- Home
- News
- State
- 1,000 Days of Governance: Maha Shivaratri 2026 - ಶಿವರಾತ್ರಿಗೆ ನಗರದ ದೇಗುಲಗಳು ಸಜ್ಜು, ಇಂದಿನ ಹೂ, ಹಣ್ಣುಗಳ ಬೆಲೆ ಎಷ್ಟಿದೆ?
1,000 Days of Governance: Maha Shivaratri 2026 - ಶಿವರಾತ್ರಿಗೆ ನಗರದ ದೇಗುಲಗಳು ಸಜ್ಜು, ಇಂದಿನ ಹೂ, ಹಣ್ಣುಗಳ ಬೆಲೆ ಎಷ್ಟಿದೆ?

ಹಾವೇರಿ (ಫೆ.14): ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ರಾಜ್ಯ ಸರ್ಕಾರದ ಏಳನೇ ಗ್ಯಾರಂಟಿಯಾಗಿ ಜನರಿಗೆ ನೀರಿನ ಗ್ಯಾರಂಟಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದ್ದಾರೆ.
ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆಗಳ ಮೂಲಕ ರೈತರ ಬದುಕು ಹಸನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬರಿಗೂ ಕುಡಿಯಲು, ವ್ಯವಸಾಯಕ್ಕೆ ನೀರು ಒದಗಿಸುವುದರ ಜೊತೆಗೆ, ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.
Karnataka LiveMaha Shivaratri 2026 - ಶಿವರಾತ್ರಿಗೆ ನಗರದ ದೇಗುಲಗಳು ಸಜ್ಜು, ಇಂದಿನ ಹೂ, ಹಣ್ಣುಗಳ ಬೆಲೆ ಎಷ್ಟಿದೆ?
Karnataka LiveHeatwave Alert - ಬೇಸಿಗೆಯಲ್ಲಿ ಈ ಬಾರಿ ಬಿರು ಬಿಸಿಲಿನ ಆರ್ಭಟ - ಕಾರವಾರದಲ್ಲಿ 37.6 ಡಿಗ್ರಿ ಉಷ್ಣಾಂಶ, ದೇಶದಲ್ಲೇ ನಂಬರ್ 1
Heatwave Alert ಶಿವರಾತ್ರಿಗೆ ಮುನ್ನವೇ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಕಾರವಾರದಲ್ಲಿ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಬಗ್ಗೆ, ತಜ್ಞರು ಎಚ್ಚರಿಸಿದ್ದಾರೆ.
Karnataka LiveLand Guarantee - ಹಾವೇರಿ ಸಮಾವೇಶ 11.1 ಲಕ್ಷ ಮಂದಿಗೆ ಭೂಗ್ಯಾರಂಟಿ, 1000 ದಿನದ ಸಂಭ್ರಮದಲ್ಲಿ 6ನೇ ಗ್ಯಾರಂಟಿ!
ಹಾವೇರಿಯಲ್ಲಿ ನಡೆದ ಸರ್ಕಾರದ ಸಾವಿರ ದಿನಗಳ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆರಿಗೆ ಪಾಲು, ಜಿಎಸ್ಟಿ ಮತ್ತು ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
Karnataka LiveIrrigation as 7th Guarantee - ಕೇಂದ್ರ ಅನುಮತಿ ನೀಡಿದ್ರೆ ನೀರಾವರಿ 7ನೇ ಗ್ಯಾರಂಟಿ - ಡಿಕೆ ಶಿವಕುಮಾರ್
ಹಾವೇರಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರವು ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಿದರೆ, ರಾಜ್ಯ ಸರ್ಕಾರದ 7ನೇ ಗ್ಯಾರಂಟಿಯಾಗಿ 'ನೀರಿನ ಗ್ಯಾರಂಟಿ' ನೀಡುವುದಾಗಿ ಘೋಷಿಸಿದ್ದಾರೆ.