ಹರಿಣಿ ಕಾರು ಕಲಿಯುವಾಗ ಉಪೇಂದ್ರ ಮನೆಯ ಕುಂಡಗಳಿಗೆ ಗುದ್ದಿ ಹಾಳುಗೆಡವಿದ್ದ ಘಟನೆಯನ್ನು ಮಜಾ ಟಾಕೀಸ್‌ನಲ್ಲಿ ಬಹಿರಂಗಪಡಿಸಿದರು. ಉಪೇಂದ್ರ ಕಾರು ತಳ್ಳಲು ಸಹಾಯ ಮಾಡಿದ್ದರೆಂದು ಹೇಳಿದರು. ಪ್ರಿಯಾಂಕಾ ಉಪೇಂದ್ರ ಈ ಘಟನೆಗೆ ಆಶ್ಚರ್ಯ ವ್ಯಕ್ತಪಡಿಸಿದರೂ, ಅದು ತಮಾಷೆಯ ನಾಟಕವಾಗಿತ್ತು.

ಸ್ಯಾಂಡಲ್​ವುಡ್​ ಸ್ಟಾರ್​ ಉಪೇಂದ್ರ ಅವರ ಮನೆಯ ಕಾಂಪೌಂಡ್​ಗೆ ಗುದ್ದಿ ಅಲ್ಲಿದ್ದ ಕುಂಡಗಳನ್ನು ಹಾಳು ಮಾಡಿದ್ದು, ನಟಿ ಹರಿಣಿ ಎನ್ನುವ ಶಾಕಿಂಗ್​ ವಿಷ್ಯವೊಂದು ಕಲರ್ಸ್​ ಕನ್ನಡದ ಮಜಾ ಟಾಕೀಸ್​ ವೇದಿಕೆ ಮೇಲೆ ರಿವೀಲ್​ ಆಗಿದ್ದು, ಇದನ್ನು ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್​ ಆಗಿದ್ದಾರೆ. ಈ ಬಾರಿಗೆ ಮಜಾ ಟಾಕೀಸ್​ಗೆ ನಟಿಯರಾದ ಪ್ರಿಯಾಂಕಾ ಉಪೇಂದ್ರ, ಹರಿಣಿ ಸೇರಿದಂತೆ ಕೆಲವು ನಟ-ನಟಿಯರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ತಾವು ಕಾರು ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಹರಿಣಿ, ಅಂದು ನಡೆದ ಘಟನೆಯನ್ನು ವಿವರಿಸುತ್ತಾ, ಅಪಘಾತ ಮಾಡಿದ್ದನ್ನು ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಪ್ರಿಯಾಂಕಾ ಹಾಗಿದ್ರೆ ಅಂದು ಅಪಘಾತ ಮಾಡಿದ್ದು ನೀವಾ ಎಂದು ಶಾಕ್​ ಆಗಿ ಕೇಳಿದಾಗ, ಹರಿಣಿ ಅವರು ಹೌದು, ಗೊತ್ತಾಗೋಯ್ತಾ ಎಂದಿದ್ದಾರೆ.

ಅಂದು ಹೊಸದಾಗಿ ಕಾರು ಕಲಿಯುತ್ತಿದ್ದರಂತೆ ನಟಿ ಹರಿಣಿ. ಬೆಂಗಳೂರಿನ ಸದಾಶಿವನಗರದ ಬಳಿ ಮುಂದೆ ದೊಡ್ಡದೊಂದು ಕಾರು ಬಂದಾಗ, ಭಯಪಟ್ಟು ಆಕ್ಸಿಲರೇಟರ್​ ತಿರುಗಿಸಿಬಿಟ್ಟೆ. ಅಲ್ಲಿಯೇ ಇದ್ದ ಮನೆಯೊಂದರ ಎದುರಿಗೆ ಇದ್ದ ಕುಂಡಗೆಳೆಲ್ಲಾ ಪುಡಿಪುಡಿಯಾದವು. ಕೊನೆಗೆ ನೋಡಿದ್ರೆ ಸೌಂಡ್​ ಕೇಳಿ ಮೇಲಿನಿಂದ ಉಪೇಂದ್ರ ಬಂದರು. ಅದು ಉಪೇಂದ್ರ ಅವರ ಮನೆಯೆಂದು ಆಗ ಗೊತ್ತಾಯ್ತು. ನನಗೆ ತುಂಬಾ ಭಯವಾಗಿತ್ತು. ಆಗ ಉಪೇಂದ್ರ ಅವರು ನನ್ನನ್ನು ನೋಡಿ, ಏನ್ರೀ ನೀವಾ? ಕಾರನ್ನು ಇಲ್ಲೆಲ್ಲಾ ಬಂದು ಕಲೀತಾರಾ? ಯಾವುದಾದ್ರೂ ಗ್ರೌಂಡ್​ಗೆ ಹೋಗಬಾರದಾ ಎಂದು ಕೇಳಿದ್ರು. ಕೊನೆಗೆ ಉಪೇಂದ್ರ, ಅವರ ಮಗ, ನನ್ನ ಮಗ ಎಲ್ಲಾ ಸೇರಿ ಕಾರನ್ನು ತಳ್ಳಿಕೊಂಡು ಹೊರಕ್ಕೆ ತೆಗೆದರು ಎಂದು ವಿವರಿಸಿದ್ದಾರೆ. ಅಷ್ಟಕ್ಕೂ ಈ ಘಟನೆಯ ಬಗ್ಗೆ ಮೊದಲೇ ಪ್ರಿಯಾಂಕಾ ಅವರಿಗೆ ತಿಳಿದೇ ಇರುತ್ತದೆ. ಆದರೂ ತಮಾಷೆಯಾಗಿ ವೇದಿಕೆ ಮೇಲೆ ಶಾಕ್​ ಆಗುವ ರೀತಿ ನಟಿಸಿದ್ದಾರೆ.

ನನಗೆ 8 ಮಕ್ಕಳು ಬೇಕಿತ್ತು... ಆದ್ರೆ... ನಟಿ ಪ್ರಿಯಾಂಕಾ ಉಪೇಂದ್ರ ರಿವೀಲ್​ ಮಾಡಿದ ಗುಟ್ಟೇನು?

ಅಂದಹಾಗೆ ನಟಿ ಹರಿಣಿ ಶ್ರೀಕಾಂತ್​ ಸೀರಿಯಲ್​ ಪ್ರಿಯರಿಗೆ ತುಂಬಾ ಪರಿಚಯದ ಮುಖ. ಅಮ್ಮನಾಗಿ, ಅತ್ತೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಾರೆ. ಇದೀಗ ಅವರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಶಂಕರ' ಸೀರಿಯಲ್​ನಲ್ಲಿ ಭೈರಾದೇವಿಯಾಗಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ನಿರೂಪಕರಾಗಿ ಕಿರುತೆರೆಯ ನಂಟು ಬೆಳೆಸಿಕೊಂಡವರು. ದೂರದರ್ಶನದ ಸವಿನೆನಪು ಕಾರ್ಯಕ್ರಮದ ನಿರೂಪಕರಾಗಿ ಎಂಟ್ರಿ ಕೊಟ್ಟ ನಟಿ, 'ಪ್ರತಿಭೆ' ಎನ್ನುವ ಸೀರಿಯಲ್​ ಮೂಲಕ ಕಿರುತೆರೆ ಪ್ರವೇಶಿಸಿದರು. ಇದಾದ ಬಳಿಕ "ಆತ್ಮ" ಎನ್ನುವ ಸೀರಿಯಲ್​ನಲ್ಲಿ ನಟಿಸಿದರು. ಬಳಿಕ ಮದುವೆಯಾದ ಮೇಲೆ ಬಣ್ಣದ ಲೋಕದಿಂದ ದೂರ ಸರಿದರು. ಕೊನೆಗೆ ಪತಿಯ ಪ್ರೋತ್ಸಾಹದಿಂದ ಮತ್ತೆ ಕಿರುತೆರೆಗೆ ಮರಳಿದ ಅವರು, ಈಗ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರೆ.

ಇನ್ನು ನಟಿ ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ಹೇಳುವುದೇ ಬೇಡ. ಪ್ರಿಯಾಂಕಾ ಎಂದಾಕ್ಷಣ ಹೂವೇ ಹೂವೇ ಎಂದು ನೆನಪಾಗುವುದು ಸಹಜ. ಜನಿಸಿದ್ದು ಕೋಲ್ಕತಾದ ಬಂಗಾಳಿ ಫ್ಯಾಮಿಲಿಯಲ್ಲಿ. ಮಾಡೆಲಿಂಗ್​ನಲ್ಲಿ ಮಿಂಚಿದವರು. 1996 ರಲ್ಲಿ ಮಿಸ್ ಕೊಲ್ಕತ್ತಾ ಆದವರು. ಕೊನೆಗೆ ಸಿನಿಮಾಗಳು ಅರಸಿ ಬಂದವು. ಕನ್ನಡ, ತಮಿಳು,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರೋ ನಟಿ ಎಚ್​2ಓ ಚಿತ್ರದ ಹೂವೇ ಹೂವೇ ಹಾಡಿನಿಂದಲೇ ಸಕತ್​ ಫೇಮಸ್​ ಆಗಿದ್ದಾರೆ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಪ್ರಿಯಾಂಕಾ ಅವರು, ನಟನೆಯಿಂದ ದೂರ ಸರಿದಿದ್ದಾರೆ.

ಕೊನೆಗೂ ಆ್ಯಂಕರ್​ ಅನುಶ್ರೀ ಬೆರಳಿಗೆ ಬಂತು ಉಂಗುರ! ಮದುವೆಗೆ ರೋಚಕ ಟ್ವಿಸ್ಟ್​ ಕೊಟ್ಟ ನಟಿ...