ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರಗೊಳ್ಳುತ್ತಿದೆ. ದಾಳಿ ಪ್ರತಿದಾಳಿಯಿಂದ ಹೊರ್ಮುಜ್ ಜಲಸಂಧಿಯಿಂದ ಸರಕು ಸಾಗಾಣಿಕೆ ಹಡುಗುಗಳು ಸಾಗುವುದೇ ಅತೀ ದೊಡ್ಡ ಸವಲಾಗಿದೆ. ಇದರ ನಡುವೆ ಭಾರತ ತೈಲ ಆಮದು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೋನಾಲ್ಡ್, ಹೊರ್ಮುುಜ್ ಜಲಸಂಧಿ ವಶಪಡಿಸಿಕೊಳ್ಳಲು ಎಲ್ಲಾ ದೇಶಗಳು ನೆರವಾಗಬೇಕು ಎಂಬ ಸೂಚನೆ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಇದರ ನಡುವೆ ಭಾರತದ ಯುದ್ಧ ನೌಕೆ ಹೊರ್ಮುಜ್ ಜಲಸಂಧಿಯತ್ತ ತೆರಳಿದೆ. ಏನಿದು ಭಾರತದ ಯುದ್ಧ ನೌಕೆ ಎಂಟ್ರಿ, ಪಂಚ ರಾಜ್ಯ ಚುನಾವಣೆ ಲೈವ್ ಸೇರಿದಂತೆ ಇಂದಿನ ದೇಶ ವಿದೇಶಗಳ ಸುದ್ದಿ ಅಪ್ಡೇಟ್ ಇಲ್ಲಿದೆ.
10:10 AM (IST) Mar 19
10:02 AM (IST) Mar 19
Dhurandhar 2 Movie Review ಇದು ಕೇವಲ ಒಂದು ಸ್ಪೈ ಸಿನಿಮಾ ಅಲ್ಲ, ಇದು ಸೇಡಿನ ಕಿಚ್ಚಿನಲ್ಲಿ ಬೇಯುತ್ತಿರುವ ಒಬ್ಬ ವ್ಯಕ್ತಿಯ ಅಪಾಯಕಾರಿ ಕಥೆ. ರಣವೀರ್ ಸಿಂಗ್ ಅವರ ಡಾರ್ಕ್ ಅವತಾರ, ಆದಿತ್ಯ ಧರ್ ಅವರ ಆಕ್ರಮಣಕಾರಿ ನಿರ್ದೇಶನ, ವಾಸ್ತವಕ್ಕೆ ಹತ್ತಿರವಿರುವ ಕಥೆ ಈ ಚಿತ್ರವನ್ನು ಬಹಳ ಪವರ್ಫುಲ್ ಮಾಡಿದೆ.
09:54 AM (IST) Mar 19
ಹಿಂದೂ ಹೊಸ ವರ್ಷದ ಹಬ್ಬಗಳಾದ ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಲ್ಲರಿಗೂ ಸಮೃದ್ಧಿ, ಶಾಂತಿ ಸಿಗಲಿ ಎಂದು ನಾಯಕರು ಹಾರೈಸಿದ್ದಾರೆ.
09:39 AM (IST) Mar 19
09:28 AM (IST) Mar 19
ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಸಾವಿರಾರು 'ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕ' ಹಕ್ಕಿಗಳು ಬೋಳು ಮರದ ಮೇಲೆ ಕುಳಿತು ಸೃಷ್ಟಿಸಿದ ಅದ್ಭುತ ದೃಶ್ಯದ ವೀಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಈ ವೀಡಿಯೋ, ಅನೇಕರ ಸೆಳೆದಿದೆ.
09:11 AM (IST) Mar 19
ಈದ್ ಹಬ್ಬ ಆಚರಣೆ ನಡುವೆ ಸೌದಿ ಅರೆಬಿಯಾ ಮೇಲೆ ಇರಾನ್ ಮಿಸೈಲ್ ದಾಳಿ, ಕೆರಳಿದ ಯುಎಇ, ರಿಯಾದ್, ಖತಾರ್ ಸೇರಿದಂತೆ ಹಲೆವೆಡೆ ಮಿಸೈಲ್ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಇರಾನ್ಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
09:06 AM (IST) Mar 19
08:51 AM (IST) Mar 19
08:09 AM (IST) Mar 19
ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ, ಗ್ಯಾಸ್ ಘಟಕ ಸ್ಥಗಿತಗೊಂಡಿದೆ. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ.
07:58 AM (IST) Mar 19
ಇತ್ತೀಚೆಗೆ ಜೋಡಿಯೊಂದು ಮಾಡಿದ ವಿವಾಹಪೂರ್ವ ಫೋಟೋಶೂಟ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಜೋಡಿಯು ನೀರಿನ ಮೇಲೆ ಶವದಂತೆ ತೇಲುತ್ತಾ ಫೋಸ್ ನೀಡಿದ್ದು, ಈ ವಿಲಕ್ಷಣ ಫೋಟೋಶೂಟ್ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಜನರು ಇದನ್ನು 'ಫ್ರೀ ಡೆತ್ಶೂಟ್' ಎಂದು ಕರೆದಿದ್ದಾರೆ.
07:15 AM (IST) Mar 19
ಹೊರ್ಮುಜ್ ಜಲಸಂಧಿಯತ್ತ ಭಾರತದ ಯುದ್ಧ ನೌಕೆ ತೆರಳಿದೆ. ಭಾರತದ ತೈಲ, ಗ್ಯಾಸ್ ಸೇರಿದಂತೆ ಪ್ರಮುಖ ಹಡಗುಗಳು ಇದೇ ಜಲಸಂಧಿ ಮೂಲಕ ಸಾಗಿ ಬರಬೇಕಿದೆ. ಈ ವೇಳೆ ದಾಳಿಯ ಆತಂಕ ಇರುವ ಕಾರಣ ಭರಾತದ ನೌಕಾ ಪಡೆ ಯುದ್ಧ ನೌಕೆಯನ್ನು ನಿಯೋಜಿಸಿದೆ. ಈ ಮೂಲಕ ಭಾರತದ ಆಮದುಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮುಂದಾಗಿದೆ.