Asianet Suvarna News Asianet Suvarna News

ಕಾಂತಾರದಲ್ಲಿ ನಾಯಕ ಆಗ್ಬೇಕಿತ್ತು ಪುನೀತ್: ಚಿತ್ರದಿಂದ ಹಿಂದೆ ಸರಿದಿದ್ದೇಕೆ ಅಪ್ಪು?

ರಿಷಬ್ ಶೆಟ್ಟಿಯ ಕಾಂತಾರದಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ ಕಂಬಳ ಮಾಡಬೇಕಿತ್ತು. ಅಪ್ಪು ನಾಯಕನಾಗಿ ನಟಿಸಬೇಕಿತ್ತು ಅನ್ನೋ ಸೀಕ್ರೇಟ್ ರಿವಿಲ್ ಆಗಿದೆ. ಹೊಂಬಾಳೆ ಪ್ರೊಡಕ್ಷನ್ಗೆ ಒಂದು ಗತ್ತು ತಂದು ಕೊಟ್ಟಿದ್ದು ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಯಾವ ಸಿನಿಮಾದಲ್ಲಿಲ್ಲ ಹೇಳಿ.  ಅಪ್ಪು ಹಾಡಿರೋ ಹಲವು ಸಿನಿಮಾಗಳು ಇನ್ನೂ ಬಿಡುಗಡೆಗೆ ಕಾಯ್ತಿವೆ. ಜೇಮ್ಸ್ ಸಿನಿಮಾದ ನಂತರ ಮೊನ್ನೆ ಮೊನ್ನೆ ತಾನೆ ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ದೇವರಾಗಿ ಬಂದಿದ್ರು. ಪುನೀತ್ರ ಗಂಧದಗುಡಿ ಡಾಕ್ಯೂಮೆಂಟ್ರಿಗೆ ಸಿನಿಮಾ ರೂಪ ಸಿಕ್ಕಿದ್ದು, ಅದು ಕೂಡ ಬೆಳ್ಳಿತೆರೆ ಮೇಲೆ ಮೂಡಲಿದೆ. ಇದೀಗ ನಮ್ ಪವರ್ ಸ್ಟಾರ್ ಮತ್ತೊಂದ ದೊಡ್ಡ ಸಿನಿಮಾದಲ್ಲಿ ನಟಿಸಬೇಕಿತ್ತು ಅನ್ನೋ ಸುದ್ದಿ ರಿವೀಲ್ ಆಗಿದೆ. ಟ್ರೈಲರ್ ಮೂಲಕ ಇಡೀ ಸ್ಯಾಂಡಲ್ವುಡ್ನಲ್ಲಿ ಸಂಚಲನ ಸೃಷ್ಟಿಸಿರೋ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ ಕಲ್ಪನೆಗೆ ಹೊಂಬಾಳೆ ಪ್ರೊಡಕ್ಷನ್ ಸಾತ್ ಕೊಟ್ಟಿರೋ ಈ ಸಿನಿಮಾ ಎಷ್ಟು ರಿಚ್.? ಎಷ್ಟು ಹೈ ವೋಲ್ಟೇಜ್ನಲ್ಲಿರುತ್ತೆ ಅನ್ನೋದು ನೀವೆಲ್ಲಾ ಟೀಸರ್, ಟ್ರೈಲರ್ನಲ್ಲೇ ನೋಡಿದ್ದೀರಾ. 

ಇದೀಗ ರಿಷಬ್ ಶೆಟ್ಟಿಯ ಕಾಂತಾರದಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಕಂಬಳ ಮಾಡಬೇಕಿತ್ತು. ಅಪ್ಪು ನಾಯಕನಾಗಿ ನಟಿಸಬೇಕಿತ್ತು ಅನ್ನೋ ಸೀಕ್ರೇಟ್ ರಿವಿಲ್ ಆಗಿದೆ. ಹೊಂಬಾಳೆ ಪ್ರೊಡಕ್ಷನ್ಗೆ ಒಂದು ಗತ್ತು ತಂದು ಕೊಟ್ಟಿದ್ದು ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್. ರಾಜಕುಮಾರ, ಯುವರತ್ನ ಸಿನಿಮಾಗಳನ್ನ ಮಾಡಿದ್ದ ಹೊಂಬಾಳೆ ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡೋ ಯೋಜನೆ ಹಾಕಿಕೊಂಡಿದ್ರು. ಅದರಲ್ಲೊಂದು ಕಾಂತಾರ ಸಿನಿಮಾ. ಈ ಸಿನಿಮಾದ ಸ್ಟೋರಿಯನ್ನ ನಿರ್ದೇಶಕ ರಿಷಬ್ ಶೆಟ್ಟಿ ಅಪ್ಪುಗೆ ಹೇಳಿದ್ರಂತೆ. ಆದ್ರೆ ಅಪ್ಪು ಬೇರೆ ಸಿನಿಮಾದಲ್ಲಿ ಬ್ಯೂಸಿ ಆಗಿದ್ರು. ಮತ್ತು ಡೇಡ್ ಕ್ಲ್ಯಾಶ್ ಆಗುತ್ತಿತ್ತು. ಕೊನೆಗೆ ಪುನೀತ್ ರಾಜ್ಕುಮಾರ್ ಅವರೇ ರಿಷಬ್ ಶೆಟ್ಟಿಗೆ ಈ ರೋಲ್ ಮಾಡಲು ಸೂಚಿಸಿದ್ರು ಅಂತ ಹೊಂಬಾಳೆ ಫಿಲ್ಮ್ಸಂನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬಹಿರಂಗಪಡಿಸಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಸ್ಟೋರಿಯನ್ನ ರೆಡಿ ಮಾಡಿ ಹೊಂಬಾಳೆ ಬ್ಯಾನರ್‌ನಲ್ಲೇ ನಿರ್ಮಾಣ ಮಾಡೋದಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. 

ಆಗ ರಿಷಬ್ ಶೆಟ್ಟಿ ಈ ಕಥೆಗೆ ಪುನೀತ್ ರಾಜ್ ಕುಮಾರ್ ನಟಿಸಿದ್ರೆ ಸೂಪರ್ ಆಗಿರುತ್ತೆ ಅಂತ ನಿರ್ಮಾಪಕ ವಿಜಯ್ ಕಿರಂಗಂದೂರು ಬಳಿ ಹೇಳಿದ್ರಂತೆ. ಅದೇ ದಿನ ರಾಜ್ ಕುಮಾರ್ ರಸ್ತೆಯಲ್ಲಿರೋ ಹೊಂಬಾಳೆ ಆಫೀಸ್ಗೆ ಅಪ್ಪು ಬಂದಿದ್ರಂತೆ. ಆಗ ಈ ಸ್ಟೋರಿಯನ್ನ ರಿಷಬ್ ಶೆಟ್ಟಿ ಪುನೀತ್ರವರಿಗೆ ಹೇಳಿದ್ದಾರೆ. ಕಥೆ ಕೇಳಿದ ಅಪ್ಪು ಯೆಸ್, ಯೆಸ್, ಮಾಡೋಣ ಮಾಡೋಣ ಅಂತ ಫುಲ್ ಜೋಶ್ನಲ್ಲಿ ಕಥೆ ಒಕೆ ಮಾಡಿದ್ರು. ಕಾಂತಾರದಲ್ಲಿ ಮಂಗಳೂರು ಭಾಷೆ ಇರೋದ್ರಿಂದ ರಿಹಾರ್ಸಲ್ ಮಾಡಿ ಸಿನಿಮಾ ಮಾಡೋಣ ಅಂದಿದ್ರಂತೆ ಅಪ್ಪು. ರಿಷಬ್ ಶೆಟ್ಟಿ ಅಪ್ಪುಗೆ ಮೂರು ಸ್ಟೋರಿ ಹೇಳಿದ್ರಂತೆ. ಅದರಲ್ಲಿ ಕಾಂತಾರ ಸ್ಟೋರಿಯನ್ನ ಪುನೀತ್ ಪಿಕ್ ಮಾಡಿದ್ರು. ಆದ್ರೆ ಧ್ವಿತ್ವ ಸಿನಿಮಾದ ಕೆಲಸಕ್ಕಾಗಿ ಡೇಟ್ ಕ್ಲಾಶ್ ಆಗುತ್ತೆ ಅಂತ ಪುನೀತ್ ಕೊನೆಗೆ ರಿಷಬ್‌ಗೆ ನೀವೇ ಈ ರೋಲ್ ಮಾಡಿ ಅಂತ ಹೇಳಿದ್ರು. ಇಲ್ಲಿಂದ ಕಾಂತಾರ ಶುರುವಾಯ್ತು. ಆದ್ರೆ ಪುನೀತ್‌ರನ್ನ ಬೇರೆ ಬೇರೆ ಪಾತ್ರಗಳಲ್ಲಿ ನೋಡಿರೋ ಅಭಿಮಾನಿಗಳು ‘ಕಾಂತಾರ’ ರೀತಿಯ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಮಿಸ್ ಆಯ್ತಲ್ಲಾ ಅಂತ ಬೇಸರಗೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment