ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರಗೊಳ್ಳುತ್ತಿದೆ. ದಾಳಿ ಪ್ರತಿದಾಳಿಯಿಂದ ಹೊರ್ಮುಜ್ ಜಲಸಂಧಿಯಿಂದ ಸರಕು ಸಾಗಾಣಿಕೆ ಹಡುಗುಗಳು ಸಾಗುವುದೇ ಅತೀ ದೊಡ್ಡ ಸವಲಾಗಿದೆ. ಇದರ ನಡುವೆ ಭಾರತ ತೈಲ ಆಮದು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೋನಾಲ್ಡ್, ಹೊರ್ಮುುಜ್ ಜಲಸಂಧಿ ವಶಪಡಿಸಿಕೊಳ್ಳಲು ಎಲ್ಲಾ ದೇಶಗಳು ನೆರವಾಗಬೇಕು ಎಂಬ ಸೂಚನೆ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಇದರ ನಡುವೆ ಭಾರತದ ಯುದ್ಧ ನೌಕೆ ಹೊರ್ಮುಜ್ ಜಲಸಂಧಿಯತ್ತ ತೆರಳಿದೆ. ಏನಿದು ಭಾರತದ ಯುದ್ಧ ನೌಕೆ ಎಂಟ್ರಿ, ಪಂಚ ರಾಜ್ಯ ಚುನಾವಣೆ ಲೈವ್ ಸೇರಿದಂತೆ ಇಂದಿನ ದೇಶ ವಿದೇಶಗಳ ಸುದ್ದಿ ಅಪ್ಡೇಟ್ ಇಲ್ಲಿದೆ.
11:00 PM (IST) Mar 19
ಆಧ್ಯಾತ್ಮಿಕ ಗುರು 'ಕ್ಯಾಪ್ಟನ್' ಅಶೋಕ್ ಖರಾತ್, ಮಹಿಳೆಯರಿಗೆ ಮತ್ತು ಬರುವ ಮಾತ್ರೆ ನೀಡಿ ಅ*ತ್ಯಾಚಾ*ರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಧಾರ್ಮಿಕ ವಿಧಿಯ ಹೆಸರಿನಲ್ಲಿ ಆತ ನಡೆಸುತ್ತಿದ್ದ ಘೋರ ಕೃತ್ಯಗಳ ವಿಡಿಯೋಗಳು ಬಯಲಾಗಿದ್ದು, ಈ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್ಐಟಿ ರಚಿಸಿದೆ.
10:46 PM (IST) Mar 19
10:08 PM (IST) Mar 19
ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ ಮಲೈಕಾ ಅರೋರಾ, ಇದೀಗ ತಮ್ಮ ಸ್ಟೈಲಿಶ್ ಲುಕ್ನಿಂದ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಅವರು ಧರಿಸಿದ್ದ ಪಿಂಕ್ ಸೀರೆ ಮತ್ತು ಅದರ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
10:08 PM (IST) Mar 19
ಲಡಾಕ್ಗೆ ಪ್ರವಾಸ ಹೋಗಿ ವಾಪಸ್ ಬರುತ್ತಿದ್ದ ವೇಳೆ ಫಾರ್ಚುನರ್ ಕಾರೊಂದು ಫ್ಲೈಒವರ್ನಿಂದ ಕೆಳಗೆ ಬಿದ್ದ ಪರಿಣಾಮ ಮೂವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ತಮ್ಮ 21, 23, ಹಾಗೂ 25ರ ಹರೆಯದವರಾಗಿದ್ದು, ತರುಣರ ಈ ಹಠಾತ್ ಸಾವು ಪೋಷಕರನ್ನು ಆಘಾತಕ್ಕೆ ದೂಡಿದೆ.
09:25 PM (IST) Mar 19
ಹುಡುಗಿಯರ ಕನಸಿನ ರಾಜಕುಮಾರನಂತಿರೋ ಇವರನ್ನ ಯಾರಾದ್ರೂ ಅಣ್ಣ ಅಂತ ಕರೆಯೋಕೆ ಸಾಧ್ಯನಾ? ಆದ್ರೆ, ಒಬ್ಬ ಹೀರೋಯಿನ್ ಮಹೇಶ್ ಬಾಬುನ 'ಅಣ್ಣ' ಅಂತ ಕರೆದಿದ್ರಂತೆ. ಯಾರು ಆ ನಟಿ? ಇದರಲ್ಲಿ ನಿಜವೆಷ್ಟು?
09:17 PM (IST) Mar 19
ಪ್ರಭಾವಿ ಜ್ಯೋತಿಷಿಯೊಬ್ಬನನ್ನು ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯ ವೇಳೆ, ಈತ ತನ್ನ ಕಚೇರಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ 58ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈತನ ಬಂಧಿಸಿದ್ದೆ ಒಂದು ರೋಚಕ ಸ್ಟೋರಿ..
08:51 PM (IST) Mar 19
08:31 PM (IST) Mar 19
ಮದುವೆ ಇಲ್ಲದೆ ಸಂಬಂಧದಲ್ಲಿ ಇರುವುದರ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹಂಚಿಕೊಂಡಿರುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದು ಕೇವಲ ಕಾನೂನಾತ್ಮಕ ದೃಢೀಕರಣದಿಂದ ಬಲಗೊಳ್ಳುವುದಿಲ್ಲ.
08:17 PM (IST) Mar 19
07:57 PM (IST) Mar 19
07:17 PM (IST) Mar 19
ಸೀರಿಯಲ್ ನಟಿ ಗೇಬ್ರಿಯೆಲಾ ಚಾರ್ಲ್ಟನ್ ತಮ್ಮ ಜೀವನದಲ್ಲಿ ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದಾರೆ. ಆ ಘಟನೆ ಏನು ಮತ್ತು ಅದರಿಂದ ಅವರು ಕಲಿತ ಪಾಠದ ಬಗ್ಗೆ ನೋಡೋಣ.
06:59 PM (IST) Mar 19
HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಅತನು ಚಕ್ರವರ್ತಿ ಅವರು ಸಿಇಒ ಶಶಿಧರ್ ಜಗದೀಶನ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಹಠಾತ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಷೇರು ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿ, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಕೇಕಿ ಮಿಸ್ತ್ರಿ ಮಧ್ಯಂತರ ಅಧ್ಯಕ್ಷ .
06:58 PM (IST) Mar 19
ಬುಲಂದ್ಶಹರ್ನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಪತ್ತೆಹಚ್ಚಿದ್ದಾನೆ. ಪತ್ನಿಯ ಮೊಬೈಲ್ನಲ್ಲಿ ಸಿಕ್ಕ "ಸಿಮೆಂಟ್ ಮತ್ತು ನೀಲಿ ಡ್ರಮ್" ಫೋಟೋಗಳಿಂದ, ಆಕೆ ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆಂದು ಅರಿತುಕೊಂಡಿದ್ದಾನೆ.
05:47 PM (IST) Mar 19
ಕೇರಳದ ಟ್ವೆಂಟಿ-20 ಪಕ್ಷದ ಅಭ್ಯರ್ಥಿಗಳಾದ ನಟಿಯರಾದ ವೀಣಾ ನಾಯರ್ ಮತ್ತು ಲಕ್ಷ್ಮಿ ಪ್ರಿಯಾ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಲೋಪ ಬೆಳಕಿಗೆ ಬಂದಿದೆ.
05:26 PM (IST) Mar 19
ಸ್ಯಾಮ್ಸಂಗ್ ತನ್ನ 'M' ಸರಣಿಯಲ್ಲಿ ಹೊಸ Galaxy M17e 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6000 mAh ದೈತ್ಯ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ.
05:20 PM (IST) Mar 19
ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈ ಆ್ಯಕ್ಷನ್ ಕಾಮಿಡಿ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ.
04:45 PM (IST) Mar 19
04:23 PM (IST) Mar 19
ಇರಾನ್-ಇಸ್ರೇಲ್ ಸಂಘರ್ಷವು ಕತಾರ್ನ ಇಂಧನ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿದ್ದು, ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿದೆ. ಕತಾರ್ನಿಂದ ಎಲ್ಎನ್ಜಿ ಮತ್ತು ಎಲ್ಪಿಜಿ ಆಮದು ಮಾಡಿಕೊಳ್ಳುವ ಭಾರತಕ್ಕೆ, ಈ ದಾಳಿಯು ಸರಬರಾಜು ವ್ಯತ್ಯಯ ಮತ್ತು ಬೆಲೆ ಏರಿಕೆಯ ಆತಂಕವನ್ನು ಸೃಷ್ಟಿಸಿದೆ.
04:23 PM (IST) Mar 19
ಮುಂಬೈ: ಮುಂಬರುವ ಐಪಿಎಲ್ 2026 ಸೀಸನ್ಗೆ ಭರ್ಜರಿಯಾಗಿ ರೆಡಿಯಾಗುತ್ತಿರುವ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಹಾಗೂ ಆಟದ ಮೇಲೆ ಹೆಚ್ಚು ಗಮನ ಕೊಡಲು, ಅವರು ಮದ್ಯಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ.
03:58 PM (IST) Mar 19
ಗ್ಯಾಸ್ ಸಿಲಿಂಡರ್ ತೂಕ 14.2 ಕೆಜಿ ಇರುವುದರ ಹಿಂದೆ ಬಲವಾದ ತರ್ಕವಿದೆ. ಸಾಮಾನ್ಯ ವ್ಯಕ್ತಿ ಸುಲಭವಾಗಿ ಸಾಗಿಸಬಹುದಾದ ಗರಿಷ್ಠ ತೂಕ, ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಅಂದಾಜು ಪ್ರಮಾಣ, ಮತ್ತು ಪೂರೈಕೆ ಸರಪಳಿಯ ಸುಲಭ ನಿರ್ವಹಣೆ.
03:23 PM (IST) Mar 19
02:52 PM (IST) Mar 19
ಭಾರತೀಯರು ಹೊಸದಾಗಿ ಯಾವುದೇ ವಾಹನ ಖರೀದಿಸಲಿ ಅದನ್ನು ಬಳಸುವುದಕ್ಕೆ ಮೊದಲು ಪೂಜೆ ಮಾಡುವುದು ಸಾಮಾನ್ಯ, ಅದು ಸೈಕಲ್ಲೇ ಆಗಿರಲಿ ಕಾರು ಬೈಕ್ಗಳೇ ಆಗಿರಲಿ, ಆದರೆ ವಿದೇಶಿ ಮಹಿಳೆಯೊಬ್ಬರು ರೆಡ್ ಬುಲ್ ಎಫ್1 ಕಾರಿಗೆ ಭಾರತೀಯ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆಗಿದೆ.
02:44 PM (IST) Mar 19
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಗುರುಗ್ರಾಮದಲ್ಲಿ ದೇಶದ ಮೊದಲ 'ಎಲ್ಪಿಜಿ ಎಟಿಎಂ' ಅನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಸ್ವಯಂಚಾಲಿತ ಯಂತ್ರವು ಕೆಲವೇ ನಿಮಿಷಗಳಲ್ಲಿ ಹಗುರವಾದ ಕಾಂಪೋಸಿಟ್ ಸಿಲಿಂಡರ್ಗಳನ್ನು ವಿತರಿಸುತ್ತದೆ.
01:43 PM (IST) Mar 19
01:11 PM (IST) Mar 19
ಧುರಂಧರ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಆದಿತ್ಯ ಧಾರ್, ಸಿನಿಮಾ ಪ್ರದರ್ಶನ ರದ್ದು ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ಆದಿತ್ಯ ಧಾರ್ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.
01:04 PM (IST) Mar 19
ರಾಹುಲ್ ಗಾಂಧಿ ನಡವಳಿಕೆ 'ಗೌರವಯುತವಾಗಿಲ್ಲ' ಎಂಬ ಕಂಗನಾ ರನೌತ್ ಟೀಕೆಗೆ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಸರೋಗಿ ಬೆಂಬಲ ನೀಡಿದ್ದಾರೆ. ಕಂಗನಾ ಅವರ 'ಟಪೋರಿ' ಹೇಳಿಕೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರೆ, ಮಾಜಿ ಅಧಿಕಾರಿಗಳು ಕೂಡ ಸಂಸತ್ತಿನಲ್ಲಿ ರಾಹುಲ್ ವರ್ತನೆಯನ್ನು ಖಂಡಿಸಿದ್ದಾರೆ.
12:53 PM (IST) Mar 19
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಯುಗಾದಿ ಹಬ್ಬದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಮಗಳಿಗೆ 'ರಾಹಾ ಪಲ್ಲಿಕಲ್ ಕಾರ್ತಿಕ್' ಎಂದು ಹೆಸರಿಟ್ಟಿದ್ದಾರೆ.
12:47 PM (IST) Mar 19
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ತಂದೆಯ ತೋಳಲ್ಲಿದ್ದ ಮಗುವೊಂದು ಅಪರಿಚಿತ ಯುವತಿಯ ಬಳಿ ತಿಂಡಿಗಾಗಿ ಕೈಚಾಚಿದೆ. ಈ ಮುದ್ದಾದ ಆದರೆ ಮುಜುಗರದ ಸನ್ನಿವೇಶವು ಅನೇಕರಿಗೆ ತಮ್ಮ ಬಾಲ್ಯ ಮತ್ತು ಮಕ್ಕಳ ಇದೇ ರೀತಿಯ ವರ್ತನೆಯನ್ನು ನೆನಪಿಸಿದೆ.
12:45 PM (IST) Mar 19
ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ 'ಟಪೋರಿ' ಎಂಬ ಪದ ಬಳಸಿದ್ದಕ್ಕೆ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮಹಿಳೆಯರನ್ನು ಗೌರವಿಸುವ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ.
12:34 PM (IST) Mar 19
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು. ರಾಷ್ಟ್ರಪತಿಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿ, ದೇಗುಲದ ಆವರಣದಲ್ಲಿ 'ರಾಮ ಯಂತ್ರ' ಸ್ಥಾಪನೆ ಮಾಡಿದರು.
12:33 PM (IST) Mar 19
ಇರಾನ್ ದಾಳಿಯಿಂದ ಭಾರತ ಷೇರುಮಾರುಕಟ್ಟೆ ಭಾರಿ ಕುಸಿತ, ಒಂದು ಗಂಟೆಯಲ್ಲಿ 7.6 ಲಕ್ಷ ಕೋಟಿ ರೂ ನಷ್ಟ, ಭಾರತದ ಷೇರುಮಾರುಕಟ್ಟೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪಾತಾಳಕ್ಕೆ ಕುಸಿದಿದೆ.
12:21 PM (IST) Mar 19
ವಂದೇ ಭಾರತ್ ಸ್ಲೀಪರ್ ರೈಲಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ವಿಮಾನದಂತೆಯೇ ಟ್ರಾಲಿ ಬಳಸಿ, ಸೀಲ್ ಮಾಡಿದ ಫುಡ್ ಬಾಕ್ಸ್ಗಳನ್ನು ಸಿಬ್ಬಂದಿ ವಿತರಿಸುತ್ತಿದ್ದಾರೆ. ಜೊತೆಗೆ, ಪ್ರೀಮಿಯಂ ಬೆಡ್ಶೀಟ್ ಹೊಸ ಸೌಲಭ್ಯಗಳು ಭಾರತೀಯ ರೈಲ್ವೆ ಪ್ರಯಾಣದ ಅನುಭವವನ್ನೇ ಬದಲಿಸುತ್ತಿವೆ.
12:10 PM (IST) Mar 19
ಐಪಿಎಲ್ 2026ಕ್ಕೂ ಮುನ್ನ ಕೆಕೆಆರ್ ತಂಡವು ಪ್ರಮುಖ ವೇಗಿ ಹರ್ಷಿತ್ ರಾಣಾ ಅವರ ಗಾಯದಿಂದ ಸಂಕಷ್ಟದಲ್ಲಿದೆ. ಅವರ ಬದಲಿಗೆ ಸಿಮರ್ಜೀತ್ ಸಿಂಗ್, ಕೆ.ಎಂ. ಆಸಿಫ್ ಅವರಂತಹ ಆಟಗಾರರನ್ನು ಪರಿಗಣಿಸುತ್ತಿದ್ದು, ಪತಿರಾಣಾ ಲಭ್ಯತೆಯ ಬಗ್ಗೆಯೂ ಅನಿಶ್ಚಿತತೆ ಇದೆ.
11:29 AM (IST) Mar 19
ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್ಗೆ ಏರಿಕೆ, ಗ್ಯಾಸ್ ಬೆಲೆಯಲ್ಲೂ ಶೇಕಡಾ 5ರಷ್ಟು ಏರಿಕೆಯಾಗಿದೆ. ಇರಾನ್ ನಡೆಸಿದ ಮಿಸೈಲ್ ದಾಳಿಯಿಂದ ಇದೀಗ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ?
10:53 AM (IST) Mar 19
ಬೆಂಗಳೂರು: ಇಂದು ದೇಶಾದ್ಯಂತ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಿರುವಾಗಲೇ ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಾರ್ಚ್ 19ರಂದು ಅತ್ಯಂತ ಕನಿಷ್ಠ ಮೊತ್ತಕ್ಕೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ.
10:10 AM (IST) Mar 19
10:02 AM (IST) Mar 19
Dhurandhar 2 Movie Review ಇದು ಕೇವಲ ಒಂದು ಸ್ಪೈ ಸಿನಿಮಾ ಅಲ್ಲ, ಇದು ಸೇಡಿನ ಕಿಚ್ಚಿನಲ್ಲಿ ಬೇಯುತ್ತಿರುವ ಒಬ್ಬ ವ್ಯಕ್ತಿಯ ಅಪಾಯಕಾರಿ ಕಥೆ. ರಣವೀರ್ ಸಿಂಗ್ ಅವರ ಡಾರ್ಕ್ ಅವತಾರ, ಆದಿತ್ಯ ಧರ್ ಅವರ ಆಕ್ರಮಣಕಾರಿ ನಿರ್ದೇಶನ, ವಾಸ್ತವಕ್ಕೆ ಹತ್ತಿರವಿರುವ ಕಥೆ ಈ ಚಿತ್ರವನ್ನು ಬಹಳ ಪವರ್ಫುಲ್ ಮಾಡಿದೆ.
09:54 AM (IST) Mar 19
ಹಿಂದೂ ಹೊಸ ವರ್ಷದ ಹಬ್ಬಗಳಾದ ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಲ್ಲರಿಗೂ ಸಮೃದ್ಧಿ, ಶಾಂತಿ ಸಿಗಲಿ ಎಂದು ನಾಯಕರು ಹಾರೈಸಿದ್ದಾರೆ.
09:39 AM (IST) Mar 19
09:28 AM (IST) Mar 19
ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಸಾವಿರಾರು 'ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕ' ಹಕ್ಕಿಗಳು ಬೋಳು ಮರದ ಮೇಲೆ ಕುಳಿತು ಸೃಷ್ಟಿಸಿದ ಅದ್ಭುತ ದೃಶ್ಯದ ವೀಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಈ ವೀಡಿಯೋ, ಅನೇಕರ ಸೆಳೆದಿದೆ.