12:03 AM (IST) Jun 23

Karnataka News Live 22 June 2025 ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ

ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story
10:57 PM (IST) Jun 22

Karnataka News Live 22 June 2025 ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ - ಗೌರಿ ಖಾನ್

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ. 

Read Full Story
10:15 PM (IST) Jun 22

Karnataka News Live 22 June 2025 ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ, 2 ದಿನಗಳ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಜುಲೈ ೨೬ ಮತ್ತು ೨೭ ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ 'ಕುಂದಾಪ್ರ ಕನ್ನಡ ಹಬ್ಬ-೨೦೨೫' ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನ, ಸಂಗೀತ, ನೃತ್ಯ, ಕ್ರೀಡೆಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಇರಲಿವೆ. ಕುಂದಾಪುರ ಮೂಲದ ಸಾಧಕರನ್ನು ಸನ್ಮಾನಿಸಲಾಗುವುದು.
Read Full Story
09:30 PM (IST) Jun 22

Karnataka News Live 22 June 2025 ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.

Read Full Story
08:44 PM (IST) Jun 22

Karnataka News Live 22 June 2025 ಉದ್ಯಮಿಯಿಂದ 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು - 17 ವರ್ಷ ಬಳಸಲಾಗದ ಗಿಫ್ಟ್ ಈಗೇಕೆ ಎಂದ ನೆಟ್ಟಿಗರು

ದುಬೈ ಮೂಲದ ಭಾರತೀಯ ಉದ್ಯಮಿ ಸತೀಶ್ ಸನ್‌ಪಾಲ್ ತಮ್ಮ ಒಂದು ವರ್ಷದ ಮಗಳಿಗೆ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story
08:44 PM (IST) Jun 22

Karnataka News Live 22 June 2025 ಒಂದು ದಿನವೂ ಕೆಲಸ ಮಾಡ್ದೇ ಇದ್ದರೂ ಉದ್ಯೋಗಿಗೆ 26 ಲಕ್ಷ ರೂ. ಸಂಬಳ! ಸಿಬ್ಬಂದಿಗೆ ಹೊಡೆಯಿತು ಲಾಟರಿ

ಸರಿಯಾಗಿ ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಕೆಲಸವೇ ಮಾಡದ ಉದ್ಯೋಗಿಗೆ 26 ಲಕ್ಷ ರೂಪಾಯಿಗಳನ್ನು ನೀಡಿದೆ. ಏನಪ್ಪಾ ಸಮಾಚಾರ ನೋಡಿ!

Read Full Story
08:09 PM (IST) Jun 22

Karnataka News Live 22 June 2025 ರಾಯಚೂರಿಗೆ ನಾಳೆ ಸಿಎಂ ಸಿದ್ದರಾಮಯ್ಯ ಆಗಮನ - ಭರ್ಜರಿ ಸಮಾರಂಭಕ್ಕೆ ಸಕಲ ಸಿದ್ಧತೆ!

ಜೂನ್ 23 ರಂದು ಸಿಎಂ ಸಿದ್ದರಾಮಯ್ಯ ರಾಯಚೂರು ಜಿಲ್ಲೆಯ ಯರಗೇರಾಕ್ಕೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಮತ್ತು ಬುಡಕಟ್ಟು ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ಕೂಡ ನಡೆಯಲಿದೆ.
Read Full Story
08:00 PM (IST) Jun 22

Karnataka News Live 22 June 2025 ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!

ಚೀನಾದ ಅಪರೂಪದ ಭೂಮಿಯ ಲೋಹಗಳ ರಫ್ತಿ ನಿರ್ಬಂಧದಿಂದ ಭಾರತದ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದೆ, ಇದು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಅತ್ಯಗತ್ಯ.
Read Full Story
06:59 PM (IST) Jun 22

Karnataka News Live 22 June 2025 ಕೌಟುಂಬಿಕ ಕಲಹ - She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಇನ್ನಿಲ್ಲ

ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ.

Read Full Story
06:37 PM (IST) Jun 22

Karnataka News Live 22 June 2025 ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ - ಜಿಟಿಆರ್‌ಐ ಎಚ್ಚರಿಕೆ

ದೂರಸಂಪರ್ಕ ವಲಯದ ಸಾರ್ವಜನಿಕ ಖರೀದಿ ಆದೇಶದಲ್ಲಿ ಸ್ಥಳೀಯ ವಿಷಯ ನಿಯಮಗಳ ಸಡಿಲಿಕೆ ಭಾರತೀಯ ತಯಾರಕರಿಗೆ ಹಿನ್ನಡೆಯಾಗಬಹುದು ಎಂದು GTRI ವರದಿ ಎಚ್ಚರಿಸಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಲಾಭದಾಯಕವಾಗಬಹುದು. ಈ ನಡೆ ಸ್ಥಳೀಕರಣಕ್ಕೆ ಹಾನಿಕರ ಮತ್ತು ವಿದೇಶಿ ಅವಲಂಬನೆಗೆ ದಾರಿ ಮಾಡಿಕೊಡಬಹುದು.

Read Full Story
06:15 PM (IST) Jun 22

Karnataka News Live 22 June 2025 ₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್

ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Read Full Story
06:11 PM (IST) Jun 22

Karnataka News Live 22 June 2025 ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್

ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ.

Read Full Story
05:41 PM (IST) Jun 22

Karnataka News Live 22 June 2025 ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್

ಮಿಸ್ಟರ್ ಡೋನಾಲ್ಡ್ ಟ್ರಂಪ್ ನೀವು ಯುದ್ಧ ಆರಂಭಿಸದ್ದೀರಿ, ನಾವು ಮುಗಿಸುತ್ತೇವೆ. ಇದು ಇರಾನ್ ಅಮೆರಿಕಗೆ ನೀಡಿದ ಎಚ್ಚರಿಕೆ. ಅಮೆರಿಕ ದಾಳಿಗೆ ಕೆರಳಿರುವ ಇರಾನ್ ವಾರ್ನಿಂಗ್ ನೀಡಿದೆ.

Read Full Story
05:33 PM (IST) Jun 22

Karnataka News Live 22 June 2025 ಕಾರು ಹತ್ತಿಸಿದ್ದಕ್ಕೆ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕನ ವಿಡಿಯೋ ವೈರಲ್!

ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ ಚಾಲಕ, ತಪ್ಪಿತಸ್ಥ ಮನೋಭಾವನೆಯಿಂದ ನಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲಿಯೇ ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದು ವಿಡಿಯೋ ವೈರಲ್ ಮಾಡಿದ್ದಾರೆ.

Read Full Story
05:16 PM (IST) Jun 22

Karnataka News Live 22 June 2025 ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು

ದಕ್ಷಿಣ ಭಾರತೀಯ ಪಾಕಪದ್ಧತಿಯ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಅಡುಗೆಯವರ ಕೊರತೆ ಎದುರಾಗಿದೆ. ಹೋಟೆಲ್ ಉದ್ಯಮ ಯಾಂತ್ರೀಕರಣದತ್ತ ಮುಖಮಾಡುತ್ತಿದ್ದು, ವಡೆ, ಪೊಂಗಲ್ ತಯಾರಿಕೆಯ ಯಂತ್ರಗಳು ಈಗಾಗಲೇ ಬಳಕೆಯಲ್ಲಿವೆ. ಆದರೆ, ಮೈಸೂರು ಪಾಕ್‌ನಂತಹ ಸೂಕ್ಷ್ಮ ಖಾದ್ಯಗಳಿಗೆ ಮಾನವ ಸ್ಪರ್ಶ ಇನ್ನೂ ಅನಿವಾರ್ಯ.
Read Full Story
05:03 PM (IST) Jun 22

Karnataka News Live 22 June 2025 ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ

ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
04:55 PM (IST) Jun 22

Karnataka News Live 22 June 2025 ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ

ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ.

Read Full Story
04:54 PM (IST) Jun 22

Karnataka News Live 22 June 2025 ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ!

ಹಿಂದೂ ಧರ್ಮದ ಪ್ರಮುಖ ವೇದ ಮಂತ್ರ ಗಾಯತ್ರಿ ಮಂತ್ರವು ಭಾರತದ ಗಡಿಯನ್ನು ದಾಟಿ ವಿಶ್ವದಾದ್ಯಂತ ಪಠಿಸಲ್ಪಡುತ್ತಿದೆ. ನೇಪಾಳ, ಮಾರಿಷಸ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಧ್ಯಾನ ಮತ್ತು ಪೂಜಾ ವಿಧಿಗಳಲ್ಲಿ ಬಳಕೆಯಾಗುತ್ತಿದೆ. ಋಗ್ವೇದದಿಂದ ಉದ್ಭವಿಸಿದ ಈ ಮಂತ್ರ ಋಷಿ ವಿಶ್ವಾಮಿತ್ರರಿಂದ ರಚಿತವಾಗಿದೆ.
Read Full Story
04:47 PM (IST) Jun 22

Karnataka News Live 22 June 2025 10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು

10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Read Full Story
04:31 PM (IST) Jun 22

Karnataka News Live 22 June 2025 ಗೋಕರ್ಣದಲ್ಲಿ ಮತಾಂತರ ಯತ್ನ - ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಧಾರ್ಮಿಕ ಪ್ರಭೋದನೆ ಹೆಸರಿನಲ್ಲಿ ಬಡವರ ಮತಾಂತರಕ್ಕೆ ಯತ್ನ ನಡೆದಿದೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story