11:00 PM (IST) May 30

Karnataka News Live:ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್‌ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌!

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಿಂಧೂ ಜಲ ಒಪ್ಪಂದದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Read Full Story
10:47 PM (IST) May 30

Karnataka News Live:ಶೀಘ್ರದಲ್ಲೇ ಖಾದ್ಯ ತೈಲಗಳ ಬೆಲೆಯಲ್ಲಿ ಭಾರೀ ಇಳಿಕೆ, ಆಮದು ಸುಂಕ ಶೇ.10ರಷ್ಟು ಕಡಿತ ಮಾಡಿದ ಕೇಂದ್ರ ಸರ್ಕಾರ!

ಆಹಾರದ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಸಂಸ್ಕರಣಾ ಉದ್ಯಮಕ್ಕೆ ಸಹಾಯ ಮಾಡಲು ಭಾರತ ಸರ್ಕಾರವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.

Read Full Story
10:26 PM (IST) May 30

Karnataka News Live:ಶತಮಾನದ ಅಂತ್ಯದ ವೇಳೆಗೆ ಹಿಂದೂ ಕುಶ್ ಹಿಮಾಲಯದ ಶೇ. 75 ರಷ್ಟು ಮಂಜುಗಡ್ಡೆ ಕಳೆದುಕೊಳ್ಳಲಿದೆ - ವರದಿ

ಜಾಗತಿಕ ತಾಪಮಾನ ಏರಿಕೆಯಿಂದ ಹಿಂದೂ ಕುಶ್ ಹಿಮಾಲಯವು ತನ್ನ ಮಂಜುಗಡ್ಡೆಯ 75% ನಷ್ಟು ಭಾಗವನ್ನು ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿದರೆ, ಹಿಮನದಿಯ ಮಂಜುಗಡ್ಡೆಯ 40-45% ರಷ್ಟನ್ನು ಉಳಿಸಬಹುದು. 

Read Full Story
10:23 PM (IST) May 30

Karnataka News Live:ಮುದ್ದು ಮಗಳು ‘ಪರಿ’ ಜೊತೆ ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣಾ -ಮಿಲನಾ

ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಅವರು ತಮ್ಮ ಮುದ್ದಿನ ಮಗಳ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಫೋಟೊ ವೈರಲ್ ಆಗುತ್ತಿದೆ.

Read Full Story
09:49 PM (IST) May 30

Karnataka News Live:Viral Video - ವೇದಿಕೆಯಲ್ಲಿ ಮೋದಿ ಹೆಸರು ಮರೆತ ಬಿಹಾರ ಸಿಎಂ, ಅಟಲ್‌ ಬಿಹಾರಿ ವಾಜಪೇಯಿ ಎಂದ ನಿತೀಶ್‌ ಕುಮಾರ್‌!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಟಲ್ ಬಿಹಾರಿ ವಾಜಪೇಯಿ ಎಂದು ಕರೆದ ವಿಡಿಯೋ ವೈರಲ್ ಆಗಿದೆ. ಕರಕಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದ್ದು, ನಿತೀಶ್ ಕುಮಾರ್ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು.
Read Full Story
09:16 PM (IST) May 30

Karnataka News Live:ರಾಜ್ಯಗಳಿಗೆ 81,735 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆಗೆ ಕೇಂದ್ರ ಅನುಮೋದನೆ!

ಕೇಂದ್ರ ಸರ್ಕಾರವು ರಾಜ್ಯಗಳಿಗೆ ₹81,735 ಕೋಟಿ ಹೆಚ್ಚುವರಿ ತೆರಿಗೆ ವಿಕೇಂದ್ರೀಕರಣ ಕಂತನ್ನು ಜೂನ್ 2 ರಂದು ಬಿಡುಗಡೆ ಮಾಡಲಿದೆ. ಇದು ಜೂನ್ 10 ರಂದು ಬಿಡುಗಡೆಯಾಗುವ ನಿಯಮಿತ ಮಾಸಿಕ ಕಂತಿಗೆ ಹೆಚ್ಚುವರಿಯಾಗಿದೆ. 

Read Full Story
09:05 PM (IST) May 30

Karnataka News Live:IRCTC ಕೇರಳ ಟ್ರಿಪ್ - ಕಡಿಮೆ ಹಣಕ್ಕೆ ಬೆಸ್ಟ್ ಪ್ಯಾಕೇಜ್!

IRCTCಯ ವಿಶೇಷ ಕೇರಳ ಪ್ರವಾಸ ಪ್ಯಾಕೇಜ್, ಕೇವಲ ₹25,120 ರಿಂದ ಪ್ರಾರಂಭ! 6 ರಾತ್ರಿ, 7 ದಿನಗಳು, ಮುನ್ನಾರ್ ನಿಂದ ಅಲ್ಲೆಪ್ಪೆಯವರೆಗೆ, ಎಲ್ಲವೂ ಸೇರಿದೆ. ಬೇಗ ಬುಕ್ ಮಾಡಿ!
Read Full Story
09:02 PM (IST) May 30

Karnataka News Live:ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ 2 ಅತ್ಯಂತ ಭಾರೀ ಮಳೆಯ ಅಲರ್ಟ್‌ ನೀಡಿದ ಐಎಂಡಿ!

ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. 

Read Full Story
08:44 PM (IST) May 30

Karnataka News Live:ಭಾರತದ ಸೇನೆ ನಾಲಾಯಕ್‌ ಎಂದಿದ್ದ ಶಾಹಿದ್‌ ಅಫ್ರಿದಿಗೆ ದುಬೈನಲ್ಲಿ ಆತ್ಮೀಯ ಸ್ವಾಗತ ನೀಡಿದ ಕೇರಳ ಕಮ್ಯುನಿಟಿ!

ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕೇರಳದ ಸಮುದಾಯ ಅತ್ಯಂತ ವೈಭವದಿಂದ ಸ್ವಾಗತಿಸಿದ್ದು, ನೆಟ್ಟಿಗರಿಂದ ನೆಗೆಟಿವ್‌ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

Read Full Story
08:37 PM (IST) May 30

Karnataka News Live:ಇಂಡಿಗೊದಿಂದ ಬೆಂಗಳೂರಿನಲ್ಲಿ ₹1,100 ಕೋಟಿ ಹೂಡಿಕೆ; ಏಷ್ಯಾದ ಅತಿದೊಡ್ಡ ಎಂಆರ್‌ಒ ನಿರ್ಮಾಣ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ₹1,100 ಕೋಟಿಗೂ ಹೆಚ್ಚು ಹೂಡಿಕೆ ಮಾಡಿ ಎಂಆರ್‌ಒ ಸೌಲಭ್ಯ ಸ್ಥಾಪಿಸಲಿದೆ. ಈ ಯೋಜನೆಯು ಉದ್ಯೋಗ ಸೃಷ್ಟಿಗೆ ಪೂರಕವಾಗಲಿದ್ದು, ಬೆಂಗಳೂರನ್ನು ಏಷ್ಯಾದ 'ಎಂಆರ್‌ಒ' ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.
Read Full Story
08:01 PM (IST) May 30

Karnataka News Live:10 ವರ್ಷಕ್ಕೂ ಅಧಿಕ ಕಾಲ ಸೇವೆ ಮಾಡಿ NPS ಆಯ್ಕೆ ಮಾಡಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರಿಗೆ ಗುಡ್‌ ನ್ಯೂಸ್‌!

ಮಾರ್ಚ್ 31, 2025 ರ ಮೊದಲು ನಿವೃತ್ತರಾದ NPS ಚಂದಾದಾರರಿಗೆ ಏಕೀಕೃತ ಪಿಂಚಣಿ ಯೋಜನೆಯಡಿ ಹೆಚ್ಚುವರಿ ಪ್ರಯೋಜನಗಳನ್ನು ಘೋಷಿಸಲಾಗಿದೆ.
Read Full Story
06:57 PM (IST) May 30

Karnataka News Live:ಪರಿಶಿಷ್ಟ ಜಾತಿ ದತ್ತಾಂಶ ಒಳಮೀಸಲಾತಿ ಬಿಟ್ಟು ಬೇರಾವ ಯೋಜನೆಗೂ ಬಳಸೊಲ್ಲ; ಪಿ.ಎಂ. ನರೇಂದ್ರಸ್ವಾಮಿ!

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿಯ ಹೊರತಾಗಿ ಇತರ ಯೋಜನೆಗಳಿಗೆ ಬಳಸುವುದಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಅವರು ಹೇಳಿದರು.
Read Full Story
06:51 PM (IST) May 30

Karnataka News Live:ಐಪಿಎಲ್ 2025 ರಲ್ಲಿ ಆರೆಂಜ್‌ ಕ್ಯಾಪ್‌, ಪರ್ಪಲ್‌ ಕ್ಯಾಪ್‌ಗಾಗಿ ಸೆಣಸುತ್ತಿರುವ ಅಗ್ರ 4 ಸ್ಪರ್ಧಿಗಳು

ಆಶಿಶ್ ನೆಹ್ರಾ ರವರ ಅನುಗ್ರಹ, ಗುರು ಕೃಪಾಕಟಾಕ್ಷದ ಮಾರ್ಗದರ್ಶನದಲ್ಲಿ, ತರಬೇತಿ ಪಡೆಯುತ್ತಿರುವ ಗುಜರಾತ್ ಟೈಟಾನ್ಸ್ ಆಟಗಾರರು ಐಪಿಎಲ್ 2025 ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆನೆ ನಡೆದದ್ದೇ ದಾರಿ ಎನ್ನುತ್ತಿದ್ದಾರೆ.

Read Full Story
06:45 PM (IST) May 30

Karnataka News Live:ತಮಿಳುನಾಡಿನ ದಂತ ಚಿಕಿತ್ಸಾಲಯದಿಂದ ಮಾರಕ ಬ್ಯಾಕ್ಟೀರಿಯಾ - 8 ಸಾವು!

ತಿರುಪತ್ತೂರಿನ ಒಂದು ದಂತ ಚಿಕಿತ್ಸಾಲಯದಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳ ಬಳಕೆಯಿಂದ ಮಾರಕ ಬ್ಯಾಕ್ಟೀರಿಯಾ ಹರಡಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. 'ದಿ ಲ್ಯಾನ್ಸೆಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

Read Full Story
06:26 PM (IST) May 30

Karnataka News Live:ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ

ತುಡರುಂ ಸಿನಿಮಾದಿಂದ ಹಿಡಿದು ಜೆರ್ರಿ ಸಿನಿಮಾವರೆಗೂ ಈ ವಾರ ಮಲಯಾಳಂ ನ ಈ ಸೂಪರ್ ಥ್ರಿಲ್ಲರ್ ಸಿನಿಮಾಗಳು OTTಗೆ ಬರಲಿದೆ. ಮಿಸ್ ಮಾಡದೇ ಸಿನಿಮಾ ನೋಡಿ.

Read Full Story
06:10 PM (IST) May 30

Karnataka News Live:ಈ ವಿಟಮಿನ್ ಕೊರತೆಯಾದ್ರೆ ಲಟ ಲಟ ಮೂಳೆಯೇ ಮುರೀಬಹುದು, ಮಾಡಬೇಕಾದ್ದೇನು?

ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ, ಮುಖ್ಯವಾಗಿ ಸೂರ್ಯನ ಬಿಸಿಲು ಮತ್ತು ಕೆಲವು ಆಹಾರಗಳಿಂದ ಪಡೆಯುತ್ತೇವೆ. ವಿಟಮಿನ್ ಡಿ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಮೂಳೆಗಳ ಆರೋಗ್ಯ ಕಾಪಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Read Full Story
06:02 PM (IST) May 30

Karnataka News Live:'ಗುರುದಕ್ಷಿಣೆ ರೂಪದಲ್ಲಿ ನನಗೆ ಪಿಒಕೆ ಬೇಕು..' ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿಗೆ ಹೇಳಿದ ಜಗದ್ಗರು ರಾಮಭದ್ರಾಚಾರ್ಯ!

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಜಗದ್ಗುರು ರಾಮಭದ್ರಾಚಾರ್ಯರಿಂದ ಗುರುದೀಕ್ಷೆ ಪಡೆದರು. ರಾಮಭದ್ರಾಚಾರ್ಯರು ಗುರುದಕ್ಷಿಣೆಯಾಗಿ ಪಿಒಕೆ ಕೇಳಿದರು, ಇದಕ್ಕೆ ಸೇನಾ ಮುಖ್ಯಸ್ಥರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
Read Full Story
05:43 PM (IST) May 30

Karnataka News Live:ಗ್ಯಾಸ್ ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್‌ನಿಂದ ಮಹಿಳೆಯ ಮೇಲೆ ಅತ್ಯಾ*ಚಾರ ಯತ್ನ

ಚಾಮರಾಜನಗರದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.

Read Full Story
05:37 PM (IST) May 30

Karnataka News Live:ಸೆಬಿಯಿಂದ ಬ್ಯಾನ್ ಆಗಿರುವ ಬಾಲಿವುಡ್‌ ನಟನ ಪತ್ನಿ ಮಾರಿಯಾ ಗೊರೆಟ್ಟಿ ಯಾರು?

ಅರ್ಶದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಮೇಲೆ SEBI ಒಂದು ವರ್ಷ ನಿಷೇಧ ಹೇರಿದೆ. ಸಾಧನಾ ಬ್ರಾಡ್‌ಕಾಸ್ಟ್ ಷೇರುಗಳ ತಪ್ಪುದಾರಿಗೆಳೆಯುವ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Read Full Story
05:23 PM (IST) May 30

Karnataka News Live:ದಾಖಲೆಗಳ ಸೀಸನ್‌ - ಐಪಿಎಲ್‌ ಫೈನಲ್‌ವರೆಗಿನ ಹಾದಿಯಲ್ಲಿ ಆರ್‌ಸಿಬಿ ಮಾಡಿರುವ ಮಹಾ ರೆಕಾರ್ಡ್‌ಗಳು!

ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ, ಆರ್‌ಸಿಬಿ ತಂಡವು ತಮ್ಮ ನಾಲ್ಕನೇ ಫೈನಲ್‌ಗೆ ಅರ್ಹತೆ ಪಡೆದಿದೆ. ತಂಡದ ಈ ಯಶಸ್ಸಿಗೆ ಕೊಹ್ಲಿ, ಪಟಿದಾರ್ ಸೇರಿದಂತೆ ಹಲವು ಆಟಗಾರರ ಪ್ರದರ್ಶನ ಕಾರಣವಾಗಿದೆ.
Read Full Story