Asianet Suvarna News Asianet Suvarna News

ನಾಡಕಚೇರಿ, ತಹಸೀಲ್ದಾರ ಕಚೇರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅನಿರೀಕ್ಷಿತ ಭೇಟಿ; ಪರಿಶೀಲನೆ ಸಭೆಯಲ್ಲಿ ಗರಂ

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಲಾಖೆ ಪ್ರಗತಿ ಪರಿಶೀಲನೆಗಾಗಿ ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ್ದಾರೆ ಬೆಳಿಗ್ಗೆಯಿಂದ  ವಿವಿಧ ಕಂದಾಯ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Revenue Minister Krishna byre gowda sudden visit to Nadakacheri, Tehsildar office at dharwad rav
Author
First Published Sep 14, 2023, 5:25 PM IST

 ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಸೆ.14) : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಲಾಖೆ ಪ್ರಗತಿ ಪರಿಶೀಲನೆಗಾಗಿ ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ್ದಾರೆ ಬೆಳಿಗ್ಗೆಯಿಂದ  ವಿವಿಧ ಕಂದಾಯ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಇಲಾಖೆ ಸಾರ್ವಜನಿಕರಿಗೆ ನೀಡುವ ವಿವಿಧ ಸೇವೆಗಳ ಗುಣಮಟ್ಟ, ಕಾಲಮಿತಿ ಅನುಷ್ಠಾನ, ಜನಸ್ನೇಹಿ ಮತ್ತು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಿಬ್ಬಂದಿಗಳ ಅನುಭವ ತಿಳಿಯಲು ಸ್ವತಃ ಗ್ರಾಮ ಆಡಾಳಿತಾಧಿಕಾರಿ ಕಚೇರಿ, ನಾಡಕಚೇರಿ ಮತ್ತು ತಹಸಿಲ್ದಾರ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಸಂಬಂಧಿಸಿದ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಧಾರವಾಡದಿಂದ ಹೊರಟ ಕಂದಾಯ ಸಚಿವರು ಮೊದಲಿಗೆ ದುಮ್ಮವಾಡ ಉಪತಹಸಿಲ್ದಾರ ಇರುವ ನಾಡಕಚೇರಿಗೆ ತೆರಳಿದರು ಅಲ್ಲಿನ ಸಿಬ್ಬಂದಿಗಳಿಂದ ಕಂದಾಯ ಇಲಾಖೆಯ ಸೇವೆಗಳು ಜನರಿಗೆ ತಲುಪಿಸುವಲ್ಲಿ ಆಗವ ತಾಂತ್ರಿಕ ಸಮಸ್ಯೆ, ಕೆಲಸದಲ್ಲಿ ಬರುವ ಸಾಮನ್ಯ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುವ ಪರಿಹಾರಗಳ ಕುರಿತು ಮಾಹಿತಿ ಪಡೆದರು. ಪಂಚಣಿ, ಈ-ಸ್ವತ್ತು, ಸರ್ವೆಗಳ ದಾಖಲಾತಿ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ಕುರಿತು ಸಚಿವರು ಅಧಿಕಾರಿಗಳ ಗಮನ ಸೆಳೆದರು ಮತ್ತು ರೈತರಿಗೆ ತಾಂತ್ರಿಕ ವಿಳಂಬ ಹಾಗೂ ಅವುಗಳ ಪರಿಹಾರ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

 

ಮೇವಿನ ಕೊರತೆ ತಪ್ಪಿಸಲು ರೈತರಿಗೆ ಶೀಘ್ರ ಮೇವು ಬಿತ್ತನೆ ಕಿಟ್‌: ಸಚಿವ ಸಂಪುಟ ನಿರ್ಧಾರ

ಅಲ್ಲಿಂದ ಹಿರೇಹೊನ್ನಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿನ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ದಿನನಿತ್ಯದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು ರೈತರ ಸಾಗುವಳಿ ಚೀಟಿ ಹಿಡುವಳಿಗಳ ವಹಿ ನಿರ್ವಹಣೆ ರೈತರ ಜಮೀನುಗಳ ಕಾಲಂ ಎಂಟ್ರಿ ಕುರಿತು ತಲಾಠಿಯಿಂದ ತಿಳಿದುಕೊಂಡು ಅದರಲ್ಲಿ ಅಗತ್ಯವಿರುವ ಸುಧಾರಣೆಗಳನ್ನು ತಿಳಿಸಿದರು.

ಹಿರೇಹೊನ್ನಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ವಿವಿಧ ಸರಕಾರಿ ಕಚೇರಿ ಸೌಲಭ್ಯಗಳು ಇರುವುದನ್ನು ಕಂಡು ಸಂತಸ ವ್ಯಕ್ತಪಡಿಸಿ ಈ ರೀತಿಯಲ್ಲಿ ಗ್ರಾಮ ಆಡಳಿತಸೌಧ ನಿರ್ಮಿಸುವದರಿಂದ ಗ್ರಾಮಸ್ಥರಿಗೆ ಎಲ್ಲ ಸೇವೆಗಳು ಒಂದೇ ಸೂರಿನಡಿ ಸೀಗುತ್ತವೆ ಈ ಕುರಿತು ಪರಿಶೀಲಿಸಿ ಕ್ರಮವಹುಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.ಅಲ್ಲಿಂದ ನೇರವಾಗಿ ಸಚಿವರು ಹುಬ್ಬಳ್ಳಿ ತಹಸಿಲ್ದಾರ ಕಚೇರಿಗೆ ತೆರಳಿ, ದಿಢೀರ್ ಪರಿಶೀಲನೆ ಕೈಗೊಂಡರು ಸಾರ್ವಜನಿಕರ ಕುಂದುಕೊರತೆ ಟಪಾಲು ಸ್ವೀಕರಿಸುವ ಕೇಂದ್ರಕ್ಕೆ ಭೇಟಿ ನೀಡಿ, ಟಪಾಲು ವಿಲೇವಾರಿ ಆಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿಚಾರಿಸಿ, ಕಚೇರಿಯಲ್ಲಿ ಕಡ್ಡಾಯವಾಗಿ ಇ- ಆಫೀಸ್‌ ಅಳವಡಿಸಿಕೊಳ್ಳಲು ತಹಸಿಲ್ದಾರ ಅವರಿಗೆ ನಿರ್ದೇಶಿಸಿದರು. ನಂತರ ಉಪನೋಂದಣಿ ಅಧಿಕಾರಿಗಳ ಕಚೇರಿ, ರೆಕಾರ್ಡ್ ರೂಮ್ ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಬರುವ ಅಕ್ಟೋಬರ್ 1 ರೊಳಗೆ ತಹಸಿಲ್ದಾರ  ಹಂತದವರೆಗೆ ಎಲ್ಲ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ- ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಸೂಚಿಸಿದರು. ರೆಕಾರ್ಡ್ ರೂಮ್ ನ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್‌ ಮಾಡಿ, ತಂತ್ರಂಶದಲ್ಲಿ ಅಳವಡಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಅರಂಭವಾಗಲಿದೆ. 

'ಯಾರ ದುಡ್ಡು? ನಿಮ್ಮನೆದಾ ಅಥವಾ ನಮ್ಮನೆ ಹಣವಾ?: ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಗರಂ

ಈ ಕುರಿತು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು ಸಚಿವರ ಈ ಪ್ರವಾಸ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಶಾಲಂ ಹುಸೇನ್‌, ಭೂದಾಖಲೆಗಳ ವಿಭಾಗದ ಜಿಲ್ಲಾ ಉಪನಿರ್ದೇಶಕ ಮೋಹನ ಶಿವಣ್ಣನವರ, ತಹಸಿಲ್ದಾರ ದೊಡ್ಡಪ್ಪ ಹೂಗಾರ, ಕಲ್ಲಗೌಡ ಪಾಟೀಲ, ಪ್ರಕಾಶ ನಾಶಿ, ಯಲ್ಲಪ್ಪ ಗೊಣೆನ್ನವರ, ಸುಧೀರ ಸಾಹುಕಾರ, ಗ್ರೇಡ್2 ತಹಸಿಲ್ದಾರ ಶ್ರವಣ ಕೊಚ್ಚರಗಿ,ಶಿವಾನಂದ ಹೆಬ್ಬಳ್ಳಿ, ಜಿ.ವಿ.ಪಾಟೀಲ, ಉಪತಹಸಿಲ್ದಾರ ದಾನೇಶ ಬೆಲೂಡಿ, ಪ್ರವೀಣ ಪೂಜಾರ,ರಮೇಶ ಬಂಡಿ, ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ನಾಸೀರ ಅಮರಗೋಳ, ಪಿ.ಎನ್.ಶಿವಳ್ಳಿಮಠ, ರವಿ ಬೆನ್ನೂರ, ಐ.ಎಪ್.ಐಯ್ಯನಗೌಡರ ಸೇರಿದಂತೆ ಇತರರು ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios