Asianet Suvarna News Asianet Suvarna News

Ramachari serial: ಪ್ರಾಜೆಕ್ಟ್ ಮಾಡಕ್ಕಾಗಲ್ಲ ಅಂದ ಚಾರು ಈಗ ಆಫೀಸ್ ಅಟೆಂಡರಾ?

ರಾಮಾಚಾರಿ ಸೀರಿಯಲ್‌ನಲ್ಲಿ ಸೊಕ್ಕಿನ ಹುಡುಗಿ ಚಾರು ಇದೀಗ ಆಫೀಸ್ ಅಟೆಂಡರ್‌ ಆಗಿದ್ದಾಳೆ. ಆಫೀಸ್‌ ಬಾಯ್‌ ಗೆ ಅವಮರ್ಯಾದೆ ಮಾಡಿದ ಅವಳಿಗೆ ಇದೀಗ ಆಫೀಸ್ ಅಟೆಂಡರ್ ಕೆಲಸ ಸಿಕ್ಕಿದೆ. ಈಗಲಾದರೂ ಚಾರುಗೆ ಇನ್ನೊಬ್ಬರ ಆತ್ಮಗೌರವದ ಅರಿವಾಗುತ್ತಾ?

Ramachari serial new twist Charulath to work as attender of office
Author
Bengaluru, First Published Jul 29, 2022, 3:23 PM IST

ರಾಮಾಚಾರಿ ಸೀರಿಯಲ್‌ನಲ್ಲಿ ಸೊಕ್ಕಿನ ಹುಡುಗಿ ಚಾರುಗೆ ಬುದ್ಧಿ ಕಲಿಸೋಕೆ ರಾಮಾಚಾರಿ ತೀರ್ಮಾನಿಸಿದ್ದಾನೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯೋ ಪ್ಲಾನ್ ಆತನದು. ಆ ಪ್ರಯತ್ನದಲ್ಲಿ ಸದ್ಯಕ್ಕೀಗ ಚಾರು ಆಫೀಸ್ ಅಟೆಂಡರ್ ಕೆಲಸ ಮಾಡುತ್ತಿದ್ದಾಳೆ. ಆಫೀಸ್‌ನವರಿಗೆಲ್ಲ ಕಾಫಿ ಸರ್ವ್ ಮಾಡ್ತಿದ್ದಾಳೆ. ಹಾಗೆ ಮಾಡುವಾಗ ಅವಳಿಗೆ ಬೇಕು ಬೇಕೆಂದೇ ರಾಮಾಚಾರಿ ಅವಮಾನ ಮಾಡ್ತಿದ್ದಾನೆ. ಚಾರು ಸಿಟ್ಟು ನೆಟ್ಟಿಗೇರುತ್ತೆ. ಇದೆಲ್ಲಿ ಹೋಗಿ ಮುಟ್ಟಬಹುದು ಅನ್ನೋ ಕುತೂಹಲದಲ್ಲಿದ್ದಾರೆ ಈ ಸೀರಿಯಲ್ ವೀಕ್ಷಕರು. ಏಕೆಂದರೆ ಚಾರಿ ಚಾರುಗೆ ಬುದ್ಧಿ ಕಲಿಸದೇ ಅವಳು ಒಳ್ಳೆಯ ವ್ಯಕ್ತಿ ಆಗಲು ಸಾಧ್ಯವಿಲ್ಲ. ಈವರೆಗೆ ಏನೇನೆಲ್ಲ ಮಾಡಿದ್ರೂ ಅವಳು ತನ್ನ ಮೋಸದಾಟ ಬಿಡ್ತಿಲ್ಲ. ಆದರೆ ಕೊನಗೆ ಅವಳಿಗೆ ಅದರಲ್ಲಿ ಸೋಲೇ ಆಗುತ್ತೆ. ರಾಮಾಚಾರಿಯ ವ್ಯಕ್ತಿತ್ವ ಇದರಿಂದ ಬೆಳಗುತ್ತಾ ಹೋಗ್ತಿದೆ. ಇನ್ನೊಂದೆಡೆ ಚಾರು ಚಾರಿ ಮದುವೆ ಆಗುತ್ತೆ ಅಂದ್ಕೊಂಡಿದ್ದ ವೀಕ್ಷಕರಿಗೆ ಬೇಸರ ಆಗಿದೆ. ಜನ ಇಷ್ಟು ಬೇಗ ಈ ಮದುವೆ ನಿರೀಕ್ಷೆಯಲ್ಲೂ ಇರಲಿಲ್ಲ ಬಿಡಿ. ಆದರೆ ಈಗ ರಾಮಾಚಾರಿ ಅಪ್ಪನ ಪ್ರಾಣ ಉಳಿಸಲು ಅವರು ಮಾತು ಕೊಟ್ಟಿರೋ ದೀಪನನ್ನೇ ಮದುವೆ ಆಗೋದಾಗಿ ವಚನ ಕೊಟ್ಟಿದ್ದಾನೆ. ಹಾಗಿದ್ರೆ ಚಾರು ಚಾರಿ ಮದುವೆ ಆಗಲ್ವಾ? ಈ ಕಗ್ಗಂಟು ಹೇಗೆ ನಿವಾರಣೆಯಾಗುತ್ತೆ ಅನ್ನೋದು ಇನ್ನೊಂದು ಪ್ರಶ್ನೆ.

ಶ್ರೀಮಂತ ಉದ್ಯಮಿ ಜೈ ಶಂಕರ್ ಮಗಳು ಚಾರುಲತಾಗೆ ಈಗ ತಂದೆ ಕೊಟ್ಟಿರೋ ಟಾಸ್ಕ್ ರಾಮಾಚಾರಿ ಹತ್ರ ಪರ್ಫಾಮೆನ್ಸ್ ಸರ್ಟಿಫಿಕೇಟ್‌ ತಗೊಂದು ಬರ್ಬೇಕು ಅನ್ನೋದು. ಆದರೆ ರಾಮಾಚಾರಿ ಕೆಲಸ ಕಲಿಯದೇ, ವ್ಯಕ್ತಿತ್ವದಲ್ಲಿ ಸುಧಾರಣೆ ಆಗದೇ ಈ ಸರ್ಟಿಫಿಕೇಟ್ ಕೊಡೋದಕ್ಕೆ ರೆಡಿ ಇಲ್ಲ. ಅವನು ಟೀಮ್ ಲೀಡರ್ ಆಗಿದ್ದಾನೆ. ಹಾಗಾಗಿ ಚಾರುಗೆ ಕೆಲವು ಪ್ರಾಜೆಕ್ಟ್ ಮಾಡೋದಕ್ಕೆ ಹೇಳಿದ್ದಾನೆ. ಆದರೆ ಚಾರುಗೆ ಇದನ್ನೆಲ್ಲ ಮಾಡೋದಕ್ಕೆ ಆಗಲ್ಲ. ತನಗದು ಗೊತ್ತಿಲ್ಲ ಅಂತಾಳೆ. ಆದರೆ ಗೊತ್ತಿಲ್ಲದ್ದನ್ನು ಕಲಿಯೋದಕ್ಕೆ ಅವಳು ರೆಡಿ ಇಲ್ಲ. ಬದಲಿಗೆ ಈ ಕೆಲಸದಿಂದ ತಪ್ಪಿಸಿಕೊಂಡು ಬೇರೆನಾದ್ರೂ ಪ್ಲಾನ್ ಮಾಡಿ ಮೋಸದಿಂದ ಸರ್ಟಿಫಿಕೇಟ್ ಪಡೆಯಬೇಕು ಅನ್ನೋದು ಅವಳ ಪ್ಲಾನ್. ಆದರೆ ರಾಮಾಚಾರಿ ಎಷ್ಟು ಸ್ಟ್ರಾಂಗ್ ಅಂದ್ರೆ ಅವಳ ಮೋಸದಾಟಕ್ಕೆ ತಕ್ಕ ಶಾಸ್ತಿ ಮಾಡಿದ್ದಾನೆ. ಇದೀಗ ಆಫೀಸ್ ಬಾಯ್ ಮೇಲೆ ಅವಳು ತೋರಿರುವ ದರ್ಪಕ್ಕೆ ಅವಳಿಗೆ ಆಫೀಸ್ ಪ್ಯೂನ್ ಕೆಲಸ ಮಾಡಲು ಹೇಳಿದ್ದಾನೆ.

 

ಆಫೀಸ್ ಬಾಯ್ ಸಾವ್ಕಾರ್ ಮಾಡುವ ನೆಲ ಒರೆಸುವ ಕೆಲಸದಿಂದ ಜೆರಾಕ್ಸ್ ಮಾಡೋವರೆಗೂ ಎಲ್ಲ ಕೆಲಸ ಚಾರು ಮಾಡಬೇಕು ಅಂದಿದ್ದಾನೆ. ವಿಧಿ ಇಲ್ಲದೇ ಚಾರು ಒಪ್ಪಿದ್ದಾಳೆ. ಆದರೆ ಅವಳ ದರ್ಪಕ್ಕೆ ಅಲ್ಲೂ ಆಟ ಆಡಿಸ್ತಾನೆ. ಅವಳಂತೆ ದರ್ಪ ತೋರಿಸಿದ್ದಾನೆ. ಕಾಫಿ ತರಲು ಹೇಳಿ ಕಾಯಿಸಿದ್ದಾನೆ. ಆಮೇಲೆ ಕಾಫಿ ತಣ್ಣಗಾಯ್ತು ಅಂತ ಅದನ್ನು ಮತ್ತೆ ಬಿಸಿ ಮಾಡಿ ತರಲು ಹೇಳಿದ್ದಾನೆ. ಆಫೀಸಿನಲ್ಲಿರುವವರೂ ಅವಳ ದರ್ಪಕ್ಕೆ ಶಾಸ್ತಿ ಮಾಡೋಕೆ ಹೊರಟಿದ್ದಾರೆ. ಸರ್ಟಿಫಿಕೇಟ್ ಆಸೆಗೆ ಬೇರೇನೋ ತೋಚದೇ ಆಫೀಸ್ ಸಹಾಯಕಿಯಾಗಿ ಬೆಳಗ್ಗಿನಿಂದ ರಾತ್ರಿವರೆಗೂ ಚಾರು ಕೆಲಸ ಮಾಡಿದ್ದಾಳೆ.

Ramachari serial: ರಾಮಾಚಾರಿ ಮದುವೆ ಠುಸ್ ಪಟಾಕಿ, ವೀಕ್ಷಕರನ್ನು ಫೂಲ್ ಮಾಡಿದ್ರಾ?

ರಾತ್ರಿ ಮನೆಗೆ ಹೋಗೋ ಮೊದಲು ಪರ್ಫಾಮೆನ್ಸ್ ಸರ್ಟಿಫಿಕೇಟ್ ಕೊಡುವಂತೆ ಹೇಳಿದ್ದಾಳೆ. ಆಗ ರಾಮಾಚಾರಿ ಅವಳ ಮೂರು ತಪ್ಪುಗಳನ್ನು ಸರಿ ಮಾಡಿದರೆ ಆ ಸರ್ಟಿಫಿಕೇಟ್ ಕೊಡೋದಾಗಿ ಹೇಳಿದ್ದಾನೆ. ಹಿಂದೆ ಅವಳು ದರ್ಪದಿಂದ ಹಿಂದೆ ಚಪ್ಪಲಿ ಹೊಲಿಯೋ ಬಡ ಹೆಂಗಸಿನ ಬಳಿ ದರ್ಪ ತೋರಿಸಿದ್ದನ್ನು ಬೊಟ್ಟು ಮಾಡಿದ್ದಾನೆ. ಗೆಳತಿ ಫುಟ್‌ಪಾತಿನಲ್ಲಿ ಚಪ್ಪಲಿ ಹೊಲಿಯೋಳ ಹತ್ತಿರ ಚಪ್ಪಲಿ ಹೊಲಿಸುತ್ತಿದ್ದಾಗ ಚೇಂಜ್ ಇಲ್ಲದೇ ಚಾರು ಬಳಿ ಚೇಂಜ್ ಕೇಳಿದ್ದಾಳೆ. ಆದರೆ ಚಾರು ಆ ಹೆಣ್ಣುಮಗಳ ಮುಖದ ಮೇಲೆ ೧೦೦ ರೂ. ಎಸೆದಿದ್ದಾಳೆ. ಈ ಘಟನೆಯನ್ನು ರಾಮಾಚಾರಿ ಹೇಳಿದಾಗ ಅದನ್ನು ಚಾರು ಸಮರ್ಥಿಸಿಕೊಳ್ಳಲು ನೋಡುತ್ತಾಳೆ. ರಾಮಾಚಾರಿ ಮತ್ತೆ ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಗೌರವದ ಮಾತುಗಳನ್ನಾಡಿದ್ದಾನೆ. ಜೊತೆಗೆ ಈ ತಪ್ಪನ್ನು ಸರಿಪಡಿಸಲು ಹೇಳಿದ್ದಾನೆ. ಇನ್ನುಳಿದ ಎರಡು ತಪ್ಪುಗಳ್ಯಾವುವು? ಅದನ್ನು ಸರಿ ಮಾಡಿದ್ರೆ ಚಾರುಗೆ ಸರ್ಟಿಫಿಕೇಟ್ ಸಿಗುತ್ತಾ? ಇದನ್ನೆಲ್ಲ ಕಾದು ನೋಡಬೇಕು.

Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!

ಮೌನ ಗುಡ್ಡೆಮನೆ ಸೊಕ್ಕಿನ ಹುಡುಗಿ ಚಾರು ಪಾತ್ರದಲ್ಲಿ ಮಿಂಚಿದರೆ, ರಿತ್ವಿಕ್ ಕೃಪಾಕರ್ ರಾಮಾಚಾರಿ ಪಾತ್ರದಲ್ಲಿ ಉತ್ತಮ ಅಭಿನಯ ಮೆರೆಯುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮ್‌ ಜೀ ನಿರ್ದೇಶನದ ಸೀರಿಯಲ್‌ ಇದು.

Follow Us:
Download App:
  • android
  • ios