11:47 PM (IST) Jun 11

Karnataka News Live 11th June 2025ಭಾರೀ ಮಳೆಗೆ ಧಾರವಾಡ-ವಿಜಯಪುರ ಹೆದ್ದಾರಿ ಬಂದ್! ಮನೆಗಳಿಗೆ ನುಗ್ಗಿದ ನೀರು!

ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ನವಲಗುಂದ ತಾಲೂಕಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಧಾರವಾಡ-ವಿಜಯಪುರ ಹೆದ್ದಾರಿಯು ಒಂದು ಘಂಟೆಗೂ ಹೆಚ್ಚು ಕಾಲ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತವು ರೆಡ್ ಅಲರ್ಟ್ ಘೋಷಿಸಿದೆ.
Read Full Story
11:19 PM (IST) Jun 11

Karnataka News Live 11th June 2025ಅನ್‌ಲಿಮಿಟೆಡ್ ಕಾಲ್, ಡೇಟಾ, 30 ದಿನ ವ್ಯಾಲಿಟಿಡಿ, ಇಲ್ಲಿದೆ BSNLನ 200 ರೂ ಒಳಗಿನ ಪ್ಲಾನ್

BSNL ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಎರಡು ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ಅನ್‌ಲಿಮಿಟೆಡ್ ಕರೆ, 30 ದಿನ ವ್ಯಾಲಿಟಿಡಿ, ಉಚಿತ ಡೇಟಾ ಸೇರಿದಂತೆ ಹಲವು ಆಫರ್ ನೀಡಲಾಗಿದೆ. 

Read Full Story
11:16 PM (IST) Jun 11

Karnataka News Live 11th June 2025Karnataka Rains - ಉಡುಪಿ ಜಿಲ್ಲೆಗೆ ನಾಳೆ ರೆಡ್‌ ಅಲರ್ಟ್; ಶಾಲೆಗಳಿಗೆ ರಜೆ ಘೋಷಣೆ!

ಜೂನ್ 12 ರಂದು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜಿಲ್ಲಾಡಳಿತವು ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೂ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Read Full Story
10:57 PM (IST) Jun 11

Karnataka News Live 11th June 2025ಗೋಲ್ಮಾಲ್ ಮಾಡಿದ ನಟ ಅರ್ಷದ್ ವಾರ್ಸಿಗೆ ಸೆಬಿ ಶಾಕ್, ಷೇರು ಮಾರುಕಟ್ಟೆಯಿಂದ ನಿಷೇಧ

ಬಾಲಿವುಡ್‌ನಲ್ಲಿ ಗೋಲ್ಮಾಲ್ ಸಿನಿಮಾ ಮೂಲಕ ಮಿಂಚಿದ ನಟ ಷೇರುಮಾರುಕಟ್ಟೆಯಲ್ಲಿ ಮಾಡಿದ ಗೋಲ್ಮಾಲ್‌ಗೆ ಭಾರಿ ದಂಡ ತೆರಬೇಕಾಗಿ ಬಂದಿದೆ. ಬಾಲಿವುಡ್ ನಟ ಅರ್ಷದ್ ವಾರ್ಸಿ ಹಾಗೂ ನಟನ ಪತ್ನಿಗೆ ಸೆಬಿ ಶಾಕ್ ಕೊಟ್ಟಿದೆ. ಷೇರು ಮಾರುಕಟ್ಟೆಯಿಂದ ನಿಷೇಧ ಹೇರಿದೆ.

Read Full Story
10:51 PM (IST) Jun 11

Karnataka News Live 11th June 2025ED Raid - 'ನನ್ನ ಮನೆಯಿಂದ ಒಂದು ತುಂಡನ್ನೂ ಸೀಜ್ ಮಾಡಿಲ್ಲ' - ಶಾಸಕ ಭರತ್ ರೆಡ್ಡಿ

Valmiki scam case: ಶಾಸಕ ಭರತ್ ರೆಡ್ಡಿ ಅವರ ಬಳ್ಳಾರಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story
10:21 PM (IST) Jun 11

Karnataka News Live 11th June 2025ಐಟಿ ಲೋಕದಿಂದ ಆಟೋ ಚಾಲಕನಾದ ಬೆಂಗಳೂರಿಗನ ಕಣ್ಣೀರ ಕತೆ, ಹೊಸ ಅಧ್ಯಾಯಕ್ಕೆ ಹುಡುಕಾಟ

ಈತ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಪ್ರತಿಭಾನ್ವಿತ. ಆದರೆ ಬದುಕಿನಲ್ಲಿ ಎದುರಾದ ಸವಾಲು ಕೆಲಸವನ್ನು ಕಿತ್ತುಕೊಂಡಿತ್ತು. ಇದೀಗ ಆಟೋ ಚಾಲಕನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಈತ ಮತ್ತೆ ಉದ್ಯೋದತ್ತ ಮುಖ ಮಾಡಲು ಹೋರಾಟ ನಡೆಸುತ್ತಿದ್ದಾನೆ. 

Read Full Story
09:30 PM (IST) Jun 11

Karnataka News Live 11th June 2025ಆರ್‌ಸಿಬಿಗೆ ಕಪ್, ಇಶಾನ್ ಖಾತೆ ಸಸ್ಪೆಂಡ್, ಕೊಹ್ಲಿ ಎಚ್ಚರಿಸಿದ 14 ವರ್ಷ ಬಳಿಕ ಕ್ರಮ, ಏನಿದು ಘಟನೆ?

ಆರ್‌ಸಿಬಿ ಕಪ್ ಗೆಲ್ಲಲು 18 ವರ್ಷ ಬೇಕಾಯಿತು. ಇತ್ತ ಇಶಾನ್ ಖಾತೆ ಅಮಾನತ್ತಾಗಲು 14 ವರ್ಷವೇ ಬೇಕಾಗಿದೆ. ವಿರಾಟ್ ಕೊಹ್ಲಿ ಎಚ್ಚರಿಸಿದ ಬಳಿಕ ಬರೋಬ್ಬರಿ 14 ವರ್ಷದ ಬಳಿಕ ಎಕ್ಸ್ ಖಾತೆ ಸಸ್ಪೆಂಡ್ ಆಗಿದೆ. ಏನಿದು ಪ್ರಕರಣ?

Read Full Story
08:55 PM (IST) Jun 11

Karnataka News Live 11th June 2025ಭಾರಿ ಮಳೆಯಿಂದ ಕರ್ನಾಟಕದ 2 ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ನಾಳೆ(ಜೂ.12) ಭಾರಿ ಮಳೆಯಿಂದ ಕರ್ನಾಟಕದ ಎರಡು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಒಂದು ದಿನ (ಜೂ.12) ರಜೆ ನೀಡಲಾಗಿದೆ.

Read Full Story
08:54 PM (IST) Jun 11

Karnataka News Live 11th June 2025ಚಾಮರಾಜನಗರ - ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳ! ಕಾರಣವೇನು ಗೊತ್ತಾ?

ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಎಲ್‌ಕೆಜಿ, ಯುಕೆಜಿ ಆರಂಭ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಶಿಕ್ಷಕರ ಕೊರತೆ ನೀಗಿಸುವಿಕೆ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಮುಚ್ಚಿದ್ದವು.
Read Full Story
08:40 PM (IST) Jun 11

Karnataka News Live 11th June 2025ಮಂಗ್ಲಿ ಪಾರ್ಟಿ ಗಲಾಟೆಗೆ 'ಬಿಗ್ ಬಾಸ್' ದಿವಿ ಕೊಟ್ಟ ಕ್ಲಾರಿಟಿ ಏನು? ಈ ತರಹನೂ ಇರುತ್ತಾ ವಿಷ್ಯ..?

ಮಂಗಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟಿ, ಬಿಗ್ ಬಾಸ್ ಖ್ಯಾತಿಯ ದಿವಿ ಭಾಗವಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿವಾದದಲ್ಲಿ ದಿವಿ ಸಿಲುಕಿಕೊಂಡಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.

Read Full Story
08:22 PM (IST) Jun 11

Karnataka News Live 11th June 2025ಮಾಲ್ಡೀವ್ಸ್‌ನಲ್ಲಿ ಓಡಾಡುತ್ತಿರುವ ಕೀರ್ತಿ ಸುರೇಶ್, ಆಂಟನಿ ಟಾಟಿಲ್ ಜೊತೆ ಅಲ್ಲೇನ್ ಮಾಡ್ತಿದಾರೆ?

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್, ಇತ್ತೀಚೆಗೆ ತಮ್ಮ ಗಂಡನ ಜೊತೆ ರೋಮ್ಯಾಂಟಿಕ್ ರಜೆಗಾಗಿ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story
08:02 PM (IST) Jun 11

Karnataka News Live 11th June 2025'ನನ್​ ಮದ್ವೆ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ' ಎಂದಿದ್ದ ಸೋನಂ! ಅಮಾಯಕನ ಬಲಿ ಕೊಟ್ರಾ ತಾಯಿ?

ಹನಿಮೂನ್​ನಲ್ಲಿ ಪತಿಯನ್ನೇ ಮುಗಿಸಿರುವ ಆರೋಪ ಸೋನಂ ರಘುವಂಶಿಯ ಮೇಲಿದೆ. ಆದರೆ ಒಲ್ಲದ ಮದುವೆಗೆ ಒತ್ತಾಯದಿಂದ ಒಪ್ಪಿಸಿ, ಈಕೆಯ ತಾಯಿ ಅಮಾಯನಕ ಬಲಿ ಕೊಟ್ರಾ ಎನ್ನುವ ಮಾತು ಕೇಳಿಬರ್ತಿದೆ. ಏನದು?

Read Full Story
07:50 PM (IST) Jun 11

Karnataka News Live 11th June 2025ಇನ್ಸ್‌ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆಯಲ್ಲಿ ಇಳಿಕೆ, ಗಂಡನಿಗೆ ಡೈವೋರ್ಸ್‌ ನೀಡುವ ಎಚ್ಚರಿಕೆ ನೀಡಿದ ಹೆಂಡ್ತಿ!

ಉತ್ತರ ಪ್ರದೇಶದ ಮಹಿಳೆಯೊಬ್ಬರು ಮನೆಕೆಲಸದಿಂದಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಫಾಲೋವರ್ಸ್‌ಗಳು ಕಡಿಮೆಯಾಗಿದ್ದಾರೆ ಎಂದು ಗಂಡನಿಗೆ ಡೈವೋರ್ಸ್‌ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story
07:31 PM (IST) Jun 11

Karnataka News Live 11th June 2025ಜೂ.17ರ ವರೆಗೆ ಕರ್ನಾಟಕ ಸೇರಿ 17 ರಾಜ್ಯದಲ್ಲಿ ಭಾರಿ ಮಳೆ, IMD ಎಚ್ಚರಿಕೆ

ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ ಒಂದು ವಾರ ಅತೀಯಾದ ಮಳೆ, ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದೆ.

Read Full Story
07:28 PM (IST) Jun 11

Karnataka News Live 11th June 2025ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಲು ಸರ್ಕಾರದ ವತಿಯಿಂದಲೇ ಅಲ್ಪಸಂಖ್ಯಾತರಿಗೆ ತರಬೇತಿ!

ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅಲ್ಪಸಂಖ್ಯಾತರಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸಿ ಜನಾಂಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Read Full Story
07:17 PM (IST) Jun 11

Karnataka News Live 11th June 202580-90s advts; ಇನ್ನಷ್ಟು, ಮತ್ತಷ್ಟು ಕೇಳಬೇಕೆನ್ನಿಸುವ, ಆ ದಿನಗಳಲ್ಲಿ ತೇಲಿಹೋಗುವ ಈ ಜಾಹೀರಾತುಗಳ ಕೇಳಿ...

80-90ರ ದಶಕದಲ್ಲಿ ಕೆಲವೊಂದು ಜಾಹೀರಾತುಗಳು ಅದೆಷ್ಟು ಮನಸ್ಸಿಗೆ ಹಿತಕೊಡುತ್ತಿದ್ದವು ಎಂದರೆ, ಅವುಗಳನ್ನೆಲ್ಲಾ ಒಂದೆಡೆ ಹಾಡಿ ರಸದೌತಣ ನೀಡಿದ್ದಾರೆ ಈ ಗಾಯಕಿ.. ಕೇಳಿ...

Read Full Story
07:17 PM (IST) Jun 11

Karnataka News Live 11th June 2025ಭಾನುಪ್ರಿಯಾಗೆ ವಾರ್ನಿಂಗ್ ಮಾಡಿದ ಚಿರಂಜೀವಿ; ನಂಗೆ ಆಗಲ್ಲ, 'ಸ್ವಲ್ಪ ಕಮ್ಮಿ ಮಾಡು' ಅಂದಿದ್ಯಾಕೆ?

ಮೆಗಾಸ್ಟಾರ್ ಚಿರಂಜೀವಿ ಒಬ್ಬ ನಾಯಕಿಯ ಡ್ಯಾನ್ಸ್ ಬಗ್ಗೆ ತುಂಬಾ ఇబ್ಬಂದಿ ಪಟ್ಟರಂತೆ. ಕೊನೆಗೆ ಆಕೆಗೆ ವಾರ್ನಿಂಗ್ ಕೊಡಬೇಕಾಯ್ತು ಅಂತ ಚಿರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story
07:03 PM (IST) Jun 11

Karnataka News Live 11th June 2025ಬಡತನದಿಂದ ಬಂದು ಸ್ಟಾರ್ ಗಾಯಕಿಯಾದ ಮಂಗ್ಲಿ; ಲೈಫ್‌ನಲ್ಲಿ ಏನೇನೆಲ್ಲಾ ಆಗೋಗಿದೆ ನೋಡಿ!

ಬಡ ಕುಟುಂಬದಿಂದ ಬಂದ ಮಂಗಳಿ ಸ್ಟಾರ್ ಗಾಯಕಿಯಾಗಿ ಹೇಗೆ ಬೆಳೆದರು? ಸಿನಿಮಾ ಪ್ರಯಾಣ ಹೇಗೆ ಶುರುವಾಯಿತು? ಮಂಗಳಿ ನಿಜವಾದ ಹೆಸರೇನು? ಹುಟ್ಟುಹಬ್ಬದ ಪಾರ್ಟಿ ವಿವಾದದ ಬಗ್ಗೆ ತಿಳಿಯಿರಿ.
Read Full Story
06:47 PM (IST) Jun 11

Karnataka News Live 11th June 2025Viral Video - ನಾನು ರಾಯಲ್‌ ಚಾಲೆಂಜೇ ಕುಡಿಯಲ್ಲ, ಇನ್ನು ಟೀಮ್‌ ಖರೀದಿಸ್ತೀನಾ? - ಡಿಕೆ ಶಿವಕುಮಾರ್‌

ಆರ್‌ಸಿಬಿ ಮಾರಾಟದ ಸುದ್ದಿ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ಅವರ ಮೇಲೆ ಅನುಮಾನದ ಹುತ್ತ ಬಿದ್ದಿತ್ತು. ಆದರೆ ಡಿಕೆಶಿ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ. ತಮಗೆ ಆರ್‌ಸಿಬಿ ಖರೀದಿಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
06:44 PM (IST) Jun 11

Karnataka News Live 11th June 202519 ವರ್ಷದ ಯುವಕನಿಗೆ ಹೃದಯಾಘಾತ; ರಾತ್ರಿ ಮಲಗಿದ್ದ ಸ್ಥಿತಿಯಲ್ಲೇ ಸಾವು; ಗೆಳೆಯರು ಶಾಕ್!

ಬೆಂಗಳೂರಿನ ಜೆಪಿ ನಗರದಲ್ಲಿ ೧೯ ವರ್ಷದ ಯುವಕ ನಿಶಾಂತ್ ಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ೧೫ ದಿನಗಳಾಗಿದ್ದ ಯುವಕ ಡಿಪ್ಲೋಮಾ ಪದವಿ ಮುಗಿಸಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದರು.
Read Full Story