'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ
ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಬಿತ್ತು ಬಿಗ್ ಬ್ರೇಕ್, ತಾಯಿ ಪಾತ್ರ ಪರಿಚಯ ಮಾಡುವ ಮೂಲಕ ಹೊಸ ತಿರುವು...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ವಾರ ವಾರವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಾರು ವಿರುದ್ಧ ಪಿತೂರಿ ಮಾಡುತ್ತಿದ್ದ ಅನುಷ್ಕಾ ಅಲಿಯಾಸ್ ಮಾನ್ಸಿ ಜೋಶಿ ಪಾತ್ರಕ್ಕೆ ಬ್ರೇಕ್ ಬಿದ್ದಿದೆ. ಈ ವಿಚಾರದ ಬಗ್ಗೆ ಸ್ವತಃ ಮಾನ್ಸಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರಿವೀಲಾಯ್ತು 'ಪಾರು' ವೈಲೆಂಟ್ ವಿಲನ್ ಅನುಷ್ಕಾಳ ಇನ್ನೊಂದು ಮುಖ!
ಮಾನ್ಸಿ ಪೋಸ್ಟ್:
'ನನ್ನ ಎಲ್ಲಾ ಅಭಿಮಾನಿಗಳು ಮತ್ತು ಸ್ನೇಹಿತರಿಗೆ, ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದಿಂದ ನನ್ನ ಪಾತ್ರವೂ ಕೊನೆಗೊಂಡಿದೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನಗೆ ಈ ಪಾತ್ರವನ್ನು ನೀಡಿದ ಮತ್ತು ನನ್ನನ್ನು ಎಲ್ಲ ರೀತಿಯಿಂದ ಪ್ರೋತ್ಸಾಹಿಸಿದಕ್ಕಾಗಿ ಇಡೀ ಪಾರು ತಂಡ ಮತ್ತು ಜೀ ಕನ್ನಡ ಚಾನೆಲ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಕನ್ನಡ ಉದ್ಯಮದಲ್ಲಿ ಹೊಸ ಯೋಜನೆಯೊಂದಿಗೆ ಬರುತ್ತೇನೆ ಮತ್ತು ನನ್ನ ನಟನೆಯೊಂದಿಗೆ ನಿಮ್ಮೆಲ್ಲರನ್ನು ಯಾವಗಲೂ ರಂಜಿಸುತ್ತೇನೆ. ನಿಮ್ಮ ಪ್ರೀತಿಯ ಮಾನ್ಸಿ' ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಹಾಗೂ ಅರುಂಧತಿ ಮಾಡುತ್ತಿದ್ದ ಕುತಂತ್ರವನ್ನು ಬಯಲು ಮಾಡಲು ಪಾರು ಆದಿ ಸಹಾಯ ಪಡೆದುಕೊಳ್ಳುತ್ತಾಳೆ. ಇಡೀ ಕುಟುಂಬವನ್ನು ನಾಶ ಮಾಡುವುದು ಅನುಷ್ಕಾಳ ಉದ್ದೇಶ ಎಂದು ತಿಳಿದು ಆದಿ ಶಾಕ್ ಆಗಿದ್ದಾನೆ. ಅನುಷ್ಕಾ ಯಾರು ಎಂದು ಅಖಿಲಾಂಡೇಶ್ವರಿಗೆ ತಿಳಿಸಲು ಆದಿ ಫೋಟೋಗಳನ್ನು ಸಂಗ್ರಹಿಸುತ್ತಾನೆ. ವಿಚಾರ ತಿಳಿದು ಅಖಿಲಾಂಡೇಶ್ವರಿ ಅನುಷ್ಕಾಳಿಗೆ ಕಪಾಳ ಮೋಕ್ಷ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಮನೆಯಿಂದ ಹೊರ ಹಾಕುತ್ತಾಳೆ. ಪಾರುವಿನಿಂದ ಇಷ್ಟೆಲ್ಲಾ ಅನಾಹುತ ಆಗಿದೆ ಎಂದು ಅನುಷ್ಕಾ ಪಾರುಳನ್ನು ಕಿಡ್ನ್ಯಾಪ್ ಮಾಡಿಸುತ್ತಾಳೆ. ಆದಿ ಹಾಗೂ ಪ್ರೀತಮ್ ಪಾರುವನ್ನು ಪತ್ತೆ ಹಚ್ಚಿ ಕಾಪಾಡುತ್ತಾರೆ. ತನ್ನ ತಾಯಿ ಅರುಂಧತಿ ಆಸೆ ಈಡೇರಿಸಲಾಗದ ಕಾರಣ ಅನುಷ್ಕಾ ಚಾಕುವಿನಿಂದ ಚುಚ್ಚಿಕೊಂಡು ಪ್ರಾಣ ಬಿಡುತ್ತಾಳೆ.