Asianet Suvarna News Asianet Suvarna News

ಭಾಗ್ಯಳ ಹಾಲ್​ ಟಿಕೆಟ್​ ಮಾಯ! ಒಳ್ಳೆಯವರಿಗೆ ಸದಾ ಹೀಗ್ಯಾಕೆ ಆಗುತ್ತೆ ಕೇಳ್ತಿದ್ದಾರೆ ಅಭಿಮಾನಿಗಳು!

ಪರೀಕ್ಷೆ ಬರೆಯಲು ಬಂದ ಭಾಗ್ಯಳ ಹಾಲ್​ ಟಿಕೆಟ್​ ಮಾಯವಾಗಿದೆ. ಅವಳು ಪರೀಕ್ಷೆಯಿಂದ ವಂಚಿತಳಾಗ್ತಾಳಾ?
 

The hall ticket of Bhagya who came to write the exam has misplaced Will she fail the exam suc
Author
First Published Mar 22, 2024, 5:00 PM IST

ಭಾಗ್ಯ 10ನೇ ಕ್ಲಾಸ್​ ಪರೀಕ್ಷೆ ಬರೆಯಲು ಎಲ್ಲಾ ರೆಡಿ ಮಾಡಿಕೊಂಡಿದ್ದಾಳೆ. ಭಾಗ್ಯಳ ಮಗಳೂ ಈಗ 10ನೇ ಕ್ಲಾಸ್​ ಪರೀಕ್ಷೆ ಬರೆಯುತ್ತಿದ್ದಾಳೆ. ಅಮ್ಮ ಮತ್ತು ಮಗಳಿಗೆ ಒಂದೇ ಕಡೆ ಬಂದಿದೆ. ಈ ಬಾರಿ ಮಗಳಿಗೆ ಭಾಗ್ಯ ಚೆನ್ನಾಗಿ ಓದಿಸಿದ್ದಾಳೆ. ಪ್ರತಿ ಬಾರಿಯೂ ಪರೀಕ್ಷೆಗೆ ಸರಿಯಾಗಿ ರೆಡಿಯಾಗಿ ಬರದ ತನ್ವಿಗೆ ಭಾಗ್ಯಳೇ ಖುದ್ದು ಓದಿಸಿದ್ದಾಳೆ. ಈ ಸಲ ಚೆನ್ನಾಗಿ ಪರೀಕ್ಷೆ ಬರೆಯುವ ಕಾನ್​ಫಿಡೆನ್ಸ್​ನಲ್ಲಿ ಇದ್ದಾಳೆ ತನ್ವಿ. ಇದನ್ನು ಕೇಳಿ ಭಾಗ್ಯಳೂ ಖುಷಿಯಿಂದ ಇದ್ದಾಳೆ. ಆದರೆ...?

ಆದರೆ ಎಲ್ಲವೂ ಉಲ್ಟಾ ಆಗೋಗಿದೆ. ಪರೀಕ್ಷೆ ಇನ್ನೇನು ಶುರುವಾಗಲಿದೆ ಎನ್ನುವ ಹೊತ್ತಿಗೆ ಹಾಲ್​ ಟಿಕೆಟ್​ ಮೇಲೆ ಸಹಿ ಹಾಕಲು ಶಿಕ್ಷಕಿ ಬಂದಿದ್ದಾರೆ. ಭಾಗ್ಯ ಹಾಲ್​ ಟಿಕೆಟ್​ ತೆಗೆಯಲು ಕಂಪಾಸ್​ ಬಾಕ್ಸ್​ ಓಪನ್​ ಮಾಡಿದ್ದಾಳೆ. ಆದರೆ ಅವಳು ಹಾಲ್​ ಟಿಕೆಟ್ ಕಾಣೆಯಾಗಿಬಿಟ್ಟಿದೆ. ಅವಳೇ ಅದನ್ನು ಮರೆತು ಬಂದಳಾ ಅಥವಾ ಯಾರದ್ದೋ ಕುತಂತ್ರವೋ ಗೊತ್ತಿಲ್ಲ. ಹಾಲ್​ ಟಿಕೆಟ್​ ಇಲ್ಲದೇ ಪರೀಕ್ಷೆ ಬರೆಯಲು ಕೊಡುವುದಿಲ್ಲ ಎಂದು ಶಿಕ್ಷಕಿ ಪರೀಕ್ಷೆಯ ರೂಲ್ಸ್​ ಹೇಳಿಬಿಟ್ಟಿದ್ದಾಳೆ. ಅಮ್ಮ ಹಾಲ್​ ಟಿಕೆಟ್​ ತರದೇ ಇರುವುದನ್ನು ನೋಡಿ ತನ್ವಿಗೂ ಶಾಕ್​ ಆಗಿದೆ. ಅವಳೂ ಫುಲ್​ ಟೆನ್ಷನ್​ನಲ್ಲಿ ಇದ್ದಾಳೆ. ಹಾಗಿದ್ದರೆ ಮುಂದೇನಾಗುತ್ತದೆ? ಭಾಗ್ಯ ಪರೀಕ್ಷೆ ಬರೆಯುತ್ತಾಳಾ? ಅವಳಿಗೆ ಹಾಲ್​ ಟಿಕೆಟ್​ ಸಿಗುತ್ತಾ, ಅಥವಾ ಯಾರಾದರೂ ತಂದು ಕೊಡುತ್ತಾರಾ? ಹಾಲ್​ ಟಿಕೆಟ್ ಇಲ್ಲದೇ ಹೋದರೆ ಪರೀಕ್ಷೆಯಿಂದ ಭಾಗ್ಯ ವಂಚಿತಳಾಗ್ತಾಳಾ ಎನ್ನುವುದು ಈಗಿರುವ ಪ್ರಶ್ನೆ. 

ರಗಡ್​ ಲುಕ್​ನಲ್ಲಿ ಸತ್ಯ ಸೀರಿಯಲ್ ಮಾಜಿ ಕೀರ್ತನಾ: ಪ್ಲೀಸ್​ ಸೀರಿಯಲ್​ಗೆ ವಾಪಸ್​ ಬನ್ನಿ ಅಂತಿದ್ದಾರೆ ಫ್ಯಾನ್ಸ್​

ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಭಾಗ್ಯಳ ಕಷ್ಟವನ್ನು ನೋಡಲಾಗದ ಫ್ಯಾನ್ಸ್​ ಒಳ್ಳೆಯವರಿಗೆ ಇಷ್ಟು ಯಾಕೆ ಕಷ್ಟ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಭಾಗ್ಯಳಿಗೆ ಯಾಕೆ ಪದೇ ಪದೇ ಕಷ್ಟವನ್ನು ತೋರಿಸುತ್ತೀರಿ ಎಂದು ನಿರ್ದೇಶಕರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಭಾಗ್ಯಳಿಗೆ ಧೈರ್ಯ ತುಂಬುತ್ತಿದ್ದಾರೆ. ನಿನಗೇನು ಆಗುವುದಿಲ್ಲ, ದೇವರಿದ್ದಾನೆ ಎನ್ನುತ್ತಿದ್ದಾರೆ. ಅತ್ತೆ ಬಂದು ಹಾಲ್​ ಟಿಕೆಟ್ ಕೊಡುತ್ತಾಳೆ, ಧೈರ್ಯವಾಗಿರು ಎನ್ನುತ್ತಿದ್ದಾರೆ. ಹಾಗಿದ್ದರೆ ಭಾಗ್ಯಳಿಗೆ ಹಾಲ್​ ಟಿಕೆಟ್​ ಸಿಗತ್ತಾ? ಪರೀಕ್ಷೆ ಬರೆಯುತ್ತಾಳಾ?

ಅಷ್ಟಕ್ಕೂ ಭಾಗ್ಯ ಮತ್ತು ತಾಂಡವ್​ ಒಲ್ಲದ ಮನಸ್ಸಿನಿಂದ ಆದರೂ ಒಂದಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಇಬ್ಬರನ್ನೂ ಒಂದು ಮಾಡಲು ಕುಸುಮಾ ಮತ್ತು ಮಕ್ಕಳು ಮಾಡಿದ  ಪ್ಲ್ಯಾನ್​ ಎಲ್ಲಾ ನೀರಿನಲ್ಲಿ ಹುಣಸೇಹಣ್ಣು ತೋಯ್ದಹಾಗಾಗಿದೆ. ಏಕೆಂದರೆ ತಾಂಡವ್​ಗೆ ಶ್ರೇಷ್ಠಾ ತಲೆ ತುಂಬಿದ್ದಾಳೆ. ಎಲ್ಲರೂ ಸೇರಿ ನಾಟಕ ಮಾಡುತ್ತಿರುವುದು ವಿಷಯ ತಿಳಿಸಿದ್ದಾಳೆ.  ಅಮ್ಮ ಮತ್ತು ಮಕ್ಕಳು ಸೇರಿ ನಾಟಕ ಮಾಡುತ್ತಿರುವ ವಿಷಯ ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್​ಗೆ  ಶಾಕ್​  ಆಗಿದೆ. ಮಗ ತಲೆತಿರುಗಿ ಬಿದ್ದದ್ದು ಕೂಡ ನಾಟಕ ಎಂದು ಹೇಳಿದ್ದಾಳೆ. ಇದನ್ನು ಕೇಳಿ ತಾಂಡವ್​ಗೆ  ತಾನು ಮೋಸ ಹೋಗಿರುವುದು ತಿಳಿದಿದೆ ಮುಂದೇನು ಮಾಡುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.

ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೇ ಕರ್ಕೊಂಡು ಬಿಟ್ಯಲ್ಲಮ್ಮಾ ಭೂಮಿಕಾ ಅಂತಿದ್ದಾರೆ ಫ್ಯಾನ್ಸ್​!


Follow Us:
Download App:
  • android
  • ios