Asianet Suvarna News Asianet Suvarna News

ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗೆ ಹಂಸಲೇಖ ತೀರ್ಪುಗಾರ!

ಕಲರ್ಸ್‌ ಕನ್ನಡದಲ್ಲಿ ವಾಹಿನಿಯಲ್ಲಿ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಪ್ರಸಾರ; ಹಂಸಲೇಖ ಅವರ ಜೊತೆ ರಾಜೇಶ್‌ ಕೃಷ್ಣನ್‌ ಮತ್ತೊಬ್ಬ ಜಡ್ಜ್‌.

Kannada lyricist Hamsalekha to judge Ede Thumbi Haaduvenu show vcs
Author
Bangalore, First Published Jul 31, 2021, 2:18 PM IST

ಮೇರು ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟಿದ್ದ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಕಾರ್ಯಕ್ರಮ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮತ್ತೆ ಹೊಸ ರೂಪದಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಹಂಸಲೇಖ, ಗಾಯಕ ರಾಜೇಶ್‌ ಕೃಷ್ಣನ್‌ ತೀರ್ಪುಗಾರರಾಗಿರುತ್ತಾರೆ.

ಗಾಯನ ಸಂಬಂಧಿಸಿದ ರಿಯಾಲಿಟಿ ಶೋಗಳಲ್ಲೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ದೊಡ್ಡ ಹೆಸರಿದೆ. ಆ ಕಾರ್ಯಕ್ರಮ ಪ್ರಸಾರವಾಗಿ ಹಲವಾರು ವರ್ಷಗಳೇ ಕಳೆದುಹೋದರೂ ಆ ಹೆಸರು ಮಾತ್ರ ಇನ್ನೂ ಬಹಳಷ್ಟುಮಂದಿಯ ಹೃದಯದಲ್ಲಿದೆ. ಈ ಕಾರಣದಿಂದಲೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನಿರೀಕ್ಷೆ ಹುಟ್ಟಿಸಿದೆ. ಅಲ್ಲದೇ ಹಂಸಲೇಖ ಮತ್ತು ರಾಜೇಶ್‌ ಕೃಷ್ಣನ್‌ ತೀರ್ಪುಗಾರರಾಗಿ ಆಗಮಿಸುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟುಹೆಚ್ಚಿದೆ.

ಅರವಿಂದ್ ಕಳಪೆ ಆಗಬೇಕು; ದಿವ್ಯಾ ಉರುಡುಗ ಅನ್ಯಾಯದ ಬಗ್ಗೆ ಪ್ರಶಾಂತ್ ಮಾತು!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಮುಗಿದ ಕೂಡಲೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

Follow Us:
Download App:
  • android
  • ios