ಕರ್ನಾಟಕ ಬಜೆಟ್ 2026ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆ ಘೋಷಿಸಿದ್ದಾರೆ. ಇದರಲ್ಲಿ ಶಾಲೆಗಳ ಉನ್ನತೀಕರಣ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ, ಮತ್ತು ಮಹಿಳಾ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ ಪ್ರಮುಖವಾಗಿವೆ.
- Home
- News
- State
- Karnataka News Live: Karnataka Budget 2026 - ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!
Karnataka News Live: Karnataka Budget 2026 - ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!

ಹುಬ್ಬಳ್ಳಿ: ಯಾವುದೇ ಕೋಚಿಂಗ್ ಇಲ್ಲದೇ ಮನೆಯಲ್ಲೇ ತಯಾರಿ ನಡೆಸಿ, ಯುಪಿಎಸ್ಸಿ ಪರೀಕ್ಷೆಗೆ 5 ಪ್ರಯತ್ನಗಳ ಪೈಕಿ ನಾಲ್ಕರಲ್ಲಿ ಯಶಸ್ವಿಯಾದವರುಹುಬ್ಬಳ್ಳಿಯ ಕೃಪಾ ಜೈನ್. ಈಗಿನದು 5ನೇ ಬಾರಿಯಾಗಿದ್ದು, 190ನೇ ರ್ಯಾಂಕ್ ಪಡೆದಿದ್ದಾರೆ.
ಕೃಪಾ ಈವರೆಗೆ ಐದು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದು, ಮೊದಲ ಸಲವಷ್ಟೇ ವಿಫಲವಾಗಿದ್ದರು. ಉಳಿದ ನಾಲ್ಕು ಸಲವೂ ಯಶಸ್ವಿಯಾಗಿದ್ದಾರೆ. ಆದರೆ, ಐಪಿಎಸ್ ಅಧಿಕಾರಿಯಾಗಬೇಕೆಂಬುದು ಇವರ ಕನಸು. 2 ಮತ್ತು 4ನೇ ಪ್ರಯತ್ನದಲ್ಲಿ ಐಆರ್ಎಂಎಸ್ ದೊರೆತರೆ, 3ನೇ ಪ್ರಯತ್ನದಲ್ಲಿ ಐಎಫ್ಎಸ್ ಕ್ಲಿಯರ್ ಆಗಿದೆ. ಐಆರ್ಎಂಎಸ್ ಇಷ್ಟ ಆಗದ ಕಾರಣ ಅದಕ್ಕೆ ಸೇರ್ಪಡೆಗೊಳ್ಳದೇ ಮತ್ತೆ ಪ್ರಯತ್ನಿಸಿದ್ದರು.
ಐಎಫ್ಎಸ್ನಲ್ಲಿ 18ನೇ ರ್ಯಾಂಕ್ ಬಂದಿದ್ದು, ಡೆಹ್ರಾಡೂನ್ನಲ್ಲಿ ಐಎಫ್ಎಸ್ ಅಧಿಕಾರಿ ತರಬೇತಿ ಪಡೆಯುತ್ತಿದ್ದಾರೆ. ಆದರೂ, ಐಪಿಎಸ್ ಅಧಿಕಾರಿಯಾಗಬೇಕೆಂದು ಮತ್ತೆ 5ನೇ ಪ್ರಯತ್ನ ನಡೆಸಿದ್ದು, ಈ ಬಾರಿ 190ನೇ ರ್ಯಾಂಕ್ ಪಡೆದಿದ್ದಾರೆ. ಇದೀಗ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.
Karnataka News Live 7 March 2026Karnataka Budget 2026 - ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!
Karnataka News Live 7 March 2026ರಾಜ್ಯದಲ್ಲಿ ಇದೇ ಮೊದಲು, ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ; ಯಾರು ಖ್ಯಾತ ನಿರ್ದೇಶಕ?
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮೈಸೂರು ಜಿಲ್ಲೆಯ ಕಣಗಾಲ್ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು.
Karnataka News Live 7 March 2026'ಮೋದಿ ಸಾಲ ಮಾಡಿಲ್ವಾ?' ಸಾಲರಾಮಯ್ಯ ಎಂದ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು,
ರಾಜ್ಯ ಬಜೆಟ್ ಅಭಿವೃದ್ಧಿ ಶೂನ್ಯ ಮತ್ತು ಸಾಲದ ಸುಳಿಗೆ ಸಿಲುಕಿಸಲಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 80 ಸಾವಿರ ಕೋಟಿ ಪಾಲು ಬಾರದ ಕಾರಣ ಸಾಲ ಮಾಡಬೇಕಾಗಿದೆ ಎಂದ ಅವರು, ಪ್ರಧಾನಿ ಮೋದಿ ಮಾಡಿದ 200 ಲಕ್ಷ ಕೋಟಿ ಸಾಲದ ಬಗ್ಗೆಯೂ ಪ್ರಶ್ನಿಸಿದ್ದಾರೆ.
Karnataka News Live 7 March 2026ಪಲ್ಯ, ಸಾಂಬರ್ ಹೆಚ್ಚು ಖಾರವಾಯ್ತಾ? ಚಿಂತೆ ಮಾಡದೇ ಅಮ್ಮನ ಐದು ಟಿಪ್ಸ್ ಫಾಲೋ ಮಾಡಿ
Reduce spiciness in food ಅಡುಗೆಯಲ್ಲಿ ಖಾರ ಅಥವಾ ಉಪ್ಪು ಹೆಚ್ಚಾಯಿತೇ? ಟೊಮೆಟೋ, ತುಪ್ಪ, ಆಲೂಗಡ್ಡೆಯಂತಹ ಪದಾರ್ಥಗಳಿಂದ ಸರಿಪಡಿಸುವ ಸುಲಭ ಟಿಪ್ಸ್ ತಿಳಿಯಿರಿ. ನಿಮ್ಮ ಅಡುಗೆಯನ್ನು ಎಸೆಯದೆ ರುಚಿಕರವಾಗಿಸಿ!
Karnataka News Live 7 March 2026ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್ಗಳೆಲ್ಲಾ ಅನಿವಾರ್ಯ
ಮಟನ್ ಕಲ್ಲಿನಂತೆ ಗಟ್ಟಿಯಾಗುತ್ತಿದೆಯೇ? ಚಿಂತೆ ಬಿಡಿ. ಮಟನ್ ಅನ್ನು ಬೆಣ್ಣೆಯಂತೆ ಮೃದುವಾಗಿ ಬೇಯಿಸುವ ರಹಸ್ಯ ವಿಧಾನಗಳನ್ನು ತಿಳಿಯಿರಿ. ಈ ಸುಲಭ ಸಲಹೆಗಳಿಂದ ನಿಮ್ಮ ಬಾಡೂಟದ ರುಚಿ ಹೆಚ್ಚಿಸಿ.
Karnataka News Live 7 March 2026ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ; ಬಜೆಟ್ನಲ್ಲಿ ₹100 ಕೋಟಿ ಅನುದಾನ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯನ್ನು ಗುರಿಯಾಗಿಸಿಕೊಂಡು ₹100 ಕೋಟಿ ಅನುದಾನ ಘೋಷಿಸಲಾಗಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಗಳನ್ನು ಕಡೆಗಣಿಸಿರುವುದು ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
Karnataka News Live 7 March 2026ಗಂಡಸ್ತನ ಸಾಬೀತುಪಡಿಸೋ ಕಥೆ, ಈ ಅಡಲ್ಟ್ ಕಾಮಿಡಿ ನೋಡಲು ಮುಗಿಬಿದ್ದ ವೀಕ್ಷಕರು!
Mansion House Mallesh Movie Review: ಶ್ರೀನಾಥ್ ಮಾಗಂಟಿ ಮತ್ತು ಗಾಯತ್ರಿ ರಮಣ ಜೋಡಿಯಾಗಿ ನಟಿಸಿರುವ 'ಮ್ಯಾನ್ಷನ್ ಹೌಸ್ ಮಲ್ಲೇಶ್' ಸಿನಿಮಾ ಈ ಶುಕ್ರವಾರ ಪ್ರೇಕ್ಷಕರ ಮುಂದೆ ಬಂದಿದೆ. ಶ್ರೀನಾಥ್ ಸೋಲೋ ಹೀರೋ ಆಗಿ ನಟಿಸಿರುವ ಈ ಚಿತ್ರ ಹೇಗಿದೆ?
Karnataka News Live 7 March 2026Karnataka Budget 2026 - ಇದಪ್ಪಾ ಬಜೆಟ್ ಅಂದ್ರೆ, 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ!
ಈ ಬಾರಿಯ ಬಜೆಟ್ನಲ್ಲಿ ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ರೂ. ಕೃಷಿ ಸಾಲ ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ 100 ಕೋಟಿ ರೂ. ನೆರವು ಘೋಷಿಸಿದೆ. ಇದರೊಂದಿಗೆ, ಸಹಕಾರ ಸಂಘಗಳ ಗಣಕೀಕರಣ ಮತ್ತು ಎಪಿಎಂಸಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ.
Karnataka News Live 7 March 2026Karnataka Budget 2026 - ಪೊಲೀಸ್ ಇಲಖೆಗೆ ಸೇರಲು ಸಿದ್ಧತೆ ನಡೆಸ್ತಿರೋರಿಗೆ ಗುಡ್ನ್ಯೂಸ್ ಕೊಟ್ಟ ಸಿಎಂ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ 'ಡ್ರಗ್ಸ್ ಮುಕ್ತ ಕರ್ನಾಟಕ' ಗುರಿಯೊಂದಿಗೆ ಪೊಲೀಸ್ ಇಲಾಖೆಗೆ ವಿಶೇಷ ಅನುದಾನ ಘೋಷಿಸಿದ್ದಾರೆ. 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, 8 ಸಾವಿರ ಸಿಬ್ಬಂದಿ ನೇಮಕಾತಿ ಹಾಗೂ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.
Karnataka News Live 7 March 2026ಕರ್ನಾಟಕ ಬಜೆಟ್ - ವಸತಿ ಯೋಜನೆಯಲ್ಲಿ ಮನೆ ಬೇಕಾ? 'ನಮ್ಮ ಮನೆ' ಸ್ಕೀಂ ಬಗ್ಗೆ ತಿಳ್ಕೊಳ್ಳಿ
Karnataka News Live 7 March 2026ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಕರ್ನಾಟಕ ಹೈಕೋರ್ಟ್ಗೆ ಅರ್ಜಿ; ನೋಟಿಸ್ ಜಾರಿ
ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್ಎಂ ದಿಲೀಪ್ ನವಾಜ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸಂಬಂಧ ಹೈಕೋರ್ಟ್, ಗೂಗಲ್ ಇಂಡಿಯಾ ಮತ್ತು ಗೂಗಲ್ ಇಂಕ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
Karnataka News Live 7 March 2026ಯುಪಿಎಸ್ಸಿ ಪರೀಕ್ಷೆಯಲ್ಲಿ 389ನೇ Rank ಪಡೆದ ಸಕಲೇಶಪುರ ತಾಲೂಕಿನ ರೈತನ ಮಗ ಮನೋಜ್
Karnataka News Live 7 March 2026ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ವಿದ್ಯಾರ್ಥಿಗಳು, ಶಿಕ್ಷಕರು ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ!
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 15,000 ಶಿಕ್ಷಕರ ನೇಮಕಾತಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 'ರೋಹಿತ್ ವೇಮುಲ ಕಾಯ್ದೆ' ಜಾರಿ ಹಾಗೂ 800 ಕರ್ನಾಟಕ ಪಬ್ಲಿಕ್ ಶಾಲೆಗಳ ಉನ್ನತೀಕರಣದಂತಹ ಪ್ರಮುಖ ನಿರ್ಧಾರ