ನವದೆಹಲಿ: ತಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಎದುರಾದಲ್ಲಿ ಆ ಬಗ್ಗೆ ಕಾಂಗ್ರೆಸ್ನ ಮುಸ್ಲಿಂ ನಾಯಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಇಲ್ಲಿ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್, ‘ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದರೆ ಆಗ ನಿರ್ದಿಷ್ಟವಾಗಿ ಮುಸ್ಲಿಮರಿಗೇ ಅನ್ಯಾಯವಾಗಿದೆ ಎನ್ನಬೇಕೇ ಹೊರತೂ ಒಟ್ಟಾರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಎನ್ನಲು ಹೋಗಬಾರದು. ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಂ ಪದ ಬಳಕೆಗೆ ಹಿಂಜರಿಯಬಾರದು. ಜೊತೆಗೆ ಪಕ್ಷದಲ್ಲಿ ಮುಸ್ಲಿಮರ ಪಾಲುದಾರಿಕೆ ಹೆಚ್ಚಿಸಲು ಯಾವುದಾದರೂ ಹೊಸ ವೇದಿಕೆ ತೆರೆಯಬೇಕು’ ಎಂದೂ ಕರೆ ನೀಡಿದ್ದಾರೆ.
ಸದ್ಯದ ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ದಿನ ಬಾಳದು ಎಂದು ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
‘ಮುಂದಿನ ಕೆಲ ತಿಂಗಳಲ್ಲಿ ದೇಶದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಆರ್ಥಿಕ ಸಂಕಷ್ಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ರಾಜಕೀಯದ ಮುಖ್ಯ ಚರ್ಚಾ ವಿಷಯ ಹಿಂದೂ- ಮುಸ್ಲಿಂ ಬದಲಾಗಿ ಶ್ರೀಮಂತ- ಬಡವ ಎಂಬುದಾಗಿ ಬದಲಾಗಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.
10:15 PM (IST) May 25
ರಶ್ಮಿಕಾ ಮಂದಣ್ಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಜಪಾನ್ನ ಟೋಕಿಯೋದಲ್ಲಿ ಶನಿವಾರ ರಾತ್ರಿ ನಡೆದ 10ನೇ ಕ್ರಂಚಿರೋಲ್ ಆನಿಮೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ವಿನ್ಸ್ಟನ್ ಡ್ಯೂಕ್ ಜೊತೆ ರಶ್ಮಿಕಾ ವೇದಿಕೆ ಹಂಚಿಕೊಂಡಿದ್ದಾರೆ.
09:38 PM (IST) May 25
ಚರಣ್ ಕ್ಷಮೆ ಕೇಳಿದ ಮೇಲೆ ಅದಕ್ಕೆ ಉತ್ತರ ಭಾರತದ ಫ್ಯಾನ್ಸ್ ಓಕೆ ಯಶ್ ಬಾಸ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಚರಣ್ನ ಯಶ್ ಅಂತಿರೋದ್ಯಾಕೆ ಗೊತ್ತಾ,.? ಅದರ ಹಿಂದೆನೂ ಭಾರೀ ದೊಡ್ಡದೊಂದು ಕಥೆ ಇದೆ… ಏನದು ನೋಡಿ..
09:27 PM (IST) May 25
ಕೇದಾರ್ನಾಥ್ ಸಿನಿಮಾಕ್ಕಾಗಿ 45 ಕೆಜಿ ತೂಕ ಇಳಿಸಿಕೊಳ್ಳುವ ಮುನ್ನ ತಮ್ಮ ಆಹಾರ ಪದ್ಧತಿ ಹೇಗಿತ್ತು ಎಂದು ಸಾರಾ ಅಲಿ ಖಾನ್ ವಿವರಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪಿಜ್ಜಾ, ಬ್ರೌನಿಗಳನ್ನು ಮನಸ್ಸಿಗೆ ಬಂದಂತೆ ತಿನ್ನುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
08:54 PM (IST) May 25
ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಪಿಎನ್ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ದಿಗ್ಬಂಧನದಿಂದ ಉಂಟಾಗಿರುವ ಗ್ಯಾಸ್ ಕೊರತೆಯನ್ನು ನಿಭಾಯಿಸಲು ಈ ನಿರ್ಧಾರ ಮಾಡಲಾಗಿದೆ.
08:41 PM (IST) May 25
ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, "ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
08:22 PM (IST) May 25
ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯದ ಕುರಿತು ಗಿಣಿಶಾಸ್ತ್ರದ ಭವಿಷ್ಯವೊಂದು ವೈರಲ್ ಆಗಿದೆ. ಈ ಹಿಂದೆ ಆರ್ಸಿಬಿ ಗೆಲುವನ್ನು ನಿಖರವಾಗಿ ಭವಿಷ್ಯ ನುಡಿದಿದ್ದ ಗಿಣಿ, ಈ ಪಂದ್ಯದಲ್ಲೂ ಆರ್ಸಿಬಿ ಗೆದ್ದು ಫೈನಲ್ಗೆ ಏರಲಿದೆ ಎಂದು ಹೇಳಿದೆ.
07:35 PM (IST) May 25
ದಳಪತಿ ವಿಜಯ್ ಸಿಎಂ ಆದ ಬೆನ್ನಲ್ಲೇ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂಟರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ರಾಜಕೀಯಕ್ಕೆ ಬರಲು ನನ್ನ ಬಳಿ ಹಣವಿಲ್ಲ, ಹಣವಿಲ್ಲದೆ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
06:40 PM (IST) May 25
ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬುವುದನ್ನು ಈ ನಟ ಬಹಿರಂಗ ಪಡಿಸಿಲ್ಲ. ಆದರೆ 'ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ…' ಎಂದಿದ್ದಾರೆ..
06:21 PM (IST) May 25
ನಟಿ ಅಮೀಶಾ ಪಟೇಲ್ ತಮ್ಮ ಹಳೆಯ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ದಿನಗಳಿಗೆ ಜಾರಿದ ಅವರು, ಇನ್ಸ್ಟಾಗ್ರಾಮ್ನಲ್ಲಿ ಒಂದು ಅಪರೂಪದ ಫೋಟೋ ಶೇರ್ ಮಾಡಿದ್ದಾರೆ.
05:58 PM (IST) May 25
'ಕಾತಲ್' ಶೂಟಿಂಗ್ ವೇಳೆ ಸೂರ್ಯ ಅವರನ್ನು ಭೇಟಿಯಾಗಲು ಆಗಲಿಲ್ಲ. ಆದರೆ, ಮುಂದೆ ಭೇಟಿಯಾದರೆ ಅವರ ಜೊತೆ ನಟಿಸುವುದಕ್ಕಾಗಿಯೇ ಭೇಟಿಯಾಗುತ್ತೇನೆ ಎಂದು ಅಂದುಕೊಂಡಿದ್ದೆ ಎಂದು ನಟಿ ಅನಘಾ ರವಿ ಹೇಳಿಕೊಂಡಿದ್ದಾರೆ.
05:48 PM (IST) May 25
ಐಪಿಎಲ್ 2026ರಲ್ಲಿ, ಕಡಿಮೆ ಆಟಗಾರರನ್ನು ಬಳಸಿ ಸ್ಥಿರತೆ ಕಾಯ್ದುಕೊಂಡ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿವೆ. ಅತಿ ಹೆಚ್ಚು ಆಟಗಾರರನ್ನು ಪ್ರಯೋಗಿಸಿದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿವೆ.
05:40 PM (IST) May 25
ಮಲಯಾಳಂ ಬಿಗ್ ಬಾಸ್ ಸೀಸನ್ 8ರ ಲೋಗೋ ರಿಲೀಸ್ ಆಗಿದ್ದು, ಅದರಲ್ಲಿರುವ ಗ್ರೀಕ್ ಪದದ ರಹಸ್ಯವನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
05:28 PM (IST) May 25
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.
05:06 PM (IST) May 25
Top 10 tips to maintain your mental health: ಇಂದು ಎಲ್ಲರೂ ಧಾವಂತದ ಬದುಕಿನಲ್ಲಿ ಓಡುತ್ತಿದ್ದಾರೆ. ಕೆಲಸದ ಒತ್ತಡ, ಒಂಟಿತನ, ಅನಾರೋಗ್ಯ, ಶಿಸ್ತಿಲ್ಲದ ಜೀವನಶೈಲಿ ಅನೇಕರನ್ನು ಡಿಪ್ರೆಶನ್ಗೆ ತಳ್ಳಿ ಹಾಕುತ್ತಿವೆ. ಜೀವನವೇ ಸಾಕು, ಜೀವನದ ಮೇಲೆ ಜಿಗುಪ್ಸೆ ಬಂದಿದೆ ಎಂದು ಕೆಲವರು ಹೇಳುತ್ತಾರೆ.
04:58 PM (IST) May 25
04:50 PM (IST) May 25
ಟಿವಿ ಲೋಕದ ಹಿರಿಯ ನಟಿ ಅನಿತಾ ಕನ್ವಲ್ ಇತ್ತೀಚೆಗೆ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಸಂಕಷ್ಟಗಳ ಬಗ್ಗೆ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬದುಕಲು ಇನ್ನು ಯಾವುದೇ ಉದ್ದೇಶ ಉಳಿದಿಲ್ಲ ಎನಿಸುತ್ತಿದೆ ಎಂದು ಅನಿತಾ ಭಾವುಕರಾಗಿದ್ದಾರೆ.
04:22 PM (IST) May 25
04:14 PM (IST) May 25
04:08 PM (IST) May 25
ಸದ್ಯಕ್ಕಂತೂ ಸೈಬಲ್ ಠಾಣೆಗೆ ದೂರು ನೀಡಿ ರುಕ್ಮಿಣಿ ಕಿರಾತಕರಿಗೆ ಪಾಠ ಕಲಿಸೋದಕ್ಕೆ ಸಿದ್ದವಾಗಿದ್ದಾರೆ. ಹಲವು ನಟಿಮಣಿಯರು ಈ ಬಗ್ಗೆ ಧಿಟ್ಟ ಧ್ವನಿ ಎತ್ತಿದ್ದಾರೆ. ಅಷ್ಟಾಗಿಯೂ ಈ ಎಐ ದುಶ್ಯಾಸನನ ಅವಾಂತರ ಹೆಚ್ತಾನೆ ಇದೆ. ಈ ದುಶ್ಯಾಸನನ್ನ ಸಂಹರಿಸೋದು ಯಾರು ಅನ್ನೋದೇ ಸದ್ಯ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ..!
03:43 PM (IST) May 25
Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್ ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್ ಇರೋದಿಲ್ಲ, ಗೇಟ್ ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.
03:14 PM (IST) May 25
What is a car horn called in America: ಭಾರತದಲ್ಲಿ ಗಾಡಿಯಿದೆ ಎಂದು ಹಾರ್ನ್ ಮಾಡೋದುಂಟು. ಯಾರನ್ನೋ ಕರೆಯಲು ಕೂಡ ಹಾರ್ನ್ ಮಾಡ್ತಾರೆ. ಆದರೆ ಅಮೆರಿಕದಲ್ಲಿ ಆ ರೀತಿ ಹಾರ್ನ್ ಮಾಡೋದು ತುಂಬ ಅಪರೂಪ. ಇದಕ್ಕೂ ಕಾರಣ ಇದೆ.
03:08 PM (IST) May 25
02:48 PM (IST) May 25
ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವ ನಟ ವಿಜಯ್ ಅವರ ಘೋಷಣೆಯೊಂದು ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದರೆ, ಇಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ಪ್ರತಿಯೊಬ್ಬರೂ ಕೋಟ್ಯಧಿಪತಿಯಾಗಬಹುದು ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.
02:38 PM (IST) May 25
'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಈಗಾಗಲೇ 200 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ ಗೆಲುವಿನ ನಗೆ ಬೀರಿದ್ದಾರೆ.. ಆದ್ರೆ, ಇದು ವಿಜಯ್ ಸಿನಿಮಾ ಆಗಬೇಕಾಗಿತ್ತು!
02:15 PM (IST) May 25
01:34 PM (IST) May 25
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್ಸಿಬಿ-ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಈ ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ ನೋಡೋಣ ಬನ್ನಿ.
01:04 PM (IST) May 25
ಅಮೆರಿಕಾದಲ್ಲಿ ನೆಲೆಸಿದ್ದ ಈ ನಟಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. 30 ವರ್ಷಗಳ ಸುದೀರ್ಘ ಕಾಲ ಅಮೆರಿಕದಲ್ಲಿ ಸಂಸಾರ ಹೂಡಿ, ಗೃಹಿಣಿಯಾಗಿ ಜವಾಬ್ದಾರಿ ನಿಭಾಯಿಸಿದ್ದ ಈ ನಟಿ, ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಲು ಇಷ್ಟಪಟ್ಟಿದ್ದಾರೆ..
12:31 PM (IST) May 25
11:27 AM (IST) May 25
ಸೋಲು-ಗೆಲುವು ಜೀವನದ ಭಾಗ. ಈ ನಟ ಇಂದು ಸಿನಿಮಾದಿಂದ ದೂರವಿದ್ದರೂ, ತಮ್ಮ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡಿದ್ದ ಈ ನಟ, ಇಂದು ಜೀವನದ ಜೊತೆ ಹೋರಾಟ ಮಾಡುತ್ತಿರುವುದು ಸಿನಿಮಾ ಕಥೆಗಿಂತಲೂ ಭಯಾನಕವಾಗಿದೆ.
10:43 AM (IST) May 25
08:31 AM (IST) May 25
08:27 AM (IST) May 25
ವಿದ್ಯಾರ್ಥಿಯೊಬ್ಬ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನೀತಾ ಅಂಬಾನಿಯವರನ್ನು ರೋಸ್ಟ್ ಮಾಡಿದ್ದಾನೆ. ಈ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಯ ಸಮಯಪ್ರಜ್ಞೆ ಮತ್ತು ನೀತಾ ಅಂಬಾನಿಯವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.
06:39 AM (IST) May 25
05:59 AM (IST) May 25
05:31 AM (IST) May 25