Asianet Suvarna News Asianet Suvarna News

ಭಲೇ ಗೌತಮ್​.. ನಿಜ ಜೀವನದಲ್ಲೂ ಇಂಥ ಗಂಡ ಇರೋಕೆ ಸಾಧ್ಯನಾ ಕೇಳ್ತಿದ್ದಾರೆ ಮಹಿಳಾ ಫ್ಯಾನ್ಸ್​!

ಪತ್ನಿ ಭೂಮಿಕಾಳಿಗಾಗಿ ಗೌತಮ್​ ಮಾಡುತ್ತಿರುವ ಈ ತ್ಯಾಗಗಳನ್ನು ನೋಡಿರುವ ಅಮೃತಧಾರೆ ಅಭಿಮಾನಿಗಳು,  ನಿಜ ಜೀವನದಲ್ಲಿಯೂ ಇಂಥ ಗಂಡಂದಿರು ಇರಲು ಸಾಧ್ಯವೇ ಕೇಳ್ತಿದ್ದಾರೆ.
 

Gowtham doing uruluseve and other riturals for Bhoomika in Amrutadhare fans reacts suc
Author
First Published Apr 8, 2024, 11:34 AM IST

ಗೌತಮ್​ ಈಗ ಬದಲಾಗಿದ್ದಾನೆ. ಪ್ರೀತಿ-ಪ್ರೇಮದ ಅಂದ್ರೇನು ಎಂಬ ಅರಿವೇ ಇಲ್ಲದ ಈ ಬಿಜಿನೆಸ್​ಮೆನ್​ ಈಗ ಪತ್ನಿ ಭೂಮಿಕಾ ಸಮೀಪವಾಗಿದ್ದಾನೆ. ಐ ಲವ್​ ಯೂ ಎಂದು ಇದುವರೆಗೂ ಪತ್ನಿ ಎದುರು ಹೇಳದಿದ್ದರೂ, ಈಗ ಆಕೆಯೇ ಎಲ್ಲಾ ಆತನಿಗೆ. ಪತ್ನಿಯ ಬಳಿ ಪ್ರೀತಿ ಹೇಳಿಕೊಳ್ಳಲು ಒದ್ದಾಡುತ್ತಿದ್ದ ಗೌತಮ್​ಗೆ ಗೆಳೆಯ ಆನಂದ್​ ಸಹಾಯ ಮಾಡಿ, ಪ್ರೀತಿಯ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದೆಲ್ಲಾ ಟ್ಯೂಷನ್​ ಕೊಟ್ಟಿದ್ದ. ಅದರಂತೆ ಗುಲಾಬಿ ಹೂವು ಹಿಡಿದು ಪತ್ನಿಗೆ ಹೇಗೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಗೌತಮ್​ ಪ್ರಾಕ್ಟೀಸ್​ ಕೂಡ ಮಾಡಿದ್ದ. ಆದರೆ ಆದದ್ದೇ ಬೇರೆ. ಗೌತಮ್​ ಮತ್ತು ಭೂಮಿಕಾ ಒಂದಾಗಿ ಅವರಿಗೆ ಮಕ್ಕಳು ಹುಟ್ಟಿದರೆ ಮನೆಯ ಆಸ್ತಿಯೆಲ್ಲಾ ಅವರ ಹೆಸರಿಗೇ ಆಗುತ್ತದೆ ಎನ್ನುವ ಚಿಂತೆಯಲ್ಲಿದ್ದಾಳೆ ಗೌತಮ್​ ಚಿಕ್ಕಮ್ಮ ಶಕುಂತಲಾ. ತಾನೇ ಹೆತ್ತ ಮಕ್ಕಳು, ಮೊಮ್ಮಕ್ಕಳಿಗೇ  ಎಲ್ಲಾ ಆಸ್ತಿ ಹೋಗಬೇಕು ಎನ್ನುವುದು ಅವಳ ಆಸೆ. ಇದೇ ಕಾರಣಕ್ಕೆ ಹಾವು-ಮುಂಗುಸಿಯಂತಿದ್ದ ಗೌತಮ್​ ಮತ್ತು ಭೂಮಿಕಾರನ್ನು ಮದುವೆ ಮಾಡಿಸಿದ್ದಳು. ಆದರೆ ಆದದ್ದೇ ಬೇರೆ. ಇಬ್ಬರಲ್ಲಿಯೂ ಪ್ರೀತಿ ಮೊಳಗಿದೆ.

ಇನ್ನೇನು ಇಬ್ಬರೂ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

6ನೇ ಕ್ಲಾಸ್​​ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್​ ಶೆಟ್ಟಿಯ ಅಪರೂಪದ ಫೋಟೋ ವೈರಲ್​

ಇದೇ ಕಾರಣಕ್ಕೆ ಏನೇನೋ ನೆಪ ಮಾಡಿಕೊಂಡು ಪತ್ನಿಗಾಗಿ ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ. ಗೆಳೆಯ ಆನಂದ್​ಗೂ ಏನೂ ಹೇಳದ ಸ್ಥಿತಿ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಈ ವಿಷಯ ಭೂಮಿಕಾಗೆ ಬೇಗ ತಿಳಿಯಬೇಕು, ಆಕೆ ತುಂಬಾ ಜಾಣೆ. ಅವಳು ಖಂಡಿತವಾಗಿಯೂ ಇದರ ರಹಸ್ಯ ಭೇದಿಸುತ್ತಾಳೆ ಎಂದೆಲ್ಲಾ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದು ಸೀರಿಯಲ್​.  ಇಷ್ಟು ಬೇಗ ಸತ್ಯ ಗೊತ್ತಾಗಲು ಸಾಧ್ಯವಿಲ್ಲ.

ಅದೇನೇ ಇದ್ದರೂ, ಪತ್ನಿಗಾಗಿ ಪತಿ ಗೌತಮ್​ನ ಉರುಳುಸೇವೆ, ನೆಲದಲ್ಲಿ ಅನ್ನ ಊಟ ಮಾಡುವುದನ್ನು ನೋಡಿದ ಅಮೃತಧಾರೆ ಫ್ಯಾನ್ಸ್​, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ನಿಜ ಜೀವನದಲ್ಲಿಯೂ ಇಂಥ ಗಂಡನನ್ನು ನೋಡಲು ಸಾಧ್ಯವೆ ಎಂದು ಪ್ರಶ್ನಿಸುತ್ತಿದ್ದಾರೆ. ಪತಿ,ಮಕ್ಕಳು ಮತ್ತು ಕುಟುಂಬಕ್ಕಾಗಿ ಹೆಣ್ಣು ಮಕ್ಕಳು ಈ ರೀತಿ ಕಠಿಣ ವ್ರತ, ಪೂಜೆ-ಪುನಸ್ಕಾರ, ಉರುಳು ಸೇವೆ, ಹರಕೆ ಎಲ್ಲಾ ಮಾಡುವುದು ಮಾಮೂಲು. ಆದರೆ ಕೇವಲ ಪತ್ನಿಯಾಗಿ ಇಂಥದ್ದನ್ನು ಮಾಡುವ ಗಂಡಸರು ಎಷ್ಟು ಮಂದಿ ನೋಡಲು ಸಿಗುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಸೀರಿಯಲ್​ಗಳು ಎಷ್ಟೋ ಮಂದಿಗೆ ಪ್ರೇರಣೆ ನೀಡುತ್ತದೆ ನಿಜ, ಈ ಧಾರಾವಾಹಿ ನೋಡುವ ಮೂಲಕವಾದರೂ ಒಂದಷ್ಟು ಗಂಡಸರು ತಮ್ಮ ಪತ್ನಿಗಾಗಿ ಈ ರೀತಿಯ ಪ್ರೀತಿಯ ಧಾರೆ ಹರಿಸಿದರೆ ಎಷ್ಟು ಚೆಂದ ಎನ್ನುತ್ತಿದ್ದಾರೆ. 

ತುಕಾಲಿ ಸಂತೋಷ್​ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡೇ ಬಿಟ್ರು!


Follow Us:
Download App:
  • android
  • ios