- Home
- News
- State
- Karnataka News Live: ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಗೆ ಕೃತಕ ನೆರೆ ಭೀತಿ
LIVE NOW
Karnataka News Live: ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಗೆ ಕೃತಕ ನೆರೆ ಭೀತಿ

ಸಾರಾಂಶ
ವಿಜಯಪುರ: ಯತ್ನಾಳ್ ಅವರು ಹೊಸ ಪಕ್ಷ ಮಾಡಲಿ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ಮಾಡಿದರೆ ನಾನು ಬೆಂಬಲ ಕೊಡುತ್ತೇನೆ. ತಮಿಳುನಾಡಿನ ವಿಜಯ್ ರೀತಿ ಅವರು ಸಿಎಂ ಆಗುತ್ತಾರೆ. ಆದರೆ ಅವರು ಹೊಸ ಪಕ್ಷ ಮಾಡುವುದಿಲ್ಲ. ಸುಮ್ಮನೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಜೆಪಿಗೆ ವಾಪಸ್ ತೆಗೆದುಕೊಳ್ಳಿ, ನನಗೆ ವಿಜಯಪುರ ಟಿಕೆಟ್ ಕೊಡಿ ಅಂತಾರಷ್ಟೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದರು.
Add Asianetnews Kannada as a Preferred Source

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಬಿಜೆಪಿಯಿಂದ ಉಚ್ಛಾಟಿತರಿದ್ದಾರೆ. ಆದರೂ ಬಿಜೆಪಿ ವ್ಯಾಮೋಹ ಇವರಿಗೆ ಹೋಗಿಲ್ಲ. ತಾಕತ್ತಿದ್ದರೆ ಇವರು ಜೆಸಿಬಿ ಪಾರ್ಟಿ ಮಾಡಲಿ. ವಿಜಯಪುರದವರು ಮುಖ್ಯಮಂತ್ರಿಯಾಗಲಿ. ವಿಜಯಪುರದವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷವಿದೆ. ಆದರೆ ಇವರು ಹಾಗೆ ಮಾಡುವುದಿಲ್ಲ. ಇವರು ಸುಮ್ಮನೆ ಜೆಸಿಬಿ ತೋರಿಸಿ ಹೆದರಿಸಿ ವಿಜಯಪುರ ನಗರ ಟಿಕೆಟ್ ಪಡೆಯುವುದಷ್ಟೆ ಅವರ ಬೇಡಿಕೆ ಎಂದರು.
07:51 AM (IST) May 16
Karnataka News Live 16 May 2026ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಗೆ ಕೃತಕ ನೆರೆ ಭೀತಿ
ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸೇತುವೆ ನಿರ್ಮಾಣಕ್ಕಾಗಿ ನದಿಗೆ ಹಾಕಲಾದ ಒಡ್ಡಿನಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ. ಈ ಕಾಮಗಾರಿಯಿಂದಾಗಿ ದಂಬೆಲ್, ಮಾಲೇಮಾರ್, ಕಾವೂರು ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆಯಿದ್ದು, ಸುಮಾರು 2.5 ಲಕ್ಷ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.
Read Full Story 07:40 AM (IST) May 16
Karnataka News Live 16 May 2026ಅದಾನಿ ಏರ್ಪೋರ್ಟ್ಗಳಲ್ಲಿ ಐಷಾರಾಮಿ ಕ್ರಾಂತಿ - ನಮ್ಮ ಮಂಗಳೂರಿಗೂ ಬರಲಿದೆ ಕಿಂಪ್ಟನ್
ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಮತ್ತು ಐಎಚ್ಜಿ ಹೊಟೇಲ್ಸ್ ಭಾರತದಲ್ಲಿ ಐದು ಹೊಸ ಹೋಟೆಲ್ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ, ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಕಿಂಪ್ಟನ್, ಹಾಲಿಡೇ ಇನ್ ಬ್ರ್ಯಾಂಡ್ಗಳ ಹೋಟೆಲ್ಗಳು ತಲೆ ಎತ್ತಲಿವೆ. ಇದು ವಿಮಾನ ನಿಲ್ದಾಣ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
Read Full Story 07:29 AM (IST) May 16
Karnataka News Live 16 May 2026ಮಳೆಗಾಗಿ ಗೊಂಬೆಗಳ ಅದ್ಧೂರಿ ಮದುವೆ; ಅರಿಶಿಣ ಕಾರ್ಯ, ಸುರಗಿ ಸುತ್ತು ಸೇರಿದಂತೆ ಎಲ್ಲವೂ ಇತ್ತು
ಬಾಗಲಕೋಟೆ ಜಿಲ್ಲೆಯ ವರ್ಚಗಲ್ ಗ್ರಾಮದಲ್ಲಿ ಮಳೆ ಕೊರತೆ ನೀಗಿಸಲು, ವರುಣ ದೇವನ ಕೃಪೆ ಕೋರಿ ಗೊಂಬೆಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯದಂತೆ, ಗ್ರಾಮಸ್ಥರೆಲ್ಲರೂ ಸೇರಿ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಪಾಲಿಸಿ, ಈ ವಿಶಿಷ್ಟ ವಿವಾಹವನ್ನು ನಡೆಸಿದರು.
Read Full Story