Asianet Suvarna News Asianet Suvarna News

ಶ್ರೇಷ್ಠಾ ಜತೆ ತಾಂಡವ್​ ಕುಣಿದರೆ, ಸಪೋರ್ಟ್​ ಮಾಡೋದಾ ಗುಂಡ? ಅವ್ಳು ನಿನ್ನಪ್ಪನ ಲವರ್​ ಕಣೋ ಅಂತಿದ್ದಾರೆ ಫ್ಯಾನ್ಸ್​!

ತಾಂಡವ್​ ಹಾಗೂ ಶ್ರೇಷ್ಠಾ ಸೇರಿ ಡ್ಯಾನ್ಸ್​ ಮಾಡ್ತಿದ್ರೆ ತಾಂಡವ್​  ಮಗ ಗುಂಡಾ ಅಮ್ಮನ ಬಿಟ್ಟು ಅಪ್ಪನ ಲವರ್​ಗೆ ಸಪೋರ್ಟ್​ ಮಾಡೋದಾ? ಏನಿದು ಕಥೆ?
 

Tandav Shrestha and Gunda of Bhagyalakshmi serial in new reels suc
Author
First Published Jan 21, 2024, 3:29 PM IST | Last Updated Jan 21, 2024, 3:29 PM IST

ನಾಯಕ ಯಾರಮ್ಮಾ, ಯಾರಮ್ಮಾ ನಾಯಕ...  ಎಂದು ಭಾಗ್ಯಲಕ್ಷ್ಮಿ ತಾಂಡವ್​ ಶ್ರೇಷ್ಠಾಳನ್ನು ಕೇಳಿದ್ರೆ, ತಾಂಡವ್​ ಮಗ ಗುಂಡಣ್ಣ ಶ್ರೇಷ್ಠಾಳನ್ನು ಹಿಡಿದುಕೊಂಡು ನಾಯಕ ನಾನೇ... ನನ್ನ ಕಥೆಗೆ ಅನ್ನೋದಾ? ಪಾಪ ಭಾಗ್ಯಲಕ್ಷ್ಮಿ ಅಭಿಮಾನಿಗಳಿಗೆ ಅದ್ಹೇಗಾರಿರಬೇಡ? ಅಮ್ಮ ಇರುವಾಗಲೇ ಇನ್ನೊಬ್ಬಳ ಹಿಂದೆ ಹೋಗಿರುವ ಅಪ್ಪನ ಲವರ್​ಗೇ ನಾಯಕಿ ಅನ್ನೋದಾ ಅಂತಿದ್ದಾರೆ ಫ್ಯಾನ್ಸ್​. ಅವ್ಳು ನಿಮ್ಮಪ್ಪನ ಲವರ್​ ಕಣೋ, ಹೀಗೆ ಹೇಳೋದು ಸರಿನಾ ಅಂತ ಕೆಲವರು ಪ್ರಶ್ನಿಸಿದ್ರೆ, ಇರು ನಿನ್ನಜ್ಜಿ ಕುಸುಮಂಗೆ ಹೇಳಿ ಕೊಡ್ತೇನೆ ಅಂತಿದ್ದಾರೆ ಅಂತಿದ್ದಾರೆ ಇನ್ನು ಕೆಲವರು. ಇಷ್ಟು ದಿನ ಅಮ್ಮನ ಮುದ್ದಿನ ಮಗ ಆಗಿ, ಅಮ್ಮ ಭಾಗ್ಯಂಗೇ ಕೈಕೊಟ್ಟು ಅಪ್ಪನ ಲವರ್​ಗೇ ಸಪೋರ್ಟ್​ ಮಾಡ್ತಿದ್ದಿಯೇನೋ ಅಂತಿದ್ದಾರೆ ಇನ್ನೊಂದಿಷ್ಟು ಮಂದಿ...

ಅಂದಹಾಗೆ ಇದು ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆಯಲ್ಲ. ಬದಲಿಗೆ ಈ ಸೀರಿಯಲ್​ನ ನಾಯಕ ತಾಂಡವ್​ ಹಾಗೂ ವಿಲನ್​ ಶ್ರೇಷ್ಠಾ ಮಾಡಿರುವ ರೀಲ್ಸ್​. ರವಿಚಂದ್ರ ಅವರ ಅಭಿನಯದ ರಣಧೀರ ಚಿತ್ರದ ನಾಯಕ ನಾನೇ ಹಾಡಿಗೆ ಇವರಿಬ್ಬರೂ ರೀಲ್ಸ್​ ಮಾಡಿದ್ರೆ ತಾಂಡವ್​-ಭಾಗ್ಯಳ ಮಗ ಎಲ್ಲರ ಮುದ್ದಿನ ಕಣ್ಮಣಿ ಗುಂಡನೂ ಮಧ್ಯೆ ಬಂದು ರೀಲ್ಸ್​ ಮಾಡಿದ್ದಾನೆ ಅಷ್ಟೇ. ಅಂದಹಾಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ನಲ್ಲಿ ಶ್ರೇಷ್ಠಾ ಪಾತ್ರಧಾರಿಯಾಗಿ ಕಾವ್ಯಾ ಗೌಡ ನಟಿಸುತ್ತಿದ್ದಾರೆ. ಈ ರೀಲ್ಸ್ ಅನ್ನು ಅವರು ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಆ್ಯಕ್ಸಿಡೆಂಟ್​ ಶೂಟಿಂಗ್​ನಲ್ಲಿ ಸೀರಿಯಲ್​ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್

ಇನ್ನು ಈ ಸೀರಿಯಲ್​ ಬಗ್ಗೆ ಹೇಳುವುದಾದರೆ, ತಾಂಡವ್​ ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಇತ್ತ ಮನೆಯ ಖರ್ಚನ್ನು ನಿಭಾಯಿಸಲು ಭಾಗ್ಯ ಟೈಲರಿಂಗ್​  ಮಾಡುವ ಪ್ಲ್ಯಾನ್​ ಮಾಡಿ ಹಳೆಯ ಹೊಲಿಗೆ ಮಷಿನ್​ ಹೊರಕ್ಕೆ ತೆಗೆದಿದ್ದಾಳೆ. ಮಗಳು ತನ್ವಿಗೆ ಅಮ್ಮನ ಮೇಲೆ ಪ್ರೀತಿ ಉಕ್ಕಿದೆ. ಮನೆಯನ್ನು ನಿಭಾಯಿಸಲು ಹೊಲಿಗೆ ಮಾಡುವ ಪ್ಲ್ಯಾನ್​​ ಮಾಡಿದ್ದರೆ, ಅತ್ತ ಸೊಸೆಯನ್ನು ಶತಾಯುಗತಾಯವಾಗಿ ಶಾಲೆಗೆ ಸೇರಿಸಿದ್ದ ಅತ್ತೆ ಕುಸುಮಗೆ ಇದು ಇಷ್ಟವಿಲ್ಲ. ತಾನೇ ಸಂಸಾರದ ನೊಗ ಹೊರುವುದಾಗಿ ಹೇಳಿದ್ದಾಳೆ. 

ಇನ್ನು ತಾಂಡವ್​ನನ್ನು ಶ್ರೇಷ್ಠಾ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾಳೆ. ಮನೆಯಲ್ಲಿ ಒಂದೂ ಕೆಲಸ ಮಾಡದ ತಾಂಡವ್​ ಶ್ರೇಷ್ಠಾಳ ತಾಳಕ್ಕೆ ಕುಣಿಯುತ್ತಿದ್ದಾನೆ. ಅವಳ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದಾನೆ. ಒಟ್ಟಿನಲ್ಲಿ ಈ ಸೀರಿಯಲ್​ ಕುತೂಹಲ ಹಂತಕ್ಕೆ ಬಂದಿದೆ. 

ಅಗೆದಷ್ಟೂ, ಬಗೆದಷ್ಟೂ ಸಂಶೋಧಕರಿಗೆ ಉತ್ತರವೇ ಸಿಗದ ವಿಷದ ಕೆರೆ! ಶ್ರೀರಾಮನಿಗೂ ಇದಕ್ಕೂ ಇರೋ ನಂಟೇನು?

 
 
 
 
 
 
 
 
 
 
 
 
 
 
 

A post shared by Kavya Gowda (@imkavyagowda_)

Latest Videos
Follow Us:
Download App:
  • android
  • ios