Asianet Suvarna News Asianet Suvarna News

ಆಹಾ ಭಾಗ್ಯ! ಏನಮ್ಮಾ ನಿನ್ನ ರೂಪ... ಇಷ್ಟು ದಿನ ಸೀರಿಯಲ್​ ನೋಡಿದ್ದಕ್ಕೂ ಸಾರ್ಥಕವಾಯ್ತು ಅಂದ ಫ್ಯಾನ್ಸ್​!

ಭಾಗ್ಯ ಬದಲಾಗಿದ್ದಾಳೆ. ಪತಿ ತಾಂಡವ್​ ಎದುರು ಭಾಗ್ಯ ರೌದ್ರಾವತಾರ ತೋರಿ ಪತಿಯನ್ನು ಬೆಚ್ಚಿ ಬೀಳಿಸಿದ್ದಾಳೆ. ವೀಕ್ಷಕರು ಏನೆಲ್ಲಾ ಹೇಳಿದ್ರು ಕೇಳಿ...
 

Bhagyalakshmi shocked her husband Tandav by appearing as Raudravatar suc
Author
First Published Apr 4, 2024, 1:49 PM IST

ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ. ಅಳುಮುಂಜಿಯಲ್ಲ ಈಕೆ. ತನಗೆ ಮತ್ತು ಮಗಳಿಗೆ ಪರೀಕ್ಷೆ ಬರೆಯಲು ಕೊಡದ ಕನ್ನಿಕಾ ಮಿಸ್​ ವಿರುದ್ಧವೇ ತಿರುಗಿ ಬಿದ್ದು ಪರೀಕ್ಷೆ ಬರೆದಿದ್ದಾಳೆ. ಕನ್ನಿಕಾ ಮಿಸ್​ ಎದುರು ಕಾಳಿ ಅವತಾರ ತಾಳಿದ್ದನ್ನು ನೋಡಿದ್ದ ಭಾಗ್ಯಲಕ್ಷ್ಮಿ ಅಭಿಮಾನಿಗಳು, ಇದೇ ರೂಪವನ್ನು ಗಂಡ ತಾಂಡವ್​ ಎದುರಿಗೂ ತೋರಿಸಮ್ಮಾ ಎನ್ನುತ್ತಿದ್ದರು. ಇದೀಗ ಆ ಟೈಮೂ ಬಂದುಬಿಟ್ಟಿದೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್​ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ,  ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್​ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್​, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.

ಭಾಗ್ಯಲಕ್ಷ್ಮಿ ಸೀರಿಯಲ್​ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಷ್ಟು ದಿನ ನಿನ್ನ ಅಳುಮುಂಜಿ ಮುಖ ನೋಡಿ ಸಾಕಾಗಿತ್ತು, ನಿನ್ನಂಥ ಹೆಣ್ಣಿದ್ದರೆ ಎಲ್ಲವೂ ಸಾಧ್ಯ. ನೀನು ನಿನ್ನಂಥ ಮನಸ್ಥಿತಿ ಇರುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ, ಪತಿ ದೌರ್ಜನ್ಯ ಎಸಗಿದಾಗ, ಸಹಿಸಿಕೊಳ್ಳದೇ ಎದುರು ಮಾತನಾಡುವ ಶಕ್ತಿ ಪ್ರತಿ ಹೆಣ್ಣಿಗೂ ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಇದು ಸಾಧ್ಯವಾಗುವುದು ಕುಸುಮಾನಂಥ ಅತ್ತೆಯಿದ್ದರೆ ಮಾತ್ರ ಎಂದೂ ಸೇರಿಸುತ್ತಿದ್ದಾರೆ.

ಫ್ಲಾಪ್​ ಚಿತ್ರಗಳನ್ನು ಕೊಟ್ಟು, 6 ವರ್ಷ ಸಿನಿಮಾದಿಂದ ದೂರವಿದ್ದರೂ ಅಮಿತಾಭ್​, ಶಾರುಖ್​ಗಿಂತಲೂ ಫೇಮಸ್​ ಈಕೆ!

ಅಷ್ಟಕ್ಕೂ ಆಗಿದ್ದೇನೆಂದರೆ,  ಮಕ್ಕಳೆದುರೇ ತಾಂಡವ್​ ಭಾಗ್ಯಳಿಗೆ ಡಿವೋರ್ಸ್​ ಕೊಡುವ ವಿಷಯ ಹೇಳಿದ್ದಾನೆ. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದಾಗಲೇ ಅವಳಿಗೆ ಡಿವೋರ್ಸ್​ ನೋಟಿಸ್​ ಕೊಟ್ಟಿದ್ದೆ. ಮಕ್ಕಳಿಗಾಗಿ ಸುಮ್ಮನೇ ಇದ್ದೆ. ಆದರೆ ಇದೀಗ ಮಕ್ಕಳೇ ಅಮ್ಮನ ಪರವಾಗಿ ನಿಂತಿದ್ದಾರೆ. ಹಾಗಿದ್ದ ಮೇಲೆ ಸತ್ಯ ಹೇಳದೇ ವಿಧಿಯಿಲ್ಲ ಎಂದಿರುವ ತಾಂಡವ್​, ಭಾಗ್ಯಳಿಗೆ ಡಿವೋರ್ಸ್​ ಕೊಡುತ್ತಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೇ ಈ ಕೂಡಲೇ ಭಾಗ್ಯ ಮನೆ ಬಿಟ್ಟು ಹೋಗಬೇಕು, ಮಕ್ಕಳು ನನ್ನ ಜೊತೆ ಇರುತ್ತಾರೆ ಎಂದು ಹೇಳಿದ್ದಾನೆ. ಭಾಗ್ಯಳ ಬ್ಯಾಗ್​ ತೆಗೆದು ಹೊರಕ್ಕೆ ಎಸೆದಿದ್ದಾನೆ. ಇದೀಗ ಮೌನ ಮುರಿದಿರುವ ಭಾಗ್ಯ, ಡಿವೋರ್ಸ್​ ಪೇಪರ್​ಗೆ ಸಹಿ ಹಾಕಲ್ಲ ಅಂದ್ರೆ ಏನು ಮಾಡ್ತೀರಿ ಕೇಳಿದ್ದಾಳೆ. ಕೋರ್ಟ್​ಗೆ ಹೋಗ್ತೇನೆ ಎಂದಿದ್ದಾನೆ ತಾಂಡವ್​. ನಾನೂ ಕೋರ್ಟ್​ಗೆ ಹೋಗ್ತೇನೆ. ಏನು ಹೇಳಬೇಕೋ ಹೇಳ್ತೇನೆ. ಜಪ್ಪಯ್ಯ ಎಂದ್ರೂ ಈ ಮನೆ ಬಿಟ್ಟು ಹೋಗಲ್ಲ ಎಂದಿದ್ದಾಳೆ.

ಹೀಗೆ ಹೇಳುತ್ತಲೇ ಗಂಡ ಎಸೆದ ಬ್ಯಾಗ್​ ಒಳಗೆ ತಂದಿರುವ ಭಾಗ್ಯಳನ್ನು ನೋಡಿ ಅತ್ತೆ ಕುಸುಮಾಗೆ ಖುಷಿಯೋ ಖುಷಿ. ನಾನು ಮನೆ ಬಿಟ್ಟು ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ ಎಂದಾಗ, ಕುಸುಮಾ ನಾವೂ ನಿನ್ನನ್ನು ಹೋಗಲು ಬಿಡುವುದಿಲ್ಲಮ್ಮಾ ಎಂದಿದ್ದಾಳೆ. ತಾಂಡವ್​ ಭಾಗ್ಯಂಗೆ ಬಯ್ಯಲು ಮುಂದಾದಾಗ ಕಾಳಿ ರೂಪ ತಾಳಿರೋ ಭಾಗ್ಯ ದೊಡ್ಡ ಕಣ್ಣು ಬಿಡುತ್ತಾ ಪತಿಯ ಸಮೀಪ ಬಂದಾಗ, ಪತ್ನಿಯ ಹೊಸ ರೂಪಕ್ಕೆ ತಾಂಡವ್​ ಬೆಚ್ಚಿ ಬಿದ್ದಿದ್ದಾನೆ. ಮುಂದೇನು? ಕೋರ್ಟ್​ ಸೀನ್​ ಬರುತ್ತದೆಯೆ? ಡಿವೋರ್ಸ್​ ವಿಷ್ಯ ಏನಾಗುತ್ತೆ? ಶ್ರೇಷ್ಠಾಳ ಕಥೆ?
ಶ್ರೀದೇವಿ ಬಯೋಪಿಕ್​ಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದ ಬೋನಿ ಕಪೂರ್​: ಏನಿದರ ಗುಟ್ಟು?

Follow Us:
Download App:
  • android
  • ios