Published : Jul 15, 2026, 07:26 AM ISTUpdated : Jul 15, 2026, 11:46 PM IST

India Latest News Live: 22 ವರ್ಷಗಳ ಬಳಿಕ ನಟ ಅಜಿತ್‌ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!

ಸಾರಾಂಶ

ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಸಲಹೆಯನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಿರಸ್ಕರಿಸಿದ್ದಾರೆ. ನ್ಯಾಯಾಲಯಗಳೇ ಈ ವಿಷಯವನ್ನು ನಿರ್ಧರಿಸಬೇಕು ಎಂದು ಎರಡೂ ಕಡೆಯವರು ಕೋರಿದ್ದಾರೆ.

ಸುಪ್ರೀಂ ಕೋರ್ಟ್‌ ಪ್ರಕರಣಗಳ ಇತ್ಯರ್ಥಕ್ಕಾಗಿ ಆ.21-23ರ ತನಕ ವಿಶೇಷ ಲೋಕ ಅದಾಲತ್‌ ಆಯೋಜಿಸಿದೆ. ಅದಕ್ಕೂ ಮುಂಚಿತವಾಗಿ ‘ರಾಷ್ಟ್ರಾದ್ಯಂತ ಮಧ್ಯಸ್ಥಿಕೆ ತೀರ್ಪು ಮತ್ತು ವಿವಾದಗಳ ಸಾಮರಸ್ಯಕ್ಕಾಗಿ ಸುಪ್ರೀಂ ಕೋರ್ಟ್‌ ಕ್ರಮ’ ಎಂಬ ಕಾರ್ಯಕ್ರಮವನ್ನು ಕೋರ್ಟ್‌ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಂಗಳವಾರ ಎರಡೂ ಕಡೆಯವರು ವಾರಾಣಸಿ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾದರು.

ಈ ವೇಳೆ ಮುಸ್ಲಿಂ ಸಮುದಾಯದವರು, ‘ಇದೇ ರೀತಿಯ ಹಲವಾರು ವಿಷಯಗಳು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಉಳಿದಿವೆ. ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ. ಆದರೆ ಮಧ್ಯಸ್ಥಿಕೆಯನ್ನು ಸ್ವೀಕರಿಸಲು ಸಿದ್ಧವಿಲ್ಲ’ ಎಂದರು. ಇತ್ತ ಹಿಂದೂ ಸಮುದಾಯವರು ‘ಮುಸ್ಲಿಂ ಕಡೆಯವರು ಜ್ಞಾನವಾಪಿಯಲ್ಲಿ ಅತಿಕ್ರಮಣಕಾರರು. ಜ್ಯೋತಿರ್ಲಿಂಗ ಸ್ಥಳದಲ್ಲಿ ಭವ್ಯ ಕಾಶಿ ವಿಶ್ವನಾಥ ದೇಗುಲ ನಿರ್ಮಿಸಲು ಸಾಧ್ಯವಾಗುವಂತೆ ಆವರಣ ಖಾಲಿ ಮಾಡಬೇಕು’ ಎಂದು ಕೋರಿದರು ಹಾಗೂ ಮಧ್ಯಸ್ಥಿಕೆಗೆ ನಿರಾಕರಿಸಿದರು,

11:46 PM (IST) Jul 15

22 ವರ್ಷಗಳ ಬಳಿಕ ನಟ ಅಜಿತ್‌ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!

ನಟ ಅಜಿತ್ ಕುಮಾರ್ ಪತ್ನಿ, ಮಾಜಿ ನಟಿ ಶಾಲಿನಿ ಅಜಿತ್‌ ಕುಮಾರ್ ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ನಟಿಯಾಗಿ ಅಲ್ಲ, ಬದಲಿಗೆ ನಿರ್ಮಾಪಕಿಯಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.

Read Full Story

10:48 PM (IST) Jul 15

ಸೆನ್ಸಾರ್‌ಶಿಪ್ ಅನ್ನೋದೇ ಬೇಕಾಗಿಲ್ಲ, ಇದೊಂದು ಹಳಸಲು ಪದ್ಧತಿ - ರಾಮ್ ಗೋಪಾಲ್ ವರ್ಮಾ ಕಿಡಿ

India Film Censorship: ಭಾರತದಲ್ಲಿ ಫಿಲ್ಮ್ ಸೆನ್ಸಾರ್‌ಶಿಪ್ ಅನ್ನೇ ತೆಗೆದುಹಾಕಬೇಕು, ಈಗಿನ ವ್ಯವಸ್ಥೆ ಸಂಪೂರ್ಣ ಹಳಸಲಾಗಿದೆ ಅಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

Read Full Story

10:30 PM (IST) Jul 15

IRCTC ಹೊಸ ವೆಬ್‌ಸೈಟ್‌ ಬೀಟಾ ಆವೃತ್ತಿ ರಿಲೀಸ್‌ - ಕ್ಯಾಪ್ಚಾ ಕಿರಿಕಿರಿ ಇಲ್ಲ, ಟಿಕೆಟ್ ಬುಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ

ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ನ ಹೊಸ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದ್ದು, ಇದು ಬಳಕೆದಾರರಿಗೆ ಸುಧಾರಿತ ಅನುಭವ ನೀಡಲಿದೆ. ಅನಗತ್ಯ ಕ್ಯಾಪ್ಚಾ ತೆಗೆದುಹಾಕುವುದು, ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ, ಮತ್ತು ವೇಗದ ಚೆಕ್‌ಔಟ್ ಪ್ರಕ್ರಿಯೆಯಂತಹ ಪ್ರಮುಖ ಸುಧಾರಣೆಗಳನ್ನು ಇದು ಒಳಗೊಂಡಿದೆ.

Read Full Story

09:35 PM (IST) Jul 15

ರಾಮ್ ಚರಣ್ RC17 ಚಿತ್ರಕ್ಕೆ ಲೇಡಿ ಸೂಪರ್‌ಸ್ಟಾರ್ ಎಂಟ್ರಿ - ನಿರ್ದೇಶಕ ಸುಕುಮಾರ್ ಪ್ಲ್ಯಾನ್ ಏನು?

ರಾಮ್ ಚರಣ್ ಅವರ ಮುಂದಿನ ಸಿನಿಮಾ RC17 ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Read Full Story

09:02 PM (IST) Jul 15

ಪಾತಾಳಕ್ಕೆ ಕುಸಿದ ಬಾಬಾ ರಾಮ್‌ದೇವ್‌ ಪತಂಜಲಿ, ಒಂದೇ ದಿನ ಶೇ. 15ರಷ್ಟು ಮಹಾಕುಸಿತ!

ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಷೇರುಗಳು ಶೇ. 20ರಷ್ಟು ಕುಸಿದು 52 ವಾರಗಳ ಕನಿಷ್ಠ ಮಟ್ಟ ತಲುಪಿವೆ. ಇತ್ತೀಚೆಗೆ ಕಂಪನಿಯು ಉತ್ತಮ ಲಾಭ ಗಳಿಸಿದ್ದರೂ, ಈ ಹಠಾತ್ ಕುಸಿತವು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಷೇರು ಕುಸಿತಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
Read Full Story

07:02 PM (IST) Jul 15

ಮಾರ್ಕೆಟ್​ಗೆ ಬಂದಿದೆ ಹೊಸ ಉದ್ಯೋಗ - ಕೂದಲಿನ ಜೊತೆ ಮಾತನಾಡಿ ಲಕ್ಷ ಲಕ್ಷ ಆದಾಯ! ಏನಿದು ನೋಡಿ

ಇತ್ತೀಚೆಗೆ "ಹೇರ್ ವಿಸ್ಪರರ್" ಎಂಬ ವಿಚಿತ್ರ ಉದ್ಯೋಗವೊಂದು ಟ್ರೆಂಡ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಜನರ ಕೂದಲಿನೊಂದಿಗೆ ಮಾತನಾಡಿ, ಕೂದಲು ಉದುರುವಿಕೆ ಮತ್ತು ಇತರ ಸಮಸ್ಯೆಗಳಿಗೆ ಕಾರಣಗಳನ್ನು ಹೇಳುತ್ತಾರೆ. ಈ ವಿಶಿಷ್ಟ ಸೇವೆಗೆ ಸುಮಾರು 5,000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story

05:55 PM (IST) Jul 15

ಮಿನಿಮಲ್ ಸ್ಟೈಲ್, ಮ್ಯಾಕ್ಸಿಮಮ್ ಗ್ಲಾಮರ್ - 'ಧುರಂಧರ್' ಸಾರಾ ಅರ್ಜುನ್ ಹೊಸ ಅವತಾರ ವೈರಲ್

ರಣವೀರ್ ಸಿಂಗ್ ನಟನೆಯ 'ಧುರಂಧರ್' ಫ್ರಾಂಚೈಸಿಯಲ್ಲಿ ಯಾಲಿನಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅರ್ಜುನ್, ಇದೀಗ ತಮ್ಮ ಲೇಟೆಸ್ಟ್ ಫೋಟೋಶೂಟ್‌ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

Read Full Story

05:50 PM (IST) Jul 15

ಕೇತನ್ ಕೊಲೆ - ಪ್ರಧಾನಿಗೆ ತಲುಪಿದ ತಾಯಿಯ ಕಣ್ಣೀರ ಪತ್ರ! ದಯವಿಟ್ಟು ಇದನ್ನು ಇನ್ನೊಂದು ಘಟನೆಯಾಗಿಸಬೇಡಿ

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಕೊಲೆ ಮಾಡಿದ್ದರು. ನ್ಯಾಯ ಸಿಗುವುದಿಲ್ಲವೇನೋ ಎಂಬ ಆತಂಕದಲ್ಲಿರುವ ಕೇತನ್ ತಾಯಿ ರಾಖಿ ಅಗರ್ವಾಲ್, ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವನಾತ್ಮಕ ಪತ್ರ ಬರೆದು, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಕಣ್ಣೀರಿನ ಮನವಿ ಮಾಡಿದ್ದಾರೆ.
Read Full Story

05:36 PM (IST) Jul 15

ರೈಲಿನ ಬೆಡ್‌ಶೀಟ್ ಮನೆಗೆ ತರ್ತೀರಾ? ಭಾರತೀಯ ರೈಲ್ವೆಗೆ ನೂರಾರು ಕೋಟಿ ರುಪಾಯಿ ನಷ್ಟ..! ಸಿಕ್ಕಿಬಿದ್ರೆ ಜೈಲೂಟ ಗ್ಯಾರಂಟಿ!

ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್‌ರೋಲ್ ಕಿಟ್‌ಗಳು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಡ್‌ರೋಲ್ ವಸ್ತುಗಳು ಕಣ್ಮರೆಯಾಗಿದ್ದು, ಇದರಿಂದ ರೈಲ್ವೆ ವ್ಯವಸ್ಥೆಗೆ ₹104 ಕೋಟಿಗೂ ಹೆಚ್ಚು ನಷ್ಟವಾಗಿದೆ.

Read Full Story

05:31 PM (IST) Jul 15

ಇಂಡೋ-ನೇಪಾಳ ಗಡಿಯಲ್ಲಿ ಶಂಕಿತ ಅಮೆರಿಕನ್ ನೌಕಾಪಡೆ ಮಾಜಿ ಯೋಧನ ಬಂಧನ, ಬಯಲಾಯ್ತು ಬೆಂಗಳೂರು, ಗೋವಾ ಲಿಂಕ್!

ವೀಸಾ, ಪಾಸ್‌ಪೋರ್ಟ್ ಇಲ್ಲದೆ ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ ಅಮೆರಿಕದ ಜೋರ್ಡಾನ್ ಬ್ರೌನ್ ಎಂಬಾತನನ್ನು ಸೋನೌಲಿ ಗಡಿಯಲ್ಲಿ ಬಂಧಿಸಲಾಗಿದೆ. ಈತ 8 ತಿಂಗಳು ಬೆಂಗಳೂರು ಮತ್ತು ಗೋವಾದಲ್ಲಿ ತಂಗಿದ್ದು, ವಿಚಾರಣೆ ವೇಳೆ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Read Full Story

05:20 PM (IST) Jul 15

ಕೊನೆಗೂ ಆ ಸೀಕ್ರೆಟ್ ರಿವೀಲ್.. - ಪ್ರಿಯಾಂಕಾ ಚೋಪ್ರಾಗೆ ನಿಕ್ ಕಳಿಸಿದ ಮೊದಲ ಸಂದೇಶ ಬಹಿರಂಗ

ಕೊನೆಗೂ ಆ ಸೀಕ್ರೆಟ್ ರಿವೀಲ್ ಆಗಿದೆ! ಪ್ರಿಯಾಂಕಾ ಚೋಪ್ರಾಗೆ ತಾವು ಕಳಿಸಿದ್ದ ಮೊದಲ ಮೆಸೇಜ್ ಬಗ್ಗೆ ನಿಕ್ ಜೋನಸ್ ಅವರೇ ಹೇಳಿಕೊಂಡಿದ್ದಾರೆ. 'ಹೇ ಜೋನಸ್' ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಾಗ, ಇಬ್ಬರೂ ಮುಜುಗರದಿಂದ ನಕ್ಕಿದ್ದು ಕ್ಯೂಟ್ ಆಗಿತ್ತು.

Read Full Story

04:47 PM (IST) Jul 15

ಪಂಡಿತ್ ಭವಿಷ್ಯ ನಿಜವಾಯ್ತು, ಫಿಫಾ ವಿಶ್ವಕಪ್‌ನಿಂದ ಫ್ರಾನ್ಸ್ ಔಟ್! ಈಗ ಅರ್ಜೆಂಟೀನಾ ಫ್ಯಾನ್ಸ್‌ಗೆ ಶುರುವಾಯ್ತು ನಡುಕ!

ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸ್ಪೇನ್ ಗೆಲ್ಲುತ್ತದೆ ಎಂಬ ಸಂತೋಷ್ ಪಂಡಿತ್‌ರ ಭವಿಷ್ಯ ನಿಜವಾಗಿದೆ. ಇದೀಗ, ಇಂಗ್ಲೆಂಡ್ ತಂಡ ಅರ್ಜೆಂಟೀನಾವನ್ನು ಸೋಲಿಸಿ, ಫೈನಲ್‌ನಲ್ಲಿ ಸ್ಪೇನ್‌ಅನ್ನು ಮಣಿಸಿ ಕಪ್ ಗೆಲ್ಲಲಿದೆ ಎಂದು ಅವರು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Read Full Story

04:23 PM (IST) Jul 15

IND vs ENG 2nd ODI - ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿದೆ ಸಂಭಾವ್ಯ ತಂಡ.

Read Full Story

03:25 PM (IST) Jul 15

16 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್; ಫ್ರಾನ್ಸ್ ಕನಸು ಭಗ್ನ!

2026ರ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್ ಅನ್ನು 2-0 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಸ್ಪೇನ್ ಪರ ಮಿಕೆಲ್ ಒಯರ್ಸಬಾಲ್ ಮತ್ತು ಪೆಡ್ರೊ ಪೊರೊ ಗೋಲು ಗಳಿಸಿದರೆ, ಫ್ರಾನ್ಸ್‌ನ ಸ್ಟಾರ್ ಆಟಗಾರರನ್ನು ಕಟ್ಟಿಹಾಕುವಲ್ಲಿ ಸ್ಪೇನ್ ಯಶಸ್ವಿಯಾಯಿತು.
Read Full Story

02:52 PM (IST) Jul 15

Supreme Court - ಸುಪ್ರೀಂ ಕೋರ್ಟ್‌ನಲ್ಲೇ ಪೇಪರ್ ಎಸೆದು ಸಿಜೆಗೆ ನಿಂದಿಸಿದ ಇಬ್ಬರು ಕಾನೂನು ವಿದ್ಯಾರ್ಥಿಗಳ ಬಂಧನ

ಸುಪ್ರೀಂ ಕೋರ್ಟ್ ಕಲಾಪದ ವೇಳೆ ಗಲಾಟೆ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಬಲ್ ಪ್ರತಾಪ್ ಸಿಂಗ್ ಎಂಬಾತನೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
Read Full Story

02:36 PM (IST) Jul 15

ಯುವತಿಯ ಆನ್‌ಲೈನ್ ಆರ್ಡರ್‌ನಲ್ಲಿತ್ತು ಕಾನ್ಫಿಡೆನ್ಶಿಯಲ್ ಫೋಟೋ, ಆತಂಕದಿಂದ ತೆರೆದಾಗ ಕಾದಿತ್ತು ಅಚ್ಚರಿ

ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯಂತ ರಹಸ್ಯ ಫೋಟೋಗಳು ಅನ್ನೋ ಎನ್‌ವಲಪ್ ಕವರ್ ಇದೇ ಆರ್ಡರ್ ಒಳಗಿತ್ತು. ಆತಂಕದಿಂದಲೇ ಯುವತಿ ಈ ಕವರ್ ತೆರೆದಾಗ ಅಚ್ಚರಿ ಕಾದಿತ್ತು.

Read Full Story

01:53 PM (IST) Jul 15

ಅಹಮದಾಬಾದ್ ವಿಮಾನ ದುರಂತ - 13 ತಿಂಗಳ ಬಳಿಕ ಸುಪ್ರೀಂಗೆ AAIBಯಿಂದ ಅಫಿಡವಿಟ್ ಸಲ್ಲಿಕೆ

2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Read Full Story

01:37 PM (IST) Jul 15

ತಿರಸ್ಕೃತರಿಂದಲೇ ಸನ್ಮಾನ - ಶೌಚಾಲಯ ಕ್ಲೀನ್​ ಮಾಡುತ್ತಲೇ ಮಂಗಳನ ಅಂಗಳದವರೆಗೆ- ಧೀರೆಯ ರೋಚಕ ಸ್ಟೋರಿ

14ನೇ ವಯಸ್ಸಿನಲ್ಲಿ ನಾಸಾದಿಂದ ತಿರಸ್ಕೃತಳಾದ ಕ್ಲೇರ್ ಪರ್ಫಿಟ್, ಬಾಹ್ಯಾಕಾಶ ಶೌಚಾಲಯ ಸ್ವಚ್ಛಗೊಳಿಸುವ ಕೆಲಸದಿಂದ ವೃತ್ತಿ ಆರಂಭಿಸಿದರು. ತಮ್ಮ ಛಲ ಮತ್ತು ಪರಿಶ್ರಮದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಮಂಗಳ ಗ್ರಹದ ಪರಿಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
Read Full Story

01:16 PM (IST) Jul 15

ಪತಿ ಅಕ್ರಮ ಸಂಬಂಧ ಪತ್ತೆಗೆ ಶಾಲೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತ್ನಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ

ಶಿಕ್ಷಕ ಪತಿಯ ಮೇಲೆ ಪತ್ನಿಗೆ ಅನುಮಾನಗಳು ಹೆಚ್ಚಾಗಿದೆ. ಗೊತ್ತಿಲ್ಲದೆ ಶಾಲೆಗೆ ತೆರಳಿ ಹಿಡನ್ ಕ್ಯಾಮೆರಾ ಇಟ್ಟು ಬಂದಿದ್ದಾಳೆ. ಇದರ ಅರಿವೇ ಇಲ್ಲದ ಪತಿ, ಶಾಲಾ ಟೀಚರ್ ಜೊತೆಗಿನ ರಹಸ್ಯ ಕಾರ್ಯಾಚರಣೆಗಳು ಸೆರೆಯಾಗಿದೆ.

Read Full Story

12:54 PM (IST) Jul 15

ನಾನಿನ್ನೂ ವರ್ಜಿನ್, ಮದ್ವೆ ಆದ್ಮೇಲೆ - ಸಹನಟಿ ಕ್ಯಾರೆಕ್ಟರ್‌ ಬಗ್ಗೆ ಶಿಲ್ಪಾ ಶಿಂಧೆ ಮಾತು

'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶಿಂಧೆ, ಸಹ ಸ್ಪರ್ಧಿ ಶ್ರೇಯಾ ಕಾಲ್ರಾ ಜೊತೆ ಸೇರಿ ನಟಿ ಶಿವಾಂಗಿ ಜೋಶಿಯವರನ್ನು ಮಿಮಿಕ್ರಿ ಮಾಡಿದ್ದಾರೆ. ಶಿವಾಂಗಿಯವರ ಕ್ಯಾರೆಕ್ಟರ್, ವರ್ಜಿನ್ ಹೇಳಿಕೆ ಬಗ್ಗೆ ಕೊಂಕು ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Read Full Story

12:54 PM (IST) Jul 15

ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ಶುಭಮನ್ ಗಿಲ್ 80 ರನ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಆಡಿ ತಮ್ಮ ಛಾಪು ಮೂಡಿಸಿದ್ದಾರೆ.

Read Full Story

12:32 PM (IST) Jul 15

ವಿದ್ಯಾರ್ಥಿನಿ ದೂರಿನಿಂದ ಬದಲಾಯ್ತು ಭಾರತೀಯ ರೈಲ್ವೆ IRCTC ವೆಬ್‌ಸೈಟ್, ಪ್ರತಿ ನಿಮಿಷಕ್ಕೆ 1.5 ಲಕ್ಷ ಬುಕಿಂಗ್!

ಭಾರತೀಯ ರೈಲ್ವೆಯು ಐಆರ್‌ಸಿಟಿಸಿ ವೆಬ್‌ಸೈಟನ್ನು ಸಂಪೂರ್ಣವಾಗಿ ಆಧುನೀಕರಿಸುತ್ತಿದೆ. ಈ ಹೊಸ ಪೋರ್ಟಲ್ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕ್ ಮಾಡುವ ಸಾಮರ್ಥ್ಯ ಹೊಂದಿದ್ದು, ತತ್ಕಾಲ್ ಸಮಸ್ಯೆಗೆ ಪರಿಹಾರ ನೀಡಲಿದೆ. ಎಐ ಚಾಲಿತ ವೈಶಿಷ್ಟ್ಯಗಳೊಂದಿಗೆ ಬಳಕೆದಾರ ಸ್ನೇಹಿಯಾಗಿರುವ ಈ ವೆಬ್‌ಸೈಟ್‌ನ ಬಿಡುಗಡೆ ತಾಂತ್ರಿಕ ಪರೀಕ್ಷೆಗಳಿಂದಾಗಿ ಸ್ವಲ್ಪ ವಿಳಂಬವಾಗಲಿದೆ.
Read Full Story

12:26 PM (IST) Jul 15

ಗಂಭೀರ್ ವಿರುದ್ಧ ತಿರುಗಿಬಿದ್ದ ಅಗರ್ಕರ್? ಭಾರತ ತಂಡದೊಳಗಿನ ಭಿನ್ನಾಭಿಪ್ರಾಯ ಬಯಲು ಮಾಡಿದ ದಿನೇಶ್ ಕಾರ್ತಿಕ್

ನವದೆಹಲಿ: ಭಾರತ ತಂಡದ ಹೆಡ್‌ ಕೋಚ್ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವೆ ಬಿರುಕು ಬಿಟ್ಟಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

Read Full Story

12:03 PM (IST) Jul 15

ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?

ಪಾಕಿಸ್ತಾನ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಈ ನಗರದಲ್ಲಿ ಶೇ.80 ರಷ್ಟು ಹಿಂದೂಗಳಿದ್ದಾರೆ. ಈ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತಾರೆ.

Read Full Story

11:27 AM (IST) Jul 15

14 ರಾಜ್ಯಕ್ಕೆ ಪ್ರವಾಹ ಸೃಷ್ಟಿಸುವ ಭಾರಿ ಮಳೆ ಅಲರ್ಟ್, ಬಿಸಿಲಿನ ಬೆನ್ನಲ್ಲೇ ಹವಾಮಾನ ಇಲಾಖೆ ಎಚ್ಚರಿಕೆ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಉರಿ ಬಿಸಿಲು ತೀವ್ರಗೊಳ್ಳುತ್ತಿದೆ. ದೇಶದ ಕೆಲೆವೆಡೆ ಮಳೆಯಾಗಿದ್ದರೆ, ಬಹುತೇಕ ರಾಜ್ಯಗಳು ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ 14 ರಾಜ್ಯಗಳಿಗೆ ಪ್ರವಾಹ ಪರಿಸ್ಥಿತಿ ಮಳೆ ಎಚ್ಚರಿಕೆ ನೀಡಿದೆ.

Read Full Story

11:17 AM (IST) Jul 15

ಹಾವು ಮತ್ತೊಂದು ಹಾವನ್ನು ಕಚ್ಚಿದರೆ ಏನಾಗುತ್ತೆ? ಹಾವುಗಳ ವಿಷದ ನಿಗೂಢ ರಹಸ್ಯ ಇಲ್ಲಿದೆ

ಪ್ರತಿ ಹಾವಿನ ವಿಷವು ರಾಸಾಯನಿಕವಾಗಿ ವಿಭಿನ್ನವಾಗಿರುತ್ತದೆ ಮತ್ತು ಹಾವಿನ ದೇಹವು ತನ್ನದೇ ಜಾತಿಯ ವಿಷವನ್ನು ಮಾತ್ರ ತಟಸ್ಥಗೊಳಿಸಲು ಶಕ್ತವಾಗಿರುತ್ತದೆ. ಹಾವನ್ನು ಕಚ್ಚಿದ್ರೆ ಇನ್ನೊಂದು ಹಾವಿನ ವಿಷದ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Read Full Story

10:50 AM (IST) Jul 15

ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?

ಬರ್ಮಿಂಗ್‌ಹ್ಯಾಮ್‌: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಹೆಡ್‌ ಕೋಚ್ ಗೌತಮ್ ಗಂಭೀರ್ ನಡುವೆ ಮತ್ತೆ ಮನಸ್ತಾಪ ಶುರುವಾಗಿದೆಯೇ ಎನ್ನುವ ಚರ್ಚೆ ಕಾಡಲಾರಂಭಿಸಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.

Read Full Story

10:31 AM (IST) Jul 15

ಸಂಕಷ್ಟದಲ್ಲಿ ಸಿಲುಕಿದ್ದ ವಿದೇಶಿ ಮಹಿಳೆಗೆ ಸರಿಯಾಗಿ ಸೀರೆ ತೊಡಿಸಿದ ಲೇಡಿ ಪೊಲೀಸ್ - ವಿಡಿಯೋ

ತಾಜ್‌ ಮಹಲ್ ವೀಕ್ಷಣೆಗೆ ಬಂದಿದ್ದ ಅರ್ಜಂಟೈನ್ ಮೂಲದ ಪ್ರವಾಸಿ ಮಹಿಳೆಯೊಬ್ಬರು ಸೀರೆಯಲ್ಲಿ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು, ಅವರಿಗೆ ಕ್ರಮಬದ್ಧವಾಗಿ ಸೀರೆ ತೊಡಿಸಿ ಸಹಾಯ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

09:59 AM (IST) Jul 15

ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಫಲರಾದರು. ಆದರೆ, ಇದೇ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಜೊತೆಗೆ, ಏಕದಿನದಲ್ಲಿ ವೇಗವಾಗಿ 150 ವಿಕೆಟ್ ಪಡೆದ ಮೂರನೇ ಭಾರತೀಯ ಎನಿಸಿಕೊಂಡರು.
Read Full Story

09:52 AM (IST) Jul 15

'ಸ್ವಸ್ತಿಕ' ಹಿಟ್ಲರ್‌ನ ಚಿಹ್ನೆಯಲ್ಲ ಅದು ಹಿಂದೂಗಳದ್ದು ಅಮೆರಿಕ ಶಿಕ್ಷಣ ಮಂಡಳಿಯಲ್ಲಿ ವಾದಿಸಿ ಗೆದ್ದ ಭಾರತೀಯ ಬಾಲಕಿ!

ಅಮೆರಿಕದ ಶಾಲೆಯೊಂದರಲ್ಲಿ ಹಿಂದೂಗಳ ಪವಿತ್ರ ಸ್ವಸ್ತಿಕ ಚಿಹ್ನೆಯನ್ನು ಹಿಟ್ಲರ್‌ನ ನಾಜಿ ಚಿಹ್ನೆ ಎಂದು ತಪ್ಪಾಗಿ ಬೋಧಿಸುತ್ತಿದ್ದರ ವಿರುದ್ಧ ಭಾರತೀಯ ಮೂಲದ ವಿದ್ಯಾರ್ಥಿನಿ ಮೀರಾ ತ್ರಿವೇದಿ ಧ್ವನಿ ಎತ್ತಿದಳು. ತನ್ನ ಸುದೀರ್ಘ ಹೋರಾಟ ಮತ್ತು ಐತಿಹಾಸಿಕ ಪುರಾವೆಗಳ ಮೂಲಕ, ಆಕೆ ಶಾಲಾ ಪಠ್ಯಕ್ರಮದಲ್ಲಿನ ತಪ್ಪನ್ನು ಸರಿಪಡಿಸುವಲ್ಲಿ ಯಶಸ್ವಿಯಾದಳು.
Read Full Story

09:40 AM (IST) Jul 15

ನನ್ನ ಹೆಂಡ್ತಿಯನ್ನು ಕಳುಹಿಸಿ; ನಾನು ಆಕೆಯ ಗಂಡ ಎಂದು ಪೊಲೀಸ್ ಸ್ಟೇಶನ್‌ಗೆ ಬಂದ ಯುವತಿ

ಮದುವೆಯಾದ ಮೂರೇ ದಿನಕ್ಕೆ ಯುವತಿಯೊಬ್ಬಳು ತನ್ನ ಸಲಿಂಗಿ ಗೆಳತಿಯೊಂದಿಗೆ ಪರಾರಿಯಾಗಿದ್ದಾಳೆ. ನಂತರ ಪೊಲೀಸ್ ಠಾಣೆಗೆ ಬಂದು, ಆಕೆ ನನ್ನ ಹೆಂಡತಿ, ನನ್ನೊಂದಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ಇಬ್ಬರೂ ಈಗಾಗಲೇ ನ್ಯಾಯಾಲಯದಲ್ಲಿ ಮದುವೆಯಾಗಿರುವ ವಿಷಯ ಬಹಿರಂಗವಾಗಿದೆ.

Read Full Story

09:36 AM (IST) Jul 15

ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ

ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಜೋ ರೂಟ್‌ ಮತ್ತು ಲಿಯಾಮ್‌ ಡಾವ್ಸನ್‌ ಅವರ ಹೋರಾಟದ ಹೊರತಾಗಿಯೂ ಇಂಗ್ಲೆಂಡ್‌ 258 ರನ್‌ಗಳಿಗೆ ಆಲೌಟಾಯಿತು. ಶುಭ್‌ಮನ್‌ ಗಿಲ್‌, ಅಕ್ಷರ್‌ ಪಟೇಲ್ ಮತ್ತು ವಾಷಿಂಗ್ಟನ್‌ ಸುಂದರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
Read Full Story

08:13 AM (IST) Jul 15

20 ವರ್ಷಗಳ ಬಳಿಕ ಕೋಲ್ಕತಾಗೆ ಬರಲು ತಸ್ಲೀಮಾ ನಸ್ರೀನ್‌ ಸಜ್ಜು! 2007ರ ಆ ಘಟನೆಯಿಂದ ಪಶ್ಚಿಮ ತೊರೆದಿದ್ದ ಲೇಖಕಿ!

2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್‌(Taslima Nasrin) ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ. ಆಗಸ್ಟ್‌ 1 ರಂದು ರವೀಂದ್ರ ಸದನದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read Full Story

07:31 AM (IST) Jul 15

ಭೋಜಶಾಲಾ ಸಮೀಪ ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣದ ಬಳಿ ಮುಸ್ಲಿಮರಿಗೆ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳ ಕಲ್ಪಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಯಾವುದೇ ರಚನಾತ್ಮಕ ಬದಲಾವಣೆ ಮಾಡದಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ.

Read Full Story

More Trending News