- Home
- News
- State
- Karnataka News Live: ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ
Karnataka News Live: ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ

ದಾವಣಗೆರೆ: ಜಾತಿಗಣತಿ ಸಮೀಕ್ಷೆ ಮಾಡಿ, ವರದಿ ಜಾರಿಗೊಳಿಸಲು ಬಯಸಿದ್ದ ಸಿದ್ದರಾಮಯ್ಯ ಅವರು ಇನ್ನೂ 2 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದುಕೊಂಡಿದ್ದೆವು, ಆದರೆ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯಬೇಕಾಯಿತು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಮಾಡಿ, ಅದನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಬಯಸಿದ್ದರು. ಆದರೆ, ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಯಿತು. ಸಿಎಂ ಸ್ಥಾನದಿಂದ ಕೆಳಗಿಳಿದರೂ, ಅದಕ್ಕೆ ಮುಂಚೆ ಕೊನೆಯ ದಿನ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಪಡೆದಿದ್ದರು. ಜಾತಿ ಜನಗಣತಿ ವರದಿಯನ್ನು ಜಾರಿಗೊಳಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಪ್ರಸ್ತಾಪ ಮಾಡಿದ್ದೆವು. ಅದನ್ನು ಈಡೇರಿಸಬೇಕಾಗಿರುವುದು ನಮ್ಮ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
Karnataka News Live 4 July 2026ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ
Karnataka News Live 4 July 2026SIR ಪ್ರಕ್ರಿಯೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಅಪಘಾತದಲ್ಲಿ ಸಾವು, ಒತ್ತಡಕ್ಕೆ ಬಲಿಯಾಯ್ತಾ ಜೀವ?
SIR ಪ್ರಕ್ರಿಯೆ ತೆರಳುತಿದ್ದ ಗ್ರಾಮ ಲೆಕ್ಕಾಧಿಕಾರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಇದೀಗ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಅಧಿಕಾರಿಗಳ ಒತ್ತಡದಿಂದ ಘಟನೆ ನಡೆದಿದೆ ಅನ್ನೋ ಆರೋಪಗಳು ಕೇಳಿಬಂದಿದೆ.
Karnataka News Live 4 July 2026Bharat Mata Painting - ಭಾರತ ಮಾತೆಯ ಮೊದಲ ಚಿತ್ರ ಹೇಗಿತ್ತು? ಯಾರು ಚಿತ್ರಿಸಿದರು ಗೊತ್ತಾ?
ನಾವು ಸಾಮಾನ್ಯವಾಗಿ ನೋಡುವ ಭಾರತ ಮಾತೆ ಅಂದ್ರೆ ತ್ರಿವರ್ಣ ಸೀರೆಯುಟ್ಟು, ಕೈಯಲ್ಲಿ ಧ್ವಜ ಹಿಡಿದಿರುವ ಚಿತ್ರ. ಆದರೆ ಭಾರತ ಮಾತೆಯ ಮೊದಲ ಚಿತ್ರ ಹೇಗಿತ್ತು ಗೊತ್ತಾ? ಅದನ್ನು ಯಾರು, ಯಾವಾಗ ಚಿತ್ರಿಸಿದ್ದರು? ಇಲ್ಲಿದೆ ಮಾಹಿತಿ.
Karnataka News Live 4 July 2026ಅಪ್ಪ ತೆಗೆದುಕೊಂಡ ಆ ಒಂದು ದಿಟ್ಟ ನಿರ್ಧಾರ ನನ್ನ ಹಣೆಬರಹ ಬದಲಿಸಿತು - ಸಂಜು ಭಾವುಕ
ತುಳಿಯೋರ ನಡುವೆ ಕ್ರಿಕೆಟ್ನಲ್ಲಿ ಕ್ಲಿಕ್ ಆಗಿರುವ ಹಿಂದಿನ ಅಸಲಿ ಸಿಕ್ರೇಟ್ ಅನ್ನು ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ. ನನ್ನ ತಂದೆ ತೆಗೆದುಕೊಂಡು ಆ ಒಂದು ನಿರ್ಧಾರದಿಂದ ನನ್ನ ಬದುಕೇ ಬದಲಾಯ್ತು ಎಂದು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ದೆಹಲಿಯಲ್ಲಿ ಆಗಿದ್ದೇನು? ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 4 July 2026Amruthadhaare Serial - ಗೌತಮ್ಗೆ ಮಾರಣಾಂತಿಕ ಕಾಯಿಲೆ; ಸಾವಿನಿಂದಲೇ 'ಅಮೃತಧಾರೆ' ಅಂತ್ಯ ಆಗುತ್ತಾ?
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಶಕುಂತಲಾ-ಗೌತಮ್ ಒಂದಾಗಿದ್ದಾರೆ. ಇನ್ನೊಂದು ಕಡೆ ಭೂಮಿಕಾ ಅಕ್ಷರವನ್ನು ಪುಸ್ತಕ ರೂಪಕ್ಕೆ ಇಳಿಸಲು ಗೌತಮ್ ಸಜ್ಜಾಗಿದ್ದಾನೆ. ಆದರೆ ವಿಧಿ ಆಟ ಬೇರೆ ಇದ್ದಂತಿದೆ.
Karnataka News Live 4 July 2026ಎಚ್.ಕೆ. ಪಾಟೀಲ ಹೆಸರಿನಲ್ಲೇ ಮೂರು ಮತ - ಸಂಸದ ಬೊಮ್ಮಾಯಿ ಸ್ಫೋಟಕ ಆರೋಪ
ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು..
Karnataka News Live 4 July 2026ಜಸ್ಟ್ 14 ವರ್ಷಕ್ಕೆ ಬುರ್ಜ್ ಖಲೀಫಾದಲ್ಲಿ AI ಕಚೇರಿ ಸ್ಥಾಪನೆ! ಈ ಜೈನಂ ಜೈನ್ ಯಾರು?
Karnataka News Live 4 July 2026ಮಳೆಗಾಗಿ ಕಾಯುವ ದಿನ ಮುಗಿದಿದೆ.. ಹವಾಮಾನ ಇಲಾಖೆಯಿಂದ ಬಿಗ್ ಅಪ್ಡೇಟ್ಸ್
Karnataka News Live 4 July 2026ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಂಭೀರವಾಗಿ ಗಾಯಗೊಂಡ ರೈಡರ್
ಕಾರವಾರದಿಂದ ಉಡುಪಿಯತ್ತ ಸಾಗುತ್ತಿದ್ದ ಸಚಿವ ಯುಟಿ ಖಾದರ್ ಅವರಿಗೆ ಬೆಂಗಾವಲು ಪಡೆಯಾಗಿ ತೆರಳುತ್ತಿದ್ದ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
Karnataka News Live 4 July 2026ಕಾಮಿಡಿಯಿಂದ ಮಾಸ್ಗೆ ಶಿಫ್ಟ್ ಆದ ಕೋಮಲ್ - ಸಿಗಾರ್ ಹಿಡಿದ 'ರೋಲೆಕ್ಸ್'ನ ರಹಸ್ಯವೇನು?
ತಮ್ಮ ವಿಶಿಷ್ಟ ಕಾಮಿಡಿ ಟೈಮಿಂಗ್ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕೋಮಲ್ ಕುಮಾರ್ ಇದೀಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
Karnataka News Live 4 July 2026'ನೀನು ಒಪ್ಪದಿದ್ದರೆ ನಿನ್ನ ತಂಗಿಗೆ ಪ್ರಪೋಸ್ ಮಾಡ್ತೀನಿ' - ಪ್ರಜ್ವಲ್ ದೇವರಾಜ್-ರಾಗಿಣಿ ಪ್ರೀತಿಯ ಕಥೆ ಗೊತ್ತಾ?
Prajwal Devaraj: ಪ್ರಜ್ವಲ್ ಮತ್ತು ರಾಗಿಣಿ ಅವರ ಪರಿಚಯ ಬಾಲ್ಯದಲ್ಲೇ ಶುರುವಾಯಿತು. ಇಬ್ಬರೂ ಬೆಂಗಳೂರಿನ ಬನಶಂಕರಿಯಲ್ಲಿರುವ ಡಿಂಕಿ ಸಂಗೀತ ಮತ್ತು ನೃತ್ಯ ಅಕಾಡೆಮಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದರು.
Karnataka News Live 4 July 2026ಹುಟ್ಟುಹಬ್ಬದ ದಿನವೇ ‘ಮಾಫಿಯಾ’ಗೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್ - ಅಪ್ಪ ಕೂಡಾ ಸಾಥ್!
Mafia New Poster: ಇಂದು (ಜು.4) ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಈ ಪ್ರಯುಕ್ತ ಅವರು ನಟಿಸಿರುವ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ತಂದೆ - ಮಗ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.
Karnataka News Live 4 July 2026Sara Mahesh - ಕಾಂಗ್ರೆಸ್ ವಿರುದ್ಧ ಗುಡುಗಿದ ಸಾರಾ ಮಹೇಶ; ವ್ಯಂಗ್ಯವಾಗಿ ಮಾಜಿ ಸಿಎಂ ಟೀಕೆ!
SR Mahesh on Congress Government: ಮಾಜಿ ಸಚಿವ ಸಾರಾ ಮಹೇಶ್ ಅವರು ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೂಡಾ 50:50 ಸೈಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Karnataka News Live 4 July 2026Deadly Killer Review - ಕಾಡಿನ ಮಧ್ಯೆ ನಡೆದ ಆ ರಾತ್ರಿ ನಿಜಕ್ಕೂ ಏನಾಯಿತು?
Deadly Killer Review: ಕ್ರಿಮಿನಲ್ಗಳನ್ನು ಕರೆದುಕೊಂಡು ಪೊಲೀಸ್ ವ್ಯಾನ್ ಒಡಿಸ್ಸಾದ ಕಾಡಿನಿಂದ ಕರ್ನಾಟಕದೆಡೆಗೆ ಬರುತ್ತದೆ. ಆಂಧ್ರದ ಸರಹದ್ದಿಗೆ ಬರುವಾಗ ಇವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಾರೆ.
Karnataka News Live 4 July 2026Love Seasons Review - ಈ ಒಂದು ಕಾರಣಕ್ಕಾಗಿ 'ಲವ್ ಸೀಸನ್ಸ್' ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ!
Love Seasons Movie Review: ಈ ಕತೆ ವಿಭಿನ್ನ ಹಾದಿ ಹಿಡಿಯುತ್ತದೆ. ಅವನ ಬದುಕನ್ನು ಸೀಸನ್ಗಳ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಲವು ಪ್ರೇಮಗಳ ಕಥನ ಹೇಳುತ್ತಾರೆ.
Karnataka News Live 4 July 2026Gramayana Movie Review - ಹೇಗಿದೆ ದೊಡ್ಮನೆ ಕುಡಿ ‘ಗ್ರಾಮಾಯಣ’? ಇಲ್ಲಿದೆ ಸಂಪೂರ್ಣ ವಿಮರ್ಶೆ
ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, ‘ಗ್ರಾಮಾಯಣ’ ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ.
Karnataka News Live 4 July 2026USA Priyanka Chopra - ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಅಮೆರಿಕಾದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರಿಯಾಂಕಾ ಹಂಚಿಕೊಂಡಿರುವ ವೀಡಿಯೋದಲ್ಲಿ, ದೊಡ್ಡ ಗಾಜಿನ ಕಿಟಕಿಯ ಮೂಲಕ ಆಕಾಶದಲ್ಲಿ ಸಿಡಿಯುತ್ತಿರುವ ವರ್ಣರಂಜಿತ ಪಟಾಕಿಗಳು ಕಾಣಿಸುತ್ತವೆ.
Karnataka News Live 4 July 2026ಕೊಪ್ಪಳ - ಚಿನ್ನದ ವ್ಯಾಪಾರಿಯ ಇಡೀ ಕುಟುಂಬ ಸರ್ವನಾಶ, ಸಾಮೂಹಿಕವಾಗಿ ಸಾವಿಗೆ ಶರಣು!
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಜ್ಯುವೆಲರಿ ಅಂಗಡಿ ಮಾಲೀಕ ಪ್ರಕಾಶ್ ರಾಯ್ಕರ್, ಅವರ ಪತ್ನಿ ಮತ್ತು ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯು ಇಡೀ ನಗರವನ್ನು ಬೆಚ್ಚಿಬೀಳಿಸಿದ್ದು, ಸಾಲಬಾಧೆಯೇ ಸಾವಿಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
Karnataka News Live 4 July 2026ಬತ್ತಿದ ಕೃಷ್ಣೆಯ ಒಡಲಲ್ಲಿ ಮತ್ತೆ ಜಲಝೇಂಕಾರ! ರಾಜಾಪೂರ ಬ್ಯಾರೇಜ್ನಿಂದ ನೀರು ಬಿಡುಗಡೆ
Karnataka News Live 4 July 2026Shabari Movie - ಕನ್ನಡದ ಬೆಳ್ಳಿತೆರೆ ಮೇಲೆ ಶಬರಿ ಆದ Raani Kannada Serial ಬಾಲನಟಿ ಧನ್ವಿ!
Shabari Movie: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಾಲನಟಿ ಈಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಶಬರಿ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದು, ಟೀಸರ್ ರಿಲೀಸ್ ಆಗಿದೆ.