Published : Jun 24, 2026, 07:10 AM ISTUpdated : Jun 24, 2026, 10:41 PM IST

India Latest News Live: Samantha Pregnancy - ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ - ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?

ಸಾರಾಂಶ

ನವದೆಹಲಿ: ಮದುರೈನ ತಿರುಪ್ಪರಕುಂದ್ರಂ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ವಿಜಯ್‌ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಹಿಂದಿನಿಂದಲೂ ಆಚರಣೆಯಲ್ಲಿರುವ ಪದ್ಧತಿ ಮುಂದುವರೆಸಲು ಹಿಂದಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿತ್ತು. ಬಳಿಕ ದ್ವಿಸದಸ್ಯ ಪೀಠ ಕೂಡಾ, ದೀಪಸ್ತಂಭ ಇರುವ ಜಾಗ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸೇರಿದ್ದು, ಈ ಜಾಗಕ್ಕೂ ವಕ್ಫ್‌ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಹೀಗಿರುವ ಜ್ಯೋತಿ ಬೆಳಗಲು ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎಂಬ ಡಿಎಂಕೆ ಸರ್ಕಾರದ ವಾದ ಕಪೋಲಕಲ್ಪಿತ ಎಂದು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಕೂಡಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

10:41 PM (IST) Jun 24

Samantha Pregnancy - ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ - ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?

Samantha ತಾವು ಗರ್ಭಿಣಿ ಎನ್ನುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಿನಿಮಾಗಳಿಂದ ಮತ್ತೊಮ್ಮೆ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಬಾರಿ ಬಹಳ ಸಂತೋಷದಿಂದ ಈ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Read Full Story

09:59 PM (IST) Jun 24

Samantha - ಸಮಂತಾ ಸಿನಿಮಾಕ್ಕೆ ಎದುರಾಳಿಯಾದ್ರಾ ಮಹೇಶ್, ವಿಷ್ಣು, ತೇಜ? ಕಲೆಕ್ಷನ್‌ಗೆ ಕುತ್ತು ಬರುತ್ತಾ?

Actress Samantha Movie: ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಆದರೆ, ಈ ಚಿತ್ರದ ಗಳಿಕೆಗೆ ಪೆಟ್ಟು ನೀಡಲು ಮೂವರು ಸ್ಟಾರ್ ನಟರ ಹಳೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ.

Read Full Story

09:37 PM (IST) Jun 24

ಈ 5 ಸಿನಿಮಾಗಳು ಈಗ ಬಿಡುಗಡೆಯಾಗಿದ್ದರೆ 1000 ಕೋಟಿ ಕಲೆಕ್ಷನ್ ಖಚಿತ - ಸುದೀಪ್-ಪ್ರೇಮಾ ಚಿತ್ರವೂ ಲಿಸ್ಟ್‌ನಲ್ಲಿದೆ!

South Indian Movies: ಆ ಚಿತ್ರಗಳು ಈಗಿನ ಕಾಲದಲ್ಲಿ ಬಿಡುಗಡೆಯಾಗಿದ್ದರೆ, ಖಂಡಿತ 1000 ಕೋಟಿ ರೂಪಾಯಿ ಗಳಿಸುತ್ತಿದ್ದವು. ಅಂತಹ ಸಾಮರ್ಥ್ಯವಿದ್ದ 5 ಸಿನಿಮಾಗಳ ಬಗ್ಗೆ ಈ ಗ್ಯಾಲರಿಯಲ್ಲಿ ತಿಳಿಯೋಣ.

Read Full Story

08:57 PM (IST) Jun 24

'ಪದ್ಮಶ್ರೀ' ಸ್ವೀಕರಿಸುವಾಗ ವಿಶ್ವದಲ್ಲೇ ಸಿಗುವ ಅತಿ ಅಪರೂಪದ ವಾಚ್‌ ಧರಿಸಿದ್ದ R Madhavan; ಬೆಲೆ ಎಷ್ಟು?

R Madhavan Padma Shri Award: ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅನೇಕ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯ್ತು. ಅಂತೆಯೇ ನಟ ಆರ್. ಮಾಧವನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಕೊಟ್ಟು ಪುರಸ್ಕಾರ ಮಾಡಿದ್ದರು. ಆಗ ಅವರು ಧರಿಸಿದ್ದ ವಾಚ್‌ ಸೌಂಡ್‌ ಮಾಡಿತ್ತು. 

 

Read Full Story

08:53 PM (IST) Jun 24

Rajinikanth - ರಕ್ತಸಿಕ್ತ ಸ್ಕಾಲ್ಪೆಲ್ ಹಿಡಿದ 'ಡೆಡ್ಲಿ ಡಾಕ್ಟರ್' ಆಗಿ ತಲೈವಾ ಎಂಟ್ರಿ - 'ಧರ್ಮನ್' ಫಸ್ಟ್ ಲುಕ್ ವೈರಲ್

Dharman Movie: ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ರಜನಿಕಾಂತ್ ಅವರ ಬಹುನಿರೀಕ್ಷಿತ 'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

Read Full Story

08:20 PM (IST) Jun 24

ಇಷ್ಟ ದೇವರ ಹೆಸರಲ್ಲಿ ಪ್ರಮಾಣ ವಚನ - 20 ಬಿಜೆಪಿ ಪಾಲಿಕೆ ಸದಸ್ಯರ ಪ್ರಮಾಣ ಅಸಿಂಧುಗೊಳಿಸಿದ ಹೈಕೋರ್ಟ್​

ತಿರುವನಂತಪುರಂ ಪಾಲಿಕೆಯ 20 ಬಿಜೆಪಿ ಸದಸ್ಯರು ತಮ್ಮ ಇಷ್ಟದ ದೇವರ ಮತ್ತು ಹುತಾತ್ಮರ ಹೆಸರಿನಲ್ಲಿ ಸ್ವೀಕರಿಸಿದ್ದ ಪ್ರಮಾಣ ವಚನವನ್ನು ಕೇರಳ ಹೈಕೋರ್ಟ್ ಅಸಿಂಧುಗೊಳಿಸಿದೆ. ಕಾನೂನುಬಾಹಿರ ಪ್ರಮಾಣ ವಚನದ ವಿರುದ್ಧ ಸಿಪಿಎಂ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನಾಲ್ಕು ವಾರಗಳೊಳಗೆ ನಿಯಮಾನುಸಾರ ಮರು ಪ್ರಮಾಣವಚನ ಸ್ವೀಕರಿಸುವಂತೆ ನಿರ್ದೇಶಿಸಿದೆ.
Read Full Story

07:51 PM (IST) Jun 24

ಇನ್ಮುಂದೆ ಲಗ್ನಪತ್ರಿಕೆಗಳಲ್ಲಿ ವಧು-ವರನ ಜನ್ಮದಿನಾಂಕ ಮುದ್ರಿಸೋದು ಕಡ್ಡಾಯ?

ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಮಹಾರಾಷ್ಟ್ರ ಸರ್ಕಾರವು ಲಗ್ನಪತ್ರಿಕೆಗಳ ಮೇಲೆ ವಧು-ವರರ ಜನ್ಮದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸುವ ನಿಯಮವನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ.

Read Full Story

07:45 PM (IST) Jun 24

Akshara Singh - 104 ಡಿಗ್ರಿ ಜ್ವರದಲ್ಲೂ ಶೂಟಿಂಗ್ ಮಾಡಿದ್ರು ಅಕ್ಷಯ್ - ಭೋಜ್‌ಪುರಿ ನಟಿ ಫುಲ್ ಫಿದಾ!

Akshara Singh: ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಶೂಟಿಂಗ್ ವೇಳೆ 103-104 ಡಿಗ್ರಿ ಜ್ವರದಲ್ಲಿದ್ದರೂ ಅಕ್ಷಯ್ ಕುಮಾರ್ ಶೂಟಿಂಗ್ ಮುಗಿಸಿದ್ದನ್ನು ನೋಡಿ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಬೆರಗಾಗಿದ್ದಾರೆ.

Read Full Story

07:34 PM (IST) Jun 24

Ketan Agarwal's Murder - ಭಾವಿ ಸೊಸೆಯನ್ನು ಮಗಳಂತೆ ಕಂಡದ್ದೇ ತಪ್ಪಾಗೋಯ್ತಾ? ಕೇತನ್​ ಅಮ್ಮನ ಕಣ್ಣೀರು

ಲೋನಾವಾಲಾದ ಲೋಹಗಢ ಕೋಟೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಮದುವೆ ಇಷ್ಟವಿಲ್ಲದಿದ್ದರೆ ಹೇಳಬಹುದಿತ್ತು, ಹೀಗೆ ಕೊಲೆ ಮಾಡುವ ಬದಲು ಮದುವೆ ನಿಲ್ಲಿಸಬಹುದಿತ್ತು ಎಂದು ಮೃತನ ಕುಟುಂಬ ಕಣ್ಣೀರು ಹಾಕುತ್ತಿದೆ.
Read Full Story

07:30 PM (IST) Jun 24

Vihaan Kaushal - ಕತ್ರಿನಾ ಕೈಫ್-ವಿಕ್ಕಿ ಮಗ ವಿಹಾನ್ ಯಾರ ರೀತಿ ಕಾಣ್ತಾನೆ? ಮೊಮ್ಮಗನ ಬಗ್ಗೆ ಅಜ್ಜ ಹೇಳಿದ್ದೇನು?

Vihaan Kaushal: ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪುತ್ರ ವಿಹಾನ್ ಕೌಶಲ್ ಬಗ್ಗೆ ಮೊದಲ ಬಾರಿಗೆ ಶ್ಯಾಮ್ ಕೌಶಲ್ ಮಾತನಾಡಿದ್ದಾರೆ. ಮೊಮ್ಮಗ ತಮ್ಮ ಜೀವನವನ್ನು ಬದಲಾಯಿಸಿದ್ದಾನೆ.

Read Full Story

07:07 PM (IST) Jun 24

ಸತ್ತು 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆ - ಪ್ರಧಾನಿ ಮೋದಿಗೆ ವಿಶೇಷ ಆಹ್ವಾನ ನೀಡಿದ ಇರಾನ್​

ನಾಲ್ಕು ತಿಂಗಳ ಹಿಂದೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎನ್ನಲಾದ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಜುಲೈ 9 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. ಯುದ್ಧದ ಕಾರಣದಿಂದಾಗಿ ವಿಳಂಬವಾಗಿದ್ದ ಈ ಅಂತ್ಯಕ್ರಿಯೆಯು ಖಮೇನಿ ಅವರ ಹುಟ್ಟೂರಾದ ಮಶಾದ್‌ನಲ್ಲಿ ನಡೆಯಲಿದೆ.
Read Full Story

07:07 PM (IST) Jun 24

ಟೀಮ್‌ ಇಂಡಿಯಾಗೆ ಸೆಲೆಕ್ಟ್‌ ಆದ್ರೂ ಡ್ರೆಸಿಂಗ್‌ ರೂಮ್‌ ಯೂಸ್‌ ಮಾಡೋ ಹಾಗಿಲ್ಲ Vaibhav Sooryavanshi

15 ವರ್ಷದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಲು ಸಜ್ಜಾಗಿದ್ದಾರೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಐಸಿಸಿಯ ಬಾಲ ಸುರಕ್ಷತಾ ನಿಯಮಗಳ ಅಡಿಯಲ್ಲಿ, ಅವರಿಗೆ ಪ್ರತ್ಯೇಕ ಚೇಂಜಿಂಗ್ ರೂಮ್ ವ್ಯವಸ್ಥೆ ಮಾಡಲಾಗುತ್ತಿದೆ.

Read Full Story

06:42 PM (IST) Jun 24

ಮದ್ವೆ ಬೇಡ ಅನ್ನದೇ ಕೊಲೆ ಮಾಡೋದ್ಯಾಕೆ ಈ ಹೆಣ್ಣುಗಳು? ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಘಟನೆ ನೆನಪಿಸಿದ ಕೇತನ್​ ಮರ್ಡರ್​

ಪುಣೆಯಲ್ಲಿ ಸಿಯಾ ಗೋಯಲ್ ಎಂಬ ಯುವತಿ, ತನ್ನ ಹುಟ್ಟುಹಬ್ಬದಂದೇ ಪ್ರಿಯಕರನ ಜೊತೆ ಸೇರಿ ಭಾವಿ ಪತಿ ಕೇತನ್​ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆಯು 2003ರಲ್ಲಿ ಬೆಂಗಳೂರಿನಲ್ಲಿ ನಡೆದ, ವಕೀಲೆ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಹೈ-ಪ್ರೊಫೈಲ್ ಪ್ರಕರಣವನ್ನು ನೆನಪಿಸುತ್ತದೆ.

Read Full Story

06:27 PM (IST) Jun 24

Ram Charan - ಮಗಳು ಈಗ 'ಅಪ್ಪ' ಅಂತ ಕರೆಯಲ್ಲ, ಹೀಗೆ ಅಂತಾಳೆ! ಕಾರಣ ಬಿಚ್ಚಿಟ್ಟ ರಾಮ್ ಚರಣ್

Ram Charan: ತಮ್ಮ 'ಪೆದ್ದಿ' ಸಿನಿಮಾ ರಿಲೀಸ್ ಆದ್ಮೇಲೆ ಮಗಳು ಕ್ಲಿನ್ ಕಾರಾ ಯಾಕೆ 'ಅಪ್ಪ' ಅಂತ ಕರೆಯುತ್ತಿಲ್ಲ ಎಂದು ನಟ ರಾಮ್ ಚರಣ್ ಹೇಳಿದ್ದಾರೆ. ಜೊತೆಗೆ, ಚಿತ್ರಕ್ಕೆ ಬಂದ ನೆಗೆಟಿವ್ ವಿಮರ್ಶೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಏನಂದ್ರು ಅಂತ ತಿಳಿಯಲು ಮುಂದೆ ಓದಿ.

Read Full Story

06:26 PM (IST) Jun 24

7.7 ಲಕ್ಷ ಕೋಟಿ ಆದಾಯದ ಕಂಪನಿಯ MD ತಿಂಗಳ ಸ್ಯಾಲರಿ ಬರೀ 17 ಸಾವಿರ - Rajesh Exports ಹಗರಣ ಬಿಚ್ಚಿಟ್ಟ ED

ದೇಶದ ಪ್ರಮುಖ ಚಿನ್ನ ರಫ್ತು ಸಂಸ್ಥೆ 'ರಾಜೇಶ್ ಎಕ್ಸ್‌ಪೋರ್ಟ್ಸ್' ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಷೇರು ಮಾರುಕಟ್ಟೆ ಅಕ್ರಮ, ವಿದೇಶಿ ವಹಿವಾಟಿನ ದಾಖಲೆಗಳ ನಾಪತ್ತೆ, ಮತ್ತು ಆಡಳಿತ ಮಂಡಳಿಯ ವಿಚಿತ್ರ ಸಂಬಳ ಪದ್ಧತಿ ಸೇರಿದಂತೆ ಹಲವು ಆರೋಪಗಳ ಮೇಲೆ ಈ ತನಿಖೆ ನಡೆಯುತ್ತಿದೆ. 

Read Full Story

05:46 PM (IST) Jun 24

ಹೆಚ್ಚು ಬಂದ ಕರೆಂಟ್​ ಬಿಲ್​ - ನೋಡಿದ್ರೆ ಮನೆಯಲ್ಲಿ ಪತ್ತೆಯಾಯ್ತು 309 ಹೆಬ್ಬಾವುಗಳು- ಮೈ ಝುಂ ಎನ್ನೋ ಸ್ಟೋರಿ

 ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ನೂರಾರು ಹೆಬ್ಬಾವುಗಳನ್ನು ಅಕ್ರಮವಾಗಿ ಸಾಕುತ್ತಿದ್ದನು. ವಿಪರೀತವಾಗಿ ಬರುತ್ತಿದ್ದ ವಿದ್ಯುತ್ ಬಿಲ್‌ನ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಪೊಲೀಸರು 309 ಹೆಬ್ಬಾವುಗಳನ್ನು ಪತ್ತೆಹಚ್ಚಿ, ದೊಡ್ಡ ಅಕ್ರಮ ಮಾರಾಟ ಜಾಲವನ್ನು ಬಯಲಿಗೆಳೆದರು.

Read Full Story

05:44 PM (IST) Jun 24

ಸಕ್ಸಸ್‌ ಗ್ರೂಪ್ ಮಾಲೀಕ ಭಾವೀ ವರನನ್ನು ಲೋಹಗಡ ಕೋಟೆಯಲ್ಲಿ ಕೊಂದ 22 ವರ್ಷದ ಸಿಯಾ ಗೋಯಲ್ ಯಾರು?

ಪುಣೆಯ ಕೋಟ್ಯಧಿಪತಿ ಉದ್ಯಮಿಯ ಮಗಳು ಸಿಯಾ ಗೋಯಲ್, ತನ್ನ ಪ್ರಿಯಕರನೊಂದಿಗೆ ಸೇರಿ ನಿಶ್ಚಿತ ವರ ಕೇತನ್ ಅಗರ್ವಾಲ್‌ನನ್ನು ಲೋಹಗಡ ಕೋಟೆಯ ಕಮರಿಗೆ ತಳ್ಳಿ ಕೊಂದಿದ್ದಾಳೆ. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿದ್ದ ಈ ಪ್ರಕರಣ, ಪೊಲೀಸ್ ತನಿಖೆಯ ನಂತರ ಪ್ರೇಮ, ವಂಚನೆ ಮತ್ತು ಕ್ರೂರ ಕೊಲೆಯ ಸಂಚಿನ ಕರಾಳ ಮುಖವನ್ನು ಬಯಲುಮಾಡಿದೆ.
Read Full Story

05:17 PM (IST) Jun 24

Plastic Chair Cleaning - ಮನೆಯ ಹಳೆ ಪ್ಲಾಸ್ಟಿಕ್ ಚೇರ್‌ ಕಪ್ಪಾಗಿದ್ಯಾ? 2 ನಿಮಿಷದಲ್ಲಿ ಹೊಸದಾಗಿ ಮಾಡಿ!

How to clean plastic chairs with vinegar: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೆರಡು ಪ್ಲಾಸ್ಟಿಕ್ ಚೇರ್‌ಗಳು ಇದ್ದೇ ಇರುತ್ತವೆ. ಬಹಳ ದಿನಗಳ ಬಳಕೆಯಿಂದ ಅವು ಕಪ್ಪಾಗಿ, ಕೊಳೆಯಾಗಿರುತ್ತವೆ. ಆದರೆ, ಇವುಗಳನ್ನು ತುಂಬಾನೇ ಸುಲಭವಾಗಿ ಹೊಸದರಂತೆ ಹೊಳೆಯುವಂತೆ ಮಾಡಬಹುದು.

Read Full Story

05:06 PM (IST) Jun 24

Thalapathy Vijay - ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?

Thalapathy Vijay ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಎಂ.ಕೆ. ಸ್ಟಾಲಿನ್ ಅವರ ವೈರಲ್ ಹ್ಯಾಂಡ್ ಗೆಸ್ಚರ್‌ನ್ನು ಮಿಮಿಕ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಭಾಷಣದ ಬಳಿಕ ಡಿಎಂಕೆ ಸದಸ್ಯರು ವಾಕೌಟ್ ನಡೆಸಿದ್ದಾರೆ.

Read Full Story

04:56 PM (IST) Jun 24

Wrong UPI Transaction Refund - ತಪ್ಪಾಗಿ ಹೆಚ್ಚು ಫೋನ್‌ಪೇ ಮಾಡಿದ್ರೆ ಹೇಗೆ ಹಣ ವಾಪಾಸ್‌ ಪಡೆಯೋದು?

What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್‌ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್‌ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?

 

Read Full Story

03:58 PM (IST) Jun 24

ಹಾರ್ದಿಕ್ ಪಾಂಡ್ಯ ತಂಡಕ್ಕೆ ಕರೆತರಲು ಈ ಬಿಗ್ ಹಿಟ್ಟರ್‌ನನ್ನು ಬಿಟ್ಟು ಕೊಡುತ್ತಾ ಆರ್‌ಸಿಬಿ?

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್‌ ಇಲ್ಲಿದೆ ನೋಡಿ.

 

Read Full Story

03:03 PM (IST) Jun 24

ನೋಟಿಫಿಕೇಶನ್‌ ಇಲ್ಲ ಅಂದ್ರೂ ಯಾಕೆ ಸುಮ್ಮನೆ Mobile Check ಮಾಡ್ತೀವಿ? ಸೈಕಾಲಜಿ ಹೇಳೋದೇ ಬೇರೆ!

Constantly checking phone for messages: ಯಾವುದೇ ನೋಟಿಫಿಕೇಶನ್ ಅಥವಾ ಮೆಸೇಜ್ ಬರದಿದ್ದರೂ, ಪದೇ ಪದೇ ಫೋನ್ ತೆಗೆದು ನೋಡುವ ಅಭ್ಯಾಸ ನಿಮಗಿದೆಯೇ? ಇದೊಂದು ಸಾಮಾನ್ಯ ಚಟ ಅಷ್ಟೇ ಅಲ್ಲ, ಇದರ ಹಿಂದೆ ಹಲವು ಮಾನಸಿಕ ಕಾರಣಗಳಿವೆ ಎನ್ನುತ್ತದೆ ಸೈಕಾಲಜಿ. ಹಾಗಿದ್ರೆ, ಬನ್ನಿ ಇದರ ಹಿಂದಿನ ಕಾರಣಗಳೇನು? 

Read Full Story

02:54 PM (IST) Jun 24

ಲಖನೌ ಸೂಪರ್ ಜೈಂಟ್ಸ್ ತೊರೆದ ಬೆನ್ನಲ್ಲೇ ಮೌನ ಮುರಿದ ರಿಷಭ್ ಪಂತ್..! 3 ಪದಗಳ ಭಾವನಾತ್ಮಕ ಸಂದೇಶ ರವಾನಿಸಿದ LSG ಮಾಜಿ ನಾಯಕ

ಎರಡು ವರ್ಷಗಳ ಬಳಿಕ ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ತೊರೆದಿರುವ ರಿಷಭ್ ಪಂತ್, ಐಪಿಎಲ್ ಟ್ರೇಡ್ ಮೂಲಕ ತಮ್ಮ ಹಳೆಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ. ಈ ಒಪ್ಪಂದದ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್, ಕುಲ್ದೀಪ್ ಯಾದವ್ ಅವರನ್ನು ಲಖನೌ ತಂಡಕ್ಕೆ ನೀಡಿದ್ದು, 27 ಕೋಟಿಗೆ ಖರೀದಿಯಾಗಿದ್ದ ಪಂತ್ ಇದೀಗ ಕಡಿಮೆ ಮೊತ್ತಕ್ಕೆ ಡೆಲ್ಲಿ ಪಾಲಾಗಿದ್ದಾರೆ.
Read Full Story

02:33 PM (IST) Jun 24

How to Cut Onion Without Crying - ಈರುಳ್ಳಿ ಕಟ್‌ ಮಾಡುವಾಗ ಕಣ್ಣೀರು ಬರುತ್ತಾ? ಏನ್‌ ಮಾಡಬೇಕು?

10 proven ways to cut an onion without crying: ಅಡುಗೆಮನೆಯಲ್ಲಿ ಈರುಳ್ಳಿ ಕತ್ತರಿಸುವುದು ಅಂದ್ರೆ ಹಲವರಿಗೆ ದೊಡ್ಡ ಸವಾಲು. ಎಷ್ಟೇ ದೊಡ್ಡ ಅಡುಗೆ ಪರಿಣಿತರಾಗಿದ್ದರೂ, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರದು. ಕಣ್ಣಲ್ಲಿ ನೀರು ಬರದಂತೆ ಈರುಳ್ಳಿ ಕತ್ತರಿಸುವುದು ಹೇಗೆಂದು ನೋಡೋಣ?

Read Full Story

02:11 PM (IST) Jun 24

US ಕನಸು ಭಗ್ನ! ವಿಮಾನ ನಿಲ್ದಾಣದಲ್ಲೇ ಭಾರತೀಯ ವಿದ್ಯಾರ್ಥಿಗೆ ಎಂಟ್ರಿ ಬ್ಯಾನ್

ಹೈದರಾಬಾದ್‌ನ ಎಫ್-1(F-1 VISA) ವೀಸಾ ಹೊಂದಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ನೆದರ್‌ಲ್ಯಾಂಡ್ಸ್‌ನ ಆಂಸ್ಟರ್ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಅಧಿಕಾರಿಗಳು ತಡೆದು, ಭಾರತಕ್ಕೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ

Read Full Story

01:46 PM (IST) Jun 24

Thalapathy Vijay ರೋಲ್ಸ್ ರಾಯ್ಸ್ ಕಾರ್‌ಗೆ ಪೆಟ್ರೋಲ್ ಹಾಕಿಸಲೂ ಸಾಲದ ಮುಖ್ಯಮಂತ್ರಿ ಹುದ್ದೆ ಸಂಬಳ!

Actor Thalapathy Vijay: ಒಂದು ಸಿನಿಮಾಗೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟ ವಿಜಯ್, ಈಗ ಸಿಎಂ ಆಗಿ ಕೇವಲ 2 ಲಕ್ಷ ರೂ. ಸರ್ಕಾರಿ ಸಂಬಳ ಪಡೆಯುತ್ತಿದ್ದಾರೆ. ಜಯಲಲಿತಾ, ಕರುಣಾನಿಧಿಯವರ ಸಂಬಳದ ಇತಿಹಾಸ, ವಿಜಯ್ ತಮ್ಮ ಸಿನಿಮಾ ಶೈಲಿಯಲ್ಲಿ ರಾಜಕೀಯವನ್ನು ಹೇಗೆ ಎದುರಿಸುತ್ತಿದ್ದಾರೆ?

Read Full Story

01:02 PM (IST) Jun 24

ಯಶಸ್ವಿ ಜೈಸ್ವಾಲ್‌ಗೆ ಅನ್ಯಾಯ? ಉತ್ತಮ ಪ್ರದರ್ಶನ ನೀಡಿದ್ರೂ ತಂಡದಿಂದ ಹೊರಗಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ಬಿಸಿಸಿಐ ವಿರುದ್ಧ ಗರಂ

ಯಶಸ್ವಿ ಜೈಸ್ವಾಲ್: ಉತ್ತಮ ಪ್ರದರ್ಶನ ನೀಡಿದ್ರೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಆರಂಭಿಕ ಆಟಗಾರ ಎಡಗೈ ಸ್ಫೋಟಕ ಬ್ಯಾಟ್ಸಮನ್ ಜೈಸ್ವಾಲ್‌ ಅವರನ್ನು ಹೊರಗಿಟ್ಟಿರುವುದಕ್ಕೆ ಸಂಜಯ್ ಮಂಜ್ರೇಕರ್ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

11:45 AM (IST) Jun 24

Padma Shri - ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ! ಈ ಗೌರವ ಪಡೆದ 16 ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಇಲ್ಲಿದೆ

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಗೌರವವನ್ನು ಪಡೆದರು. 1982ರಿಂದ ಈವರೆಗೆ ಈ ಪ್ರಶಸ್ತಿ ಪಡೆದ 16 ಭಾರತೀಯ ಕ್ರಿಕೆಟಿಗರ ವಿವರ ಇಲ್ಲಿದೆ.

Read Full Story

11:40 AM (IST) Jun 24

ದಿಗ್ಗಜರ ನಂ.3 ಜೆರ್ಸಿ - ಸೂರ್ಯವಂಶಿಗೆ ಚೊಚ್ಚಲ ಟೀಂ ಇಂಡಿಯಾ ಕಿಟ್! 3 ನಂಬರ್ ಜೆರ್ಸಿಯಲ್ಲಿ ಇತಿಹಾಸ ಬರೆದ ಕ್ರಿಕೆಟಿಗರಿವರು

15ರ ಬಾಲಪ್ರತಿಭೆ ವೈಭವ್ ಸೂರ್ಯವಂಶಿ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾಗಿದ್ದು, ತಮ್ಮ ಚೊಚ್ಚಲ 'ನಂಬರ್ 3' ಜೆರ್ಸಿ ಪಡೆದು ಭಾವುಕರಾಗಿದ್ದಾರೆ. ಈ ಲೇಖನವು ವೈಭವ್ ಅವರ ಸಾಧನೆ ಮತ್ತು ಈ ಐತಿಹಾಸಿಕ ಜೆರ್ಸಿ ಧರಿಸಿದ ಚಾಹಲ್, ರೈನಾ, ಹರ್ಭಜನ್ ಅವರಂತಹ ದಿಗ್ಗಜರ ಕುರಿತು ವಿವರಿಸುತ್ತದೆ.
Read Full Story

08:34 AM (IST) Jun 24

FIFA World Cup 2026 - ಮೆಸ್ಸಿ, ಎಂಬಾಪೆ, ಹಾಲ್ಯಾಂಡ್ ಗೋಲಿನಬ್ಬರ! ಹೊಸ ದಾಖಲೆ ಬರೆದ ಮೆಸ್ಸಿ

ಫಿಫಾ ವಿಶ್ವಕಪ್‌ನಲ್ಲಿ ಲಿಯೋನೆಲ್‌ ಮೆಸ್ಸಿ, ಕಿಲಿಯನ್‌ ಎಂಬಾಪೆ ಮತ್ತು ಎರ್ಲಿಂಗ್‌ ಹಾಲ್ಯಾಂಡ್‌ ತಮ್ಮ ಗೋಲಿನಬ್ಬರ ಮುಂದುವರಿಸಿದ್ದಾರೆ. ಆಸ್ಟ್ರಿಯಾ ವಿರುದ್ಧ ಎರಡು ಗೋಲು ಗಳಿಸಿದ ಮೆಸ್ಸಿ, ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ನಿರ್ಮಿಸಿದರು. ಈ ಗೆಲುವುಗಳೊಂದಿಗೆ ಅರ್ಜೆಂಟೀನಾ, ಫ್ರಾನ್ಸ್‌ ಮತ್ತು ನಾರ್ವೆ ನಾಕೌಟ್‌ ಹಂತಕ್ಕೆ ಪ್ರವೇಶಿಸಿವೆ.
Read Full Story

More Trending News