ಧಾರಾವಾಹಿಗಳಲ್ಲಿ ಖಳನಾಯಕರ ಪಾತ್ರ ಬಯಲಾದರೂ, ಕಥೆ ಮುಗಿಯದೆ ಹೊಸ ತಿರುವು ಪಡೆಯುತ್ತಿದೆ. ಪುಟ್ಟಕ್ಕನ ಮಕ್ಕಳಲ್ಲಿ ಕಂಠಿ-ಸ್ನೇಹಾ ಮದುವೆಯ ಬಳಿಕ ಮೊದಲ ರಾತ್ರಿಯ ತಿರುವು. ಅಮೃತಧಾರೆಯಲ್ಲಿ ಶಕುಂತಲಾಳ ಭಂಡಾಫೋಡ್ ಆಗುವ ಸೂಚನೆ ಸಿಕ್ಕಿದ್ದರೂ, ಕಥೆ ಮುಂದುವರಿಯುವ ಸುಳಿವು. ಒಟ್ಟಾರೆ, ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ತಂತ್ರ.

ಇನ್ನೇನು ಎಲ್ಲವೂ ಗೊತ್ತಾಯಿತು, ವಿಲನ್​ ಬಂಡವಾಳ ಬಯಲಾಯ್ತು. ಇನ್ನೇನು ಎಲ್ಲವೂ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿಯೇ ಅದಕ್ಕೊಂದು ಟ್ವಿಸ್ಟ್​ ಕೊಟ್ಟು ಇನ್ನೊಂದೆರಡು ವರ್ಷ ಟಿಆರ್​ಪಿಗೆ ಅನುಗುಣವಾಗಿ ಚ್ಯೂಯಿಂಗ್​ ಗಮ್​ನಂತೆ ಎಳೆಯುವುದೇ ಸೀರಿಯಲ್​ಗಳು. ಈಗ ಬಹುತೇಕ ಧಾರಾವಾಹಿಗಳ ಸ್ಥಿತಿಯೂ ಅದೇ ಆಗಿದೆ. ವಿಲನ್​ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಹೇಳುವ ಸ್ಥಿತಿಯಲ್ಲಿ ಮನೆಮಂದಿ ಇಲ್ಲ. ಇತ್ತ ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಗೌತಮ್​ಗೆ ಇನ್ನೂ ಗೊತ್ತಾಗಿಲ್ಲ, ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್​ಗೆ ವಿಷಯ ತಿಳಿದಿಲ್ಲ, ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಮಾಧ​ವ್​ಗೆ ತಿಳಿದಿಲ್ಲ, ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಗೊತ್ತಾಗಿಲ್ಲ... ಹೀಗೆ ಹೀರೋಗಳು ಎಂದರೆ ಮೂರ್ಖರು ಎಂದು ತೋರಿಸುವ ಸೀರಿಯಲ್​ಗಳು ಸುತ್ತಿ ಸುತ್ತಿ ಒಂದೇ ರೀತಿಯ ಕಥೆಗಳನ್ನೇ ನೀಡುತ್ತಿವೆ.

 ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ ವಿಲನ್​ ರಾಧಾ, ರಾಜಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಸ್ನೇಹಾ-ಕಂಠಿ ಮದ್ವೆನೂ ಆಗಿದೆ. ರಾಧಾ ಜೈಲುಪಾಲೂ ಆಗಿದ್ದಾಳೆ. ಇನ್ನೇನು ಸೀರಿಯಲ್​ ಮುಗಿದೇ ಹೋಯ್ತು ಎನ್ನೋ ಹೊತ್ತಿನಲ್ಲಿಯೇ ಕಂಠಿ ಮುನಿಸಿಕೊಂಡು ಮನೆಬಿಟ್ಟು ಹೋದ ಹಾಗೆ ತೋರಿಸಿದ್ದರಿಂದ ಪ್ರೇಕ್ಷಕರು ಗೋಳೋ ಎನ್ನುತ್ತಿದ್ದರು. ಆದರು ಮುಂದೇನಾಗುತ್ತದೆ ಎಂದು ಸೀರಿಯಲ್​ ನೋಡುವುದಂತೂ ಬಿಡುವುದಿಲ್ಲ ಬಿಡಿ, ಇದು ನಿರ್ದೇಶಕರಿಗೂ ಚೆನ್ನಾಗಿ ಗೊತ್ತಿರುತ್ತೆ. ಕೊನೆಗೆ ಸ್ನೇಹಾನೇ ಮರ್ಯಾದೆ ಬಿಟ್ಟು ಫಸ್ಟ್​ ನೈಟ್​ ಮಾಡಿದ್ರೆ ಎಲ್ಲಾ ಸರಿಯಾಗತ್ತೆ ಎಂದಿದ್ದರಿಂದ ಮುಹೂರ್ತ ಫಿಕ್ಸ್​ ಮಾಡಲಾಗಿದೆ. ಕಂಠಿ ಸ್ನೇಹಾ ಒಂದಾಗಿದ್ದಾರೆ. ಇನ್ನು ಮೊದಲ ರಾತ್ರಿ ಆಗೋದೊಂದೇ ಬಾಕಿ.

ತಣ್ಣೀರು ಸುರ್ಕೊಂಡು, ಉರುಳು ಸೇವೆಗೈದು, ನೆಲದಲ್ಲಿ ಡ್ರೋನ್​ ಪ್ರತಾಪ್​ ಊಟ: ಎಲ್ಲಾ ಗಗನಾಗೋಸ್ಕರವಂತೆ!

ಅದೇ ಇನ್ನೊಂದೆಡೆ, ಅಮೃತಧಾರೆ. ಇಲ್ಲಿ ಶಕುಂತಲಾ ವಿಲನ್​ ಎನ್ನುವುದನ್ನು ಸಾಕ್ಷಿ ಸಮೇತ ಮಾಧವ್​ಗೆ ತೋರಿಸುವ ಪ್ಲ್ಯಾನ್​ ಮಾಡುತ್ತಿದ್ದಾರೆ ಭೂಮಿಕಾ, ಆನಂದ್​ ಮುಂತಾದವರು. ಸದ್ಯ ಶಕುಂತಲಾ ಹೆಸರು ಪಂಕಜಾ ಎನ್ನುವ ಕ್ಲೂ ಅವರಿಗೆ ಸಿಕ್ಕಿದೆ. ಪಂಕಜಾ ಹೆಸರು ಹೇಳಿಕೊಂಡು ಒಬ್ಬಾಕೆ ಕಾಲ್​ ಮಾಡಿದ್ದಾಳೆ. ಫೋನ್​ ಅನ್ನು ಶಕುಂತಲಾ ಎತ್ತಿದ್ದಾಳೆ. ಅದು ಭೂಮಿಕಾಗೆ ತಿಳಿದಿದೆ. ಆ ಮಹಿಳೆ ಶಕುಂತಲಾಳನ್ನು ಭೇಟಿಯಾಗಲು ಹೇಳಿದ್ದಾಳೆ. ಅವರು ಏನು ಮಾತನಾಡುತ್ತಾರೆ ಎಂದು ನೋಡಲು ಭೂಮಿಕಾ ಪತ್ತೆದಾರಿ ಕೆಲಸ ಮಾಡುತ್ತಿದ್ದಾಳೆ. ಒಟ್ಟಿನಲ್ಲಿ ಶಕುಂತಲಾಗೆ ಮುಹೂರ್ತ ಫಿಕ್ಸ್​ ಮಾಡಲಾಗಿದೆ. 

ಈ ಎರಡೂ ಸೀರಿಯಲ್​ಗಳಲ್ಲಿ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಟ್ವಿಸ್ಟ್​ ನೀಡಲಾಗಿದೆ. ಪುಟ್ಟಕ್ಕನ ಮಕ್ಕಳುವಿನಲ್ಲಿ ಎಲ್ಲವೂ ಮುಗಿದ ಕಾರಣ, ಸೀರಿಯಲ್​ ಮುಗಿಸುತ್ತಾರೆಯೋ ಎಂದು ವೀಕ್ಷಕರು ಕಾದಿದ್ದರೆ, ಅಮೃತಧಾರೆ ಸದ್ಯ ಮುಗಿಯುವ ಸೂಚನೆ ಇಲ್ಲ. ಶಕುಂತಲಾ ಇಷ್ಟು ಬೇಗ ಸಿಕ್ಕಾಕಿಕೊಳ್ಳಲು ನಿರ್ದೇಶಕರು ಬಿಡುವುದಿಲ್ಲ ಎನ್ನುವ ಸತ್ಯ ವೀಕ್ಷಕರಿಗೂ ಗೊತ್ತಿದೆ. ಒಟ್ಟಿನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡುತ್ತಾ ಜನರನ್ನು ರಂಜಿಸುತ್ತಿದ್ದಾರೆ ಸೀರಿಯಲ್ ತಾರೆಯರು.

ಬರ್ತ್​ಡೇ ದಿನ ಹೇಳ್ಬೇಕಿತ್ತು, ತಡವಾಯಿತು ಎನ್ನುತ್ತಲೇ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಸಂಗೀತಾ ಶೃಂಗೇರಿ]