Asianet Suvarna News Asianet Suvarna News

Weekly Horoscope: ಕುಂಭಕ್ಕೆ ವಾರಾಂತ್ಯದಲ್ಲಿ ಕಾದಿದೆ ಸಿಹಿ ಸುದ್ದಿ, ನಿಮ್ಮ ಈ ವಾರಫಲ ಏನಿದೆ?

ತಾರೀಖು 22ರಿಂದ 28 ಮೇ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
ಖರ್ಚಿನಲ್ಲೇ ಸಂತೋಷ ಕಂಡುಕೊಳ್ಳುವ ಮಿಥುನ

Weekly horoscope of 22nd May to 28th May 2022 in Kannada SKR
Author
Bangalore, First Published May 22, 2022, 9:40 AM IST

ಮೇಷ(Aries)
ನಿಮ್ಮ ಜೀವನದಲ್ಲಿ ಏನೇನು ಸಂಭವಿಸಬೇಕು ಎಂದು ನೀವಂದುಕೊಂಡಿದ್ದೀರೋ ಆ ಕುರಿತು ಸ್ಪಷ್ಟತೆ ಇರಲಿ. ಹೊಸ ಅವಕಾಶಗಳಿಗೆ ಸದಾ ಬಾಗಿಲು ತೆರೆದಿರಲಿ. ಹೊಸ ವ್ಯಕ್ತಿಗಳು, ಹೊಸ ವಿಚಾರಗಳು ನಿಮ್ಮ ಬಳಿ ಬಂದಾಗ ಹೆದರುವ ಅಗತ್ಯವಿಲ್ಲ. ತೆರೆದ ಕೈಗಳಿಂದ ಸ್ವಾಗತಿಸಿ. ಭಯ ದೂರದಲ್ಲೇ ಇರಲಿ. ಎದುರಿಗಿರುವ ಹೊಸ ದಾರಿಯಲ್ಲಿ ಸಾಗಿದರೆ ಹಳೆಯ ಬೇಸರಗಳೆಲ್ಲಾ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚು.

ವೃಷಭ(Taurus)
ಭಾವನಾತ್ಮಕವಾಗಿ ಕೊಂಚ ಕುಗ್ಗಿ ಹೋಗುವಂತೆ ಮಾಡುವ ಸನ್ನಿವೇಶಗಳು ಎದುರಾಗಬಹುದು. ಆದರೆ ಆಗುವುದೆಲ್ಲವೂ ನೀವು ಬಯಸಿದರೂ ಬಯಸದಿದ್ದರೂ ಆಗಿಯೇ ಆಗುತ್ತದೆ. ಇಂಥಾ ಕ್ಷಣದಲ್ಲಿ ಆತಂಕಗೊಳ್ಳದೇ ಇರುವುದರಲ್ಲಿ ಒಳಿತಿದೆ. ಹೊರಗೆ ನಡೆಯುವುದೆಲ್ಲವೂ ನಿಮ್ಮೊಳಗೆ ಸಂಬಂಧ ಪಟ್ಟಿದ್ದೇ ಆಗಿರುತ್ತದೆ. ಪ್ರಕೃತಿ ಎಲ್ಲವನ್ನೂ ಸರಿ ಮಾಡಲು ಯತ್ನಿಸುತ್ತದೆ. ಆಗ ನೀವು ನಿರಾಳರಾಗುತ್ತೀರಿ.

ಮಿಥುನ(Gemini)
ಮನುಷ್ಯರನ್ನು ನಿಭಾಯಿಸುವುದೇ ನಿಮಗೆ ಸಧ್ಯದ ಸವಾಲು. ಬದುಕು ಬದಲಾಗುತ್ತಿರುವಾಗ ಹೊಸಬರು ಬರುತ್ತಾರೆ ಅಥವಾ ಹಳಬರು ಸ್ವಲ್ಪ ಹಠಮಾರಿಗಳಂತೆ ಕಾಣುತ್ತಾರೆ. ಅವರವರ ಮನಸ್ಥಿತಿಗೆ ತಕ್ಕ ಹಾಗೆ ನಡೆದುಕೊಳ್ಳಬೇಕಾಗಿ ಬರುತ್ತದೆ. ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಸಹನೆಯಿಂದ ಇದ್ದಷ್ಟು ಒಳ್ಳೆಯದು. ಈ ಕಾಲ ಹೇಗಿದೆ ಎಂದರೆ ಖರ್ಚು ಜಾಸ್ತಿ ಮತ್ತು ಅದರಿಂದ ಸಂತೋಷ ಸಿಗುವುದು.

ಕಟಕ(Cancer)
ಎಲ್ಲೋ ಕಳೆದಿದ್ದ ಹಣ ಅಚ್ಚರಿ ಎಂಬಂತೆ ಕೈಗೆ ಬರಬಹುದು. ಆನಂದದಲ್ಲಿ ಅತಿಯಾಗಿ ಖರ್ಚು ಮಾಡುವ ಸಂದರ್ಭ ಎದುರಾಗುತ್ತದೆ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೆ ಹೊರಡುವುದು ಅಷ್ಟೇನೂ ಸರಿಯಾದ ವಿಚಾರ ಅಲ್ಲ. ನಿಮ್ಮನ್ನು ಗೌರವಿಸುವವರು ನೀವು ಹೇಗಿದ್ದರೂ ಪ್ರೀತಿ ತೋರುತ್ತಾರೆ. ಒಂದು ಕ್ಷಣದ ಬೇಸರಕ್ಕೆ ಕುಗ್ಗುವ ಅವಶ್ಯಕತೆ ಇಲ್ಲ. ಆರೋಗ್ಯ ವಿಷಯದಲ್ಲಿ ತಾಳ್ಮೆ ಕಳೆದುಕೊಳ್ಳದಿರಿ. ಎಚ್ಚರ ಅಗತ್ಯ.

ಮೇಷ ರಾಶಿ: ಧನ ಪ್ರಾಪ್ತಿಗೆ ನೀವು ಮಾಡಬೇಕಾದದ್ದೇನು?

ಸಿಂಹ(Leo)
ಎರಡು ವಿರುದ್ಧವಾದ ಆಲೋಚನೆಗಳನ್ನು ಮನಸ್ಸಲ್ಲಿಟ್ಟುಕೊಂಡು ತೊಳಲಾಟ ನಡೆಸುತ್ತಿದ್ದೀರಿ. ಇದೇನು ನಿಮಗೆ ಹೊಸದಲ್ಲ. ಪ್ರತೀ ಸಲದಂತೆ ಈ ಸಲವೂ ಗೆಲ್ಲುತ್ತೇನೆ ಎಂದುಕೊಂಡಿದ್ದೀರಿ. ಆದರೆ ಎರಡು ವಿರುದ್ಧ ಆಲೋಚನೆಗಳಿಂದ ಭಾರ ಹೆಚ್ಚಾಗುವುದೇ ವಿನಾಃ ಸಮಸ್ಯೆ ಪರಿಹಾರವಾಗದು. ಒಂದು ಸಂಗತಿಯನ್ನು ಪಕ್ಕಕ್ಕಿಟ್ಟು ಮತ್ತೊಂದನ್ನು ಮಾತ್ರ ಎತ್ತಿಕೊಂಡು ಮುಂದೆ ನಡೆಯಿರಿ.

ಕನ್ಯಾ(Virgo)
ಕೆಲಸದ ಸ್ಥಳದಲ್ಲಿ ಕೆಲಸಗಳು ಸ್ವಲ್ಪ ನಿಧಾನ ಗತಿಯಲ್ಲಿ ಸಾಗಬಹುದು. ಖಾಸಗಿ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಒಂದು ದಿನ ಇದ್ದಂತೆ ಮತ್ತೊಂದು ದಿನ ಇರುವುದಿಲ್ಲ ಎಂಬುದನ್ನು ಮನಗಾಣಬೇಕು. ಸ್ವ ಉದ್ಯೋಗಿಗಳಿಗೆ ಒಳ್ಳೆಯ ಕಾಲ. ಸಂಗಾತಿಯ ನೆರವು ನಿಮ್ಮ ಸಹಾಯಕ್ಕೆ ಬರುತ್ತದೆ. ಪಾಲುದಾರಿಕೆಯ ಕೆಲಸದಲ್ಲಿ ಲಾಭವಿದೆ. ಯಾವುದಕ್ಕೂ ಆತುರ ಬೇಡ. ನಿಧಾನಿಸಿ ಯೋಚಿಸಿದರೆ ಒಳ್ಳೆಯ ದಾರಿ ಸಿಗುವುದು.

ತುಲಾ(Libra)
ಬದುಕಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದೇನೆ ಎಂದೆನ್ನಿಸಿದರೆ ಜಾಸ್ತಿ ಅಚ್ಚರಿಗೊಳ್ಳುವುದು ಬೇಡ. ಮಿಶ್ರ ಪ್ರತಿಕ್ರಿಯೆಗಳ ವಾರ ಇದು. ಇಲ್ಲಿ ಸುಖವೂ ಇದೆ, ಸ್ವಲ್ಪ ಬೇಸರವೂ ಇದೆ. ಪ್ರತೀ ದಿನ ಏಳುವಾಗಲೂ ಹೊಸತೊಂದು ಸಂಭವಕ್ಕೆ ಎದುರಾಗಲು ಸಿದ್ಧರಾಗಿರಿ. ಏನೇ ಸಂಭವಿಸಿದರೂ ಆರಂಭದಲ್ಲಿ ಒತ್ತಡ ಉಂಟಾಗಬಹುದು. ನಿಧಾನಕ್ಕೆ ಎಲ್ಲವೂ ಸರಿ ಹೋಗಿ ಸ್ವಲ್ಪ ಆರ್ಥಿಕವಾಗಿ ಉಳಿತಾಯವಾಗುವ ಲಕ್ಷಣ ಇದೆ.

ಈ ವಸ್ತುಗಳನ್ನು ಪರ್ಸ್‌ನಲ್ಲಿರಿಸಿದರೆ, ಹಣದ ಅಭಾವ ಕಾಡದು!

ವೃಶ್ಚಿಕ(Scorpio)
ತಾಳ್ಮೆಯಿಂದ ಇರುವುದು ಒಳ್ಳೆಯದು. ಇತರರ ಮಾತಿಗೆ ಎಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಡಿ. ಇಲ್ಲವಾದರೆ ಮನಸ್ಸು ಕುಗ್ಗಿ ಹೋಗಬಹುದು. ನಿಮ್ಮ ಕೆಲಸವನ್ನಷ್ಟೇ ಶ್ರದ್ಧೆ, ಪ್ರೀತಿಯಿಂದ ಮಾಡುತ್ತಾ ಹೋಗಿ. ಹಣಕಾಸಿನ ಸ್ಥಿತಿಯಲ್ಲು ಹೆಚ್ಚು ವ್ಯತ್ಯಾಸ ಆಗುವುದಿಲ್ಲ. ಆದರೆ ಹಣವನ್ನು ವೃಥಾ ಖರ್ಚು ಮಾಡುವ ಸಾಧ್ಯತೆ ಇದೆ. ಬರಬೇಕಾದ ಹಣ ಬರದೇ ಹೋಗಬಹುದು. ಹಣದ ಒಳ ಹರಿವು ನಿಧಾನವಾಗಬಹುದು.

ಧನು(Sagittarius)
ಅತಿಥಿಗಳು ಮನೆಗೆ ಅಥವಾ ಮನಕ್ಕೆ ಬರುವ ದಿನಗಳು. ಒಂಥರಾ ನಿರಾಳತೆ ಆವರಿಸಿರುತ್ತದೆ. ಮಾಡಲೇಬೇಕು ಎಂದುಕೊಂಡ ಕೆಲಸಗಳು ಒತ್ತಡ ಉಂಟು ಮಾಡಿರುತ್ತವೆ. ಆದರೆ ಆ ಕೆಲಸಗಳನ್ನು ಮಾಡುವ ಅನಿವಾರ್ಯತೆಯನ್ನು ಪಕ್ಕಕ್ಕಿಡುವಾಗಿನ ಸಮಾಧಾನ ನಿಮ್ಮನ್ನು ಸಂತೈಸುತ್ತದೆ. ವಸ್ತು ಅಥವಾ ವ್ಯಕ್ತಿತ್ವಗಳಲ್ಲಿ ಹೋಲಿಕೆ ಮಾಡಲು ಹೋಗದಿರಿ. ಇತರರಿಂದ ಸಲಹೆ ಕೇಳುವ ಸಂದರ್ಭವನ್ನು ತಪ್ಪಿಸಿಕೊಳ್ಳಿ.

ಮಕರ(Capricorn)
ಎಲ್ಲವೂ ಗೊತ್ತಿದೆ ಎಂದು ನಿಧಾನ ಮಾಡುತ್ತಿದ್ದವರು ಕೈ ಕೆಸರಾದರಷ್ಟೇ ಬಾಯಿ ಮೊಸರು ಎಂದು ತಿಳಿದುಕೊಳ್ಳುವ ಸಮಯ ಎದುರಾಗಲಿದೆ. ಉದಾಸೀನತೆಯಿಂದ ಅಪಾಯವಿದೆ ಎಂದು ತಿಳಿಯುತ್ತದೆ. ತೀವ್ರವಾಗಿ ಬದುಕುತ್ತಿರುವ ವ್ಯಕ್ತಿಗಳು ಎದುರಾಗುತ್ತಾರೆ. ಅವರ ತೀವ್ರವಾಗಿ ಬದುಕುವ ಗುಣದ ಸ್ವಲ್ಪ ಪಾಲನ್ನು ನಿಮಗೆ ದಾಟಿಸುತ್ತಾರೆ. ಅಪರಿಚಿತರಿಗೆ ಮಾಡಿದ ನೆರವು ನಿಮ್ಮ ಕೈಹಿಡಿಯಲಿದೆ.

ಕುಂಭ(Aquarius)
ಗೊಂದಲಗಳಲ್ಲಿ ಬೀಳಲಿದ್ದೀರಿ. ಅದು ಸರಿಯೋ ಇದು ಸರಿಯೋ ಎಂದು ತಿಳಿದುಕೊಳ್ಳುವುದರಲ್ಲೇ ಬಹಳ ಸಮಯ ಕಳೆದುಹೋಗಲಿದೆ. ಮರೆತುಬಿಟ್ಟಿದ್ದು ಧುತ್ತನೆ ಎದುರಾಗುವ ಸಾಧ್ಯತೆ ಇದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯ. ಸ್ವಲ್ಪ ಎಚ್ಚರ ತಪ್ಪಿದರೆ ಆರ್ಥಿಕವಾಗಿ ನಷ್ಟಉಂಟಾಗಬಹುದು. ವಾರದ ಕೊನೆಗೆ ಸಿಹಿಯಾದ ಸಂಗತಿಯೊಂದು ಅರಸಿಕೊಂಡು ಬರಲಿರುವ ಲಕ್ಷಣ ದಟ್ಟವಾಗಿದೆ.

ಪರಶುರಾಮನೇಕೆ ಎಲ್ಲ ಕ್ಷತ್ರಿಯ ರಾಜರನ್ನು ಕೊಂದ?
 
ಮೀನ(Pisces)
ನನಗಿಂತ ಹೆಚ್ಚಿನ ಕಷ್ಟಯಾರಿಗೂ ಇಲ್ಲ ಎಂಬ ಆಲೋಚನೆಗಳಿಂದ ಹೊರಬರುವ ಕಾಲ ಬಂದಾಗಿದೆ. ಸಮಸ್ಯೆಯನ್ನು ಎದುರಿಸಲು ಗೊತ್ತಿರುವವರ ಸಹಾಯ ಯಾಚಿಸುತ್ತೀರಿ. ಆದರೆ ಈ ಸಲ ಆಗುವುದಿಲ್ಲ ಎಂಬ ಭಾವ ಇಲ್ಲ. ಎಲ್ಲವೂ ಆಗುತ್ತದೆ ಎಂಬ ಸಕರಾತ್ಮಕ ನಿಲುವು ನಿಮ್ಮದಾಗಲಿದೆ. ಮುಖದಲ್ಲಿ ನಗುವನ್ನು ಧರಿಸಿಕೊಂಡು ಮುಂದೆ ನಡೆಯಿರಿ. ಭಯವಾಗಬಹುದು. ಆದರೆ ನಿಮಗೆ ನೀವೇ ಧೈರ್ಯ ತುಂಬಿಕೊಳ್ಳಲಿದ್ದೀರಿ.

Follow Us:
Download App:
  • android
  • ios