Asianet Suvarna News Asianet Suvarna News

Karnataka Ayush University Bill ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಪ್ರಥಮ ಆಯುಷ್‌ ವಿವಿಗೆ ಅಸ್ತು!

  • ವಿಧಾನಸಭೆಯಲ್ಲಿ ಆಯುಷ್‌ ವಿವಿ ಮಸೂದೆ ಅಂಗೀಕಾರ
  • ಆಯುಷ್‌ ವಿವಿ ರಚನೆಗೆ ಕಾಂಗ್ರೆಸ್‌ ಸದಸ್ಯರಿಂದ ತೀವ್ರ ವಿರೋಧ
  • ಆಯುಷ್‌ ವಿಶ್ವವಿದ್ಯಾಲಯಕ್ಕಾಗಿ 100 ಎಕರೆ ಜಮೀನು ಮಂಜೂರು
Winter Session Karnataka Assembly passed Bill to establish AYUSH University in Shivamogga ckm
Author
Bengaluru, First Published Dec 22, 2021, 2:08 AM IST

ಬೆಳಗಾವಿ(ಡಿ.22):  ದಕ್ಷಿಣ ಭಾರತದ ಮೊದಲ ಆಯುಷ್‌ ವಿಶ್ವವಿದ್ಯಾಲಯ(Ayush University) ಪ್ರಾರಂಭಿಸುವ ಕುರಿತ ಕರ್ನಾಟಕ ರಾಜ್ಯ ಆಯುಷ್‌ ವಿಶ್ವವಿದ್ಯಾಲಯ ವಿಧೇಯಕ ಸೇರಿದಂತೆ ನಾಲ್ಕು ಮಸೂದೆಗಳನ್ನು(Bill) ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಶಿವಮೊಗ್ಗ(shivamogga) ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ಆಯುಷ್‌ ವಿಶ್ವ ವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಮೀನು ಮಂಜೂರಾಗಿದೆ. ಪ್ರಾರಂಭಿಕ ಹಂತದಲ್ಲಿ 20 ಕೋಟಿ ರು. ವಿನಿಯೋಗಿಸಲಾಗುತ್ತಿದೆ ಎಂದು ವಿಧೇಯಕವನ್ನು ಮಂಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌(Congress) ಸದಸ್ಯರಾದ ಡಾ.ರಂಗನಾಥ್‌, ಡಾ. ಯತೀಂದ್ರ, ಪ್ರಿಯಾಂಕ್‌ ಖರ್ಗೆ ಮತ್ತಿತರರು ಈ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ರಂಗನಾಥ್‌ ಮಾತನಾಡಿ, ಕೋವಿಡ್‌ನಿಂದ(Covid 19) ಆರ್ಥಿಕ ಸಂಕಷ್ಟಎದುರಿಸುತ್ತಿದ್ದೇವೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವನ್ನು ಸದೃಢ ಮಾಡಲು ಕ್ರಮ ಕೈಗೊಳ್ಳಬೇಕು. ಈ ವಿಶ್ವ ವಿದ್ಯಾಲಯ ಅಗತ್ಯವಿಲ್ಲ ಎಂದರು.

Belagavi Assembly Session ಉ.ಕ. ಸಮಸ್ಯೆಗಳ ಚರ್ಚೆ, ಎಲ್ಲಾ ಬಾಕಿ ಯೋಜನೆ ಕೈಗೆತ್ತಿಕೊಳ್ಳಲು ಪಕ್ಷಾತೀತವಾಗಿ ಸದಸ್ಯರ ಆಗ್ರಹ!

ಡಾ.ಯತೀಂದ್ರ ಮಾತನಾಡಿ, ಸದ್ಯ ಆಯುಷ್‌ ವಿಶ್ವವಿದ್ಯಾಲಯ ಅಗತ್ಯವಿಲ್ಲ. ಇದರ ಬದಲಿಗೆ ಬಜೆಟ್‌ನ ಶೇ.4 ರಷ್ಟುಅನುದಾನವನ್ನು ಆರೋಗ್ಯ ಇಲಾಖೆಗೆ ಖರ್ಚು ಮಾಡಬೇಕು ಎಂದು ಆಗ್ರಹಿಸಿದರು. ಪ್ರಿಯಾಂಕ್‌ ಖರ್ಗೆ ಮಾತನಾಡಿ, ಕೋವಿಡ್‌ನಂಥ ಸಮಯದಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಅಗತ್ಯವಿಲ್ಲ ಎಂದರು.

ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪುರ, ಆಯುಷ್‌ ವಿಶ್ವವಿದ್ಯಾಲಯ ತೆರೆಯುತ್ತಿರುವುದು ಉತ್ತಮ. ಆದರೆ ಇದನ್ನು ಹಿಂದುಳಿದ ಬೀದರ್‌ನಲ್ಲಿ ಸ್ಥಾಪಿಸಿ ಎಂದು ಸಲಹೆ ಮಾಡಿದರು. ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆಯ ಮಸೂದೆ ಅಂಗೀಕಾರದ ವೇಳೆ ಮಾತನಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಒಂದು ಭಾಗಕ್ಕೆ ಸೀಮಿತವಾಗದೆ ಎಲ್ಲ ಜಿಲ್ಲೆಗಳನ್ನು ಸಮನಾಗಿ ಪರಿಗಣಿಸುವ ಕುರಿತು ಅವಲೋಕಿಸಿ ನಿರ್ಧರಿಸಬೇಕು. ಇದಕ್ಕೊಂದು ಸಮಿತಿ ಇದ್ದರೆ ಸೂಕ್ತ ಎಂದರು. ಶಾಸಕ ಬಂಡೆಪ್ಪ ಕಾಶೆಂಪುರ ಹಾಗೂ ಕೆಲ ಶಾಸಕರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಕೊನೆಗೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರಗೊಂಡಿತು.

2064 ಪೌರ ಕಾರ್ಮಿಕರ ನೇರ ನೇಮಕಾತಿಗೆ ಸರಕಾರ ಗ್ರೀನ್ ಸಿಗ್ನಲ್

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದರು. ಸಭೆಯಲ್ಲಿದ್ದವರು ಹೌದು ಎಂದು ಹೇಳುವ ಮೂಲಕ ಅಂಗೀಕರಿಸಿದರು.

ಇತರೆ 3 ಮಸೂದೆ ಅಂಗೀಕಾರ:
ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ನೆರವಿನ ಉದ್ದೇಶದ ತೆರಿಗೆ ಸುಧಾರಣೆಯ 2021ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕವನ್ನು ಸಚಿವ ಬಿ.ಎ. ಬಸವರಾಜು ಅವರು ಮಂಡಿಸಿದರೆ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಹೆಸರಿಸುವ 2021ನೇ ಸಾಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಪರವಾಗಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಮಂಡಿಸಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಅನುಕೂಲ ಕಲ್ಪಿಸುವ 2021ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೆಯ ತಿದ್ದುಪಡಿ) ವಿಧೇಯಕವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಂಡಿಸಿದರು. ಎಲ್ಲ ವಿಧೇಯಕಗಳನ್ನು ಪರ್ಯಾಲೋಚಿಸಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

- ಶಿವಮೊಗ್ಗ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ಸ್ಥಾಪನೆಗೆ ನಿರ್ಧಾರ
- ಆಯುಷ್‌ ವಿಶ್ವವಿದ್ಯಾಲಯಕ್ಕಾಗಿ 100 ಎಕರೆ ಜಮೀನು ಮಂಜೂರು
- ವಿವಿ ಸ್ಥಾಪನೆಗೆ ಆರಂಭಿಕ ಹಂತದಲ್ಲಿ 20 ಕೋಟಿ ರು. ಹೂಡಿಕೆ
- ಆಯುಷ್‌ ವಿವಿ ರಚನೆಗೆ ಕಾಂಗ್ರೆಸ್‌ ಸದಸ್ಯರಿಂದ ತೀವ್ರ ವಿರೋಧ
- ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿವಿ ಅಗತ್ಯವಿಲ್ಲ ಎಂದು ವಾದ
- ಬೀದರ್‌ನಲ್ಲಿ ಸ್ಥಾಪಿಸುವಂತೆ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್‌ ಆಗ್ರಹ

Follow Us:
Download App:
  • android
  • ios