ಬುಲೆಟ್ ಹೊಡ್ದಂಗೆ ಮಾತಾಡ್ತಿದ್ದ ಪ್ರಶಾಂತ್ ಸಂಬರಗಿ ಬಿಕ್ಕಿಬಿಕ್ಕಿ ಅತ್ತಿದ್ದೇಕೆ?
ಯಾವಾಗ್ಲೂ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದ, ಎಲ್ಲರಿಗೂ ಅಡ್ವೈಸ್ ಮಾಡುತ್ತಿದ್ದ ಸಂಬರಗಿ ಮಗುವಿನಂತೆ ಅತ್ತರು, ಕಾರಣ ಏನು ಗೊತ್ತಾ?
ಪ್ರಶಾಂತ ಸಂಬರಗಿ ಬಿಗ್ ಬಾಸ್ ಸೀಸನ್ 8ನ ಪ್ರಬಲ ಸ್ಪರ್ಧಿ. ಶುರುವಿಂದಲೂ ಅವರು ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಆರಂಭದಲ್ಲಿ ಪ್ರಚಾರಕ್ಕಾಗಿ ಕೊಂಚ ಭಿನ್ನವಾಗಿ ನಡೆದುಕೊಂಡದ್ದು ಸುಳ್ಳಲ್ಲ. ಆದರೆ ಕೆಲವೇ ಕೆಲವು ದಿನಗಳಲ್ಲಿ ಅವರ ಬಗ್ಗೆ ಸ್ಪರ್ಧಿಗಳಲ್ಲೇ ಪಾಸಿಟಿವ್ ಒಪೀನಿಯನ್ ಹೆಚ್ಚುತ್ತಾ ಹೋಯಿತು. ಕಾರಣ ಅವರ ನೇರ ನಡೆ. ತಮ್ಮ ಅಭಿಪ್ರಾಯವನ್ನು ಬುಲೆಟ್ ಹೊಡೆದ ಹಾಗೆ ನೇರವಾಗಿ ಹೇಳೋದು ಆ ಕ್ಷಣಕ್ಕೆ ನೋವು ತರಿಸಿದರೂ ಅವರ ನೇರ ನುಡಿಗೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಇಂಥ ನೇರ ನುಡಿ ನಿರ್ಮಲಾ ಅವರನ್ನು ಫೇಕ್ ಲೀಸ್ಟ್ ಗೆ ಸೇರುವ ಹಾಗೆ ಮಾಡಿದ್ದು ಸುಳ್ಳಲ್ಲ. ಈ ಕಾರಣಕ್ಕೆ ನಿರ್ಮಲಾ ಎಲಿಮಿನೇಟ್ ಆಗುವಾಗ ಯಾವ ಹೆಸರನ್ನು ನಾಮಿನೇಟ್ ಮಾಡದಿದ್ರೂ ಫೇಕ್ ಲೀಸ್ಟ್ನಲ್ಲಿ ಪ್ರಶಾಂತ ಸಂಬರಗಿ ಹೆಸರು ಸೇರಿಸಿದ ಕಾರಣ ಬಿಗ್ ಬಾಸ್ ಅವರನ್ನೇ ನೇರ ನಾಮಿನೇಟ್ ಮಾಡಿದೆ. ಬಹುಶಃ ಈ ವೀಕೆಂಡ್ನಲ್ಲಿ ಶಮಂತ್ ಗೌಡ ಬಿಟ್ಟರೆ ಸಂಬರಗಿ ಮನೆಯಿಂದ ಆಚೆ ಬರುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ವಾರಗಳಿಂದ ಬಿಗ್ ಬಾಸ್ ಮನೆಯಿಂದ ಮಹಿಳಾ ಸ್ಪರ್ಧಿಗಳೇ ಆಚೆ ಬರುತ್ತಿದ್ದಾರೆ. ಈ ವಾರ ಪುರುಷ ಸ್ಪರ್ಧಿಯೊಬ್ಬ ಹೊರಬರುವ ಸಾಧ್ಯತೆ ಇದೆ. ಸದ್ಯಕ್ಕೆ ಸಂಬರಗಿ ಹಾಗೂ ಶಮಂತ್ ತಲೆಮೇಲೆ ತೂಗುಗತ್ತಿ ಇದೆ.
ಅಬ್ಬಾ.. ಸಿನಿಮಾಗೋಸ್ಕರ ಹಗ್ಗದ ಮೇಲೆ ನಡೆಯೋಕೆ ಕಲಿತ ಜಾಕ್ವೆಲಿನ್ ...
ಬಿಗ್ಬಾಸ್ ಮನೆಯಲ್ಲಿ ಕನ್ಫೆಶನ್ ರೂಮ್ಗೆ ಬಂದ ಸಂಬರಗಿ ಅವರನ್ನು ಬಿಗ್ ಬಾಸ್ ಆತ್ಮೀಯವಾಗಿ ಮಾತನಾಡಿಸಿದರು, ಕುಶಲ ವಿಚಾರಿಸಿದರು. ಶುರುವಿನಲ್ಲಿ ಸಮಾಧಾನವಾಗಿಯೇ ಮಾತನಾಡಿದ ಸಂಬರಗಿ ಇದ್ದಕ್ಕಿದ್ದ ಹಾಗೆ ಭಾವುಕರಾದರು. ಭಾವನೆಗಳನ್ನು ಅಡಗಿಸಿಡಲು ಪ್ರಯತ್ನಿಸಿದಷ್ಟೂ ಅದು ಕಣ್ಣೀರಿನ ರೂಪದಲ್ಲಿ ಹೊರಬಂತು. ಅವರ ಅಳು, ಭಾವೋದ್ವೇಗದಲ್ಲಿ ಕೃತಕತೆ ಇರಲಿಲ್ಲ. ಅದು ಗಿಮಿಕ್ನಂತೆ ಕಾಣಲಿಲ್ಲ. ಬದಲಿಗೆ ಪ್ರಾಮಾಣಿಕವಾಗಿ ಅವರ ಮನದಿಂಗಿತ ವ್ಯಕ್ತಪಡಿಸಿದ ಹಾಗಿತ್ತು.
ಅಷ್ಟಕ್ಕೂ ಸಂಬರಗಿ ಅಳುವಿಗೆ ಕಾರಣ ಮಾತ್ರ ವಿಚಿತ್ರ. ವಯಸ್ಸಿನಲ್ಲಿ ತುಸು ಹಿರಿಯರಾಗಿರುವ, ಬುದ್ಧಿಮತ್ತೆಯಲ್ಲಿ ಚಾಣಾಕ್ಷನಾಗಿರುವ ಅವರನ್ನು ಒಂದು ಸಣ್ಣ ವಿಷಯ ಅಳುವ ಹಾಗೆ ಮಾಡಿತು ಅನ್ನೋದೇ ಅಚ್ಚರಿ. ಬಹುಶಃ ಬಿಗ್ಬಾಸ್ ಮನೆಯ ಏಕಾಂತ, ತನ್ನವರೆನ್ನುವವರಿಲ್ಲದ ಒಂಟಿತನ ಒಂದು ಸಣ್ಣ ವಿಚಾರಕ್ಕೆ ಅವರನ್ನು ಭಾವೋದ್ವೇಗಕ್ಕೆ ಒಳಪಪಡಿಸಿರಬಹುದು.
ಮಾಧುರಿ -ಐಶ್ವರ್ಯಾ: ಹೇಗೆ ಕಾಣುತ್ತಾರೆ ನೋಡಿ ಬಾಲಿವುಡ್ ನಟಿಯರು ಮೇಕಪ್ ಇಲ್ಲದೆ! ...
ಕಳೆದ ವಾರ ವೀಕೆಂಡ್ ನಲ್ಲಿ ಸಂಬರಗಿ ಸುದೀಪ್ ಜೊತೆಗೆ ಮಾತನಾಡುವಾಗ ಅವರ ಧ್ವನಿ ಕೆಟ್ಟಿತ್ತು. ಅದರ ಹಿಂದಿನ ವಾರವೂ ಧ್ವನಿ ಹಾಳಾಗಿದ್ದು ಈ ವೀಕೆಂಡ್ವರೆಗೂ ಸರಿಯಾಗಿರಲಿಲ್ಲ. ಆ ದನಿಯಲ್ಲೇ ಅವರು ಹಾಡು ಹಾಡಿದಾಗ ಮನೆಯವರೆಲ್ಲ ಬಿದ್ದು ಬಿದ್ದೂ ನಕ್ಕಿದ್ದರು. ಬಿಗ್ಬಾಸ್ ಮನೆಯ ಬಾಲ ಕಲಾವಿದ ವಿಶ್ವನಾಥ ಅವರಿಗೆ ಹಾಡಿನ ಮೇಷ್ಟ್ರಾಗಿದ್ರು. ಇವರನ್ನು ಕಾಲೆಳೆದ ಸುದೀಪ್ ನೆಕ್ಸ್ಟ್ ವೀಕೆಂಡ್ಗೆ ಬಂದಾಗ ಈ ಹಾಡನ್ನು ರಾಗ, ಓಘ ಕ್ರಮಬದ್ಧವಾಗಿರುವಂತೆ ಹಾಡಬೇಕು ಅಂತ ಸುದೀಪ್ ಹೇಳಿದ್ದರು. ಇದನ್ನೆಲ್ಲ ಸಂಬರಗಿ ಪತ್ನಿ ಶೋನಲ್ಲಿ ನೋಡಿದ್ದಾರೆ. ಪತಿಯ ಗಂಟಲು ಸರಿ ಹೋಗುವಂತೆ ಆಯುರ್ವೇದ ಔಷಧಿಯನ್ನು ಬಿಗ್ಬಾಸ್ ಮನೆಗೆ ಕಳುಹಿಸಿದ್ದಾರೆ. ಅದನ್ನು ತಿಂದ ಬಳಿಕ ಸಂಬರಗಿ ಧ್ವನಿ ಸರಿಯಾಗುತ್ತಾ ಬಂದಿದೆ. ಪ್ರಶಾಂತ್ ಆರೋಗ್ಯ ವಿಚಾರಣೆಗೆಂದು ಬಿಗ್ಬಾಸ್ ಕರೆದಾಗ ಈ ಸಣ್ಣ ಘಟನೆ ನೆನಪಾಗಿ ಅವರು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನನ್ನು ಅಷ್ಟು ಕಾಳಜಿ ಮಾಡುವ ಪತ್ನಿಯನ್ನು ಪ್ರೀತಿಯ ಬೆಲೆ ಅವರಿಗೆ ಗೊತ್ತಾಗಿದೆ. ಅವರ ನೆನಪಾಗಿ ಪ್ರಶಾಂತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ವಿಚಾರ ಬಿಗ್ಬಾಸ್ ಮನೆಯ ಇತರರಿಗೂ ತಿಳಿದಂತಿದೆ. ಕೆಲವರು ಬಂದು ಸಂಬರಗಿ ಅವರನ್ನು ಸಮಾಧಾನ ಮಾಡಿದ್ದಾರೆ. ಪ್ರಶಾಂತ್ ಸಂಬರಗಿ ಈ ವಾರ ಉಳಿದರೂ, ಹೊರ ಹೋದರೂ ಈವರೆಗೆ ತಿಳಿಯದ ಅವರ ಮುಖವೊಂದು ಹೊರ ಜಗತ್ತಿಗೆ ಬಿಗ್ ಬಾಸ್ ಮೂಲಕ ತಿಳಿದಂತಾಗಿದೆ.
ಆಲಿಯಾ ಬದಲು ಅನುಷ್ಕಾ ಇರ್ತಿದ್ರೆ..? ಸೀತಾ ಪಾತ್ರ ಕಲ್ಪಿಸಿಕೊಂಡ ಫ್ಯಾನ್ಸ್ ...