LIVE NOW
Published : Apr 12, 2026, 07:45 AM ISTUpdated : Apr 12, 2026, 03:16 PM IST

India news live: ಡಾ.ರಾಜ್ ಕುಮಾರ್ ಸಿನಿಮಾ ಸೇರಿ ಕನ್ನಡ ಸಿನಿಮಾಗಳಲ್ಲಿ ಜಮಮನಗೆದ್ದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್

ಸಾರಾಂಶ

ಜಾಮ್‌ನಗರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನೇತೃತ್ವದ ಗುಜರಾತಿನ ಜಾಮ್ ನಗರದಲ್ಲಿರುವ ವನತಾರಾ ವನ್ಯಜೀವಿ ಪುನರ್ವಸತಿ ಕೇಂದ್ರವು ವನ್ಯ ಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ವಿಶ್ವದ ಮೊದಲ ಸಮಗ್ರ ಜಾಗತಿಕ ವಿವಿ ಸ್ಥಾಪಿಸುವುದಾಗಿ ಘೋಷಿಸಿದೆ. ವಿವಿಯು ಪದವಿ ಪೂರ್ವ, ಸ್ನಾತಕೋತ್ತರ, ಫೆಲೋಶಿಪ್ ಮತ್ತು ಇತರ ವಿಶೇಷ ತರಬೇತಿಗಳನ್ನು ನೀಡುತ್ತದೆ. ಇವುಗಳಲ್ಲಿ ವನ್ಯಜೀವಿ ಔಷಧ ಮತ್ತು ಶಸ್ತ್ರಚಿಕಿತ್ಸೆ, ಪೋಷಣೆ, ತಳಿಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ ಇತ್ಯಾದಿ ಸೇರಿವೆ. ವನ್ಯ ಜೀವಿ ಆರೈಕೆಯಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Asha Bhosle Kannada songs

03:16 PM (IST) Apr 12

ಡಾ.ರಾಜ್ ಕುಮಾರ್ ಸಿನಿಮಾ ಸೇರಿ ಕನ್ನಡ ಸಿನಿಮಾಗಳಲ್ಲಿ ಜಮಮನಗೆದ್ದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್

ಡಾ.ರಾಜ್ ಕುಮಾರ್ ಸಿನಿಮಾ ಸೇರಿ ಕನ್ನಡ ಸಿನಿಮಾಗಳಲ್ಲಿ ಜಮಮನಗೆದ್ದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್, ಸ್ಯಾಂಡಲ್‌ವುಡ್‌ನಲ್ಲಿ ಆಶಾ ಭೋಸ್ಲೆ ಮೋಡಿ ಮಾಡಿದ್ದಾರೆ. ಕನ್ನಡಿಗರ ಮನಗೆದ್ದ ಹಾಡುಗಳು ಯಾವುದು

 

Read Full Story

03:11 PM (IST) Apr 12

ಆಶಾ ಪ್ರೇಮಿ ಜತೆ ಓಡಿ ಹೋಗಿದ್ದಕ್ಕೆ ವರ್ಷಗಳ ಕಾಲ ಸಿಟ್ಟಾಗಿದ್ದ ಲತಾ ಮಂಗೇಶ್ಕರ್, ಮುಖ ನೋಡದೆ ಒಟ್ಟಿಗೆ ಹಾಡಿದ ಸಹೋದರಿಯರು!

ಸಂಗೀತ ದಿಗ್ಗಜರಾದ ಆಶಾ ಭೋಸ್ಲೆ ಮತ್ತು ಲತಾ ಮಂಗೇಶ್ಕರ್ ಅವರ ಸಹೋದರ ಸಂಬಂಧದ ಅಪರೂಪದ ಕಥೆಯನ್ನು ಈ ಲೇಖನ ವಿವರಿಸುತ್ತದೆ. ಬಾಲ್ಯದ ಆತ್ಮೀಯತೆ, ಮದುವೆಯಿಂದ ಉಂಟಾದ ಬಿರುಕು, ಸಂಗೀತ ಕ್ಷೇತ್ರದ ಪೈಪೋಟಿ ಮತ್ತು ಕೊನೆಗೆ ಗಟ್ಟಿಗೊಂಡ ಬಾಂಧವ್ಯದ ಕುರಿತು ಇದು ಬೆಳಕು ಚೆಲ್ಲುತ್ತದೆ.
Read Full Story

03:01 PM (IST) Apr 12

ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ - ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ - ವೀಡಿಯೋ

ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ತಂದೆಯೊಬ್ಬ ತನ್ನ ಪುಟ್ಟ ಮಗನನ್ನು ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರುವಂತೆ ಪ್ರೇರೇಪಿಸಿದ್ದಾನೆ. ಅಪ್ಪನ ಮೇಲೆ ನಂಬಿಕೆಯಿಟ್ಟು ಮಗು ಕೆಳಗೆ ಹಾರಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

02:45 PM (IST) Apr 12

ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ

ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅಶಾ ಭೋಸ್ಲೆ ಜೊತೆ ನಡೆಸಿದ ಮಾತುಕತೆಗಳನ್ನು ನೆನಪಿಸಿಕೊಂಡಿದ್ದಾರೆ.

 

Read Full Story

02:40 PM (IST) Apr 12

16 ವಯಸ್ಸಿಗೆ ಓಡಿ ಹೋಗಿ ಮದುವೆಯಾದ ಆಶಾ ಭೋಸ್ಲೆ ವಿಚ್ಚೇದನ, ಅಫೇರ್, ಎರಡನೇ ಮದುವೆ, ಮಕ್ಕಳ ಸಾವು! ಗಾಯಕಿಯ ಆ ದಿನಗಳು

92ನೇ ವಯಸ್ಸಿಗೆ ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರ ಜೀವನವು ಏರುಪೇರುಗಳಿಂದ ಕೂಡಿತ್ತು. ಎರಡು ಮದುವೆ, ಒಂದು ಪ್ರೇಮ ಸಂಬಂಧ, ಹಾಗೂ ಇಬ್ಬರು ಮಕ್ಕಳ ಅಕಾಲಿಕ ಮರಣದಂತಹ ವೈಯಕ್ತಿಕ ಸಂಕಷ್ಟಗಳ ನಡುವೆಯೂ, ಅವರು ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.
Read Full Story

02:40 PM (IST) Apr 12

ಆಶಾ ಭೋಸ್ಲೆ ಹೆಸರಿನಲ್ಲಿರೋ ಗಿನ್ನೆಸ್ ದಾಖಲೆ ಕೇಳಿದ್ರೆ ನಿಜಕ್ಕೂ ಭಾರತೀಯರಿಗೆ ಹೆಮ್ಮೆ ಆಗುತ್ತೆ!

92ನೇ ವಯಸ್ಸಿನಲ್ಲಿ ಆಶಾ ಭೋಸ್ಲೆ ಅವರ ನಿಧನವು ಒಂದು ಅಸಾಧಾರಣ ಸಂಗೀತ ಪಯಣದ ಅಂತ್ಯವನ್ನು ಸೂಚಿಸುತ್ತದೆ. ತಲೆಮಾರುಗಳನ್ನೇ ತನ್ನ ಕಂಠದಿಂದ ಮೋಡಿ ಮಾಡಿದ ಅವರು, ಬಹುಮುಖ ಪ್ರತಿಭೆ, ಉತ್ಸಾಹ ಮತ್ತು ಸಾರ್ವಕಾಲಿಕ ಹಾಡುಗಳ ಸಾಟಿಯಿಲ್ಲದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.
Read Full Story

01:52 PM (IST) Apr 12

ನೋವಿನಲ್ಲೇ ಕಳೆದ ಮೊದಲ ಮದುವೆ ದಿನಗಳ ಬಗ್ಗೆ ಆಶಾ ದೀದಿ ಹೀಗೆ ಹೇಳಿದ್ರು

ಖ್ಯಾತ ಗಾಯಕಿ ಆಶಾ ಭೋಸ್ಲೆ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಅದ್ಭುತ ಸಂಗೀತದ ಮೂಲಕ ಅಚ್ಚಳಿಯದ ಪರಂಪರೆ ಬಿಟ್ಟು ಹೋಗಿದ್ದಾರೆ. ಒಮ್ಮೆ ತಮ್ಮ ನೋವಿನ ಮೊದಲ ಮದುವೆ ಬಗ್ಗೆ ಅವರು ಹೇಳಿಕೊಂಡಿದ್ದರು.

Read Full Story

01:37 PM (IST) Apr 12

ಸಂಗೀತ ಲೋಕದ ಆಶಾಕಿರಣ ಅಸ್ತಂಗತ, ಆಶಾ ಭೋಸ್ಲೆ ಯಾರು? ವೈಯಕ್ತಿಕ ಜೀವನ, ಸಾಧನೆ, ಲೆಕ್ಕವಿಲ್ಲದ ಪ್ರಶಸ್ತಿ!

ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಂಟು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಅವರು, ಪದ್ಮ ವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
Read Full Story

01:05 PM (IST) Apr 12

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

Read Full Story

12:34 PM (IST) Apr 12

ಟ್ರಿಸ್ಟಿನ್ ಸ್ಟಬ್ಸ್‌ಗೆ ಗ್ಲೌಸ್ ಬದಲಿಸಲು ಅಂಪೈರ್ ಬಿಡಲಿಲ್ಲ ಯಾಕೆ? ಐಪಿಎಲ್ ನಿಯಮ ಏನು ಹೇಳುತ್ತೆ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಬಹಳ ರೋಚಕವಾಗಿತ್ತು. ಈ ಪಂದ್ಯದ ವೇಳೆ ಐಪಿಎಲ್‌ನ ಒಂದು ಕುತೂಹಲಕಾರಿ ನಿಯಮದ ಬಗ್ಗೆ ಚರ್ಚೆ ಶುರುವಾಗಿದೆ.
Read Full Story

12:26 PM (IST) Apr 12

US-Iran Talks - ಮುರಿದುಬಿದ್ದ ಮಾತುಕತೆ; ವಿಶ್ವದ ಆರ್ಥಿಕತೆಗೆ ಕಾದಿದೆಯಾ ದೊಡ್ಡ ಕಂಟಕ?

ಅಮೆರಿಕ ಮತ್ತು ಇರಾನ್ ನಡುವಿನ 'ಇಸ್ಲಾಮಾಬಾದ್ ಮಾತುಕತೆ' ವಿಫಲಗೊಂಡಿದ್ದು, ಜಾಗತಿಕ ಆರ್ಥಿಕ ದುರಂತದ ಭೀತಿ ಎದುರಾಗಿದೆ. ತಜ್ಞ ರಾಬಿಂದರ್ ಸಚ್‌ದೇವ್ ಪ್ರಕಾರ, 'ಎರಡೂ ದೇಶಗಳು ಕಠಿಣ ನಿಲುವು ತಳೆದಿವೆ'. ಇದು ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಯುದ್ಧದ ಸಾಧ್ಯತೆಯನ್ನೂ ಹೆಚ್ಚಿಸಿದೆ.
Read Full Story

12:05 PM (IST) Apr 12

Udit Raj - ಇಸ್ಲಾಮಾಬಾದ್ ಮಾತುಕತೆ ವಿಫಲ, ಯುದ್ಧ ಶುರುವಾಗಬಹುದು ಎಂದು ಎಚ್ಚರಿಸಿದ ಕಾಂಗ್ರೆಸ್ ನಾಯಕ!

ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುರಿದುಬಿದ್ದಿದೆ. ಇದರಿಂದ ಜಾಗತಿಕವಾಗಿ ಗಂಭೀರ ಪರಿಣಾಮಗಳಾಗಬಹುದು ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಎಚ್ಚರಿಸಿದ್ದಾರೆ. ಪಾಕಿಸ್ತಾನದ ಈ ನಡೆ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದೂ ಅವರು ಟೀಕಿಸಿದ್ದಾರೆ. 2\

Read Full Story

11:53 AM (IST) Apr 12

ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ

ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ, ಅತೀ ವೇಗದಲ್ಲಿದ್ದ ಬಸ್, ಎದುರಿನಿಂದ ಬಂದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

 

Read Full Story

11:25 AM (IST) Apr 12

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು, ಮದುವೆ ಮರು ದಿನ ಮನೆಗೆ ತೆರಳುವಾಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದುರಂತ ಅಂದರೆ ಈ ಮಡಿದವ ನಾಲ್ವರ ಪೈಕಿ ಸಂಬಂಧಿಗೆ ಇನ್ನೆರಡೇ ದಿನದಲ್ಲಿ ಎಂಗೇಜ್‌ಮೆಂಟ್ ನಡೆಯಬೇಕಿತ್ತು.

Read Full Story

11:24 AM (IST) Apr 12

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು

US-Iran peace talks Islamabad: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಸುತ್ತಿವೆ.ಈ ಮಾತುಕತೆಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಅಮೆರಿಕಾದ ಎಫ್-16 ವಿಮಾನಗಳು ಬೆಂಗಾವಲು ಒದಗಿಸಿದ ವೀಡಿಯೋಗಳು ವೈರಲ್ ಆಗಿವೆ.

Read Full Story

10:52 AM (IST) Apr 12

15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?

ಐಪಿಎಲ್ 2026ರಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇವರು, ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧ ಆಡಿದ ಇನ್ನಿಂಗ್ಸ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

Read Full Story

09:19 AM (IST) Apr 12

ಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ

ಕಳೆದ ವರ್ಷದ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು 13,000 ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಒಳಗೊಂಡ ಮಿಲಿಟರಿ ತುಕಡಿಯನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ಈ ನಿಯೋಜನೆಯು ಉಭಯ ದೇಶಗಳ ನಡುವಿನ ಜಂಟಿ ಮಿಲಿಟರಿ ಸಹಕಾರ ಮತ್ತು ರಕ್ಷಣಾ ಬಲವರ್ಧನೆಯ ಉದ್ದೇಶವನ್ನು ಹೊಂದಿದೆ.
Read Full Story

09:00 AM (IST) Apr 12

ವೈಭವ್ ಸೂರ್ಯವಂಶಿ ಶಾಕಿಂದ ಹೊರಬರುವ ತವಕದಲ್ಲಿ ಆರ್‌ಸಿಬಿ, ಮುಂಬೈ! ವಾಂಖೆಡೆಯಲ್ಲಿಂದು ಹೈವೋಲ್ಟೇಜ್ ಮ್ಯಾಚ್

ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ನಂತರ, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಮಸ್ಯೆ ಎದುರಿಸುತ್ತಿರುವ ಮುಂಬೈಗೆ ಈ ಪಂದ್ಯ ನಿರ್ಣಾಯಕವಾಗಿದ್ದರೆ, ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ಗಮನಹರಿಸಲಿದೆ.
Read Full Story

08:31 AM (IST) Apr 12

IPL 2026 - ನಿನ್ನೆ ನಡೆದ ಸಿಎಸ್‌ಕೆ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಸಂಜು ಸ್ಯಾಮ್ಸನ್‌ರ ಸ್ಫೋಟಕ ಶತಕದ (115*) ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 212 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, ಕ್ರೇಗ್‌ ಓವರ್ಟನ್‌ರ (4/18) ಮಾರಕ ಬೌಲಿಂಗ್ ದಾಳಿಗೆ ನಲುಗಿ 26 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಚೆನ್ನೈ 2026ರ ಐಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು.
Read Full Story

08:04 AM (IST) Apr 12

ಹೋರ್ಮುಜ್ ತೆರೆಯಲು ಇರಾನ್‌ಗೆ ತಾನೇ ಹೂತಿಟ್ಟ ಜಲಬಾಂಬ್ ಅಡ್ಡಿ - ಹೋರ್ಮುಜ್‌ ತೆರವು ಆರಂಭಿಸಿದ್ದೇವೆ ಎಂದ ಟ್ರಂಪ್

ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಅಳವಡಿಸಿದ್ದ ಜಲಸ್ಪೋಟಕಗಳು ಈಗ ಅದಕ್ಕೇ ತಿರುಗುಬಾಣವಾಗಿವೆ. ಈ ಸ್ಫೋಟಕಗಳನ್ನು ಪತ್ತೆಹಚ್ಚಲು ಸಾಧ್ಯವಾಗದೆ, ಕದನ ವಿರಾಮದ ಹೊರತಾಗಿಯೂ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವನ್ನು ತೆರೆಯಲು ಇರಾನ್ ಪರದಾಡುತ್ತಿದೆ.
Read Full Story

More Trending News