Asianet Suvarna News Asianet Suvarna News

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿ ಸಕತ್​ ಟ್ರೋಲ್​ಗೆ ಒಳಗಾಗಿರುವ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಅವರು ಒಂದೇ ದಿನಕ್ಕೆ ಹೊರಬಂದಿದ್ದಾರೆ. ಅವರು ಕೊಟ್ಟ ಕಾರಣವೇನು? 
 

Chikkaballapur MLA Pradeep Eshwar out from Bigg Boss house suc
Author
First Published Oct 10, 2023, 11:21 AM IST

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಬಿಗ್​ಬಾಸ್​ ಮನೆಯಿಂದ ಹೊರ ಬಂದಿದ್ದಾರೆ. ಹೋದ ದಿನದಿಂದಲೇ ಸಕತ್​ ಟ್ರೋಲ್​ಗೆ ಒಳಗಾಗಿದ್ದ ಪ್ರದೀಪ್​ ಅವರು ಹೋದ ಒಂದೇ ದಿನಕ್ಕೆ ಮರಳಿದ್ದಾರೆ.  ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಅವರು ಬಿಗ್​ಬಾಸ್ ಮನೆಯೊಳಕ್ಕೆ ಒಂದು ದಿನ ಲೇಟಾಗಿ ಎಂಟ್ರಿ ಕೊಟ್ಟಿದ್ದರು. ಅವರನ್ನು ನೋಡಿ ಉಳಿದ ಸ್ಪರ್ಧಿಗಳಿಗೂ ಅಚ್ಚರಿಯಾಗಿತ್ತು, ಅದೇ ರೀತಿ ಪ್ರೇಕ್ಷಕರೂ ಸಕತ್​ ಅಚ್ಚರಿ ಪಟ್ಟುಕೊಂಡಿದ್ದರು. ಆದರೆ  ಅವರು ಹೋದದ್ದು ಅತಿಥಿಯಾಗಿ ಎನ್ನಲಾಗಿದೆ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದ ಒಂದೇ ದಿನದಲ್ಲಿ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ಶುರುವಾಗಿದ್ದವು. ಇವರ ಅಮಾನತಿಗೆ ವಿಪಕ್ಷ ಆಗ್ರಹಿಸಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ನೂರಾರು ರೀತಿಯ ಮೀಮ್ಸ್​ಗಳು ಹರಿದಾಡುತ್ತಿದ್ದವು. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡಲು, ಬಿಗ್​ಬಾಸ್​ ಮನೆಗೆ ಹೋಗಿ ಸೇರಿಕೊಳ್ಳಲು ಅಲ್ಲ ಅಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು, ಖುದ್ದು ಕಾಂಗ್ರೆಸ್ಸಿಗರೂ ಕೆಲವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಅವರು ಹೊರಕ್ಕೆ ಬಂದಿದ್ದಾರೆ.

ಆದರೆ ತಾವು ಬರುವುದಕ್ಕೆ ಅವರು ಕುತೂಹಲದ ಕಾರಣವನ್ನೂ ಕೊಟ್ಟಿದ್ದಾರೆ. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ  ಪ್ರವೇಶ ಮಾಡಿರುವುದಾಗಿ ಹೇಳಿದ್ದಾರೆ. ಬಿಗ್ ಬಾಸ್​ನಿಂದ  ಬಂದ ಹಣವನ್ನ ಅಪ್ಪ‌ಅಮ್ಮನಿಲ್ಲದ ಮಕ್ಕಳಿಗೆ ನೀಡಲು‌ ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಇದಕ್ಕೂ ಸಕತ್​ ಟ್ರೋಲ್​ ಆಗುತ್ತಿದೆ. ಅನಾಥ ಮಕ್ಕಳಿಗೆ ಹಣ ನೀಡುವಷ್ಟು ಹಣವನ್ನು  ಒಂದೇ ದಿನದಲ್ಲಿ  ಬಿಗ್​ಬಾಸ್ ನೀಡುತ್ತಾ ​ ಎಂದು ಕೆಲವರು ಟ್ರೋಲ್​ ಮಾಡುತ್ತಿದ್ದಾರೆ.  ಇವರಿಗೆ ಫಂಡ್​ ಕಲೆಕ್ಟ್​ ಮಾಡುವ ಉದ್ದೇಶವಿದ್ದರೆ  ಎಲ್ಲಾದ್ರೂ  ಗಣೇಶ ಪೆಂಡಾಲ್​ ಕುಳಿತುಕೊಂಡು ಮೋಟಿವೇಷನ್​ ಸ್ಪೀಚ್​ ಕೊಟ್ಟರೂ ಆಗುತ್ತಿತ್ತು. ಜನರು ಖುಷಿಯಿಂದ ದುಡ್ಡು ಹಾಕುತ್ತಿದ್ದರು, ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಔಚಿತ್ಯವೇನಿತ್ತು ಎಂದು ಕೆಲವರು ಶಾಸಕನ ಕಾಲೆಳೆದಿದ್ದಾರೆ. ಇನ್ನು ಕೆಲವರು, ಇನ್ನೊಂದಿಷ್ಟು ದಿನ ಒಳಗೇ ಇದ್ದರೆ ಮತ್ತಷ್ಟು ಫಂಡ್​ ಕಲೆಕ್ಟ್​ ಆಗ್ತಿತ್ತಲ್ಲ, ಹೀಗೆ ಒಂದೇ ದಿನಕ್ಕೆ ಬಂದುಬಿಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. 

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?

ಇದೇ ವೇಳೆ, ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿರುವ ರಕ್ಷಕ್​ ಬುಲೆಟ್​ ಹಾಗೂ ಡ್ರೋನ್​ ತಯಾರಿಸುವುದಾಗಿ ಹೇಳಿ ಘಟಾನುಘಟಿಗಳನ್ನೇ ತಮ್ಮ ಮಾತುಗಳಿಂದ  ಮರಳು ಮಾಡಿ ಹೀರೋ ಎನ್ನಿಸಿಕೊಂಡು ಕೊನೆಗೆ ಟುಸ್​ ಆಗಿರೋ ಡ್ರೋನ್​ ಪ್ರತಾಪ್​ ಹಾಗೂ ಶಾಸಕ ಈಶ್ವರ್​ ಪ್ರದೀಪ್​  ಅವರ ಮೀಮ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದರದಲ್ಲಿ ರಕ್ಷಕ್​ ಬುಲೆಟ್​, ನಂದೇ ಬಿಲ್ಡ್​ ಅಪ್​ ಅಂತಾರೆ, ಇವರೇನು ನನಗಿಂದ ಓವರ್​ ಆಗಿ ಆಡ್ತಾರೆ ಎಂದು ತ ಹೇಳಿದರೆ, ಒಂದು ಟೈಂನಲ್ಲಿ ನಾನೂ ಹೀಗೆ ಮೆರೀತಾ ಇದ್ದೆ ಎಂದು ಡ್ರೋನ್​ ಪ್ರತಾಪ್​ ಹೇಳಿದಂತೆ ಇದೆ.  ಇಂಥ ನೂರಾರು ಮೀಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಪ್ರದೀಪ್​ ಅವರು ದೊಡ್ಮನೆಯಿಂದ ಹೊರಕ್ಕೆ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.  

 ಇವರು ಒಳಗೆ ಹೋಗಿದ್ದ ಸಂದರ್ಭದಲ್ಲಿ   ತುಕಾಲಿ ಸಂತು, ನಾವು ಒಬ್ಬ ಎಂ.ಎಲ್.ಎ ಜೊತೆ ಸ್ಪರ್ಧೆ ಮಾಡಬೇಕು ಎಂದಾಗ ಪ್ರದೀಪ್​ ಅವರು,  ಎಂದು ಮಾತನಾಡಿದರೆ, ಅದಕ್ಕೆ ಪ್ರದೀಪ್, ನಾವು ಸೋಲಬೇಕು ಅಂತಾನೆ ಬೆಂಗಳೂರಿಗೆ ಬಂದವನು ಎಂದು ಉತ್ತರಿಸಿದ್ದರು. ಈಗ ಅವರು ಹೊರಕ್ಕೆ ಬರಲು ಅಸಲಿ ಕಾರಣ ಏನಿರಬಹುದು ಎಂಬ ಲೆಕ್ಕಾಚಾರ  ಶುರುವಾಗಿದೆ. ಟ್ರೋಲ್​ಗೆ ಒಳಗಾಗಿ ಅವರು ಹೊರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ  ಮಾಜಿ ಸಚಿವ ಡಾ. ಕೆ. ಸುಧಾಕರ್ ಕಿಡಿ ಕಾರಿದ್ದರು. ಒಬ್ಬ ಎಂಎಲ್ಎ ಬಿಗ್ ಬಾಸ್​ಗೆ ಹೋದ ಉದಾಹರಣೆ ಇಲ್ಲ. ಇದು ನಗೆಪಾಟಲು ಎಂದಿದ್ದರು.    ದೇಶದ ಮಟ್ಟಕ್ಕೆ ಕೊಂಡೊಯ್ದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಗುಡುಗಿದ್ದರು.
 

ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ಯಾ ಗುಂಪುಗಾರಿಕೆ; ಎಲ್ಲಾ ಕಡೆ ನೀತು ವನಜಾಕ್ಷಿ ರೌಂಡ್ಸ್!

Follow Us:
Download App:
  • android
  • ios