ಕಣ್ಣಿಗೆ ಬಿತ್ತು ಲೇಸರ್ ಕಿರಣ, ದೃಷ್ಟಿ ಮಂಜಾಗಿ ಬಾನಲ್ಲೇ ಸುತ್ತಿದ ವಿಮಾನ!

ಕೋಲ್ಕತಾದಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್ ಕಣ್ಣಿಗೆ ಲೇಸರ್ ಬೆಳಕು ಬಿದ್ದಿದ್ದರಿಂದ ಮಲೇಷ್ಯಾ ಏರ್‌ಲೈನ್ಸ್ ವಿಮಾನವು ಅಪಾಯದಿಂದ ಪಾರಾಗಿದೆ. ಮತ್ತೊಂದು ಘಟನೆಯಲ್ಲಿ, ಪುಣೆಯ ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ವಿಮಾನ ಪತನಗೊಂಡಿದ್ದು, ಇದೇ ಸ್ಥಳದಲ್ಲಿ ಈ ಹಿಂದೆ ಅಜಿತ್ ಪವಾರ್ ಸಹಿತ ಐವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.
Read Full Story

10:16 AM (IST) Aug 10

IND Vs SL 1st Test Playing XI - ಟೀಂ ಇಂಡಿಯಾಗೆ ಸರ್ಫರಾಜ್ ಖಾನ್ ರೀ ಎಂಟ್ರಿ; ಗಂಭೀರ್‌ಗೆ ಶುರುವಾಯ್ತು ಹೊಸ ತಲೆನೋವು!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆಯಾಗಿದ್ದು, ಗಾಯಗೊಂಡ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆಯಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆದ ಸರ್ಫರಾಜ್‌ ಆಯ್ಕೆ, ತಂಡದ ಮೂರನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನದ ಬಗ್ಗೆ ಕೋಚ್ ಗೌತಮ್ ಗಂಭೀರ್‌ಗೆ ಗೊಂದಲ ಸೃಷ್ಟಿಸಿದೆ.

Read Full Story

09:53 AM (IST) Aug 10

ಮೊಜ್ತಬಾ ಖಮೇನಿ ಅನಾರೋಗ್ಯ ವದಂತಿಗೆ ವಿಡಿಯೋ ಉತ್ತರ ನೀಡಿದ ಇರಾನ್, ಸಾವಿನ ವದಂತಿ ತಳ್ಳಿಹಾಕಲು ಈ ಕ್ರಮವೇ?

ಇರಾನ್‌ನ ಪರಮೋಚ್ಚ ನಾಯಕನ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹಬ್ಬಿದ್ದ ವದಂತಿಗಳನ್ನು ತಳ್ಳಿಹಾಕಲು ಇರಾನ್ ಸರ್ಕಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಫೆ.28ರ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಬಿಡುಗಡೆಯಾದ ವಿಡಿಯೋದಲ್ಲಿ ಅವರು ಆರೋಗ್ಯದಿಂದಿರುವಂತೆ ಕಾಣಿಸಿಕೊಂಡಿದ್ದಾರೆ.
Read Full Story

More Trending News