Asianet Suvarna News Asianet Suvarna News

ಆಕ್ಸಿಡೆಂಟ್ ಮಾಡಿ ಆಸ್ಪತ್ರೆ ಸೇರಿಸಿಲ್ಲ ಸುಳ್ಳು ಹೇಳಿದೆ ಕ್ಷಮಿಸಿ ಬಿಡಿ: ಸತ್ಯ ಒಪ್ಪಿಕೊಂಡ ಚಂದ್ರಪ್ರಭ ವಿರುದ್ಧ ಜನರು ಆಕ್ರೋಶ

ರಸ್ತೆ ಅಪಘಾತದಲ್ಲಿ ಏನಾಯ್ತು ಎಂದು ಸತ್ಯ ಬಿಚ್ಚಿಟ್ಟ ಚಂದ್ರಪ್ರಭ. ಸುಳ್ಳು ಹೇಳಿದ್ದು ಯಾಕೆಂದು ಪ್ರಶ್ನೆ ಮಾಡಿದ ನೆಟ್ಟಿಗರು...
 

Colors Kannada Gicchi Giligili Chandra prabha talks reality about car accident vcs
Author
First Published Sep 8, 2023, 5:02 PM IST

ಮಹಾ ಭಾರತ ಮತ್ತು ಗಿಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಪರಿಚಯವಾಗಿರುವ ಚಂದ್ರಪ್ರಭ ಸಕಲೇಶಪುರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ರಸ್ತೆ ಅಪಘಾತವಾಗಿದೆ. ವೇಗದಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ ಚಂದ್ರಪ್ರಭ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ ಅಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು. ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದ್ವಿಚಕ್ರ ವಾಹನ ಸವಾರರ ಮಾಲ್ತೇಶ್‌ ಸ್ಥಿತಿ ಗಂಭೀರವಾಗಿ ಎಂದು ಕುಟುಂಬಸ್ಥರು ಆತಂಕದಲ್ಲಿದ್ದಾರೆ.

ಈ ಹಿಂದೆ ಚಿಕಿತ್ಸೆ ಕೊಡಿಸಿರುವೆ ಹಾಗೆ ಹೋಗೆ ಎಂದು ಮಾಧ್ಯಮಗಳಲ್ಲಿ ಮಾತನಾಡಿದ ಚಂದ್ರಪ್ರಭ ಈಗ ತಾವು ಮಾಡಿರುವುದು ಒಪ್ಪಿಕೊಂಡಿದ್ದಾರೆ.'ಅವತ್ತು ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿದ್ದೆ ಆ ಸಮಯದಲ್ಲಿ ಈ ಅಪಘಾತ ಆಗಿರುವುದು. ಯಾರೋ ಹೇಳಿದರು ಅಂತ ಆ ವ್ಯಕ್ತಿ ಎಣ್ಣೆ ಕುಡಿದಿದ್ದರು ಎಂದು ಹೇಳಿಬಿಟ್ಟಿ. ತುಂಬಾ ಒಳ್ಳೆ ವ್ಯಕ್ತಿ ಬಗ್ಗೆ ನಾನು ಈ ರೀತಿ ಹೇಳಿಕೆ ನೀಡಿರುವುದು ತುಂಬಾ ತಪ್ಪು. ಇದರ ಬಗ್ಗೆ ಕ್ಷಮೆ ಕೇಳುತ್ತೀನಿ ಹಾಗೆ ಹೇಳಬಾರದಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆಯಿತ್ತು ನನಗೂ ಒಂದು ರೀತಿ ಭಯ ಇತ್ತು ಅಲ್ಲದೆ ಒಂದು ದಲಿತ ಕಾರ್ಯಕ್ರಮವಿತ್ತು ಅಲ್ಲಿಗೆ ಹೋಗಬೇಕಿತ್ತು ಅದಿಕ್ಕೆ ಅಲ್ಲಿಂದ ಹೊರಟು ಬಿಟ್ಟೆ. ನಾನು ಮಾಡಿರುವುದಕ್ಕೆ ಕ್ಷಮೆ ಕೇಳುತ್ತೀನಿ ಈಗ ಕಾನೂನು ಪ್ರಕಾರ ಏನು ನಡೆಯಬೇಕು ಅದನ್ನು ಫಾಲೋ ಮಾಡುತ್ತೀನಿ. ಈಗ ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬದ ಜೊತೆ ಮಾತನಾಡುತ್ತೀನಿ ಅಲ್ಲದೆ ವೈದ್ಯರನ್ನು ಭೇಟಿ ಮಾಡಿ ಅವರಿಗೆ ಏನೇನು ಆಗಬೇಕು ಎಂದು ಕೇಳುತ್ತೀನಿ' ಎಂದು ಚಂದ್ರಪ್ರಭ ಮಾತನಾಡಿದ್ದಾರೆ.

ಸುಮ್ಮನೆ ಹೇಳ್ಬಾರ್ದು ವಂಶಿಕಾ ಪಾದ ಮುಟ್ಟಿ ನಮಸ್ಕರಿಸಬೇಕು ಅನ್ಸುತ್ತೆ: ಚಂದ್ರಪ್ರಭ

'ಮಾಧ್ಯಮಗಳಲ್ಲಿ ನಾನು ಸುಳ್ಳು ಹೇಳಿರುವುದಕ್ಕೆ ಕ್ಷಮೆ ಇರಲಿ. ಆಕ್ಸಿಡೆಂಟ್ ಆಗಿರುವ ವ್ಯಕ್ತಿ ಕೂಡ ದಲಿತ ಸಮುದಾಯದವರು ಬಡವರು ನಾನು ಕೂಡ ದಲಿತ..ನನ್ನ ತಂದೆ ಸತ್ತಿ 11 ವರ್ಷ ಆಗಿದೆ ನನ್ನ ತಾಯಿ ನನ್ನನ್ನು ಕೂಲಿ ಮಾಡಿ ಸಾಗಿದ್ದಾರೆ. ನನ್ನ ಸಾಮರ್ಥ್ಯ ಮೀರಿ ಸಹಾಯ ಮಾಡುತ್ತೀನಿ. ಈಗ ಆಸ್ಪತ್ರೆಗೆ ಹೋಗಿ ಮಾತನಾಡುತ್ತೀನಿ. ಘಟನೆ ನಡೆದಿರುವು ಸೆಪ್ಟೆಂಬರ್ 4ರಂದು ನಾನು ಇನ್ನೂ ಭೇಟಿ ನೀಡಿಲ್ಲ ದಯವಿಟ್ಟು ಕ್ಷಮೆ ಇರಲಿ' ಎಂದು ಚಂದ್ರಪ್ರಭ ಹೇಳಿದ್ದಾರೆ. 

ಈ ಹಿಂದೆ ಏನೆಂದು ಸುಳ್ಳು ಹೇಳಿದ್ದರು:

'ಸಕಲೇಶಪುರದಿಂದ ನಾನು ಚಿತ್ರೀಕರಣ ಮುಗಿಸಿಕೊಂಡು ಬರುತ್ತಿದ್ದೆ ನನ್ನ ಕಾರಿನಲ್ಲಿ ಸುಮಾರು 30 ಸ್ಪೀಡ್‌ನಲ್ಲಿ ಹೋಗುತ್ತಿದ್ದೆ ಮಾಲ್ತೇಶ್‌ ಅನ್ನೋ ವ್ಯಕ್ತಿ ಕುಡಿದಿದ್ದರು ಅನಿಸುತ್ತದೆ  ನನ್ನ ಕಾರಿನ ಲೆಫ್ಟ್‌ ಸೈಡ್‌ಗೆ ಅವರು ಗಾಡಿಯಲ್ಲಿ ಗುದ್ದಿದ್ದರು ಆಗ ನಾನು ಏನಾಯ್ತು ಯಾವ ಗಾಡಿ ಅಂತ ಕಾರು ನಿಲ್ಲಿಸಿ ನೋಡಿದೆ. ಅವರು ಬಿದ್ದಿದ್ದರು ಅಂತ ಆಟೋ ಮಾಡಿಕೊಂಡು ಅಲ್ಲಿದ್ದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ನನ್ನ ಕಾರ್ಯಕ್ರಮಕ್ಕೆ ತಡವಾಗುತ್ತದೆ ಎಂದು ನಾನು ಪೊಲೀಸರಿಗೆ ತಿಳಿಸಿ ಹೊರಟೆ. ಗಾಡಿಗೆ ಗುದ್ದಿದ ತಕ್ಷಣ ನಾನು ನನ್ನ ಸ್ನೇಹಿತರೇ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿ ಬಂದಿರುವೆ. ಪೊಲೀಸರಿಗೆ ತಿಳಿಸಿದಾಗ ಚಂದ್ರಪ್ರಭ ಅವರೆ ನೀವು ಆಗಾಗ ವಿಚಾರಣೆಗೆ ಬರಬೇಕು ಎಂದು ಹೇಳಿದರು ಶೂಟಿಂಗ್ ಇರುವ ಕಾರಣ ಎರಡು ದಿನ ಬಿಟ್ಟು ಬರುವುದಾಗಿ ನಾನು ಹೇಳಿದೆ. ಆ ವ್ಯಕ್ತಿ ಕುಡಿದಿದ್ದ ಕಾರಣ ಎಚ್ಚರಿಕೆ ಇರಲಿಲ್ಲ ಅನಿಸುತ್ತದೆ ಆದರೆ ಯಾವ ದೊಡ್ಡ ಗಾಯ ಆಗಿರಲಿಲ್ಲ ಸಣ್ಣ ಪುಟ್ಟಗಾಯಗಳಿದ್ದವು. ಆಗ ಯಾವ ರೀತಿ ಪೊಲೀಸ್ ಕಂಪ್ಲೇಂಟ್ ಆಗಿರಲಿಲ್ಲ, ಘಟನೆ ನಡೆದಾಗ ಅಲ್ಲಿದ್ದ ವ್ಯಕ್ತಿಗಳು ನಿಮ್ಮದು ಏನೂ ತಪ್ಪಿಲ್ಲ ಎಂದು ಹೇಳುತ್ತಿದ್ದರು. ನನ್ನ ಜೊತೆ ನನ್ನ ಮಜಾ ಭಾರತ್ ಕಲಾವಿದ ನಿತಿನ್ ಇದ್ದರೂ ಅಲ್ಲಿದ್ದ ಜನರು ಕೂಡ ನೋಡಿದ್ದಾರೆ' ಎಂದು ಚಂದ್ರಪ್ರಭ ಕನ್ನಡ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ಅಂದು ಸೆಕ್ಯುರಿಟಿ ಗಾರ್ಡ್ ಇಂದು ಬೇಡಿಕೆಯ ಹಾಸ್ಯ ನಟ

'ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಾನೇ ಆಟೋದಲ್ಲಿ ಕರೆದುಕೊಂಡು ಹೋಗಿರುವೆ. ಸಿಸಿಟಿವಿಯಲ್ಲಿ ನಾನೇ ಗಾಡಿ ನಿಲ್ಲಿಸಿ ಸಹಾಯ ಮಾಡುತ್ತಿರುವೆ ಆ ದೃಶ್ಯ ನೋಡಿ. ನಾನು ಯಾರೋ ಹೇಳಿದಕ್ಕೆ ನಾನು ಅವರು ಕುಡಿದಿದ್ದಾರೆ ಅಂತ ಹೇಳುತ್ತಿಲ್ಲ ಮೆಡಿಕಲ್ ಟೆಸ್ಟ್‌ ಮಾಡಿಸಬೇಕು. ಬೇರೆ ಅವರ ತರ ನಾನು ಗುದ್ದಿ ಹೋಗಿಲ್ಲ ಮಾನವೀಯತೆ ಮರೆದು ಸಹಾಯ ಮಾಡಿ ಹೊರಟಿರುವೆ. ಘಟನೆ ನಡೆದಾಗ ಇಬ್ಬರು ಪೊಲೀಸರು ಅಲ್ಲಿದ್ದರು ಅವರು ಕೂಡ ಈ ಘಟನೆಗೆ ಸಾಕ್ಷಿ' ಎಂದು ಚಂದ್ರಪ್ರಭ ಹೇಳಿದ್ದಾರೆ.'ಕಾರಿನಲ್ಲಿ ನಾನು ನನ್ನ ಸ್ನೇಹಿತ ನಿತಿನ್‌ ಇದ್ದೆವು ಘಟನೆ ನಡೆದಾಗ ನಾನು ಕಾರಿನಲ್ಲಿ ಹೊರಟೆ ಆದರೆ ನನ್ನ ಸ್ನೇಹಿತ ನಿತಿನ್ ಅಲ್ಲಿದ್ದು ನೋಡಿಕೊಂಡಿದ್ದಾರೆ. ಪೊಲೀಸರು ಏನೇ ತನಿಖೆಗೆ ನನ್ನನ್ನು ಕರೆದರೂ ನಾನು ಅಲ್ಲಿಗೆ ಹೋಗುವೆ. ನನ್ನ ಸ್ನೇಹಿತರು ಪೊಲೀಸರಿಗೆ ಫೋನ್ ಮಾಡಿ ಮಾಲ್ತೇಶ್‌ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ನಾನು ಕೂಡ ವಿಚಾರಣೆ ಮಾಡಿಕೊಂಡಿರುವೆ. ನನ್ನ ಪ್ರಕಾರ ಈ ಅಪಘಾತಕ್ಕೆ ಕಾರಣ ಗೊತ್ತಿಲ್ಲ ಮುಂದೆಯಿಂದ ನಾನು ಗುದ್ದಿದ್ದರೆ ಅದು ನನ್ನ ತಪ್ಪು ಆದರೆ ಅವರು ಕುಡಿದುಕೊಂಡು ವಾಲಾಗುತ್ತಿದ್ದರು ಹೀಗಾಗಿ ಅವರೇ ಗುದ್ದಿ ಬಿದ್ದಿರುವುದು' ಎಂದಿದ್ದಾರೆ ಚಂದ್ರಪ್ರಭ.

Follow Us:
Download App:
  • android
  • ios