Asianet Suvarna News Asianet Suvarna News

ಅರವಿಂದ್ ಕಳಪೆ ಆಗಬೇಕು; ದಿವ್ಯಾ ಉರುಡುಗ ಅನ್ಯಾಯದ ಬಗ್ಗೆ ಪ್ರಶಾಂತ್ ಮಾತು!

ಸೀಸನ್ 8ರಲ್ಲಿ ಕೊನೇ ಬಾರಿ ಕಳಪೆ ಪಟ್ಟ ಪಡೆದ ಸ್ಪರ್ಧಿ ದಿವ್ಯಾ ಸುರೇಶ್. ಕ್ಯಾಪ್ಟನ್ ಅಪ್ರಾಮಾಣಿಕತೆ ಬಿಚ್ಚಿಟ್ಟ ಪ್ರಶಾಂತ್.

Colors Kannada BBK8 Prashanth Sambari talks about Divya Uruduga injustice vcs
Author
Bangalore, First Published Jul 31, 2021, 10:55 AM IST

ಬಿಗ್ ಬಾಸ್ ಸೀಸನ್ 8 ಫಿನಾಲೆ ದಿನಗಳಿಗೆ ಹತ್ತಿರ ಬರುತ್ತಿದೆ. ಈ ಸೀಸನ್‌ನ ಕೊನೆಯ ಕಳಪೆ ಸ್ಪರ್ಧಿ ಆಯ್ಕೆ ಈ ವಾರ ನಡೆಯಿತು. ವಾರ ವಾರವೂ ಕಳಪೆ ಆಯ್ಕೆ ಮಾಡುತ್ತಿದ್ದ ಸ್ಪರ್ಧಿಗಳು ಈ ವಾರ ಯಾರೂ ಬೇಡ ಎಂದು ಒಮ್ಮತದಿಂದ ಒಪ್ಪಿ ಕೊಂಡರು. ಆದರೆ ಒಬ್ಬರ ಹೆಸರು ಹೇಳಲೇ ಬೇಕು ಎಂಬ ಕಾರಣದಿಂದ ಎಲ್ಲರೂ ದಿವ್ಯಾ ಸುರೇಶ್ ಹೆಸರು ತೆಗೆದುಕೊಂಡರು.

ಇಡೀ ವಾರ ಸರಳವಾದ ಟಾಸ್ಕ್‌ಗಳಿದ್ದವು. ಮುಂದಿನ ವಾರ ಕ್ಯಾಪ್ಟನ್ ಆಯ್ಕೆ ಇಲ್ಲದ ಕಾರಣ ಪ್ರತಿಯೊಬ್ಬರೂ ನಾರ್ಮಲ್ ಆಗಿ ಟಾಸ್ಕ್ ಸ್ವೀಕರಿಸಿದ್ದರು. ಆದರೆ ದಿವ್ಯಾ ಸುರೇಶ್ ನೀಡಲಾಗಿದ್ದ ಮೂರು ಟಾಸ್ಕ್‌ನಲ್ಲಿ ಸೋತ ಕಾರಣ ಕಳಪೆ ಎಂದು ಹೇಳಿ ಕೊಂಡರು, ಅರವಿಂದ್ ಕೂಡ ಮೂರು ಟಾಸ್ಕ್‌ಗಳಲ್ಲಿ ಸೋತಿದ್ದಾರೆ. ಆದರೆ ಕಳಪೆಗೆ ಹೆಸರು ತೆಗೆಯಲಿಲ್ಲ. ನಾಲ್ಕು ವೋಟ್ ದಿವ್ಯಾ ಸುರೇಶ್‌ಗೆ ಹಾಗೂ ಮೂರು ವೋಟ್ ಅರವಿಂದ್, ಎರಡು ವೋಟ್ ಶುಭಾ ಪೂಂಜಾಗೆ ಹಾಕಲಾಗಿತ್ತು. ಕ್ಯಾಪ್ಟನ್ ದಿವ್ಯಾ ಉರುಡುಗ ಬೇಕಂತಲೇ ಅರವಿಂದ್‌ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂಬುವುದು ಸದಸ್ಯರ ಮಾತು.

ದಿವ್ಯಾ ಸುರೇಶ್‌ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!

ಕಣ್ಣೀರು ಹಾಕುತ್ತಲೇ ಜೈಲಿಗೆ ಹೋದ ದಿವ್ಯಾ ಸುರೇಶ್ 'ತಮಗೆ ಕಳಪೆ ಪಟ್ಟ ಕೊಡದಿರಲು ಇನ್ನು ಕೆಲವು ಕಾರಣಗಳಿದ್ದವು. ನಿನಗೂ ನನಗಿಂತ ಕಳಪೆ ಆಗಿ ಆಡುವವರು ಕಣ್ಣಿಗೆ ಬಿದ್ದಿರುತ್ತಾರೆ,' ಎಂದು ಹೇಳಿದ್ದರು. 'ನಾನು ಆಟ ಆಡುವುವವರನ್ನು ಮಾತ್ರ ಗಮನಕ್ಕೆ ತೆಗೆದುಕೊಂಡು, ಕಳಪೆಗೆ ನಾಮಿನೇಟ್ ಮಾಡುವೆ' ಎಂದು ಮಂಜು ಪ್ರತಿಕ್ರಿಯೆ ನೀಡುತ್ತಾರೆ.

'ದಿವ್ಯಾ ನೀನು ಯಾವುದೇ ಕಾರಣಕ್ಕೂ ಕಳಪೆಗೆ ಹೋಗಬಾರದು ಎಂದು ಇಡೀ ದಿನ ಮೌನದಿಂದ ಇದ್ದು ಪ್ರಾರ್ಥಿಸಿದೆ. ನನ್ನ ಪ್ರಕಾರ ಅರವಿಂದ್‌ ಕಳಪೆಗೆ ಹೋಗ ಬೇಕಿತ್ತು.  ದಿವ್ಯಾ ಉರುಡುಗ ಕೂಡ ಪ್ರಾಮಾಣಿಕವಾಗಿದ್ದರೆ, ಅರವಿಂದ್ ಅವರನ್ನೇ ಆಯ್ಕೆ ಮಾಡಬೇಕಿತ್ತು. ಅವಳು ಏನು ಮಾಡುತ್ತಾಳೆ ಅಂತ ಕಾಯುತ್ತಿದ್ದೆ. ಅರವಿಂದ್ ಎಲ್ಲಿ ಜೈಲಿಗೆ ಹೋಗುತ್ತಾರೋ ಅಂತ ದಿವ್ಯಾ ಉರುಡುಗ ಮುಖ ಸಣ್ಣ ಆಗಿತ್ತು. ಮಂಜು ಪಾವಗಡ  ಹೆಸರನ್ನು ಹೇಳೋಲ್ಲ ಅಂತ ನಾನು ನಂಬಿದ್ದೆ. ಆದರೆ  ಅರವಿಂದ್‌ಗೆ ದಿವ್ಯಾ ಉರುಡುಗನೇ ಜಗತ್ತು. ನಾನು ಈ ವಾರ ಸುದೀಪ್ ಸರ್ ಬಳಿ ಹೇಳುವೆ,'ಎಂದು ಜೈಲಿನ ಬಳಿ ಪ್ರಶಾಂತ್ ಸಂಬರಗಿ ಕುಳಿತು ಮಾತನಾಡುತ್ತಾರೆ.

Follow Us:
Download App:
  • android
  • ios