Asianet Suvarna News Asianet Suvarna News

ರಾಮಾಚಾರಿಯ ಪ್ರೀತಿಯ ಅತ್ತಿಗೆಮ್ಮ ಇನ್ನಿಲ್ಲ, ಸಂಕಟ ತಡೆಯಲಾಗದೇ ಕುಸಿದುಬಿದ್ದ ರಾಮಾಚಾರಿ!

ಕಲರ್ಸ್ ಕನ್ನಡದಲ್ಲಿ ಸದ್ಯಕ್ಕೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಸೀರಿಯಲ್‌ ರಾಮಾಚಾರಿ. ಈ ಸೀರಿಯಲ್‌ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ರಾಮಾಚಾರಿ ಅತ್ತಿಗೆ ಅಪರ್ಣ ಶಾಸ್ತ್ರಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾಳೆ. ಅತ್ತಿಗೆ ಅಗಲಿಕೆ ಸಹಿಸಲಾಗದೇ ರಾಮಾಚಾರಿ ಕುಸಿದುಬಿದ್ದಿದ್ದಾನೆ. ಇಂಡೈರೆಕ್ಟ್ ಆಗಿ ಅತ್ತಿಗೆ ಆಪರೇಶನ್‌ಗೆ ಅಡ್ಡಗಾಲಾಗಿದ್ದ ಚಾರು ಇದೇ ಟೈಮಲ್ಲೇ ರಾಮಾಚಾರಿಗೆ ಪ್ರೊಪೋಸ್ ಮಾಡ್ತಿದ್ದಾಳೆ.

 

In Ramachari Serial Ramachari's sister in law no more
Author
First Published Nov 16, 2022, 2:12 PM IST

ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ರಾತ್ರಿ ಒಂಭತ್ತಕ್ಕೆ ಪ್ರಸಾರವಾಗುತ್ತೆ. ಸದ್ಯಕ್ಕೀಗ ಕಲರ್ಸ್ ಕನ್ನಡದ ವೀಕ್ಷಕರನ್ನು ಸೆರೆಹಿಡಿದಿಟ್ಟಿರೋ ಸೀರಿಯಲ್‌ ಇದು. ರಾಮಾಚಾರಿ ಮತ್ತು ಚಾರುಲತಾ ನಡುವಿನ ಗಲಾಟೆ, ಜಗಳು, ಅವರಿಬ್ಬರಿಗೂ ಎದುರಾಗೋ ಸನ್ನಿವೇಶಗಳು, ಚಾರು ತನಗೆಷ್ಟು ಕಷ್ಟಕೊಟ್ಟರೂ ತನ್ನ ಜೀವದ ಹಂಗು ತೊರೆದು ಅವಳನ್ನು ರಕ್ಷಿಸುವ ಚಾರಿ.. ಇಂಥಾ ಅಂಶಗಳನ್ನು ಜನ ಎನ್‌ಜಾಯ್ ಮಾಡ್ತಿದ್ದಾರೆ. ಆದರೆ ಈಗ ಈ ಸೀರಿಯಲ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ಘಟಿಸಿದೆ. ರಾಮಾಚಾರಿ ಅಮ್ಮನಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಆಪ್ತ ಗೆಳತಿಯಂಥಾ ಅತ್ತಿಗೆಯನ್ನು ಕಳೆದುಕೊಂಡಿದ್ದಾನೆ. ಅತ್ತಿಗೆ ತನ್ನ ಮನೆಗೆ ಬಂದ ಮೇಲಿಂದ ತನ್ನ ಹೆಚ್ಚಿನೆಲ್ಲ ಡಿಸಿಶನ್‌ಗಳನ್ನು ಆತ ಆಕೆಯ ಜೊತೆಗೆ ಚರ್ಚೆ ಮಾಡುತ್ತಿದ್ದ. ತನ್ನೆಲ್ಲ ನೋವು, ಕಷ್ಟಗಳನ್ನು ಆಕೆ ಮುಂದೆ ಹೇಳಿಕೊಳ್ಳುತ್ತಿದ್ದ. ಅತ್ತಿಗೆಮ್ಮಾ ಅಂತಲೇ ಪ್ರೀತಿಯಿಂದ ಕರೆಯುತ್ತಾ ಅವಳ ಹಿಂದಿಂದೆ ಮಗುವಿನಂತೆ ಸುತ್ತುತ್ತಿದ್ದ. ಇದೀಗ ಅವಳನ್ನೇ ಕಳೆದುಕೊಂಡು ಅಕ್ಷರಶಃ ತಬ್ಬಲಿಯಾದಂತೆ ಕಾಣುತ್ತಿದ್ದಾನೆ ರಾಮಾಚಾರಿ. ಆಕೆಯ ಸಾವು ಆತನಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಕ್ಯಾನ್ಸರ್ ಅನ್ನು ಗುಟ್ಟಾಗಿಟ್ಟಿದ್ದ ಅಪರ್ಣ
ತನಗೆ ಕ್ಯಾನ್ಯರ್ ಇದೆ ಅಂತ ಗೊತ್ತಾದಾಗ ರಾಮಾಚಾರಿ ಅಣ್ಣನ ಹೆಂಡತಿ ಅಪರ್ಣ ಇದನ್ನು ಗುಟ್ಟಾಗಿಡಲು ಪ್ರಯತ್ನ ಪಟ್ಟಿದ್ದಳು. ಮನೆಯರಿಗೆ ತಿಳಿಯದ ಹಾಗೆ ರಹಸ್ಯವಾಗಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಅತ್ತಿಗೆ ಒಬ್ಬಳೇ ಆಸ್ಪತ್ರೆಗೆ ಹೋಗೋದನ್ನು ರಾಮಾಚಾರಿ ನೋಡಿದ್ದ. ಆಮೇಲೆ ಈ ರಹಸ್ಯವನ್ನ ಭೇದಿಸಿದಾಗ ಆಕೆಗಿದ್ದ ಕ್ಯಾನ್ಸರ್ ವಿಚಾರ ತಿಳಿದಿತ್ತು. ತನ್ನ ಈ ಸಮಸ್ಯೆ ಮನೆಯವರಿಗೆ ಹೊರೆಯಾಗಬಾರದು ಅಂತ ಮನೆ ಬಿಟ್ಟು ಹೋಗಲು ರಾಮಾಚಾರಿ ಅಣ್ಣನನ್ನೂ ಹೊರಡಿಸಿದ್ದಳು ಅಪರ್ಣ. ಆದರೆ ಕೊನೆಗೂ ಆಕೆಯ ರಹಸ್ಯವನ್ನು ರಾಮಾಚಾರಿ ಬಯಲು ಮಾಡಿದ್ದ.

Jayaram Karthik: ಅಶ್ವಿನಿ ನಕ್ಷತ್ರದ ಜೆಕೆ ಈಗ ಹೇಗಾಗಿದ್ದಾರೆ ನೋಡಿ!

ಆಪರೇಶನ್‌ಗೆ ಅಡ್ಡಗಾಲು ಹಾಕಿದ್ದ ಚಾರು
ಅತ್ತಿಗೆ ಆಪರೇಶನ್‌ಗೆ ಅಂತ ರಾಮಾಚಾರಿ ಎಲ್ಲಿಂದಲೋ ದುಡ್ಡು ಹೊಂಚಿದ್ದ. ಆದರೆ ಅದನ್ನು ಚಾರು ಅಮ್ಮ ಮಾನ್ಯತಾ ಪೊಲೀಸರ ಪಾಲಾಗೋ ಹಾಗೆ ಮಾಡಿದ್ದಳು. ಆ ಬಳಿಕ ಹೊಸ ಪ್ರಾಜೆಕ್ಟ್‌ನಲ್ಲಿ ಹಗಲಿರುಳೂ ದುಡಿದು ಆ ಪ್ರಾಜೆಕ್ಟ್ ಕಂಪ್ಲೀಟ್ ಮಾಡಿ ಆ ದುಡ್ಡಿಂದ ಅತ್ತಿಗೆ ಆಪರೇಶನ್ ಮಾಡಿಸುತ್ತೇನೆ ಎಂದು ರಾಮಾಚಾರಿ ಅಂದುಕೊಂಡಿದ್ದ. ಆದರೆ ಆತನ ಪ್ರಾಜೆಕ್ಟ್‌ನ ಕದ್ದು ಆತನ ಸಿಸ್ಟಮ್‌ನಿಂದ ಆ ಪ್ರಾಜೆಕ್ಟ್‌ನ ಡಿಲೀಟ್ ಮಾಡಿ ತಾನೇ ಸಬ್‌ಮಿಟ್ ಮಾಡಿದ್ದಳು ಚಾರು. ಅಷ್ಟೇ ಅಲ್ಲ, ಇದರಿಂದ ಬಂದ ಹಣವನ್ನೂ ತಾನೇ ಒಳಗೆ ಹಾಕಿಕೊಂಡಿದ್ದಳು. ಆದರೆ ಚಾರುಗೆ ರಾಮಾಚಾರಿ ಅತ್ತಿಗೆಗಿದ್ದ ಕ್ಯಾನ್ಸರ್ ಬಗ್ಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೆ ಇಂಡೈರೆಕ್ಟ್ ಆಗಿ ಅವಳೇ ಈ ಆಪರೇಶನ್‌ಗೆ ಅಡ್ಡಗಾಲಾಗಿದ್ದಳು.

ನೋವಿನಲ್ಲಿ ರಾಮಾಚಾರಿ
ಅತ್ತಿಗೆ ತೀರಿಕೊಂಡ ಸುದ್ದಿಯನ್ನು ರಾಮಾಚಾರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ತನ್ನ ಪಾಲಿಗೆ ತಾಯಿಗಿಂತ ಹೆಚ್ಚಾಗಿದ್ದ ಅತ್ತಿಗೆಮ್ಮಾ ಅಗಲಿಕೆಯಿಂದ ಆತನಿಗೆ ತಬ್ಬಲಿತನ ಕಾಡುತ್ತಿದೆ. ಆತ ಬಿಕ್ಕಿ ಬಿಕ್ಕಿ ಅಳುತ್ತಾ ಕುಸಿದುಬಿದ್ದಿದ್ದಾನೆ. ಅತ್ತಿಗೆಯ ಸಾವಿನ ನೋವು ಒಂದುಕಡೆ ಆದರೆ ಆಕೆಯನ್ನು ಕೊನೆಗೂ ಉಳಿಸಿಕೊಳ್ಳಲಾಗಲಿಲ್ಲವಲ್ಲ ಅನ್ನೋ ಪಾಪಪ್ರಜ್ಞೆ ಇನ್ನೊಂದು ಕಡೆ.

 

ಚಾರುವಿಗೆ ಸತ್ಯ ತಿಳಿಯುತ್ತಾ?
ರಾಮಾಚಾರಿಗೆ ತನ್ನ ಪ್ರೀತಿ ಹೇಳಿಕೊಳ್ಳಲು ಬಯಸಿರುವ ಚಾರುಗೆ ರಾಮಾಚಾರಯ ಸದ್ಯದ ಸ್ಥಿತಿ ತಿಳಿದಿಲ್ಲ. ಆಕೆ ಎಲ್ಲವನ್ನೂ ಬೇರೆ ಥರ ಅರ್ಥ ಮಾಡಿಕೊಂಡಿದ್ದಾಳೆ. ಇದೀಗ ತಾನೇ ರಾಮಾಚಾರಿ ಅತ್ತಿಗೆ ಸಾವಿಗೆ (Death) ಕಾರಣ ಅನ್ನೋದು ಚಾರುಗೆ ತಿಳಿಯುತ್ತಾ? ಅತ್ತಿಗೆ ಸಾವಿಗೆ ಪರೋಕ್ಷ (Indirect)ಕಾರಣವಾದ ಚಾರುವಿನ ಪ್ರೀತಿ(Love)ಯನ್ನು ರಾಮಾಚಾರಿ ಒಪ್ಪಿಕೊಳ್ತಾನಾ ಅನ್ನೋದು ಮುಂದಿನ ಕುತೂಹಲ.

ಮೇಕಿಂಗ್ ವೀಡಿಯೋ (Making Video) ವೈರಲ್
ಇನ್ನೊಂದೆಡೆ ರಾಮಾಚಾರಿಯ ಅಪರ್ಣ ಸಾವಿನ ದೃಶ್ಯದ ಚಿತ್ರೀಕರಣದ ಫೋಟೋ(Photo)ಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡುತ್ತಿದ್ದು ವೈರಲ್(viral) ಆಗಿವೆ.

Kannadathi: ಭುವಿ ಕೈಗೆ ಸೂತ್ರ ಕೊಟ್ಟು ಪಾತ್ರ ಮುಗಿಸಿದ ಅಮ್ಮಮ್ಮ: ಇನ್ಮುಂದೆ ಸೀರಿಯಲ್ ನೋಡೋಲ್ಲವೆಂದ ವೀಕ್ಷಕರು!

 

 

Follow Us:
Download App:
  • android
  • ios