ಚನ್ನಗಿರಿ ಕೋಟೆಯ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿರುವ ಭೂತರಾಯ ದೇವಾಲಯ, ಯಜ್ಞಶಾಲೆ ಶಿಥಿಲಾವಸ್ಥೆಯಲ್ಲಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತಿದೆ. ಕೋಟೆ ಸುತ್ತ ಒತ್ತುವರಿ, ಸ್ವಚ್ಛತೆ ಕೊರತೆ, ಕಾವಲುಗಾರರಿಂದ ಭಕ್ತರಿಗೆ ತೊಂದರೆ ಇದೆ ಎಂದು ಭಕ್ತರು ಆರೋಪಿಸಿದ್ದಾರೆ. ದುರಸ್ತಿಗೆ ಮನವಿ ಸಲ್ಲಿಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ.