Asianet Suvarna News Asianet Suvarna News

ಇಷ್ಟವಿಲ್ಲದ ಮದ್ವೆಯಾಗಲು ಒಲ್ಲದೇ ಸಾಯಲು ಹೊರಟ ರಾಮ್​ನನ್ನು ತಡೀತಾಳಾ ಸೀತಾ?

ಇಷ್ಟವಿಲ್ಲದ ಮದುವೆಗೆ ಒಲ್ಲದ ರಾಮ್​  ಸಾಯುವ ನಿರ್ಧಾರಕ್ಕೆ ಬಂದಿದ್ದಾನೆ. ಸೀತಾ ಆತನನ್ನು ತಡೀತಾಳಾ?
 

Unwilling to marry Ram has decided to die  Did Seeta will stop him suc
Author
First Published Mar 18, 2024, 3:35 PM IST | Last Updated Mar 18, 2024, 3:35 PM IST

ರಾಮ್​ ತಾನು ಸೀತಾಳನ್ನು ಇಷ್ಟಪಟ್ಟಿರುವ ಸುದ್ದಿಯನ್ನು ತಾತನ ಬಳಿ ಹೇಳಲಿಲ್ಲ. ಇನ್ನು ಚಿಕ್ಕಮ್ಮನೋ ಈ ವಿಷಯವನ್ನು ಹೇಳುವುದೇ ಇಲ್ಲ. ಮಾಜಿ ಪ್ರೇಯಸಿ ಚಾಂದನಿ  ಬಗ್ಗೆ ತಾತನಿಗೆ ಗೊತ್ತಿದ್ದರೂ ಆಕೆಯನ್ನು ರಾಮ್​ ಆಕೆಯನ್ನು ಮರೆತಿದ್ದಾನೆ ಎನ್ನುವುದು ತಿಳಿದಿದೆ. ಇದೇ ಕಾರಣಕ್ಕೆ ಹಿಂದಿನ ಪ್ರೀತಿ ಪ್ರೇಮ ಎಲ್ಲವನ್ನೂ ಮರೆತು ನಾನು ಹೇಳುವ ಹುಡುಗಿಯ ಜೊತೆ ಮದ್ವೆಯಾಗು ಎಂದು ತಾತ ಹೇಳಿದ್ದಾರೆ. ಇದನ್ನು ಕೇಳಿ ರಾಮ್​ಗೆ ಆಕಾಶವೇ ಬಿದ್ದ ಅನುಭವವಾಗಿದೆ. ಹಿಂದಿನ ಪ್ರೇಯಸಿಯನ್ನು ಮರೆತು ಸೀತಾಳ ಜೊತೆ ಬದುಕು ಕಟ್ಟಿಕೊಳ್ಳಲು ಕಾಯುತ್ತಿದ್ದ ರಾಮ್​ಗೆ ತಾತನ ಮುಂದೆ ಏನು ಹೇಳಬೇಕೋ ತಿಳಿದಿರಲಿಲ್ಲ.  ಏಕೆಂದರೆ ಸೀತಾ ಇದುವರೆಗೆ ತನ್ನನ್ನು ಒಪ್ಪಿಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮನಸ್ಸಿನಲ್ಲಿಯೇ ರಾಮ್​ನನ್ನು ಪ್ರೀತಿಸುತ್ತಿದ್ದರೂ ಸೀತಾ, ಇದನ್ನು ರಾಮ್​ಗೆ ಹೇಳಿರಲಿಲ್ಲ.

ಇದೀಗ ರಾಮ್​ಗೆ ಮನಸ್ಸು ನೊಂದಿದೆ. ಇಷ್ಟವಿಲ್ಲದೇ ಯಾರನ್ನೋ ಮದ್ವೆಯಾಗುವುದು ಅವನಿಂದ ಆಗುವುದಿಲ್ಲ. ಇದೇ ಕಾರಣಕ್ಕೆ ದೂರವೆಲ್ಲೋ ಹೋಗಿದ್ದಾನೆ. ಒಂದರ್ಥದಲ್ಲಿ ಸಾಯುವ ನಿರ್ಧಾರವನ್ನೇ ಮಾಡಿದ್ದಾನೆ. ಆಫೀಸ್​ಗೆ ಬಂದ ಸೀತಾಳಿಗೆ ರಾಮ್​ನಿಗೆ ಬೇರೆ ಮದ್ವೆ ಮಾಡ್ತಿರೋ ವಿಷಯವನ್ನು ಅಶೋಕ್​ ಹೇಳಿದ್ದಾನೆ. ರಾಮ್​ ಬೇಸರದಿಂದ ಬೆಟ್ಟದ ಕಡೆಗೆ ಹೋದ ವಿಷಯವನ್ನು ಪ್ರಿಯಾ ಹೇಳಿದ್ದಾಳೆ. ಇವೆರಡನ್ನೂ ಕೇಳಿದ ಸೀತಾಳಿಗೆ ಶಾಕ್​ ಆಗಿದೆ. ಕಚೇರಿಯಿಂದ ಓಡಿ ಬೆಟ್ಟದ ಕಡೆಗೆ ಓಡಿದ್ದಾಳೆ. ರಾಮ್​ ರಾಮ್​ ಎಂದು ಕರೆದಿದ್ದಾಳೆ.

ಗಂಡ ಬಿಟ್ಟವಳು ಅಂತಾರಾ? ನೋಡ್ತಿರು ಎನ್ನುತ್ತಲೇ ಮಗಳನ್ನು ಮೆರವಣಿಗೆಯಲ್ಲಿ ಮನೆಗೆ ಕರ್ಕೊಂಡು ಬಂದ ಪುಟ್ಟಕ್ಕ!

ರಾಮ್​ ಕೂಡ ಬಂದು ನೀವು ನನ್ನನ್ನು ಪ್ರೀತಿಸ್ತಿದ್ದೀರಾ ಎಂದು ಕೇಳಿದಾಗ ಕೊನೆಗೂ ಸೀತಾ ರಾಮ್​ನನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಇಲ್ಲಿಗೆ ಸೀತಾ ಮತ್ತು ರಾಮ್​ ಒಂದಾಗಿದ್ದಾರೆ. ಆದರೆ ಮುಂದೆ? ಗೊತ್ತಿಲ್ಲ. ಮುಂದಿರುವುದು ಬೆಟ್ಟದಷ್ಟು ಸವಾಲುಗಳು. ಒಂದೆಡೆ ರಾಮ್​ನ ಚಿಕ್ಕಮ್ಮ ಮತ್ತು ಚಾಂದನಿ ಸೇರಿ ಪ್ಲ್ಯಾನ್​ ಮಾಡಿದ್ದಾರೆ. ಚಿಕ್ಕಮ್ಮ ಅಂತೂ ರಾಮ್​ನನ್ನು ಮುಗಿಸುವ ತನಕ ಹೋಗಿದ್ದಾಳೆ. ತಾತನಿಗೆ ಸೀತಾಳ ಮೇಲೆ ಇಷ್ಟವಿದ್ದರೂ ಆಕೆ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ಅದು ಗೊತ್ತಾದರೆ ಮದುವೆಗೆ ಒಪ್ಪುವುದು ಕಷ್ಟವೇ. ಪರಿಸ್ಥಿತಿ ಹೀಗೆಲ್ಲಾ ಇರುವಾಗ ಮುಂದೇನು ಎಂದು ಪ್ರಶ್ನೆ ಕಾಡುವುದು ಸಹಜ. 

ಒಟ್ಟಿನಲ್ಲಿ ಸೀರಿಯಲ್​ ಕುತೂಹಲವನ್ನು ಕೆರಳಿಸುವಂತಿದೆ. ಅದೇ ಇನ್ನೊಂದೆಡೆ, ಸೀತಾ ದೂರವಾದಾಗ ರಾಮ್​ನ ಅಮ್ಮನ ನೆನಪು ಕಾಡಿದೆ. ತನ್ನ ಅಮ್ಮ ಹೇಗೆ ಸತ್ತಳು ಎಂಬ ಬಗ್ಗೆ ಇದುವರೆಗೆ ಯಾರೂ ಬಾಯಿಬಿಡದ ಬಗ್ಗೆ ಇದೀಗ ರಾಮ್​ಗೆ ಸಂದೇಹ ಶುರುವಾಗಿದೆ. ನೇರವಾಗಿಯೇ ಚಿಕ್ಕಮ್ಮನ ಬಳಿ ಈ ವಿಷಯ ಕೇಳಿದಾಗ, ಆಕೆಗೆ ಶಾಕ್​  ಆಗಿದೆ. ಚಿಕ್ಕಮ್ಮನೇ ರಾಮ್​ ಅಮ್ಮನನ್ನು ಕೊಲೆ ಮಾಡಿಸಿದ್ದು ಎಂದು ಕುಡಿದ ಅಮಲಿನಲ್ಲಿ ಇರುವ ಮಾವ ಸತ್ಯ ಹೇಳಿದ್ದಾನೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ರಾಮ್​  ಇಲ್ಲ. ಇದನ್ನು ಕೇಳಿ ಚಿಕ್ಕಮ್ಮನಿಗೂ ಶಾಕ್​ ಆಗಿದ್ದರೂ, ರಾಮ್​ಗೆ ಇದೆಲ್ಲಾ ಸುಳ್ಳು ಎಂದು ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಈ ನಿಜ ಯಾವಾಗ ಗೊತ್ತಾಗುವುದು ಎಂಬುದೂ ಈಗಿರುವ ಕುತೂಹಲ. 

ಪ್ರೇಯಸಿ ಜೊತೆ ನಿಶ್ಚಿತಾರ್ಥ, ಪತ್ನಿ ಜೊತೆ ಮತ್ತೆ ಮದ್ವೆ.. ನಂದೂ ಒಂದ್​ ಜನ್ಮನಾ ಅಂತನೇ ಭಾಗ್ಯಳ ಹೊಗಳಿಬಿಟ್ಟ!

Latest Videos
Follow Us:
Download App:
  • android
  • ios