Asianet Suvarna News Asianet Suvarna News

ಮೇಡಂ ನಿಮಗ್ಯಾಕೆ ರಾಮ್​ ಲವ್​ ಅರ್ಥ ಆಗ್ತಿಲ್ಲ? ರಾಮ್​ ಅವ್ರೇ, ಸೀತಾನೂ ಕೈ ಕೊಟ್ರೆ ಏನ್​ ಮಾಡ್ತೀರಾ?

ಸೀತಾರಾಮ ಸೀರಿಯಲ್​ಗೆ 100 ದಿನಗಳಾಗಿರುವ ಹಿನ್ನೆಲೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಲ್ಲಿದೆ ಅದರ ಸಾರಾಂಶ 
 

Seeta Rama serial completes 100 days question answer programme of social media suc
Author
First Published Nov 30, 2023, 2:31 PM IST

ಭಗ್ನಪ್ರೇಮಿಯಾಗಿರುವ ರಾಮ್​ ಮತ್ತೆಂದೂ ಪ್ರೀತಿಗೇ ಬೀಳಲ್ಲ ಎಂದು ಪಣ ತೊಟ್ಟ ಬೆನ್ನಲ್ಲೇ ಅವನ ಲೈಫ್​ನಲ್ಲಿ ಸೀತಾಳ ಎಂಟ್ರಿ ಆಗಿಬಿಟ್ಟಿದೆ. ಸದ್ದಿಲ್ಲದೇ ಸೀತಾ ಆತನ ಮನಸ್ಸನ್ನು ಕದ್ದುಬಿಟ್ಟಿದ್ದಾಳೆ. ಗಂಡನನ್ನು ಕಳೆದುಕೊಂಡಿರುವ ಸೀತಾಗೆ ಮುದ್ದು ಮಗಳು ಸಿಹಿಯೇ ಪ್ರಪಂಚ. ಸಿಂಗಲ್​  ಪೇರೆಂಟ್​ ಆಗಿರೋ ಸೀತಾಗೆ ರಾಮ್​ ಕೇವಲ ಒಳ್ಳೆಯ ಗೆಳೆಯನಷ್ಟೇ. ಅದನ್ನು ಹೊರತುಪಡಿಸಿದರೆ, ಆತನ ಬಗ್ಗೆ ಬೇರೆ ಯೋಚನೆ ಕೂಡ ಆಕೆಗೆ ಬಂದಿಲ್ಲ. ಅದೇ ಇನ್ನೊಂದೆಡೆ ಸಿಹಿಗೂ ರಾಮ್​ ಎಂದ್ರೆ ಅಚ್ಚುಮೆಚ್ಚು. ಆತನನ್ನು ಫ್ರೆಂಡ್​ ಎಂದೇ ಕರೆಯುತ್ತಾಳೆ. ಆದರೆ ಸಿಹಿಯ ಜೊತೆ ಆಕೆಯ ಅಮ್ಮ ಸೀತಾಳನ್ನೂ ಪ್ರೀತಿಸುತ್ತಿರೋ ರಾಮ್​ ತನ್ನ ಪ್ರೀತಿಯನ್ನು ತೋರಿಸಿಕೊಳ್ಳಲು ಸಾಧ್ಯವಾಗದೇ ಚಡಪಡಿಸುತ್ತಿದ್ದಾನೆ. ರಾಮ್​ ಸೀತಾಳಿಗೆ ಒಲಿದಿರುವ ಸುದ್ದಿ ಸೀರಿಯಲ್​ ವಿಲನ್​, ರಾಮನ ಚಿಕ್ಕಮ್ಮನಿಗೆ ತಿಳಿದಿದ್ದು, ಪ್ರೀತಿಯ ವಿಷಯಕ್ಕೆ ತಲೆ ಹಾಕದಂತೆ ಮಾಡಲು ಶತಾಯುಗತಾಯ ಪ್ರಯತ್ನ ಮಾಡುತ್ತಿದ್ದಾಳೆ. ಇತ್ತ ಸೀತಾ ಲಾಯರ್ ಒಬ್ಬನ​ ಮೋಸದಲ್ಲಿ ಬೀಳುವ ಸನ್ನಿವೇಶ ಸೃಷ್ಟಿಯಾಗಿದೆ.


ಕಳೆದ ಜುಲೈ 17ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ಗೆ ಇದೀಗ 100 ದಿನಗಳು ತುಂಬಿವೆ. ಈ ಸಂಭ್ರಮದ ನಿಮಿತ್ತ ಸೀತಾರಾಮ ಸೀರಿಯಲ್​ನ ಸೀತಾ-ರಾಮ ಪಾತ್ರಧಾರಿಗಳಾದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಹಾಗೂ ಪುಟಾಣಿ ಸಿಹಿ  ಪ್ರೇಕ್ಷಕರ ಜೊತೆ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಬಸು ಎನ್ನುವವರು, ರಾಮ್​ ಅವ್ರೇ ನಿಮಗೆ ಈಗ ಸೆಕೆಂಡ್​ ಲವ್​ಗೆ ಚಾನ್ಸ್​ ಸಿಕ್ಕಿದೆ. ಒಂದು ವೇಳೆ ಇದೂ ಮಿಸ್​ ಆಗಿಬಿಟ್ರೆ ಏನು ಮಾಡ್ತೀರಾ ಎಂದಾಗ, ರಾಮ್​- ಜೀವನ ಅಂದ್ರೆ ಹಾಗೇನೆ ಅಲ್ವಾ? ಒಂದು ಹೋದ್ರೆ ಇನ್ನೊಂದು ಬರತ್ತೆ. ಲೈಫ್​ನಲ್ಲಿ ಪಾಸಿಟಿವ್​ ಆಗಿರಬೇಕು ಅಷ್ಟೇ. ಸೀತಾ ಹೋದ್ರೆ ಏನಂತೆ? ಮತ್ತೊಂದು ಚಾನ್ಸ್​ ಸಿಗತ್ತೆ. ಸೀತಾ ಹೋದ್ರೆ ಏನಂತೆ ಗೀತಾ, ಮಮತಾ ಇದ್ದಾರಲ್ಲಾ ಎಂದು ತಮಾಷೆ ಮಾಡಿದ್ರು. ಒಟ್ಟಿನಲ್ಲಿ ಜೀವನದಲ್ಲಿ ಯಾವತ್ತೂ ನೆಗೆಟಿವ್​ ಆಗಿರಬಾರದು. ಸದಾ ಪಾಸಿಟಿವ್​ ಯೋಚನೆ ಮಾಡಬೇಕು ಎನ್ನೋದು ರಾಮ್​ ಮಾತು. 

ಗಂಡ ದಾರಿ ತಪ್ಪಿದ್ರೂ ಹೆಂಡ್ತಿನೇ ಕಾರಣನಾ? ಅಗತ್ಯಕ್ಕಿಂತ ಹೆಚ್ಚು ಕ್ಷಮಯಾಧರಿತ್ರಿ ಆದ್ರೆ ಹೀಗೆ ಆಗೋದು ಎಂದ ನೆಟ್ಟಿಗರು!

 ಪವನ್ ಎನ್ನುವವರು ಸೀತಾ ಅವ್ರೇ. ನೀವು ಸದಾ ಸ್ವತಂತ್ರ ಆಗಿರೋಕೆ ಇಷ್ಟ ಪಡುವವರು. ಯಾರ ಸಹಾಯವನ್ನೂ ಕೇಳಲ್ಲ. ಆದ್ರೆ ರಾಮ್​ ಅವರು ಲವ್​ ಮಾಡ್ತಿದ್ದಾರೆ ಅನ್ನೋದೂ ಅರ್ಥ ಆಗ್ತಿಲ್ವಲ್ಲಾ ನಿಮಗೆ? ಅವರ ಲವ್ ಅರ್ಥ ಮಾಡಿಕೊಳ್ಳೋದು ಯಾವಾಗ ಎನ್ನೋ ಪ್ರಶ್ನೆಗೆ, ಸೀತಾ, ಅದು ಅರ್ಥ ಆಗಲ್ಲ. ಯಾಕೆಂದ್ರೆ ನಾನು ಅವರನ್ನು ಒಳ್ಳೆಯ ಫ್ರೆಂಡ್​ ರೀತಿ ನೋಡ್ತಾ ಇದ್ದೇನೆ. ನನಗೆ ಸದ್ಯ ಸಿಹಿಯೇ ಪ್ರಪಂಚ. ಅವಳನ್ನು ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ರಾಮ್​ ಅವ್ರನ್ನ ಕಂಡ್ರೆ ಲವರ್​ ಅನಿಸಲ್ಲ, ನನಗೆ ಎಲ್ಲಾ ಕಾಲದಲ್ಲೂ ಹೆಲ್ಪ್​ ಮಾಡೋ ಸ್ನೇಹಿತ ಅಷ್ಟೇ ಅನ್ನಿಸ್ತಾರೆ. ಅದಕ್ಕೇ ಸೀತಾಗೆ ರಾಮ್​ ಲವ್​ ಅರ್ಥ ಆಗ್ತಿಲ್ಲ ಎಂಬ ಉತ್ತರ ಬಂತು. 
​ 
ಸೀತಾ ಯಾಕೆ ಅಷ್ಟು ಲಾಯರ್​ ಅನ್ನ ನಂಬ್ತಾಳೆ? ಅಷ್ಟೆಲ್ಲಾ ಹೆಲ್ಪ್​ ಮಾಡುತ್ತಿರೋ ರಾಮ್​ ಇರುವಾಗ ಲಾಯರ್​ ಒಳ್ಳಯವನಲ್ಲ ಅಂತ ಸೀತಾಗೆ ಅನ್ನಿಸ್ತಿಲ್ಲಾ ಯಾಕೆ ಎಂದು ಯಶಸ್ವಿನಿ ಅನ್ನೋರು ಕೇಳಿದ ಪ್ರಶ್ನೆಗೆ, ಸೀತಾ ಲಾಯರ್​ ಅನ್ನು ಸಂಪೂರ್ಣವಾಗಿ ನಂಬಲಿಲ್ಲ. ಆದ್ರೂ ಲಾಯರ್​ ಅಲ್ವಾ? ಏನೋ ಸಹಾಯ ಸಿಗುತ್ತದೆ ಎಂಬ ನಂಬಿಕೆ ಅಷ್ಟೆ ಎನ್ನುವ ಉತ್ತರ ಸೀತಾಳಿಂದ. ಆಫೀಸ್​ನಲ್ಲಿ ರಾಮ್​ ಮತ್ತು ಅಶೋಕ್​ ಅದಲು ಬದಲು ಮಾಡಿ ಹೇಗೋ ಸಮದೂಗಿಸ್ತಾ ಇದ್ದೀರಾ? ನಿಜ ಸೀತಾಗೆ ಗೊತ್ತಾದ್ರೆ ರಾಮ್​ ಅನ್ನು ಕಾಪಾಡೋರು ಯಾರು ಎಂದು ಪ್ರದೀಪ್​ ಎನ್ನುವವರು ಕೇಳಿದಾಗ ಸೀತಾ ಅಶೋಕ್​  ಕಾಪಾಡುತ್ತಾರೆ ಎಂದ್ರೆ ರಾಮ್​, ಹೊಸ ರೀತಿ ಐಡಿಯಾ ನೀವೇ ಇದ್ರೆ ಕೊಟ್​ಬಿಡಿ. ಅದನ್ನು ಇಂಪ್ಲಿಮೆಂಟ್​ ಮಾಡ್ತೀವಿ ಎಂದರು.
 

ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios