LIVE NOW
Published : Mar 19, 2026, 07:15 AM ISTUpdated : Mar 19, 2026, 10:10 AM IST

India Latest News Live: Dhurandhar 2 - ಹೇಗಿದೆ ಸಿನಿಮಾ? ನಿರೀಕ್ಷೆ ಉಳಿಸಿಕೊಂಡಿತಾ? ಇಲ್ಲಿದೆ ಫಸ್ಟ್ ರೆಸ್ಪಾನ್ಸ್

ಸಾರಾಂಶ

ಇರಾನ್ ಇಸ್ರೇಲ್ ನಡುವಿನ ಯುದ್ದ ತೀವ್ರಗೊಳ್ಳುತ್ತಿದೆ. ದಾಳಿ ಪ್ರತಿದಾಳಿಯಿಂದ ಹೊರ್ಮುಜ್ ಜಲಸಂಧಿಯಿಂದ ಸರಕು ಸಾಗಾಣಿಕೆ ಹಡುಗುಗಳು ಸಾಗುವುದೇ ಅತೀ ದೊಡ್ಡ ಸವಲಾಗಿದೆ. ಇದರ ನಡುವೆ ಭಾರತ ತೈಲ ಆಮದು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೋನಾಲ್ಡ್, ಹೊರ್ಮುುಜ್ ಜಲಸಂಧಿ ವಶಪಡಿಸಿಕೊಳ್ಳಲು ಎಲ್ಲಾ ದೇಶಗಳು ನೆರವಾಗಬೇಕು ಎಂಬ ಸೂಚನೆ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಇದರ ನಡುವೆ ಭಾರತದ ಯುದ್ಧ ನೌಕೆ ಹೊರ್ಮುಜ್ ಜಲಸಂಧಿಯತ್ತ ತೆರಳಿದೆ. ಏನಿದು ಭಾರತದ ಯುದ್ಧ ನೌಕೆ ಎಂಟ್ರಿ, ಪಂಚ ರಾಜ್ಯ ಚುನಾವಣೆ ಲೈವ್ ಸೇರಿದಂತೆ ಇಂದಿನ ದೇಶ ವಿದೇಶಗಳ ಸುದ್ದಿ ಅಪ್‌ಡೇಟ್ ಇಲ್ಲಿದೆ.

 

10:10 AM (IST) Mar 19

Dhurandhar 2 - ಹೇಗಿದೆ ಸಿನಿಮಾ? ನಿರೀಕ್ಷೆ ಉಳಿಸಿಕೊಂಡಿತಾ? ಇಲ್ಲಿದೆ ಫಸ್ಟ್ ರೆಸ್ಪಾನ್ಸ್

ಸೂಪರ್ ಹಿಟ್ 'ಧುರಂಧರ್' ಚಿತ್ರದ ಸೀಕ್ವೆಲ್ 'ಧುರಂಧರ್ 2' ತೆರೆಕಂಡಿದ್ದು, ಮೊದಲ ಪ್ರದರ್ಶನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಪಾಸಿಟಿವ್ ವಿಮರ್ಶೆಗಳು ಬಂದಿದ್ದು, ಚಿತ್ರವು ಮೊದಲ ಭಾಗದ ಕಲೆಕ್ಷನ್ ಅನ್ನು ಮೀರಿಸುವ ನಿರೀಕ್ಷೆಯಿದೆ ಎಂದು ಟ್ರೇಡ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
Read Full Story

10:02 AM (IST) Mar 19

Dhurandhar 2 Movie Review - ರಣವೀರ್‌ ಸಿಂಗ್ ‌'ಧುರಂಧರ್' ಸಿನಿಮಾಕ್ಕೆ ಭರ್ಜರಿ ಮೆಚ್ಚುಗೆ; ಹೊಗಳಿಕೆಯೋ ಹೊಗಳಿಕೆ

Dhurandhar 2 Movie Review ಇದು ಕೇವಲ ಒಂದು ಸ್ಪೈ ಸಿನಿಮಾ ಅಲ್ಲ, ಇದು ಸೇಡಿನ ಕಿಚ್ಚಿನಲ್ಲಿ ಬೇಯುತ್ತಿರುವ ಒಬ್ಬ ವ್ಯಕ್ತಿಯ ಅಪಾಯಕಾರಿ ಕಥೆ. ರಣವೀರ್ ಸಿಂಗ್ ಅವರ ಡಾರ್ಕ್ ಅವತಾರ, ಆದಿತ್ಯ ಧರ್ ಅವರ ಆಕ್ರಮಣಕಾರಿ ನಿರ್ದೇಶನ, ವಾಸ್ತವಕ್ಕೆ ಹತ್ತಿರವಿರುವ ಕಥೆ ಈ ಚಿತ್ರವನ್ನು ಬಹಳ ಪವರ್‌ಫುಲ್ ಮಾಡಿದೆ.

 

Read Full Story

09:54 AM (IST) Mar 19

Hindu New Year - ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಅವರಿಂದ 'ಹಿಂದೂ ಹೊಸವರ್ಷ'ದ ವಿಶೇಷ ಶುಭ ಹಾರೈಕೆ

ಹಿಂದೂ ಹೊಸ ವರ್ಷದ ಹಬ್ಬಗಳಾದ ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಲ್ಲರಿಗೂ ಸಮೃದ್ಧಿ, ಶಾಂತಿ ಸಿಗಲಿ ಎಂದು ನಾಯಕರು ಹಾರೈಸಿದ್ದಾರೆ.

Read Full Story

09:39 AM (IST) Mar 19

Divorce Maintenance - ಹೆಂಡತಿ ಕೇಳಿದಷ್ಟು ಜೀವನಾಂಶ ಕೊಡ್ಬೇಕಾ? ಗಂಡಂದಿರಿಗೆ ಈ ಸತ್ಯ ಗೊತ್ತಾದ್ರೆ ನಿರಾಳ!

ವಿಚ್ಛೇದನದ ಸಮಯದಲ್ಲಿ ಹೆಂಡತಿ ಕೇಳಿದಷ್ಟು ಜೀವನಾಂಶವನ್ನು ಗಂಡ ಕೊಡಬೇಕಾ? ನ್ಯಾಯಾಲಯವು ಯಾವ ಆಧಾರದ ಮೇಲೆ ಜೀವನಾಂಶವನ್ನು ನಿರ್ಧರಿಸುತ್ತದೆ? ಗಂಡನ ಆಸ್ತಿಯಲ್ಲಿ ಹೆಂಡತಿಗೆ ಅರ್ಧದಷ್ಟು ಪಾಲು ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
Read Full Story

09:28 AM (IST) Mar 19

ಇದು ಎಐ ಅಲ್ಲ - ಅಣ್ಣಾಮಲೈ ಹುಲಿ ಅಭಯಾರಣ್ಯದ ತಪ್ಪಲಲ್ಲಿ ಕಂಡು ಬಂದ ಹಕ್ಕಿಗಳ ಹರಟೆಯ ಅದ್ಭುತ ದೃಶ್ಯ

ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಸಾವಿರಾರು 'ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕ' ಹಕ್ಕಿಗಳು ಬೋಳು ಮರದ ಮೇಲೆ ಕುಳಿತು ಸೃಷ್ಟಿಸಿದ ಅದ್ಭುತ ದೃಶ್ಯದ ವೀಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಈ ವೀಡಿಯೋ, ಅನೇಕರ ಸೆಳೆದಿದೆ.

Read Full Story

09:11 AM (IST) Mar 19

ಈದ್ ಹಬ್ಬ ಆಚರಣೆ ನಡುವೆ ಸೌದಿ ಅರೆಬಿಯಾ ಮೇಲೆ ಇರಾನ್ ಮಿಸೈಲ್ ದಾಳಿ, ಕೆರಳಿದ ಯುಎಇ

ಈದ್ ಹಬ್ಬ ಆಚರಣೆ ನಡುವೆ ಸೌದಿ ಅರೆಬಿಯಾ ಮೇಲೆ ಇರಾನ್ ಮಿಸೈಲ್ ದಾಳಿ, ಕೆರಳಿದ ಯುಎಇ, ರಿಯಾದ್, ಖತಾರ್ ಸೇರಿದಂತೆ ಹಲೆವೆಡೆ ಮಿಸೈಲ್ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

 

Read Full Story

09:06 AM (IST) Mar 19

ಐಪಿಎಲ್‌ನಲ್ಲಿ ಫ್ರಾಂಚೈಸಿ ಸೇಲ್‌ ಬಿಸಿ - ರಾಜಸ್ಥಾನ ರಾಯಲ್ಸ್‌ ₹12,000 ಕೋಟಿಗೆ ಬಿಡ್?

ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್‌ಗೆ ₹12000 ಕೋಟಿಯ ಬೃಹತ್ ಬಿಡ್ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಸೇರಿದಂತೆ ಹಲವು ಸಂಸ್ಥೆಗಳು ತಂಡದ ಖರೀದಿಗೆ ಆಸಕ್ತಿ ತೋರಿದ್ದು, ಆರ್‌ಸಿಬಿಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಗಳನ್ನು ಲೇಖನವು ವಿಶ್ಲೇಷಿಸುತ್ತದೆ.
Read Full Story

08:51 AM (IST) Mar 19

Dhoni Jersey - ನಂ.7 ಜೆರ್ಸಿ ಬಿಟ್ಟು ನಂ.8ಕ್ಕೆ ಶಿಫ್ಟ್? ಧೋನಿಯ ಹೊಸ ಪ್ಲ್ಯಾನ್ ಏನು?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಫೇಮಸ್ ನಂಬರ್ 7 ಜೆರ್ಸಿಯನ್ನು ಬದಲಾಯಿಸಲಿದ್ದಾರೆಯೇ? ಐಪಿಎಲ್ 2026ಕ್ಕೆ ಅವರು ನಂಬರ್ 8 ಜೆರ್ಸಿ ಧರಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು?
Read Full Story

08:09 AM (IST) Mar 19

ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ

ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ, ಗ್ಯಾಸ್ ಘಟಕ ಸ್ಥಗಿತಗೊಂಡಿದೆ. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ.

 

Read Full Story

07:58 AM (IST) Mar 19

ನೀರಲ್ಲಿ ಹೆಣದಂತೆ ತೇಲುತ್ತಿರುವ ಜೋಡಿ - ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಭಾರಿ ವೈರಲ್

ಇತ್ತೀಚೆಗೆ ಜೋಡಿಯೊಂದು ಮಾಡಿದ ವಿವಾಹಪೂರ್ವ ಫೋಟೋಶೂಟ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಜೋಡಿಯು ನೀರಿನ ಮೇಲೆ ಶವದಂತೆ ತೇಲುತ್ತಾ ಫೋಸ್ ನೀಡಿದ್ದು, ಈ ವಿಲಕ್ಷಣ ಫೋಟೋಶೂಟ್‌ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಜನರು ಇದನ್ನು 'ಫ್ರೀ ಡೆತ್‌ಶೂಟ್' ಎಂದು ಕರೆದಿದ್ದಾರೆ.

Read Full Story

07:15 AM (IST) Mar 19

ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಯುದ್ಧ ನೌಕೆ ಕಣ್ಗಾವಲು

ಹೊರ್ಮುಜ್ ಜಲಸಂಧಿಯತ್ತ ಭಾರತದ ಯುದ್ಧ ನೌಕೆ ತೆರಳಿದೆ. ಭಾರತದ ತೈಲ, ಗ್ಯಾಸ್ ಸೇರಿದಂತೆ ಪ್ರಮುಖ ಹಡಗುಗಳು ಇದೇ ಜಲಸಂಧಿ ಮೂಲಕ ಸಾಗಿ ಬರಬೇಕಿದೆ. ಈ ವೇಳೆ ದಾಳಿಯ ಆತಂಕ ಇರುವ ಕಾರಣ ಭರಾತದ ನೌಕಾ ಪಡೆ ಯುದ್ಧ ನೌಕೆಯನ್ನು ನಿಯೋಜಿಸಿದೆ. ಈ ಮೂಲಕ ಭಾರತದ ಆಮದುಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮುಂದಾಗಿದೆ.


More Trending News