Asianet Suvarna News Asianet Suvarna News

ನಿಜ ಆಯ್ತಾ ಸಿನಿಮಾ ಹಂಗಾಮ ಸುದ್ದಿ? ರಾಕಿಗೆ ಐ ಡೈರೆಕ್ಟರ್ ಆಕ್ಷನ್ ಕಟ್ ಹೇಳೋದು ಕನ್ಫರ್ಮ್?

ರಾಕಿಂಗ್ ಸ್ಟಾರ್ ಯಶ್. ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್ಫುಲ್ ಹಾಗು ರೈಸಿಂಗ್ ಸ್ಟಾರ್. ಸೌತ್ ಸಿನಿ ಇಂಡಸ್ಟ್ರಿಯ ಹೀರೋಗಳ ಲೀಸ್ಟ್ನಲ್ಲಿ ಬಿಗೆಸ್ಟ್ ಸ್ಟಾರ್ ಅಂತ ಗುರುತಿಸಿಕೊಂಡಿರೋ ಯಶ್ಗೆ ಡೈರೆಕ್ಷನ್ ಮಾಡೋಕೆ ನಿರ್ದೇಶಕರು ಕ್ಯೂನಲ್ಲಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್. ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್ಫುಲ್ ಹಾಗು ರೈಸಿಂಗ್ ಸ್ಟಾರ್. ಸೌತ್ ಸಿನಿ ಇಂಡಸ್ಟ್ರಿಯ ಹೀರೋಗಳ ಲೀಸ್ಟ್ನಲ್ಲಿ ಬಿಗೆಸ್ಟ್ ಸ್ಟಾರ್ ಅಂತ ಗುರುತಿಸಿಕೊಂಡಿರೋ ಯಶ್ಗೆ ಡೈರೆಕ್ಷನ್ ಮಾಡೋಕೆ ನಿರ್ದೇಶಕರು ಕ್ಯೂನಲ್ಲಿದ್ದಾರೆ. ಆದ್ರೆ ಯಶ್ ಕಾಲ್ ಶೀಟ್ ಕೊಡೋ ಡೈರೆಕ್ಟರ್ ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗೆ ಮೊನ್ನೆ ಮೊನ್ನೆಯಷ್ಟೆ ನಿಮ್ಮ ನೆಚ್ಚಿನ ಸಿನಿಮಾ ಹಂಗಾಮದಲ್ಲಿ ಉತ್ತರ ಕಂಡುಕೊಂಡಿದ್ರಿ. ರಾಕಿ ನೆಕ್ಸ್ಟ್ ಪ್ರಾಜೆಕ್ಟ್ಗೆ ಐ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳ್ತಾರೆ ಅಂತ ಹೇಳಿದ್ವಿ. ರಾಕಿಯ ಇಮೇಜ್ಅನ್ನ ಐ ಸಿನಿಮಾ ಖ್ಯಾತಿಯ ನಿರ್ದೇಶಕ ಶಂಕರ್ ಕ್ಯಾಚ್ ಮಾಡ್ತಾರೆ ಅನ್ನೋದು ಆಲ್ ಮೋಸ್ಟ್ ನಿಜ ಆಗ್ತಿದೆ. 

ಇದೀಗ ಈ ಜೋಡಿ ಸಿನಿಮಾದ ಅಪ್ಡೇಟ್ ವರ್ಷನ್ ಒಂದು ರಿವೀಲ್ ಆಗಿದೆ. ಅದೇನ್ ಗೊತ್ತಾ ಯಶ್-ಶಂಕರ್ ಸಿನಿಮಾ ಜೊತೆ ಸೇರಿಕೊಳ್ಳುತ್ತಿದ್ದಾರಂತೆ ಬಾಲಿವುಡ್ ಸ್ಟಾರ್ ಕರಣ್ ಜೋಹರ್. ಯಶ್ರ 19ನೇ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡುತ್ತಿದ್ದಾರೆ ಅಂತ ಹೊಸ ಸುದ್ದಿಯೊಂದು ಹೊರ ಬಂದಿದೆ. ಕೆಜಿಎಫ್ ಪಾರ್ಟ್ 1 ಬಂದ ಮೇಲೆ ರಾಕಿಗೆ ಭಾರತೀಯ ಚಿತ್ರರಂಗದಲ್ಲಿ ಹಿಡಿತ ಸಿಕ್ಕಿದೆ. ಯಾರನ್ನ ಎಲ್ಲಿ ಮಾತನಾಡಿಸಿದ್ರೆ ಕೆಲಸ ಆಗುತ್ತೆ ಅನ್ನೋದು ಯಶ್ಗೆ ಚನ್ನಾಗೆ ಗೊತ್ತಾಗಿದೆ. ಈ ಭಾರಿ ರಾಕಿ ಭಾರತೀಯ ಚಿತ್ರರಂಗದ ದೊಡ್ಡ ಬೇರಿಗೆ ಕೈ ಹಾಕಿದ್ದಾರೆ. ಹೀಗಾಗಿ ಯಶ್ ಮುಂದಿನ ಸಿನಿಮಾಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಟಾಪ್ ಪ್ರೊಡ್ಯೂಸರ್ ಕರಣ್ ಜೋಹರ್ ಬಂಡವಾಳ ಹೂಡುತ್ತಿದ್ದಾರೆ. 

ಕಾಂತಾರದಲ್ಲಿ ನಾಯಕ ಆಗ್ಬೇಕಿತ್ತು ಪುನೀತ್: ಚಿತ್ರದಿಂದ ಹಿಂದೆ ಸರಿದಿದ್ದೇಕೆ ಅಪ್ಪು?

ಕರಣ್ ಜೊತೆ ಯಶ್ ಕೂಡ ಸೇರಿಕೊಳ್ಳುತ್ತಿದ್ದು ಇಬ್ಬರು ಜಂಟಿಯಾಗಿ ಆ ಸಿನಿಮಾ ನಿರ್ಮಾಣ ಮಾಡ್ತಾರೆ ಅಂತ ಹೇಳಲಾಗ್ತಿದೆ. KGF ನಂತರ ಯಶ್ ಅಂತದ್ದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕಿದೆ. ಹೀಗಾಗಿ ಪ್ರಾಜೆಕ್ಟ್‌ನ ಸರಿಯಾಗಿ ಪ್ರೆಸೆಂಟ್ ಮಾಡುವ ನಿರ್ದೇಶಕರನ್ನ ಯಶ್ ಹುಡುಕಿದ್ದು, ತಮಿಳು ಡೈರೆಕ್ಟರ್ ಶಂಕರ್ಗೆ ಅವಕಾಶ ಕೊಟ್ಟಿದ್ದಾರೆ ಅನ್ನೋ ಮಾತಿದೆ. ಶಂಕರ್ ಯಶ್ಗಾಗಿ 1000 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡಲಿದ್ದು, ಅದಕ್ಕಾಗಿ ಐತಿಹಾಸಿಕ ಕತೆಯನ್ನ ರೆಡಿ ಮಾಡಿದ್ದಾರೆ. ಆ ಸಿನಿಮಾದಲ್ಲಿ ವಿಜಯ್ ಸೇತುಪತಿಯಂತಹ ಸೌತ್-ನಾರ್ಥ್ನ ಘಟಾನುಘಟಿ ಕಲಾವಿಧರ ಸಂಗಮ ಇರಲಿದೆಯಂತೆ. ವಿಶೇಷ ಅಂದ್ರೆ ಈಗಾಗ್ಲೆ ಶಿವಾಜಿ ಪಾತ್ರಕ್ಕೆ ಯಶ್ ಬಹಳಾ ಸೂಟ್ ಆಗ್ತಾರೆ ಅಂತ ಫೋಟೋ ಒಂದು ವೈರಲ್ ಆಗಿತ್ತು. ಹೀಗಾಗಿ ಶಿವಾಜಿ ಕಥೆಯನ್ನೇನಾದ್ರು ಶಂಕರ್ ರೆಡಿ ಮಾಡುತ್ತಿದ್ದಾರಾ ಅನ್ನೋ ಚರ್ಚೆ ಕೂಡ ಶುರುವಾಗಿದೆ. 

ಇದರ ಜೊತೆಗೆ ತಮಿಳು ಸಾಹಿತಿ ಎಸ್. ವೆಂಕಟೇಶನ್ ಬರೆದ 'ವೇಲ್‌ಪರಿ' ಎನ್ನುವ ಐತಿಹಾಸಿಕ ಕಥಾಹಂದರದ ಕಾದಂಬರಿ ಆಧರಿಸಿ ಶಂಕರ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ರಾಜ ವೇಪ್‌ಪರಿ ಪಾತ್ರದಲ್ಲಿ ಯಶ್ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ. ಶಂಕರ್ ಸಿನಿಮಾ ಅಂದ್ರೆ, ಸಿಕ್ಕಾಪಟ್ಟೆ ಸ್ಪೆಷಾಲಿಟಿ ಇರುತ್ತೆ. ಶಿವಾಜಿ, ರೋಬೋ, ರೋಬೋ 2.O ಸೇರಿ ಹಲವು ಸೂಪರ್ಹಿಟ್ ಸಿನಿಮಾ ಕೊಟ್ಟವರು ಶಂಕರ್. ಇದೇ ಶಂಕರ್ ಈಗ ಯಶ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋದೇ ಒಂದು ಸೆನ್ಸೇಷನಲ್. ಆದ್ರೆ ಶಂಕರ್ ಸದ್ಯ ರಾಮ್ ಚರಣ್ ಜೊತೆ ಆರ್ಸಿ-15 ಹಾಗು ಕಮಲ್ ಹಾಸನ್ ಜೊತೆ ‘ಇಂಡಿಯನ್ 2’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆದ್ರೆ ಇಂಡಿಯನ್ 2 ಶೂಟಿಂಗ್ ತಡವಾಗುತ್ತೆ ಅಂತ ಹೇಳಲಾಗ್ತಿದೆ. ಮತ್ತೊಂದ್ ಕಡೆ ಯಶ್ಗೆ ಸಿದ್ಧವಾಗೋ ಕಥೆ ಐತಿಹಾಸಿಕ ಸ್ಟೋರಿ ಆಗಿದ್ರೆ, ಈ ಸಿನಿಮಾದ ಅನೌನ್ಸ್ ಕೂಡ ತಡವಾಗಲಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment