Asianet Suvarna News Asianet Suvarna News

ಮಗನಿಂದಲೇ ಬಯಲಾಗುತ್ತಾ ಅಪ್ಪನ ಬಂಡವಾಳ? ಅಡಕತ್ತರಿಯಲ್ಲಿ ತಾಂಡವ್​, ಸಿಕ್ಕಿಬೀಳ್ತಾಳಾ ಸುಂದ್ರಿ?

ಮನೆಯಲ್ಲಿ ಕಳ್ಳತನ ಮಾಡಿದ ಸುಂದ್ರಿ ಯಾರ ಕೈಗೂ ಸಿಗದಂತೆ ಮಾಡುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಆದರೆ ಮಗನ ಕೈಯಿಂದ ಸಿಕ್ಕಿ ಬೀಳ್ತಾನಾ?
 

Is Tandav is caught by his son Gunda in Sundris case in Bhagyalakshmi serial suc
Author
First Published Jan 31, 2024, 5:13 PM IST

ಭಾಗ್ಯಳಿಂದ ದೂರವಾಗಿ ಶ್ರೇಷ್ಠಾಳ ಜೊತೆ ನೆಲೆಸಿರುವ ತಾಂಡವ್​, ಸ್ವಂತ  ಅಪ್ಪ-ಅಮ್ಮಂದಿರನ್ನು ಬಿಟ್ಟು ನಕಲಿ ಅಪ್ಪ-ಅಮ್ಮನ ಹಿಂದೆ ಹೋಗಿದ್ದಾನೆ. ಶ್ರೇಷ್ಠಾಳ ಮನೆಯವರಿಗೆ ಹಾಗೂ ತಾನು ನೆಲೆಸಿರುವ ಮನೆಯವರಿಗೆ ಇದೇ ನಕಲಿ ಅಪ್ಪ-ಅಮ್ಮನೇ ಅಸಲಿ ಎಂದು ಹೇಳಿದ್ದಾನೆ. ಇನ್ನು ಈ ನಕಲಿಗಳೋ ಪಕ್ಕಾ ಕಳ್ಳರು. ಖುದ್ದು ಭಾಗ್ಯಳ ಮನೆಯಲ್ಲಿ ಕದ್ದಿದ್ದಾಳೆ ನಕಲಿ ಅಮ್ಮ ಸುಂದ್ರಿ. ಆದರೆ ಇದೀಗ ಅವಳು ಸಿಕ್ಕಿಬಿದ್ದಿದ್ದು, ತಾಂಡವ್​ ಮಗ ಗುಂಡಾ ಆಕೆಯನ್ನು ಕೂಡಿ ಹಾಕಿದ್ದಾನೆ. ಎಲ್ಲಿ ತನ್ನ ಬಂಡವಾಳ ಬಯಲಾಗುತ್ತೋ ಎಂದು ಮಗನನ್ನು ಆಚೆಗೆ ಕಳುಹಿಸಿ ಸುಂದ್ರಿಯನ್ನು ಕೊಠಡಿಯಿಂದ ಹೊರಕ್ಕೆ ಕಳುಹಿಸಿದ್ದಾನೆ ತಾಂಡವ್​.

ಈ ಕುತಂತ್ರ ಸದ್ಯ ಯಾರಿಗೂ ಗೊತ್ತಿಲ್ಲ. ಆದರೆ ಗುಂಡ ಬಿಡಬೇಕಲ್ಲಾ? ನಾನೇ ಖುದ್ದು ಆ ಕಳ್ಳಿಯನ್ನು ನೋಡಿದ್ದೇನೆ ಎನ್ನುತ್ತಿದ್ದರೆ ತಾಂಡವ್​ ಅದೆಲ್ಲಾ ಸುಳ್ಳು ಎಂದಿದ್ದಾನೆ. ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೇನು ಸಿಕ್ಕಿಬೀಳುವ ಹಂತದಲ್ಲಿದ್ದಾನೆ ತಾಂಡವ್​. ಸುಂದ್ರಿಯೇನೋ ತಪ್ಪಿಸಿಕೊಂಡಿದ್ದಾಳೆ. ಆದರೆ ಗುಂಡ ಮಾತ್ರ ಅಪ್ಪನ ಮೇಲೆ ಸಂಶಯ ತೋರಿದ್ದಾನೆ. ಸದಾ ಸುಳ್ಳು ಹೇಳುವ ಅಪ್ಪ ಎಂದಿದ್ದಾನೆ. ಕುಸುಮಾ, ಭಾಗ್ಯ ಸೇರಿದಂತೆ ಎಲ್ಲರಿಗೂ ಯಾರು ಸರಿ, ಯಾರು ತಪ್ಪು ಎನ್ನುವುದು ತಿಳಿಯುತ್ತಿಲ್ಲ. ಅಷ್ಟಕ್ಕೂ ಕಳ್ಳಿಯನ್ನು ತಾಂಡವ್​ ಕಳುಹಿಸಿಕೊಡುವುದು ಏಕೆ ಎನ್ನುವುದು ತಿಳಿಯದೇ ಇರುವ ಪ್ರಶ್ನೆ ಅವರಿಗೆಲ್ಲ. ಅವರಿಗೇನು ಗೊತ್ತು, ಇದೇ ಕಳ್ಳಿಯನ್ನು ತಾಂಡವ್​ ತನ್ನ ಅಮ್ಮ ಎಂದಿದ್ದಾನೆ ಎಂದು.

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಒಟ್ಟಿನಲ್ಲಿ ಈಗ ತಾಂಡವ್​ಗೆ ಫಜೀತಿ ಶುರುವಾಗಿದೆ. ಇದನ್ನು ನೋಡಿ ಕುಸುಮಾಗೆ ಸಂದೇಹ ಬಂದಿದೆ. ಆ ಕಳ್ಳಿ ಹೇಗೆ ಇದ್ದಳು ಎಂದು ಕೇಳಿದಾಗ, ಗುಂಡ ಅವಳು ಹೀಗಿಗೆ ಇದ್ದಳು ಎಂದಿದ್ದಾನೆ. ಆಗ ಕುಸುಮಾ ಯಾರಿಗೋ ಕರೆ ಮಾಡಿ, ಒಬ್ಬಳ ಫೋಟೋ ಕಳುಹಿಸುವಂತೆ ಕೇಳಿದ್ದಾಳೆ. ಸುಂದ್ರಿ ಸಿಕ್ಕಿಬಿದ್ದರೆ ತಾಂಡವ್​ ಸಿಕ್ಕಿಬಿದ್ದಂತೆಯೇ. ಪ್ರತಿಬಾರಿಯೂ ಹೇಗ್ಹೇಗೋ ತಪ್ಪಿಸಿಕೊಳ್ತಿದ್ದ ತಾಂಡವ್​ ಈ ಬಾರಿಯೂ ತಪ್ಪಿಸಿಕೊಳ್ತಾನಾ ಅಥವಾ ಸಿಕ್ಕಿಬೀಳ್ತಾನಾ ಎನ್ನುವುದೇ ಪ್ರಶ್ನೆ.

ಇಷ್ಟೆಲ್ಲಾ ಆಗಿದ್ದರೂ ತಾಂಡವ್​, ಶ್ರೇಷ್ಠಾಳ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾನೆ ಎನ್ನುವುದು ಇದುವರೆಗೆ ಮನೆಯವರಿಗೆ ತಿಳಿದಿಲ್ಲ. ಶ್ರೇಷ್ಠಾ ತನ್ನ ಮದುವೆ ಫಿಕ್ಸ್​ ಆಗಿದೆ ಎಂದಿದ್ದಳೇ ವಿನಾ, ಹುಡುಗ ಇದೇ ತಾಂಡವ್ ಎಂದು ಹೇಳಿರಲಿಲ್ಲ. ಇದೇ ಕಾರಣಕ್ಕೆ ಇವರಿಬ್ಬರ ಸಂಬಂಧದ ಬಗ್ಗೆ ಮನೆಯಲ್ಲಿ ಯಾರಿಗೂ ಅರಿವಿಲ್ಲ.ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಬಿಗ್​ಬಾಸ್​ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?

Follow Us:
Download App:
  • android
  • ios