ಮಾರ್ಚ್ 6 ರಂದು ಆಚರಿಸಲಾಗುವ ವಿಶ್ವ ದಂತ ವೈದ್ಯರ ದಿನದ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ದಂತ ಚಿಕಿತ್ಸೆಯ ಬಗೆಗಿನ ಭಯವನ್ನು ಹೋಗಲಾಡಿಸಿ, ಆಧುನಿಕ ನೋವುರಹಿತ ಚಿಕಿತ್ಸೆಗಳು ಮತ್ತು ಸೌಂದರ್ಯವರ್ಧಕ ದಂತ ವೈದ್ಯಕೀಯದ ಬಗ್ಗೆ ತಿಳಿಸುತ್ತದೆ. .
State News Live: World Dentist s Day 2026 - ನಿಮ್ಮ ಆರೋಗ್ಯಕ್ಕೆ ದಂತಪಂಕ್ತಿಗಳೇ ಭೂಷಣ!

ಬೆಂಗಳೂರು (ಮಾ.6):ಪರಿಶಿಷ್ಟ ಜಾತಿಗೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ದಲಿತ ಸಚಿವರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು, ಮುಂದೆ ಇದೇ ವಿಷಯ ಬಗ್ಗೆ ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಒಳ ಮೀಸಲಾತಿ ಜಾರಿ ಕುರಿತು ದಲಿತ ಗುಂಪುಗಳಲ್ಲಿ ಉಂಟಾಗಿರುವ ತಿಕ್ಕಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಪುಟ ಸಭೆಯಲ್ಲಿ ದಲಿತ ಸಮುದಾಯದ ಎಡಗೈ, ಬಲಗೈ, ಸ್ಪಶ್ಯ ವರ್ಗಗಳ ಸಚಿವರಿಂದ ಈ ವಿಚಾರವಾಗಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ರೋಸ್ಟರ್ ಬಿಂದು ಮರುನಿಗದಿ ಮಾಡದೆ ಒಳಮೀಸಲು ಜಾರಿ ಮಾಡಿದರೆ ಬಲಗೈಗೆ ಅನ್ಯಾಯ ಎಂದು ಆಕ್ಷೇಪ ಎತ್ತಲಾಗಿದೆ.
Karnataka News Live 6th March:World Dentist s Day 2026 - ನಿಮ್ಮ ಆರೋಗ್ಯಕ್ಕೆ ದಂತಪಂಕ್ತಿಗಳೇ ಭೂಷಣ!
Karnataka News Live 6th March:State Budget 2026 - ರಾಜ್ಯ ಬಜೆಟ್ ಮೇಲೆ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಅಪಾರ ನಿರೀಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಕೊಡಗು ಜಿಲ್ಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ವನ್ಯಪ್ರಾಣಿ ಹಾವಳಿ ನಿಯಂತ್ರಣ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಮತ್ತು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಸಿಗಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.
Karnataka News Live 6th March:Karnataka Budget 2026-27 - ದಾವಣಗೆರೆ ಜನರ ನಿರೀಕ್ಷೆಯ ಇನ್ನೊಂದು ಖಾಲಿ ಜೋಳಿಗೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಮೇಲೆ ದಾವಣಗೆರೆ ಜಿಲ್ಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕೈಗಾರಿಕೆ, ಕೃಷಿ ಸಂಸ್ಕರಣಾ ಘಟಕ, ನೀರಾವರಿ ಯೋಜನೆಗಳು, ಐಟಿ ಪಾರ್ಕ್ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಂತಹ ದಶಕಗಳ ಬೇಡಿಕೆಗಳು ಈ ಬಾರಿಯಾದರೂ ಈಡೇರುವುದೇ?
Karnataka News Live 6th March:SSLC - ಪಾಸ್ ವಿತೌಟ್ ಹಿಂದಿ ನಿಯಮ ಜಾರಿಗೆ ‘ಹಿಂದಿ ಹೇರಿಕೆ ವಿರೋಧಿ’ ಸಂಘಟನೆ ಒತ್ತಾಯ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 'ಪಾಸ್ ವಿತೌಟ್ ಹಿಂದಿ' ನಿಯಮವನ್ನು ತಕ್ಷಣ ಜಾರಿಗೆ ತರಬೇಕೆಂದು 'ಹಿಂದಿ ಹೇರಿಕೆ ವಿರೋಧಿ ಕರ್ನಾಟಕ' ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಈ ಶೈಕ್ಷಣಿಕ ವರ್ಷದ ಪರೀಕ್ಷೆಗೆ ನಿಯಮ ಘೋಷಿಸದಿದ್ದರೆ, ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ
Karnataka News Live 6th March:ಹೆಣ್ಮಕ್ಕಳ ಉಚಿತ ಬಸ್ ಸೇವೆ ಶಕ್ತಿ ಯೋಜನೆಯ 5313 ಕೋಟಿ ಬಿಡುಗಡೆಗೆ KSRTC ಎಂಡಿಯಿಂದ ಸರ್ಕಾರಕ್ಕೆ ಪತ್ರ
ಶಕ್ತಿ ಯೋಜನೆಯಡಿ ಉಂಟಾಗಿರುವ ಅನುದಾನದ ಕೊರತೆ ನೀಗಿಸಲು ಸಾರಿಗೆ ನಿಗಮಗಳು ಸರ್ಕಾರಕ್ಕೆ ₹5,313.22 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿವೆ. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಲಿರುವ ರಾಜ್ಯ ಬಜೆಟ್ ಅನ್ನು ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ
Karnataka News Live 6th March:M Vahan Fitness App - ಅಕ್ರಮ ತಡೆಗೆ 66 ಆರ್ಟಿಒಗಳಲ್ಲಿ ಎಂ-ವಾಹನ್ ಫಿಟ್ನೆಸ್ ಆ್ಯಪ್ ಜಾರಿ
ವಾಹನಗಳ ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ) ನೀಡುವಲ್ಲಿನ ಅಕ್ರಮಗಳನ್ನು ತಡೆಯಲು, ರಾಜ್ಯದ ಎಲ್ಲಾ 66 ಆರ್ಟಿಒ ಕಚೇರಿಗಳಲ್ಲಿ ಜಿಯೋ ಫೆನ್ಸಿಂಗ್ ಆಧಾರಿತ 'ಎಂ-ವಾಹನ್ ಫಿಟ್ನೆಸ್' ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದು ತಿಳಿಯಿರಿ
Karnataka News Live 6th March:ಟ್ರಾಫಿಕ್ ಸಿಗ್ನಲ್ಗಳಿಗೆ ಎಲ್ಲ ಜಿಲ್ಲೇಲೂ ಬೆಂಗಳೂರು ಮಾದರಿ ಎಐ ಕ್ಯಾಮೆರಾ! ಸಿಗ್ನಲ್ ಜಂಪ್ ಮಾಡಿದರೆ ಮನೆಗೇ ಬರುತ್ತೆ ನೋಟಿಸ್
ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ 'ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್' (ITMS) ಜಾರಿಗೊಳಿಸಲಾಗುತ್ತಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದ, ಮೊಬೈಲ್ ಬಳಸುವ ವಾಹನ ಸವಾರರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತದೆ.
Karnataka News Live 6th March:CCB drug raid Bengaluru: ಅಕ್ರಮ ಡ್ರಗ್ಸ್ ವಾಸನೆ ತಡೆಗೆ ನಾಯಿಗಳ ಮಲಮೂತ್ರ, ಸಿಸಿಬಿ ತನಿಖೆ ವೇಳೆ ರಹಸ್ಯ ಬಯಲು!
ಬೆಂಗಳೂರಿನಲ್ಲಿ ಸಿಸಿಬಿಯಿಂದ ಬಂಧಿತರಾದ ಪ್ರೇಮಿಗಳು, ತಮ್ಮ ಫ್ಲ್ಯಾಟ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಾಸನೆಯನ್ನು ಮರೆಮಾಚಲು ತಮ್ಮ ಸಾಕು ನಾಯಿಗಳ ಮಲ-ಮೂತ್ರವನ್ನು ಬಳಸುತ್ತಿದ್ದರು. ಈ ಆಘಾತಕಾರಿ ವಿಧಾನ ಸಿಸಿಬಿ ತನಿಖೆ ವೇಳೆ ಬಯಲು
Karnataka News Live 6th March:KPSC: ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ಆಗಿಲ್ಲ: ಸಾಕ್ಷಿಯೂ ಇಲ್ಲ, ದೂರೂ ಬಂದಿಲ್ಲ, ದೋಷರಹಿತವಾಗಿ ನಡೆದಿದೆ ಪರೀಕ್ಷೆ - ಕೆಪಿಎಸ್ಸಿ
ಕೆಎಎಸ್ 384 ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಒಂದೇ ಕೊಠಡಿಯಿಂದ 12 ಮಂದಿ ಉತ್ತೀರ್ಣರಾದ ಹಾಗೂ ಒಂದೇ ಕುಟುಂಬದವರು ಆಯ್ಕೆಯಾಗಿದ್ದಾರೆ ಎಂಬ ಆರೋಪ ತಳ್ಳಿಹಾಕಲಾಗಿದೆ,
Karnataka News Live 6th March:Mallikarjuna Mutya: ಬಾಲಕಿ ಜೊತೆ ಅನುಚಿತ ವರ್ತನೆ; ಕೊನೆಗೂ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಮುತ್ಯಾ
ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಹಲ್ ರೋಜಾದ ಚಾಂಗ್ದೇವ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ, ಕೊನೆಗೂ ಶಹಾಪುರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
Karnataka News Live 6th March:ಬಗೆಹರಿಯದ ಒಳಮೀಸಲು ಗೋಜಲು; ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣ, ವಿಶೇಷ ಸಂಪುಟ ಸಭೆಗೆ ನಿರ್ಧಾರ
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತ ಸಚಿವ ಸಂಪುಟ ಸಭೆಯು ದಲಿತ ಸಚಿವರಲ್ಲೇ ಒಮ್ಮತ ಮೂಡದ ಕಾರಣ ಅಪೂರ್ಣಗೊಂಡಿದೆ. ರೋಸ್ಟರ್ ಬಿಂದು ಮರು ನಿಗದಿಪಡಿಸುವ ವಿಚಾರದಲ್ಲಿ ಎಡಗೈ ಮತ್ತು ಬಲಗೈ ಸಚಿವರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನ