Asianet Suvarna News Asianet Suvarna News

ವಿಜಯ್ ಮಲ್ಯ ಕರೆಸಿ, ಅಷ್ಟು ಸಾಲ ಮಾಡೋದು ತಮಾಷೆಯಲ್ಲ, ತುಂಬಾ ದೊಡ್ಡ ಸಾಧನೆ ಅದು; ಕಾಲೆಳೆದ ನೆಟ್ಟಿಗರು

ವಿಜಯ್ ಮಲ್ಯ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸಿ, ಅಷ್ಟು ಸಾಲ ಮಾಡೋದು ತಮಾಷೆಯಲ್ಲ, ತುಂಬಾ ದೊಡ್ಡ ಸಾಧನೆ ಅದು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

Netizens ask bring Vijayala Malya to weekend with ramesh seasion 5 sgk
Author
First Published Apr 4, 2023, 5:33 PM IST

ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗಿದ್ದು ಗಾಗಲೇ ಇಬ್ಬರು ಅತಿಥಿಗಳು ವೀಕೆಂಡ್ ಕುರ್ಚಿ ಏರಿದ್ದಾರೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿದ್ದರು. ಎರಡನೇ ಅತಿಥಿ ಖ್ಯಾತ ಡಾನ್ಸರ್, ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ ಕಾಣಿಸಿಕೊಂಡಿದ್ದರು. 3ನೇ ವಾರದ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ. ಈ ವಾರದ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಅವರನ್ನು ನೋಡಿ ಪ್ರೇಕ್ಷಕರು ಪುಲ್ ಖುಷ್ ಆಗಿದ್ದಾರೆ. 

ಈ ನಡುವೆ ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಯಾರನೆಲ್ಲಾ ಕರೆಸಬಹುದು, ಯಾರನ್ನ ಕರೆಸಬೇಕು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ವೀಕೆಂಡ್ ಕುರ್ಚಿ ಮೇಲೆ ಯಾರಿದ್ದರೆ ಚಂದ ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಗೆಸ್ಟ್ ವಿಚಾರಕ್ಕೆ ಸಾಕಷ್ಟು ಅಸಮಾಧಾನ ಮೂಡಿತ್ತು. ಡಾ.ಬ್ರೋ ಕರೆಸಬೇಕು ಎಂದು ಅನೇಕರು ಒತ್ತಾಯ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ಸಿಟ್ಟಾಪಟ್ಟೆ ಟ್ರೋಲ್ ಆಗಿದ್ದರು. ಬಳಿಕ ರಮ್ಯಾ ಅವರ ಸಂಚಿಕೆ ಕೂಡ ಟ್ರೋಲ್ ಆಗಿತ್ತು. ಕನ್ನಡದ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿ ಹೆಚ್ಚಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಪುಣ್ಯಾತ್ಮ, ಕನ್ನಡಿಗರ ಹೆಮ್ಮೆ, ಸೂಪರ್ ಗೆಸ್ಟ್: ವೀಕೆಂಡ್ ಕುರ್ಚಿಯಲ್ಲಿ ಡಾ. ಸಿ ಎನ್ ಮಂಜುನಾಥ್

ಇದೀಗ ನೆಟ್ಟಿಗರೊಬ್ಬರು ಮತ್ತೊಂದು ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ವಿಜಯ್ ಮಲ್ಯ ಅವರನ್ನು ಕರೆಸಿ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ಝಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಂದಿನ ಗೆಸ್ಟ್ ಯಾರು ಎನ್ನುವ ಪೋಸ್ಟರ್ ಶೇರ್ ಮಾಡಿದೆ. ಆ ಪೋಸ್ಟರ್‌ಗೆ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ವಿಜಯ್ ಮಲ್ಯ ನಾ ಕರ್ಸಿ 9ಸಾವಿರ ಕೋಟಿ ಸಲ ಮಾಡೋದು ತಮಾಷೆ ಅಲ್ಲ ಅದು ತುಂಬಾ ದೊಡ್ಡ ಸಾಧನೆ' ಎಂದು ಹೇಳಿದ್ದಾರೆ. ಈ ಕಾಮೆಂಟ್ ಈಗ ವೈರಲ್ ಆಗುತ್ತಿದ್ದು ಅನೆಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಏನ್ ತಲೆ ಗುರು ಎಂದು ಹೇಳುತ್ತಿದ್ದಾರೆ. 

ಮಗನ ಸಾವು ನೆನೆದು ಭಾವುಕರಾದ ಪ್ರಭುದೇವ; ಈ ಬಗ್ಗೆ ಮಾತಾಡಲು ನಿರಾಕರಿಸಿದ ಡಾನ್ಸರ್

3ನೇ ಅತಿಥಿ ಡಾ.ಸಿ ಎನ್ ಮಂಜುನಾಥ್ 

ಈ ಬಾರಿಯ ವಿಶೇಷ ಅತಿಥಿಯಾಗಿ ಡಾ.ಸಿ ಎನ್ ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರೇಕ್ಷಕರು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಡಾ.ಸಿ ಎನ್ ಮಂಜುನಾಥ್ ಅವರ ಸಂಚಿಕೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಜೀ ಕನ್ನಡ ವಾಹಿನಿ ತನ್ನ ಸಾಮಾಜಿಕ ಜಾಲತಾಣದ ಅಧಿಕೃತ ಪೇಜ್‌ನಲ್ಲಿ ಗೆಸ್ಟ್ ಯಾರೆಂದು ಗೆಸ್ ಮಾಡಿ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸರಿಯಾಗಿ ಕಾಮೆಂಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಾ.ಸಿ ಎನ್ ಮಂಜುನಾಥ್ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Follow Us:
Download App:
  • android
  • ios