Asianet Suvarna News Asianet Suvarna News

ಧಾರಾವಾಹಿ ಅಂದ್ರೆ ಸುಮ್ನೇನಾ? ಭಾಗ್ಯಳ ನೋಡಿ 10ನೇ ಕ್ಲಾಸ್​ ಪರೀಕ್ಷೆ ಬರೆದ್ರು ಈ ಅಮ್ಮಾ...

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನಿಂದ ಪ್ರೇರೇಪಣೆಗೊಂಡು ಮಗನ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ ಈ ಮಹಿಳೆ, ಅವರು ಏನಂದ್ರು ಕೇಳಿ... 
 

Inspired by Bhagyalakshmi serial woman wrote the SSLC exam with her son suc
Author
First Published Apr 8, 2024, 11:56 AM IST

ಧಾರಾವಾಹಿಗಳು ಇಂದು ಅದೆಷ್ಟೋ ಮಂದಿಗೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಇಂದು ಧಾರಾವಾಹಿಗಳು ಈ ಪರಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಒಂದೇ ರೀತಿಯ ಕಥೆಗಳನ್ನು ವಿಭಿನ್ನ ರೀತಿಯಲ್ಲಿ ಹೇಳಿದರೂ, ಅದೇ ನಾಯಕಿಯ ಮುಗ್ಧತೆ, ಅದೇ ಲೇಡಿ ವಿಲನ್​, ನಾದಿನಿ, ಅತ್ತೆ, ಚಿಕ್ಕಮ್ಮನೇ ವಿಲನ್​ಗಳು ಏನೇ ಇದ್ದರೂ ಬಹುತೇಕರಿಗೆ ಸೀರಿಯಲ್​ಗಳು ಬೇಕೇ ಬೇಕು. ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚು ಎನ್ನುವ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ, ಭಾಷೆ ಯಾವುದೇ ಇರಲಿ ಮಹಿಳೆಯರಿಗೇ ಪ್ರಾಧಾನ್ಯತೆ ಹೆಚ್ಚು. ಸೀರಿಯಲ್​ಗಳಲ್ಲಿ ಪುರುಷರು ನಾಮ್​ ಕೇ ವಾಸ್ತೆ ಎನ್ನುವ ಹಾಗೆ ಇರುವುದೂ ಎಲ್ಲರಿಗೂ ಗೊತ್ತಿರುವ ಸತ್ಯವೇ. ಮಹಿಳಾ ಪ್ರಧಾನ ಸಿನಿಮಾಗಳು ಬೆರಳೆಣಿಕೆಯಷ್ಟು ಎಂದು ಸಿನಿತಾರೆಯರು ಕೊರಗುವುದು ಒಂದೆಡೆಯಾದರೆ, ಸೀರಿಯಲ್​ ಮಟ್ಟಿಗೆ ಹೇಳುವುದಾದರೆ, ಕೊರಗುವ ಸರದಿ ಪುರುಷರದ್ದು!

ಅದೇನೇ ಇದ್ದರೂ, ಸೀರಿಯಲ್​ಗಳು ಬಹುಬೇಗ ಪ್ರಭಾವ ಬೀರುವುದು ಉಂಟು. ಅಲ್ಲಿ ಕಾಣುವ ಪಾತ್ರಗಳಲ್ಲಿ ತಮ್ಮನ್ನು ತಾವು ಆಹ್ವಾನೆ ಮಾಡಿಕೊಂಡು, ಆ ಪಾತ್ರಗಳೇ ತಾವು ಎಂಬಂತೆ ವೀಕ್ಷಕರು ಅದನ್ನು ಆಸ್ವಾದಿಸುವುದು ಇದೆ. ಇದೇ ಕಾರಣಕ್ಕೆ ಅಲ್ಲಿನ ಪಾತ್ರಗಳು ಜನರಿಗೆ ಇಷ್ಟವಾಗಿ ಬಿಡುತ್ತವೆ. ಸಿನಿಮಾಗಳಲ್ಲಿ ಲಾಂಗು, ಮಚ್ಚು, ಕೊಲೆ, ರಕ್ತಪಾತ... ಇಂಥ ಕ್ರೌರ್ಯ ಪಾತ್ರಗಳಲ್ಲಿ ನಾಯಕರೇ ಹೆಚ್ಚು ವಿಜೃಂಭಿಸುವ ಕಾರಣದಿಂದ ಎಷ್ಟೋ ಮಂದಿ ಯುವಕರು ಈ ನಾಯಕರಿಗೆ ಪ್ರೇರೇಪಿತರಾಗಿ ನಿಜ ಜೀವನದಲ್ಲಿಯೂ ಅಪರಾಧ ಜಗತ್ತಿಗೆ ಹೋಗುವುದು ಉಂಟು. ಇದು ಸಿನಿಮಾದ ವಿಷಯವಾದರೆ, ಸೀರಿಯಲ್​ಗಳು ಹೆಚ್ಚಾಗಿ ಮಹಿಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅದು ಒಳ್ಳೆಯದ್ದೂ ಆಗಿರಬಹುದು, ಕೆಟ್ಟದ್ದೂ ಆಗಿರಬಹುದು.

ಭಲೇ ಗೌತಮ್​.. ನಿಜ ಜೀವನದಲ್ಲೂ ಇಂಥ ಗಂಡ ಇರೋಕೆ ಸಾಧ್ಯನಾ ಕೇಳ್ತಿದ್ದಾರೆ ಮಹಿಳಾ ಫ್ಯಾನ್ಸ್​!

ಆದರೆ ಇಲ್ಲೊಂದು ಘಟನೆಯಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ನಾಯಕಿ ಭಾಗ್ಯ ಮಗಳ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿರುವುದನ್ನು ನೋಡಿ ಪ್ರೇರೇಪಿತರಾಗಿರುವ ಮಹಿಳೆಯೊಬ್ಬರು ಮಗನ ಜೊತೆಗೆ ಪರೀಕ್ಷೆ ಬರೆದಿದ್ದಾರೆ. ಯುಗಾದಿ ವಿಶೇಷ ಸಂಚಿಕೆಯಲ್ಲಿ ಇವರನ್ನು ವೇದಿಕೆ ಮೇಲೆ ಕರೆದು ಅವರ ಅನುಭವವನ್ನು ಹೇಳಲಾಗಿದೆ. ತಾವು ಭಾಗ್ಯಲಕ್ಷ್ಮಿ ಸೀರಿಯಲ್​ ನೋಡಿ ಹೀಗೆ ಮಾಡಿರುವುದಾಗಿ ಹೇಳಿದ್ದಾರೆ, ಮಗ ಕೂಡ ನನ್ನ ಅಮ್ಮ ನನ್ನೊಟ್ಟಿಗೆ ಪರೀಕ್ಷೆ ಬರೆಯುತ್ತಿರುವುದಕ್ಕೆ ತುಂಬಾ ಖುಷಿಯಾಯಿತು ಎಂದಿದ್ದಾನೆ. ಪರೀಕ್ಷೆಯಲ್ಲಿ ತೇರ್ಗಡೆಯಾಗುವವರೆಗೂ ಪ್ರಯತ್ನ ಬಿಡುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ. 

 ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಕೂಡ ಇದೇ ರೀತಿ ಆಗಿತ್ತು. ಗಂಡ ಇಲ್ಲದವರು, ಗಂಡ ಬಿಟ್ಟು ಹೋದವರು, ಹೆಣ್ಣು ಮಕ್ಕಳ ಜವಾಬ್ದಾರಿಯಿಂದ ಕಂಗೆಟ್ಟುಹೋಗಿದ್ದ ಮಹಿಳೆಯರು ಪುಟ್ಟಕ್ಕನಿಂದ ಪ್ರೇರೇಪಣೆಗೊಂಡು ಸ್ವಂತ ಜೀವನ ನಡೆಸಲು ಶುರು ಮಾಡಿದ್ದರು. ಸೀರಿಯಲ್​ ತಮಗೆ ಪ್ರೇರಣೆ ನೀಡಿತು ಎಂದು ವೇದಿಕೆಯ ಮೇಲೆ ಹೇಳಿದ್ದರು. ಸದಾ ಕುತಂತ್ರ ಹೆಣೆಯುವುದು, ವಿಲನ್​ಗಳ ಅಬ್ಬರ, ಚಿಕ್ಕಮ್ಮ-ಅತ್ತೆಯಂದಿರ ಕಿರುಕುಳ, ಹೆಣ್ಣು ಎಂದರೆ ಅಗತ್ಯಕ್ಕಿಂತ ಹೆಚ್ಚು ಸಹನೆ ತಾಳಬೇಕು ಕೊನೆಯವರೆಗೂ ಅವಳು ಮುಗ್ಧಳಂತೆಯೇ ಇರಬೇಕು... ಇತ್ಯಾದಿ ಇತ್ಯಾದಿ ಪಾತ್ರಗಳ ಹೊರತಾಗಿ ಭಾಗ್ಯ, ಪುಟ್ಟಕ್ಕನಂಥ ಪ್ರೇರಣೆಯಿರುವ ಸೀರಿಯಲ್​ಗಳು ಹೆಚ್ಚೆಚ್ಚು ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ತುಕಾಲಿ ಸಂತೋಷ್​ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡೇ ಬಿಟ್ರು!

Follow Us:
Download App:
  • android
  • ios