ಸಂಕಷ್ಟ ಸಮಯದಲ್ಲಿ ಭಾರತ ನೀಡಿದ ನೆರವಿಗೆ ಶ್ಲಾಘನೆ ಭಾರತದಿಂದಲೇ ಲಂಕೆಗೆ ಗರಿಷ್ಠ ನೆರವು ಭಾರತದ ನೆರವು ಸ್ಮರಿಸಿದ ಮಾಜಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ
ಕೊಲಂಬೋ: ಶ್ರೀಲಂಕಾದಲ್ಲಿ ಉದ್ಭವಿಸಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ವತಿಯಿಂದ ಶ್ರೀಲಂಕಾಕ್ಕೆ ನೀಡಿರುವ ನೆರವನ್ನು ಸ್ಮರಿಸಿರುವ ಮಾಜಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಭಾರತಕ್ಕೆ ಧನ್ಯವಾದ ತಿಳಿಸುವುದರ ಜೊತಗೆ ಭಾರತದ ಸಾಂದರ್ಭಿಕ ನೆರವನ್ನು ಶ್ಲಾಘಿಸಿದ್ದಾರೆ. ಈ ಕುರಿತು ಸಿಂಘೆ ಪ್ರತಿಕ್ರಿಸಿ, ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿರುವ ನಮಗೆ ಇದುವರೆಗೆ ಭಾರತದಿಂದಲೇ ಗರಿಷ್ಠ ನೆರವು ದೊರೆತಿದೆ. ಈಗಲೂ ದೊರೆಯುತ್ತಿದೆ. ಆದ್ದರಿಂದ ನಾವು ಭಾರತಕ್ಕೆ ಸದಾ ಆಭಾರಿಗಳಾಗಿದ್ದೇವೆ. ಭಾರತ ಕೊಟ್ಟಿರುವ ಸಾಲ ಮೇ ಅಂತ್ಯದವರೆಗೂ ಸಾಲಬಹುದಾದ ವಿಶ್ವಾಸವಿದೆ ಎಂದು ಹೇಳಿದರು.
ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಕೂಡ ಕಾಡಲಾರಂಭಿಸಿದೆ. ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರ ನೇತೃತ್ವದ ಮೈತ್ರಿ ಸರ್ಕಾರವು ಸಂಸತ್ತಿನಲ್ಲಿ ಬಹುಮತ ಕಳೆದುಕೊಳ್ಳುವ ಹಂತ ತಲುಪಿದ್ದು, ಪತನದ ಭೀತಿ ಎದುರಿಸುತ್ತಿದೆ. ಇದರ ನಡುವೆ ನೂತನ ವಿತ್ತ ಸಚಿವ ಅಲಿ ಸಬ್ರಿ ಕೂಡ, ನೇಮಕವಾದ ಒಂದೇ ದಿನದಲ್ಲಿ ರಾಜೀನಾಮೆ ನಿಡಿದ್ದು, ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ.
ನವಾಜ್ ಸೋದರ ಶೆಹಬಾಜ್ ಷರೀಫ್ ನೂತನ ಪ್ರಧಾನಿ?
225 ಸದಸ್ಯಬಲದ ಸಂಸತ್ತಿನಲ್ಲಿ, ರಾಜಪಕ್ಸೆ ನೇತೃತ್ವದ ಮೈತ್ರಿಕೂಟ 2020ರ ಚುನಾವಣೆಯಲ್ಲಿ 150 ಸ್ಥಾನ ಗೆದ್ದಿತ್ತು. ಆ ಪಕ್ಷದ 41 ಶಾಸಕರು ಮಂಗಳವಾರ ಬಂಡಾಯ ಎದ್ದಿದ್ದು, ಬೆಂಬಲ ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಇವರು ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಬೆಂಬಲಿಗರು. ಇದರಿಂದಾಗಿ ಸರ್ಕಾರದ ಬಲ 109 ಸ್ಥಾನಕ್ಕೆ ಕುಸಿದಿದೆ. ಬಹುಮತಕ್ಕೆ 113 ಸದಸ್ಯರ ಅವಶ್ಯಕತೆ ಇದ್ದು, 4 ಸ್ಥಾನದ ಕೊರತೆ ಎದುರಿಸುತ್ತಿದೆ. ಆದಾಗ್ಯೂ ತನಗೆ ಸರಳ ಬಹುಮತ ಇದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.
ಇದರ ನಡುವೆ, ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಸದೇ ಇದ್ದರೆ ಗೋಟಬಾಯ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ಪ್ರಮುಖ ವಿಪಕ್ಷ ಎಚ್ಚರಿಸಿದೆ. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮುಖ ವಸ್ತುಗಳ ರಫ್ತು ಶೇ.30ರಷ್ಟುಕುಸಿಯಲಿದ್ದು, ಮತ್ತಷ್ಟುಆರ್ಥಿಕ ಸಂಕಟ ಎದುರಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ 41 ಸಂಸದರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಆದರೂ ತಮಗೆ ಬಹುಮತ ಇದೆ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.
ಶ್ರೀಲಂಕಾ ವಿದ್ಯಮಾನಗಳಿಂದ ನಾವು ಕಲಿಯಬೇಕಾಗಿರುವ ಪಾಠಗಳು?
ಇದರ ನಡುವೆ, ಲಂಕಾ ಸರ್ಕಾರದ ಎಲ್ಲ 26 ಸಚಿವರು ಆರ್ಥಿಕ ಬಿಕ್ಕಟ್ಟಿನ ಕಾರಣ ರಾಜೀನಾಮೆ ನೀಡಿದ ನಂತರ ವಿತ್ತ ಸಚಿವರಾಗಿ ನೇಮಕವಾಗಿದ್ದ ಅಲಿ ಸಬ್ರಿ ಕೂಡ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರದ ಜತೆ ಸೇರಿಕೊಳ್ಳಬೇಕು ಎಂದು ರಾಜಪಕ್ಸೆ ಅವರು ವಿಪಕ್ಷಗಳಿಗೆ ಮನವಿ ಮಾಡಿದ್ದರೂ, ಆ ಆಫರ್ ಅನ್ನು ಅವು ತಿರಸ್ಕರಿಸಿವೆ. ಇದು ಸರ್ಕಾರದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ರಾಜಪಕ್ಷೆ (Rajapaksa government ) ಸರ್ಕಾರವು ದೇಶದ ಎಲ್ಲವನ್ನೂ ಚೀನಾ (China) ಸರ್ಕಾರಕ್ಕೆ ಮಾರಾಟ ಮಾಡಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಏನೂ ಇಲ್ಲ. ವಿದೇಶಗಳಿಂದ ಎಲ್ಲವನ್ನೂ ಸಾಲದ ಮೇಲೆಯೇ ಎಲ್ಲವನ್ನೂ ಖರೀದಿಸಲಾಗಿದೆ ಎಂದು ಶ್ರೀಲಂಕಾದ ಆಹಾರ ವ್ಯಾಪಾರಿಗಳು ( Food vendors ) ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ (economic and political crises) ನಡುವೆ ಶ್ರೀಲಂಕಾದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳು ಗಗನಕ್ಕೇರುತ್ತಿವೆ. 3 ರಿಂದ 4 ತಿಂಗಳ ಹಿಂದೆ ಸೇಬು ಕೆ.ಜಿಗೆ ₹ 500ಕ್ಕೆ ಮಾರಾಟವಾಗುತ್ತಿತ್ತು, ಈಗ ₹ 1000ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ₹ 700ಕ್ಕೆ ಮಾರಾಟವಾಗುತ್ತಿದ್ದ ಪೇರಳೆ ಕಾಯಿ ಕೆಜಿಗೆ ₹ 1500ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಫಾರೂಖ್. ಎಷ್ಟೇ ಆದರೂ ಜನರಲ್ಲಿ ಕೊಳ್ಳಲು ಮಾತ್ರ ಹಣವಿಲ್ಲ ಎನ್ನುತ್ತಾರೆ.