ಜೈಲಿನಲ್ಲಿರೋ ಕ್ರಿಮಿನಲ್ನನ್ನು ಬಿಡಿಸೋದು ಬೇಕಿತ್ತಾ ಇವಳಿಗೆ? ತಗ್ಲಾಕ್ಕೊಂಡ ಭಾರ್ಗವಿ!
ಸೀತಾ ಮತ್ತು ರಾಮ್ರನ್ನು ಬೇರೆ ಮಾಡಲು ಜೈಲಿನಲ್ಲಿರುವ ಕ್ರಿಮಿನಲ್ ರುದ್ರಪ್ರತಾಪ್ನನ್ನು ಬಿಡಿಸಿಕೊಂಡು ಬಂದಿರೋ ಭಾರ್ಗವಿ ಈಗ ತಗ್ಲಾಕ್ಕೊಂಡಿದ್ದಾಳೆ. ಮುಂದೇನು?
ಸೀತಾ ಮತ್ತು ರಾಮ್ ಮದ್ವೆಯ ಕಾರ್ಯ ಅದ್ಧೂರಿಯಾಗಿಯೇ ನಡೆಯುತ್ತಿದೆ. ಇದರ ನಡುವೆಯೇ ರುದ್ರಪ್ರತಾಪ ಅಶೋಕ್ ಮತ್ತು ರಾಮ್ನ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅಂಜಲಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ರುದ್ರಪ್ರತಾಪ್ ಆಕೆಗೆ ಫೋನ್ ಮಾಡಿದ್ದ. ಆದರೆ ಆ ಫೋನ್ ಅನ್ನು ಸಿಹಿ ರಿಸೀವ್ ಮಾಡಿದಾಗಲೇ ರುದ್ರಪ್ರತಾಪ್ ಅಲ್ಲೇ ಎಲ್ಲೋ ಇರುವುದು ಗೊತ್ತಾಗಿತ್ತು. ಸಿಹಿಗೆ ರುದ್ರಪ್ರತಾಪ್ನನ್ನು ಕಂಡರೆ ಭಯ. ಏಕೆಂದರೆ ಇದಾಗಲೇ ಅವಳ ಮೇಲೆ ಹಲ್ಲೆ ಮಾಡಿದ್ದ ಆತ. ಆದ್ದರಿಂದ ಈ ವಿಷಯವನ್ನು ರಾಮ್ಗೆ ತಿಳಿಸಿದ್ದಳು. ಅದೇ ಇನ್ನೊಂದೆಡೆ ಅಂಜಲಿ ರುದ್ರಪ್ರತಾಪನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಆ ವಿಷಯವಿನ್ನೂ ಅಣ್ಣ ಅಶೋಕ್ಗೆ ಗೊತ್ತಿಲ್ಲ. ಆದರೆ ಇದೀಗ ಸೀರಿಯಲ್ಗೆ ಭಾರಿ ಟ್ವಿಸ್ಟ್ ಬಂದಿದೆ.
ಸಿಹಿ ರುದ್ರಪ್ರತಾಪ್ ಅಂಜಲಿಗೆ ಫೋನ್ ಮಾಡಿರುವ ವಿಷಯ ತಿಳಿಯುತ್ತಲೇ ರಾಮ್ ಮತ್ತು ಅಶೋಕ್ ಅವನನ್ನು ಹುಡುಕಿ ಹೊರಟಿದ್ದಾರೆ. ರುದ್ರಪ್ರತಾಪ್ ಸಿಕ್ಕಿಬಿದ್ದಿದ್ದಾನೆ. ಇಬ್ಬರೂ ಸೇರಿ ಅವನನ್ನು ಚೆನ್ನಾಗಿ ಥಳಿಸಿದ್ದಾರೆ. ಆಗ ರುದ್ರಪ್ರತಾಪ್ ನಿಮ್ಮ ಮನೆಯಲ್ಲಿ ಇರುವ ಶತ್ರುವನ್ನೇ ಗುರುತಿಸಿಕೊಳ್ಳಿ ಮೊದಲು ಎಂದುಬಿಟ್ಟಿದ್ದಾನೆ. ಆ ಶತ್ರು ಯಾರು ಎನ್ನುವುದು ಅಶೋಕ್ಗೆ ಚೆನ್ನಾಗಿ ಗೊತ್ತು. ಅವಳೇ ಭಾರ್ಗವಿ. ಆದರೆ ಚಿಕ್ಕಮ್ಮ ಭಾರ್ಗವಿಯ ಮೇಲೆ ರಾಮ್ಗೆ ಯಾವುದೇ ಸಂದೇಹವಿಲ್ಲ. ಸೀತಾ ಮತ್ತು ರಾಮ್ನನ್ನುದೂರ ಮಾಡಲು ಅವಳು ಪಟ್ಟ ಪ್ರಯತ್ನ ಎಲ್ಲವೂ ಠುಸ್ ಆಗಿರುವ ನಡುವೆಯೇ ಅವಳು ರುದ್ರಪ್ರತಾಪ್ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಳು. ಸಿಹಿಯನ್ನು ಕಿಡ್ನ್ಯಾಪ್ ಮಾಡಿದ್ದರಿಂದ ಜೈಲುಪಾಲಾಗಿದ್ದ ಅವರನನ್ನು ಭಾರ್ಗವಿ ಬಿಡಿಸಿಕೊಂಡು ಬಂದಿದ್ದಳು.
ಸ್ಟಾರ್ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...
ಇವೆಲ್ಲಾ ವಿಷಯ ಅಶೋಕ್ಗೆ ಗೊತ್ತು. ಅವನು ಇದನ್ನು ರಾಮ್ಗೆ ಹೇಳಲು ಪ್ರಯತ್ನ ಮಾಡಿದ್ದರೂ ರಾಮ್ ಅದನ್ನು ಒಪ್ಪಿರಲಿಲ್ಲ. ಇದೀಗ ರುದ್ರಪ್ರತಾಪನ ಮಾತು ರಾಮ್ಗೂ ಅಚ್ಚರಿ ತಂದಿದೆ. ಇಬ್ಬರೂ ಸೇರಿ ರುದ್ರಪ್ರತಾಪ್ ಮೇಲೆ ಕೇಸು ಹಾಕಿದ್ದಾರೆ. ಪೊಲೀಸ್ ಠಾಣೆಗೆ ಹೋಗಲು ರೆಡಿಯಾದವರನ್ನು ಭಾರ್ಗವಿ ತಡೆದು ನಿಲ್ಲಿಸಿದ್ದಾಳೆ. ಅವಳಿಗೆ ಎಲ್ಲಿ ತಾನು ಸಿಕ್ಕಿಹಾಕಿಕೊಳ್ಳುತ್ತೇನೋ ಎನ್ನುವ ಭಯ. ಅದಕ್ಕಾಗಿಯೇ ಮದುವೆಯ ಸಂದರ್ಭದಲ್ಲಿ ಹೀಗೆಲ್ಲಾ ಹೋಗಬೇಡ ಎಂದಿದ್ದಾಳೆ. ಆದರೆ ಅಶೋಕ್ಗೆ ಈ ಕುತಂತ್ರ ಎಲ್ಲಾ ಗೊತ್ತಿರುವ ಕಾರಣ, ಇನ್ಸ್ಪೆಕ್ಟರ್ ಅವರೇ ಮನೆಗೆ ಬರ್ತಾ ಇದ್ದಾರೆ ಬಿಡಿ, ಎಲ್ಲಾ ಗೊತ್ತಾಗತ್ತೆ ಎಂದಿದ್ದಾರೆ. ಭಾರ್ಗವಿಗೆ ಶಾಕ್ ಆಗಿದೆ. ಇಷ್ಟಕ್ಕೇ ಸುಮ್ಮನಾಗದ ಅಶೋಕ್ ರುದ್ರಪ್ರತಾಪ್ನಂಥ ಕ್ರಿಮಿನಲ್ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಯಾರು ಅಂತ ಗೊತ್ತಾಗತ್ತೆ ಎಂದಿದ್ದಾನೆ.
ಇದೀಗ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ. ರಾಮ್ಗೂ ಮದುವೆ ಸಮಯದಲ್ಲಿಯೇ ಚಿಕ್ಕಮ್ಮನ ಕುತಂತ್ರ ಗೊತ್ತಾಗತ್ತೋ ಇಲ್ಲವೋ ಎನ್ನುವುದು ಪ್ರಶ್ನೆ. ಒಂದು ವೇಳೆ ಗೊತ್ತಾಗಿಬಿಟ್ಟರೆ ಸೀರಿಯಲ್ ಮುಗಿದು ಹೋಗುತ್ತೆ. ಹಾಗೆ ಆಗಲ್ಲ ಎನ್ನುವ ತರ್ಕ ಕೆಲವರದ್ದು. ಅದೇ ಇನ್ನೊಂದೆಡೆ ಭಾರ್ಗವಿಯ ವಿಷಯ ಗೊತ್ತಾಗತ್ತೆ. ಆದರೆ ಸೀತಾಳ ಇತಿಹಾಸ ಇನ್ನೂ ಸೀಕ್ರೇಟ್ ಆಗಿರುವ ಕಾರಣ, ಅವರ ನಡುವೆಯೇ ಬಿರುಕು ಬರುವ ಸಾಧ್ಯತೆ ಇದೆ. ಇವರಿಬ್ಬರ ಮದುವೆ ಆಗುವುದೇ ಡೌಟು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಕ್ರಿಮಿನಲ್ನನ್ನು ಜೈಲಿನಿಂದ ಬಿಡಿಸಿದ ಭಾರ್ಗವಿಗೆ ಕಂಟಕ ಎದುರಾಗಿದೆ.
ಮಾಡಿದ್ದುಣ್ಣೋ ಮಹಾರಾಯ ಎನ್ನೋದು ಇದಕ್ಕೆನಾ? ಲಿಂಬೆ ಹಣ್ಣು ಹಿಡಿದು ಮಾಟ ಮಾಡಿಸಿದ್ದ ರಾಜಿಗೆ ಆತ್ಮದ ಕಾಟ!