Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ತಾರೆಯರಿಂದ ಭರ್ಜರಿ ಪಾರ್ಟಿ: ಹಳೆ ಶಾರ್ವರಿಗೆ ಒಂದೇ ಸಮನೆ ಬೈತಿರೋ ಅಭಿಮಾನಿಗಳು!

ಶ್ರೀರಸ್ತು ಶುಭಮಸ್ತು ತಾರೆಯರಿಂದ ಭರ್ಜರಿ ಪಾರ್ಟಿ ಮಾಡಿದ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಹಳೆ ಶಾರ್ವರಿಗೆ ಒಂದೇ ಸಮನೆ ಅಭಿಮಾನಿಗಳು ಬೈತಿರೋದು ಯಾಕೆ?
 

Shreerastu Shubhamastu stars party video viral fans asks old Sharvari to come back suc
Author
First Published Jun 21, 2024, 8:52 PM IST | Last Updated Jun 21, 2024, 8:52 PM IST

ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ನಾಯಕಿ ಎಂದರೆ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳು ಹಾಗೂ ಮನೆಯಲ್ಲಿರುವ ಎಲ್ಲರ ಟಾರ್ಚರ್​ಗಳನ್ನು ಸಹಿಸಿಕೊಂಡವಳು ಎಂದೇ ಬಿಂಬಿಸಲಾಗುತ್ತದೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಆಕೆ ಅಳುಮುಂಜಿಯೇ, ಏಕೆಂದರೆ ಅಷ್ಟೊಂದು ನೋವಿನ ಭಾರವನ್ನು ಹೊತ್ತು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲವಲ್ಲ! ಇದೇ ಕಾರಣಕ್ಕೆ ಸೀರಿಯಲ್​ ಪ್ರೇಮಿಗಳಿಗೆ ಅದರಲ್ಲಿಯೂ ಧಾರಾವಾಹಿಗಳನ್ನು ಹೆಚ್ಚಾಗಿ ನೋಡುವ ಮಹಿಳೆಯರಿಗೆ ಯಾಕೋ ತುಂಬಾ ಬೇಸರ. ಆದರೆ ನಾಯಕಿ ವಿಲನ್​ಗೆ ಸೆಡ್ಡು ಹೊಡೆತು ಎತ್ತರಕ್ಕೆ ಬೆಳೆದು ನಿಂತಾಗ, ಹೆಜ್ಜೆ ಹೆಜ್ಜೆಗೂ ಆಕೆಯ ಹೆಡೆಮುರಿ ಕಟ್ಟುತ್ತಲೇ ಹೋದಾಗ ಅಂಥ ಸೀರಿಯಲ್​ಗಳನ್ನು ನೋಡುವುದೇ ರೋಚಕ.   ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಕೂಡ ಈಗ ವೀಕ್ಷಕರಿಗೆ ಅಚ್ಚುಮೆಚ್ಚಾಗಿದೆ.  ಇದೊಂದು ರೀತಿಯಲ್ಲಿ ಭಿನ್ನ ಕಥೆ. ತುಳಸಿ ಎಂಬ ವಿಧವೆ, ಮದುವೆಯಾದ ಮಕ್ಕಳ ತಾಯಿ ಇನ್ನೊಂದು ಮದ್ವೆಯಾಗಿ ಬೇರೊಬ್ಬರ ಮನೆಗೆ ಬಂದಾಗ ಅನುಭವಿಸುವ ನೋವು. ಇದರಲ್ಲಿ ಗಂಡ ಸೇರಿದಂತೆ ಇನ್ನು ಸದಸ್ಯರು ಈಕೆಯನ್ನು ತುಂಬಾ ಇಷ್ಟಪಟ್ಟರೆ ವಿಲನ್​ಗಳ ಕೈ ಮೇಲಾಗುತ್ತಿತ್ತು. ಇದರಿಂದ ತುಳಸಿಯ ಗೋಳು ನೋಡಲು ಆಗ್ತಿಲ್ಲ ಎನ್ನುತ್ತಿದ್ದರು. ಆದರೆ ಈಗ ಸೀನೇ ಚೇಂಜ್​  ಆಗಿದೆ. ತುಳಸಿಯನ್ನು ಕಂಡು ಎಲ್ಲರೂ ಇಷ್ಟಪಡುತ್ತಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ 400 ಕಂತುಗಳನ್ನು ಪೂರೈಸಿದ್ದ ಶ್ರೀರಸ್ತು ಶುಭಮಸ್ತು ತಂಡ ಭರ್ಜರಿ ಪಾರ್ಟಿ ಮಾಡಿದೆ. ಇದರ ವಿಡಿಯೋ ಅನ್ನು ವಿಲನ್​ ದೀಪಿಕಾ, ಅಂದರೆ ದರ್ಶಿನಿ ಡೆಲ್ಟಾ ಶೇರ್​  ಮಾಡಿಕೊಂಡಿದ್ದಾರೆ. ಇದರಲ್ಲಿ ಸೀರಿಯಲ್​ನ ಎಲ್ಲರನ್ನೂ ನೋಡಬಹುದು. ಆದರೆ ಎಲ್ಲರ ಗಮನ ಸೆಳೆದಿರುವುದು ಹಳೆಯ ಶಾರ್ವರಿ ಅಂದರೆ ನೇತ್ರಾ ಜಾಧವ್. ಶಾರ್ವರಿ ಎಂದರೆ ಸಾಕು, ಸೀರಿಯಲ್​ ಪ್ರಿಯರ ಮನದಾಳದಲ್ಲಿ ಮೂಡುವ ಚಿತ್ರಣ ಒಂದೇ. ಅದು ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​. ತಮ್ಮ ಕಣ್ಣುಗಳಿಂದಲೇ ಅಭಿಯನ ಮಾಡುವ ಮುದ್ದು ಮೊಗದ ಸುಂದರಿ ಶಾರ್ವರಿ ಈಗ ಈ ಸೀರಿಯಲ್​ನಿಂದ ಹೊರಕ್ಕೆ ಬಂದು ಸೀರಿಯಲ್​ ಪ್ರೇಮಿಗಳಿಗೆ ಶಾಕ್​ ನೀಡಿದ್ದರು.  ಶಾರ್ವರಿ  ಪಾತ್ರಕ್ಕೆ ಹೊಸ ಎಂಟ್ರಿ ಆಗಿದೆ. ಆದರೆ ಒಂದು ಪಾತ್ರದಲ್ಲಿ ಒಬ್ಬರನ್ನೇ ಬಹು ತಿಂಗಳು, ವರ್ಷ ನೋಡುವ ಸೀರಿಯಲ್​ ಪ್ರೇಮಿಗಳಿಗೆ ಅದೇ ಪಾತ್ರಕ್ಕೆ ಹೊಸ ಮುಖವನ್ನು ಕಲ್ಪನೆ ಮಾಡಿಕೊಳ್ಳುವುದು ಬಹು ಕಷ್ಟ. ಅದರಲ್ಲಿಯೂ ಯಾರಿಗೂ ಡೌಟ್​ ಬರದಂತೆ, ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಕಣ್ಣಿನಲ್ಲಿಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಅದಕ್ಕಾಗಿಯೇ ಇವರು ಸೀರಿಯಲ್​ನಿಂದ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ. ಮತ್ತೊಮ್ಮೆ ಅವರನ್ನು ವಾಪಸ್​  ಕರೆದುಕೊಂಡು ಬರುವಂತೆಯೂ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​  ಕೂಡ ಹಾಕುತ್ತಿದ್ದರು.

ರೀಲ್​ ವಿಲನ್​ಗಳಿಂದ ಬೊಂಬಾಟ್​ ರೀಲ್ಸ್​... ನೀವೇ ನಮ್​ ರಿಯಲ್​ ಹೀರೋಯಿನ್​ಗಳು ಎಂದ ಫ್ಯಾನ್ಸ್​

ಇದೀಗ ಮತ್ತದೇ ಕಮೆಂಟ್ಸ್​ಗಳ ಸುರಿಮಳೆಯಾಗುತ್ತಿದೆ. ಶಾರ್ವರಿಯ ಪಾತ್ರಕ್ಕೆ ಸ್ವಪ್ನಾ ದೀಕ್ಷಿತ್ ಅವರು ಬಂದಿದ್ದಾರೆ. ಅವರು ಕೂಡ ಅದ್ಭುತ ಕಲಾವಿದೆಯೇ. ಆದರೆ ಸೀರಿಯಲ್​ನ ಬಹಳಷ್ಟು ವೀಕ್ಷಕರಿಗೆ ನೇತ್ರಾ ಅವರೇ ಬೇಕಂತೆ. ಈ ಸೀರಿಯಲ್​ ಪ್ರೊಮೋ ಹಾಕಿದಾಗಲೆಲ್ಲವೂ ನೇತ್ರಾ ಅವರನ್ನು ಮಿಸ್​ ಮಾಡಿಕೊಳ್ಳುವ ಬಗ್ಗೆ ಕಮೆಂಟಿಗರು ಹೇಳುತ್ತಲೇ ಇರುತ್ತಾರೆ.   ನೇತ್ರಾ ಅವರು, ಈ ಹಿಂದೆ  ಸುಧಾರಾಣಿ ಅವರ ಜೊತೆ  ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಂತರ ಅವರದ್ದೇ ಜೊತೆ  ನೆಗಟಿವ್ ರೋಲ್​ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.  ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ  ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು.  ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ  ಮಕ್ಕಳಿಗೆ ಮದುವೆಯಾಗಿದ್ದರೆ  ರಿಯಲ್​ ಲೈಫ್​ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್​ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುತ್ತಾರೆ.  

 ಸೀರಿಯಲ್​ನ 400 ಹಬ್ಬದ ಸಂಭ್ರಮದಲ್ಲಿ ಸೀರಿಯಲ್​ನ ಎಲ್ಲಾ ನಟಿ-ನಟರು ಇದ್ದರೂ ಸೀರಿಯಲ್​ ಪ್ರೇಮಿಗಳು ನೇತ್ರಾ ಅವರನ್ನು ಮಿಸ್​ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಬಹುಶಃ ಈ ಶೂಟಿಂಗ್​ ನೇತ್ರಾ ಅವರು ಸೀರಿಯಲ್​ನಲ್ಲಿ ಇದ್ದ ಸಂದರ್ಭದಲ್ಲಿಯೇ ಮಾಡಿದ್ದು ಎಂದು ತೋರುತ್ತಿದೆ. ಅದಕ್ಕಾಗಿ 400ರ ಸಂಭ್ರಮದಲ್ಲಿ ನೇತ್ರಾ ಕಾಣಿಸಿಕೊಂಡಿದ್ದು ಸ್ವಪ್ನಾ ಕಾಣಿಸುತ್ತಿಲ್ಲ. ಆದರೆ ನೇತ್ರಾ ಅವರೇ ತಮಗೆ ಬೇಕು ಎಂದು ಅಭಿಮಾನಿಗಳು ಪಟ್ಟುಹಿಡಿಯುತ್ತಿದ್ದಾರೆ. 

ಶ್ರೀರಸ್ತು-ಶುಭಮಸ್ತು ಸೀರಿಯಲ್​ನಿಂದ ಔಟ್​ ಆಗುತ್ತಿದ್ದಂತೆಯೇ ಯಕ್ಷಗಾನದಲ್ಲಿ 'ಶಾರ್ವರಿ' ಮಿಂಚಿಂಗ್

Latest Videos
Follow Us:
Download App:
  • android
  • ios